ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.43.0-wmf.28 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆ ಪರಿವಿಡಿ:ಕನ್ನಡ ಪರಮಾರ್ಥ ಸೋಪಾನ.pdf 106 98933 276116 276013 2024-10-26T07:58:04Z ~aanzx 6806 276116 proofread-index text/x-wiki {{:MediaWiki:Proofreadpage_index_template |Type=book |Title=ಕನ್ನಡ ಪರಮಾರ್ಥ ಸೋಪಾನ |Language=kn |Volume= |Author=R. D. Ranade |Translator= |Editor= |Illustrator= |School= |Publisher= |Address= |Year=1962 |Key= |ISBN= |OCLC= |LCCN= |BNF_ARK= |ARC= |DOI= |Source=pdf |Image=1 |Progress=C |Transclusion=no |Validation_date= |Pages=<pagelist /> |Volumes={{#lst|ಪುಟ:ಕನ್ನಡ_ಪರಮಾರ್ಥ_ಸೋಪಾನ.pdf/೧೯}} |Remarks= |Width= |Header= |Footer= |tmplver= }} 6exzztp52zdg24fzyto5jhm9le1p6n1 276117 276116 2024-10-26T07:58:22Z ~aanzx 6806 276117 proofread-index text/x-wiki {{:MediaWiki:Proofreadpage_index_template |Type=book |Title=ಕನ್ನಡ ಪರಮಾರ್ಥ ಸೋಪಾನ |Language=kn |Volume= |Author=R. D. Ranade |Translator= |Editor= |Illustrator= |School= |Publisher= |Address= |Year=1962 |Key= |ISBN= |OCLC= |LCCN= |BNF_ARK= |ARC= |DOI= |Source=pdf |Image=1 |Progress=C |Transclusion=no |Validation_date= |Pages=<pagelist /> |Volumes= |Remarks={{#lst|ಪುಟ:ಕನ್ನಡ_ಪರಮಾರ್ಥ_ಸೋಪಾನ.pdf/೧೯}} |Width= |Header= |Footer= |tmplver= }} kt2gvatmh4cuc367w9wqx9pg1028lal 276118 276117 2024-10-26T07:58:38Z ~aanzx 6806 276118 proofread-index text/x-wiki {{:MediaWiki:Proofreadpage_index_template |Type=book |Title=ಕನ್ನಡ ಪರಮಾರ್ಥ ಸೋಪಾನ |Language=kn |Volume= |Author=R. D. Ranade |Translator= |Editor= |Illustrator= |School= |Publisher= |Address= |Year=1962 |Key= |ISBN= |OCLC= |LCCN= |BNF_ARK= |ARC= |DOI= |Source=pdf |Image=1 |Progress=C |Transclusion=no |Validation_date= |Pages=<pagelist /> |Volumes= |Remarks={{#lst:ಪುಟ:ಕನ್ನಡ_ಪರಮಾರ್ಥ_ಸೋಪಾನ.pdf/೧೯}} |Width= |Header= |Footer= |tmplver= }} nx1fjh53qz3a2skjiwmia00vtpkiv7j 276126 276118 2024-10-26T08:25:10Z ~aanzx 6806 276126 proofread-index text/x-wiki {{:MediaWiki:Proofreadpage_index_template |Type=book |Title=ಕನ್ನಡ ಪರಮಾರ್ಥ ಸೋಪಾನ |Language=kn |Volume= |Author=R. D. Ranade |Translator= |Editor= |Illustrator= |School= |Publisher= |Address= |Year=1962 |Key= |ISBN= |OCLC= |LCCN= |BNF_ARK= |ARC= |DOI= |Source=pdf |Image=1 |Progress=C |Transclusion=no |Validation_date= |Pages=<pagelist 1="ಶೀರ್ಷಿಕೆ" 2=- 3="ಶೀರ್ಷಿಕೆ" 4=- 5=- 7="ಶೀರ್ಷಿಕೆ" 8="ಪುಸ್ತಕ ವಿವರ" 9="ಮುನ್ನುಡಿ" 10=- 11to18="ಪ್ರಸ್ತವನೆ" 19="ವಿಷಯಸೂಚಿಕೆ" 20=- 21to23="ಪೀಠಿಕೆ" 24=- 25=1 /> |Volumes= |Remarks={{#lst:ಪುಟ:ಕನ್ನಡ_ಪರಮಾರ್ಥ_ಸೋಪಾನ.pdf/೧೯}} |Width= |Header= |Footer= |tmplver= }} bey45oi3owz9w6d5yz8hd3x6rsj3xcq 276127 276126 2024-10-26T08:27:54Z ~aanzx 6806 276127 proofread-index text/x-wiki {{:MediaWiki:Proofreadpage_index_template |Type=book |Title=ಕನ್ನಡ ಪರಮಾರ್ಥ ಸೋಪಾನ |Language=kn |Volume= |Author=R. D. Ranade |Translator= |Editor= |Illustrator= |School= |Publisher= |Address= |Year=1962 |Key= |ISBN= |OCLC= |LCCN= |BNF_ARK= |ARC= |DOI= |Source=pdf |Image=1 |Progress=C |Transclusion=no |Validation_date= |Pages=<pagelist 1="ಶೀರ್ಷಿಕೆ" 2=- 3="ಶೀರ್ಷಿಕೆ" 4=- 5=- 7="ಶೀರ್ಷಿಕೆ" 8="ಪುಸ್ತಕ ವಿವರ" 9="ಮುನ್ನುಡಿ" 10=- 11to18="ಪ್ರಸ್ತವನೆ" 19="ವಿಷಯಸೂಚಿಕೆ" 20=- 21=1 24=- /> |Volumes= |Remarks={{#lst:ಪುಟ:ಕನ್ನಡ_ಪರಮಾರ್ಥ_ಸೋಪಾನ.pdf/೧೯}} |Width= |Header= |Footer= |tmplver= }} t3g2uunjmu6d4m8xgih654v61b58ol6 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೭೭ 104 98956 276037 2024-10-25T13:00:22Z सुबोध कुलकर्णी 3142 OCR 276037 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಬಿಡದೆ ಇನ್ನಡಿಗಡಿಗೆ, ನೀರಲಕೇರಿ ಮೃಡ ಪಂಚಾಕ್ಷರ ನುಡಿಗೆ || ಬಿಡದೇಳು ಕೋಟಿಮಂತ್ರಕ್ಕೆ ತಾಯಿ ಒಡಲಿದು | ಬೆಡಗಿನ ಶಿವನಾಮ ದೃಢದಿಂದ ಭಜಿಸಿರೋ ಷಡಕ್ಷರೀ ಮಂತ್ರದ ಎಲ್ಲ ಅಕ್ಷರಗಳ ಅರ್ಥ ಆರು ಅಕ್ಷರ ಭೇದ ಹರಿ ಕೇಳಲು ಬಂದ | ಸುರಮುನಿಗಳ ಕೇಳಿರಣ್ಣಾ || ಮೂರು ಲೋಕದ ವರಮಂತ್ರ ತಂದನು | ಸಿದ್ಧ ರಾಮೇಶನು ತಿಳಿಯಿರಾ || ಓಂ ಎಂಬುವ ಅಕ್ಷರ ಬಲ್ಲವನಾದರೆ | ಓಂ ಕಾರ ಬೀಜ ನೋಡುವಿರಾ ನ ಎಂಬುವ ಅಕ್ಷರ ನೀವರಿತಿರೆಂದರೆ | ನಿರಹಂಕಾರ ಬೀಜ ಕಾಣುವಿರಣ್ಣಾ || ಮ ಎಂಬುವ ಅಕ್ಷರ ಬೀಜವ ತಿಳಿದರೆ | ಈರೇಳು ಲೋಕದ ಮರ್ಮ ನೋಡೀರಾ || ಶಿ ಎಂಬುವ ಅಕ್ಷರ ಆಕಾಶ | ಆ ಕಾರಣ ಬೀಜವ ಕಾಣಣಾ || ವಾ ಎಂಬುವ ಅಕ್ಷರ ವಾವ್ಯಾದಿಗಳ | ಗುರುತ ಹೇಳುವದಣ್ಣಾ || ಜ ಎಂಬುವ ಅಕ್ಷರ ಯಾರಿಗೆ ನಿಲುಕಿಲ್ಲ | ತಾನು ತನ್ನನು ಬಲ್ಲನಾ || ಷಡಕ್ಷರ ಮುನಿಗಳು ಹೊಸ ಮಂತ್ರ ಹೇಳಿದರು | ಮರುಳ, ಕಾಡಸಿದ್ದ, ಷಣ್ಮುಖ, ಸಿದ್ಧರಾಮ || ಬಬಲಾದಿಯಲ್ಲಿ ಇರುತಾರಣ್ಣಾ || ಅಲ್ಲಮ ಪ್ರಭುವಿನ ನಾಮದ ಮಹಿಮೆ (ವಚನ) ಆ ಎಂಬ ವರ್ಣ ಐಶ್ವರ್ಯ ವರ್ಧಿಪುದು. ಲ ಎಂಬ ವರ್ಣ ಲಕುಲೀಶ ಘನಪದಮಕ್ಕು.<noinclude></noinclude> qqa9zuj1znz92770fvj7oks9pziv7be ಪುಟ:ಕನ್ನಡ ಪರಮಾರ್ಥ ಸೋಪಾನ.pdf/೭೮ 104 98957 276038 2024-10-25T13:02:20Z सुबोध कुलकर्णी 3142 OCR 276038 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಮ ಎಂಬ ವರ್ಣ ಮಾಯಾಬಿಯನ್ನು ವಾಟಿಪುದು. ಪ್ರ ಎಂಬ ವರ್ಣ ಸತತ ಕಾಯದ ಹೀನ ಗುಣಗಳ ಕತ್ತರಿಸಿ ಬಿಸುಟಿಪುದು, ಪ್ರಭೆಯನು ಕಾಣಿಪುದು. ಭು ಎಂಬ ವರ್ಣ ಭೂತೇಶ್ವರನ ಕಾಣಿಪುದು. ಒಯ್ಯಾರದಿಂ ನಂಬಿ ಅಲ್ಲಮ ಪ್ರಭು ಎಂಬ ಮಂತ್ರವನು ಜಪಿಸುವದು. ಶ್ರೀಗುರು ಮಂತ್ರವನ್ನು ತುಂಬ ಪ್ರೀತಿಯಿಂದ ನೆನೆಯುತ್ತಿರು ಶ್ರೀಗುರುಮಂತ್ರವ ರಾಗದಿ ಜಪಿಸಲು | ಭೋಗಸಂಪತ್ತು ಸುಖವಾಗುವದು ಮಾಜದ ಮಂತ್ರದ ಮೊದಲಿನಕ್ಷರವನು | ತೇಜಸಿನಲಿ ನಿತ್ಯ ನಡಿಸುವದು ಬಿಡದೆರಡಕ್ಷರ ನಡುವಿನ ಶೂನ್ಯದಿ | ದೃಢವಿಡಿದಾತ್ಮದಿ ನಿಲಿಸುವದು ಬರಿದೆ ಮೂರಕ್ಷರ ನಿರುತ ಸೇವಿಸಲು | ದುರಿತಕೋಟಿಗಳೆಲ್ಲ ನೀಗುವವು ನೀ ಕಲಿ ಸುಮ್ಮನೆ ನಾಲ್ಕು ಅಕ್ಷರಗಳ 1 ಬೇಕೆನಿಸುವ ವಸ್ತು ಸಿಗುತಿಹುದು ಶಿಶುನಾಳಧೀಶನ ಹೆಸರಿನೈ ದಕ್ಷರ | ಬಿಡದೆ ಜಪಿಸಲಹುದೆನಿಸುವದು ಎಲ್ಲ ಶಾರೀರಿಕ, ಮಾನಸಿಕ, ಆಕಸ್ಮಿಕ ಸ್ಥಿತಿಗಳಲ್ಲಿ ಪರಮಾತ್ಮನ ನಾಮವನ್ನು ನೆನೆಯಬಾರದೇ? ( ರಾಗ-ಭೂಪ, ತಾಲ- ದೀಪಚಂದಿ ) ಮಾತುಮಾತಿಗೆ ಶಂಕರಾ | ಶ್ರೀಗುರುವೆ | ಸರ್ವೋತ್ತಮನಬಾರದೆ || ಜ್ಯೋತಿ-ಸಂಗದಿ ಉರಿದು ಹೋಗುವ ಕರ್ಪುರದಂತೆ || ಪಾತಕ ರಾಶಿಯು ಉರಿದು ಹೋಗುವದಾಗಿ ಸ್ನಾನಮಾಡುವಾಗ | ನೇಮದಿ ಆತ್ಮನ | ಧ್ಯಾನಮಾಡುವಾಗ ||<noinclude></noinclude> se5o9wp60n7uct9m8cjt1uz9p0s3nzl ಪುಟ:ಕನ್ನಡ ಪರಮಾರ್ಥ ಸೋಪಾನ.pdf/೭೯ 104 98958 276039 2024-10-25T13:04:17Z सुबोध कुलकर्णी 3142 OCR 276039 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಜಾಣತನದಿ ಅನ್ನ ಉಂಡು | ಅಮೃತವನ್ನು | ಪಾನವ ಮಾಡುವ ಕಾಲಕ್ಕೆ ಮನವೆ ಬೆಟ್ಟವನೇರುವಾಗ | ಕಾಲೂರಿದಲ್ಲಿ | ಥಟ್ಟನೆ ಬೀಳುವಾಗ || ಛಳಿಜ್ವರ ಕೆಮ್ಮು ಉಬ್ಬ ಸರೋಗ ಬಂದಾಗ | ಮಳೆಗಾಳಿ ಸಿಡಿಲಿನಾರ್ಭಟದಲ್ಲಿ ಮನವೆ ಬಿಸಜಾಕ್ಷಿ ನೋಡುವಾಗ | ಕುಳಿತು ನಿತ್ಯ | ಒಸೆದು ಮಾತಾಡುವಾಗ || ಅಷ್ಟಭೋಗದಲ್ಲಿ ನಿತ್ಯ ಲೋಲುಪ್ತಿ ಪಡೆಯುವಾಗ | ನಷ್ಟ ದಾರಿದ್ರವು ಬಂದಾಗಲು ಮನವೆ ಸುಲಿಯುವ ಕಳ್ಳನು ಬಂದಾಗ ಘೋರಾರಣ್ಯದೊಳು | ವ್ಯಾಘ್ರವು ಹರಿಯುವಾಗ ಗುರುವೆ ಗುರುವೆ, ಕಲ್ಪತರುವೆ ಪಾಲಿಸು ! ಎಂದು | ಗುರುಮಹಾಲಿಂಗನ ನೆನಿಯಲ್ಲೋ ಮನವೆ ಸಂತರ ಸಂಗದಲ್ಲಿ ಉತ್ಸಾಹಿತರಾಗಿ, ಪರಮಾತ್ಮನಲ್ಲಿ ಬೆರೆಯಬೇಕು ( ರಾಗ-ಶಂಕರಾಭರಣ, ತಾಲ-ದೀಪಚಂದಿ ) ನಿನ್ನ ನಿಜವ ನೀ ನೋಡೋ | ಅನುಮಾನಿಸ ಬ್ಯಾಡೋ ತನು ನೆನಪ ಪೋಗಿ | ಘನ ಸುಖವಾಗಿ || ಜನನ ಮರಣ ಭಯ ನೀಗಿ | ಪರಬ್ರಹ್ಮ ತಾನಾಗಿ ಮರಳಿ ಮರಳಿ ಹುಟ್ಟಿ | ಮರವಿಗೆ ಮೈ ಕೊಟ್ಟ || ಗರಿಗಟ್ಟಿ, ಶರಣರೊಳಾಡೊ | ಅನುಭವಕ್ಕೆ ಕೂಡೊ ಒಡೆಯ ನೀರಲಕೇರಿ | ನುಡಿ ಪಂಚಾಕ್ಷರಿ || ಒಡೆಯನ ಒಲಿಸಿ ಒಡಗಡೆ | ಸಂಸಾರಕ ಕೆಡೋ<noinclude></noinclude> m6zdq4gwp5zfhdfmhpwrxrubsri0z0m ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೦ 104 98959 276040 2024-10-25T13:06:17Z सुबोध कुलकर्णी 3142 OCR 276040 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಪ್ರಕರಣ ಹದಿಮೂರು ಪರಮಾತ್ಮನ ನಾಮ (ಭಾಗ ೨) ದೇವರ ನಾಮವನ್ನು ಕುರಿತು ಉದ್ಯಾನವಿದ್ಯೆಯ ಮಹಾರೂಪಕ ( ರಾಗ-ಬಿಹಾರ, ತಾಲ-ಕೇರವಾ ) ಹರಿನಾರಾಯಣ | ಗುರು ನಾರಾಯಣ | ಹರಿನಾರಾಯಣ ಎನು ಮನವೆ || ನಾರಾಯಣವೆಂಬೊ ನಾಮದ ಬೀಜವ | ನಾರದ ಬಿತ್ತಿದ ಧರೆಯೊಳಗೆ ತರಳ ಧ್ರುವನಿಂದಂಕುರಿಸಿತು ಅದು | ವರ ಪ್ರಹ್ಲಾದನಿಂ ಮೊಳಕ್ಕಾಯಿತು || ಧರುಣಿಪ ರುಕ್ಕಾಂಗದನಿಂದೆ ಚಿಗುರಿತು | ಕುರುಪಿತಾಮಹನಿಂದ ಹೂವಾಯಿತು ವಿಜಯನ ಸತಿಯಿಂದ ಕಾಯಾಯಿತು ಆದು | ಗಜರಾಜನಿಂದ ದೊರೆ ಹಣ್ಣಾಯಿತು || ಶ್ರೀ ಶುಕಮುನಿಯಿಂದೆ ಫಲ ಪಕ್ವವಾಯಿತು | ಅಜಾಮಿಳ ತಾನುಂಡು ರಸ ಸವಿದಾ . ಕಾಮಿತ ಫಲವೀವ ನಾಮವೊಂದಿರಲಿಕ್ಕೆ | ಹೋಮ ನೇಮ ಜಪ ತಪನ್ಯಾಕೆ || ಸ್ವಾಮಿ ಶ್ರೀ ಪುರಂದರ ವಿಠಲನ ಪಾದವ | ಏಕೋ ಭಾವದಿ ನೆನೆ ಮನವೆ ಪರಮಾತ್ಮನ ದಿವ್ಯನಾಮವು ಸಮ್ಮನೆ ದೊರೆಯಲರಿಯದು ( ರಾಗ-ಆನಂದಭೈರವಿ, ತಾಲತ್ರಿಪುಟ) ಸುಮ್ಮನೆ ದೊರಕುವದೇನೋ ಶ್ರೀರಾಮನ ದಿವ್ಯನಾಮವು | ಜನ್ಮ ಜನ್ಮಾಂತರದಾ ದುಷ್ಕರ್ಮ ಹೋದವಗಲ್ಲದೆ ಕಂತುವಿತನ ದಿವ್ಯನಾಮ ಅಂತರಂಗದೊಳಗಿಟ್ಟು ! ಚಿಂತೆಯೆಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ ಭಕ್ತಿರಸದಲ್ಲಿ ತನ್ನ ಚಿತ್ತ ಪರವಶವಾಗಿ | ಅಚ್ಯುತನ್ನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ<noinclude></noinclude> 4uwehii6zf4qs7w7vdpmsxtnlau2fa9 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೧ 104 98960 276041 2024-10-25T15:21:44Z सुबोध कुलकर्णी 3142 OCR 276041 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಕಣ್ಣಿನೊಳಗೆ ಇದ್ದ ಮೂರುತಿ ತನ್ನೊಳಗೆ ತಾ ಕಂಡು | ಘನ್ನಪೂರ್ಣ ಪುರಂದರ ವಿಠಲನ ಕೊಂಡಾಡದೆ ಅಯ್ಯ ! ನಿನ್ನ ನಾಮವೇ ತುಂಬ ಪ್ರಬಲವಿರಲು, ಎನಗೆ ನಿನ್ನ ಪರಿವೆಯೇನು ? (ರಾಗ-ಕಾಫಿ, ತಾಲ-ತಾಲ) ನೀ ಯಾಕೆ ನಿನ್ನ ಹಂಗ್ಯಾಕೋ | ರಂಗಾ | ನಿನ್ನ ನಾಮದ ಬಲವೊಂದಿದ್ದರೆ ಸಾಕೊ ಕರಿ ಮಕರಿಗೆ ಸಿಲುಕಿ ಮೊರೆಯಿಡುತಿರುವಾಗ | ಆದಿಮೂಲನೆಂಬ ನಾಮವ ಕಾಯೊ ಪ್ರಹ್ಲಾದನ ಪಿತ ಬಾಧಿಸುತಿರುವಾಗ | ನರಹರಿಯೆಂಬೊ ನಾಮವೆ ಕಾಯ ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ | ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತ ದಮನ ದೂತರು ಬಂದು ಅಜಮಿಳನೆಳೆವಾಗ | ನಾರಾಯಣನೆಂಬ ನಾಮವೆ ಕಾಯ್ತ ಆ ಮರಾ ಈ ಮರಾ ಧ್ಯಾನಿಸುತಿರುವಾಗ | ರಾಮ ರಾಮ ಎಂಬ ನಾಮವೆ ಕಾಯ್ತ ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ | ವಾಸುದೇವನೆಂಬ ನಾಮವೆ ಕಾಯ್ತ ನಿನ್ನ ನಾಮಕೆ ಸರಿ ಕಾಣೆವು ಜಗದೊಳು | ಘನ್ನ ಮಹಿಮ ಸಿರಿ ಪುರಂದರ ವಿಠಲ ಹಿಂದಿನ ಸಂತರಿಂದ ದೇವರ ನಾಮಸುಧೆಯ ಸಂಗ್ರಹ (ರಾಗ-ಜಂಗಲಾ, ತಾಲ-ಕೇರವಾ ಏನ ಸವಿ ಏನ ಸಖಿ ಹರಿನಾಮ | ಮನಸು ತೃಪ್ತಿ ಆಗುದು ಪ್ರೇಮ || ಈ ಜನರಿಗೆ ತಿಳಿಯಲಿಲ್ಲ ಇದರ ಮರ್ಮ | ಘನಮಹಿಮ ಸಾಸಿರ ವಿಷ್ಣು ನಾನು ನಾಮದ ಸವಿಯುಂಡ ವಾಲ್ಮೀಕಾ | ನಾಮವ ಸ್ಮರಿಸಿದ ನರಹರಿ ಕನಕ ||<noinclude></noinclude> 6scit4gzus41p8678nrqllw5vsu7zsq ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೨ 104 98961 276042 2024-10-25T15:24:21Z सुबोध कुलकर्णी 3142 OCR 276042 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಪ್ರೇಮದ ಹರಿಭಕ್ತ ಪುಂಡಲೀಕಾ | ರಾಮ ರಾಮ ರಾಮ ಸಾರ್ವ ಜನಕ ಆತ್ಮನ ಸವಿಯನ್ನು ನೋಡಿದವರು | ತುಂಬರ ನಾರದ ಪುರಂದರದಾಸರು | ಅಂಬರೀಷ ಋಷಿಗಳು ದುರ್ವಾಸರು | ತುಂಬಿಕೊಂಡರು ತಾವು ವ್ಯಾಸರಾಯರು ಹರಿ ಹರಿ ಹರಿಯ ಸ್ಮರಣೆ ಮಾಡಬೇಕು | ಮೂರು ಗುಣಗಳಳಿದಿರಬೇಕು || ಬಿರುದ ಸಾರುತಿವೆ ವೇದ ನಾಲ್ಕು | ಪರಮ ಭಕ್ತ ಭೀಮದಾಸ ಸಾರ್ವ ಜನಕೆ ದೇವರ ನಾಮವು ಕಾಮ ಪೂರೈಸುವ ಕಾಮಧೇನು ಕರೆಯದಲೆ ಬಂದಿಹುದು- ಕರದುಣ್ಣಲಿಲ್ಲ ಹರಿನಾಮ ಕಾಮಧೇನುವನು ನೆನವರ ಹೊರಿಯಲು ಅನುವಾಗಿ ಬಂದಿರಲು | ಮನುಜ ಮೈಮರೆವರೆ ನೀನು ಮನವೆಂಬ ಕರುಬಿಟ್ಟು, ಘನಭಕ್ತಿ ಮುರವಿಟ್ಟು | ತನುವಿನ ಪಾತ್ರಿಲಿ ನೀನು ಕರುಣ ಕೆಚ್ಚಲ ತೊರೆದು ಭೋರ್ಗರೆಯಲು | ಅರುವೆಂಬ ಕೈಯಿಂದ ನೀನು ಗುರು ಮಹಿಪತಿ ಕಂದಗರುಹಿದ ನಿಜಾನಂದ | ಸಿರಿಸುಖ ಪಡಿಯ ನೀನು ಡಾಂಭಿಕ ಸಂತರೂ ನಿಜವಾದ ಸಂತರೂ (ರಾಗ-ಪುರಿಯಾಧನಾಶಿ, ತಾಲ-ದೀಪಚಂದಿ) ದಾಸನೆಂದರೆ ಪುರಂದರ ದಾಸನಯ್ಯ ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು | ದಾಸನೆಂದು ತುಲಸಿಮಾಲೆ ಧರಿಸಿ || ಬ್ಯಾಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ | ಕಾಸು ಗಳಿಸುವ ಪುರುಷ ಹರಿದಾಸನೇ ?<noinclude></noinclude> hrbnbaz170skn8wugsge9mq5xdp6c98 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೩ 104 98962 276043 2024-10-25T15:26:25Z सुबोध कुलकर्णी 3142 OCR 276043 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಕದಿ ಹರಿಸ್ಮರಣೆಯ ಮಾಡಿ ಜನರ ಮುಂದೆ | ವ' ಸಂಭ್ರಮದಿ ತಾನುಂಬ ಊಟ ಬಯಸಿ || ಂಬುಜವ ಪಿತನ ಆಗಮಗಳರಿಯದೆ | ತಂಬೂರಿ ಮೀಟುವವ ಹರಿದಾಸನೇ ? ಮಾಯವಾದನ ಮಾಡಿ ವಿಪ್ರರಿಗೆ ಮೃಷ್ಟಾನ್ನ | ಪ್ರಿಯದಲೆ ತಾನೊಂದು ಕೊಡದ ಲೋಭಿ || ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು | ಗಾಯನವ ಮಾಡಿದವ ಹರಿದಾಸನೇ ? ಪಾತಕನ ತೆರನಂತೆ ಪದಗಳನು ತಾ ಬೊಗಳಿ | ಕೂಟ ಜನರ ಮನವ ಸಂತೋಷಪಡಿಸಿ || ಗೂಟನಾಮವನಿಟ್ಟು ಕೊಟ್ಟರಿಗೆ ತಾನೆನುತ | ತೋಟಕ ಮಾಡಿದವ ಹರಿದಾಸನೇ ? ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ | ವಾತಸುತನಲ್ಲಿಹನ ವರ್ಣಿಸುತಲಿ | ಗೀತನರ್ತನದಿಂದ ಕೃಷ್ಣನ್ನ ಪೂಜಿಸುವ | ಪೂತಾತ್ಮ ಪುರಂದರದಾಸನಿವನಯ್ಯ ಭಕುತಿ ಭಾವವಿಲ್ಲದ ಗಾನವು ಪರಮಾತ್ಮನಿಗೆ ರುಚಿಸದು (ರಾಗ-ಭೈರವಿ, ತಾಲ-ದೀಪಚಂದಿ) ಹೇಳನೋ ಹರಿ ತಾಳನ ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು | ಕೊಂಬು ಕೊಳಲು ಧ್ವನಿ ಸ್ವರಗಳಿದ್ದು || ತು೦ಬರ ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಿಕರ ಕೂಗಾಟ ನಾನಾ ಬಗೆಯ ರಾಗ ಭಾವ ತಿಳಿದು ಸ್ವರ | ಜ್ಞಾನ ಮನೋಧರ್ಮ ಜಾತಿಯಿದ್ದು | ದಾನವಾರಿಯ ದಿವ್ಯ ನಾಮರಹಿತವಾದ | ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು ಅಡಿಗಡಿಗಾನಂದಬಾಷ್ಪ ಪುಳಕದಿಂದ | ನುಡಿ ನುಡಿಗೆ ಶ್ರೀಹರಿ ಎನ್ನುತ ದೃಢ ಭಕ್ತರನು ಕೂಡಿ ಹರಿಕೀರ್ತನೆ ಮಾಡಿ | ಕಡೆಗೆ ಪುರಂದರವಿಠಲನೆಂದರೆ ಕೇಳುವ<noinclude></noinclude> jl759v24goayreqdv2o1m2072q9zg9f ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೪ 104 98963 276044 2024-10-25T15:28:58Z सुबोध कुलकर्णी 3142 OCR 276044 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಪ್ರಕರಣ ಹದಿನಾಲ್ಕು ಧ್ಯಾನಪದ್ಧತಿ ಮೂರು ದಳದ ಬಿಲ್ವ ಪತಿಯನ್ನು ಪರಮಾತ್ಮನಿಗೆ ಏರಿಸಿರಿ (ರಾಗ-ಪುರಿಯ ಧನಾತ್ರಿ, ತಾಲ-ದೀಪಚಂದಿ) ಬಿಲ್ವ ಪತ್ರಿಯ ಧರಿಸಬೇಕಾ | ಅಣ್ಣಯ್ಯ ಕೇಳೋ ಬಿಲ್ವಪತ್ರಿಯ ಧರಿಸಬೇಕೋ | ಮಲ್ಲಿಕಾರ್ಜುನ ಪೂಜೆಗಿನ್ನು | ಸೊಲ್ಲಿನಲ್ಲಿ ಇರುವ ಶಿವನ | ಮೆಲ್ಲನಾಗಿ ನೋಡಬೇಕು ಮೂರು ದಳದ ಬಿಲ್ವಪತ್ರಿಯು | ಅವನೇರಿ ನೋಡಲು | ಸಾರಿ ಶಿವನ ಬೆಳಕ ತೋರುವದು || ವಾರಿಜೋದ್ಭವ ತಾನು ಆಗಿ | ಘೋರ ಪಾತಕ ದೂರಮಾಡಿ | ಭೋರನೆಂಬುವ ನಾದದಲ್ಲಿ | ಧೀರನಾಗಿ ನಿಲ್ಲಬೇಕು ಮತ್ತೆ ಸಾಸಿರ ದಳದ ಕಮಲವನು | ಅದನ್ನ ನೋಡಲು | ಸುತ್ತು ಮುತ್ತಲೆ ಬೆಳಕ ತೋರುವದು || ಸತ್‌ಚಿತ್ತಾನಂದನಾಗಿ | ಕರ್ತುವನ್ನು ನೆನಿಸಿಕೊಂಡು | ಮರ್ತ್ಯದೊಳು ಚಲಿಸುವಂಥಾ | ನಿತ್ಯ ನಿರ್ಮಲನಾಗಬೇಕು ಧರೆಯ ಭೋಗವ ಬಯಸಬೇಡಣಾ | ನೀ ಮರೆಯದಂತೆ | ಗುರುವಿನಂಘ್ರಯ ಭಜಿಸಬೇಕಾ | ಉರಗಗಿರಿಯ ನಿಲಯನಾದ | ಹರನ ಪಾರ್ವತಿ ರಮಣನೆಂದು | ಚರಣಸೇವೆಯನ್ನು ಮಾಡಿ | ಕರುಣವನ್ನು ಪಡೆಯಬೇಕು ಬ್ರಹ್ಮನ ಗುರಿಯನ್ನು ಹೊಡೆಯುವ ಅಭ್ಯಾಸವನ್ನು ಕುರಿತು ಅಂದವಾದ ಪೂರ್ಣರೂಪಕ (ರಾಗ-ಸಾರಂಗ, ತಾಲ-ಕೇರವಾ) ಗುರಿಯಾ ಒಗೆದೆನೋ ಬ್ರಹ್ಮಕೆ | ಗುರಿಯಾ ಒಗೆದನೋ ಸರ್ವಕಾಲದಲ್ಲಿ ಶರೀರವ ಮರೆದು | ಸ್ಮರಣಿ ಗುರುನರಸಿಂಹನ ಆಗಿ<noinclude></noinclude> rzvt9xmao0s5dq7g6638ojwze82vkt3 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೫ 104 98964 276045 2024-10-25T15:31:30Z सुबोध कुलकर्णी 3142 OCR 276045 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಮಾತಾಡು ಮುಚ್ಚಳವ ಬಿಗಿದು | ಭೂತಪಂಚಕ ತುಬಾ ಕಿಲಿ || ಖ್ಯಾತಿಯ ಭಕ್ತಿಜ್ಞಾನ ವೈರಾಗ್ಯ | ಜಾತಿ ಮದ್ದು ಮೂರು ಬೆರಳಲೆ ಹೊತ್ತು ಇಡಾಪಿಂಗಳ ಗುಂಡಿಲಿ ಹಾಕಿ | ರೂಢಿಗೆ ಎನಿಸುವ ಗಜವನು ಜಡಿದು || ಗಾಢಾನುಗ್ರಹ ರಂಜಕ ಸುರಿದು | ಹೂಡಿ ವಿರಾಸನ ಒಳಿತಾಗಿ ಕುಳಿತು ಗುರುಕರುಣೆಂಬುವ ಜಾವಗಿ ಒತ್ತಿ | ಎರಡೂ ದೃಷ್ಟಿ ಒಂದೇ ಮಾಡಿ ಊರ್ಧ್ವ ಮುಜರಿಯನು ನೆಟ್ಟಗೆ ನಿಲಿಸಿ | ಇರುವ ನಾಸಿಕದ ಕೊನೆಯಲಿ ಮುಳುಗಿ ಘನ ರಂಜಕ ಈ ತನುವ ಮುಚ್ಚದಲಿ | ತನು ತುಬಾಕಿಯ ತೂಗಾಡಗೊಡದೆ || ಮನ ಮಿಸುಕದೆ ಮತ್ತೊಂದು ನೆನೆಯದೆ | ವಿನಯದಿ ನಿತ್ಯ ಎಚ್ಚರದಿಂದ ಬೆದರಿ ಓಡಲು ಅಷ್ಟಮದಗಜಗಳು ತಾವು | ಉದುರಿ ಬೀಳಲು ವೈರಿ ಷಡ್ವರ್ಗದ ತಲಿ || ಸಾಧು ಜ್ಞಾನಿಗಳು ಹೌದು ಹೌದು ಯೆನ್ನಲು | ಸಚ್ಚಿದಾನಂದ ನರಸಿಂಹನು ಆಗಿ ಸಂತನು ಹೆಡೆಯನು ಮೇಲಕ್ಕೆತ್ತಿದ ವಿಷಯಸರ್ಪವನ್ನು ಮಂತ್ರಿಸಿ ಭಕ್ತಿಯ ಬುಟ್ಟಿಯಲ್ಲಿರಿಸುವ ಧೀರ ಗೊಲ್ಲನು ( ರಾಗ-ಪುರಿಯಾ ಧನಾತ್ರಿ, ತಾಲ-ದೀಪಚಂದಿ ) ಗೊಲ್ಲರೋ ನಾವು ಗೊಲ್ಲರೋ ಈ ಘಟವೆಂಬ ಹುತ್ತಿನೊಳು | ದಿಟವಾಗಿ ಹಾವ ಹಿಡಿದು | ಕಟಬಾಯೊಳಗಿನ | ಕಡಿಹಲ್ಲು ಮುರಿದಂಥ ನಡು ನಾಡಿಗೆ ಹೆಡೆ ಇಟ್ಟಹುದು | ಸರ್ಪದ ಬಾಲಾ ಕಡಿಚಕ್ರ ಮುಟ್ಟಿಹುದು | ಒಡೆಯ ಶ್ರೀಗುರು ಮಂತ್ರ | ಅಡಿಗಡಿಗೆ ಜಪಿಸುತ್ತ | ಕಡಿದೀತೆಂಬುವ ಅಂಜಿಕೆ | ಇಲ್ಲದೆ ಹಿಡಿಯುವಂಥ<noinclude></noinclude> 4iru8oay653m8gg5do47x44qc30fj67 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೬ 104 98965 276046 2024-10-25T16:14:53Z सुबोध कुलकर्णी 3142 OCR 276046 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಹೆಡಿಯ ಮೇಲಕ್ಕೇರಿಸಿ | ಮ್ಯಾಗಿನ ಬಾಲಾ ಕೆಳಭಾಗಕ್ಕಿಳಿಸಿ | ಒಳಗಿರುವ ತ್ರಿಕೋಣ | ಗಳಿಗೆಯೊಳಗೆ ಪೊಕ್ಕು | ಕಳೆನಾದ ಸರ್ಪದ | ಫಣಿರತ್ನ ಪಡೆದಂಥ ಸದ್ಭಾವವೆಂಬೊ ಬುಟ್ಟಿಯಲಿ | ಈ ಪಾವ ಹಿಡಿದು ಒಳಗೆ ಹಾಕಿದೆವಿಲ್ಲಿ || ದೇವ ದೇವರಿಗೆಲ್ಲಾ | ದೇವಶಿಖಾಮಣಿ | ದೇವ ಬಲಭೀಮನ | ಮೂಲವ ತಿಳಿದಂಥ ಪಾರಮಾರ್ಥಿಕ ಅನುಭವದ ಸಂಕ್ಷೇಪರೂಪ . ( ರಾಗ-ಅಲೈಯ್ಯಾ ಬಲಾವಲಿ, ತಾಲ-ದೀಪಚಂದಿ) ಕಣ ನೊಳಗೆ ನೋಡೊ ಹರಿಯ ಒಳಗಣ್ಣಿನೊಳಗೆ ನೋಡೋ ಮೂಜಗದೊಡೆಯನ ಆಧಾರ ಮೊದಲಾದ ಆರು | ಚಕ್ರ | ಶೋಧಿಸಿ, ಬಿಡಬೇಕು ಈಷಣ ಮರು || ಸಾಧಿಸಿ ಸುಷುಮ್ಮಾ ಏರು | ಅಲ್ಲಿ | ಭೇದಿಸಿ ನೀ ಪರಬ್ರಹ್ಮನ ಸೇರು ಎವೆ ಹಾಕದೆ ಮೇಲೆ ನೋಡಿ | ಬೇಗ | ಪವನನಿಂದಲಿ ವಾಯುಬಂಧನ ಮಾಡಿ || ಸವಿದು ನಾದವ ಪಾನ ಮಾಡಿ | ಅಲ್ಲಿ | ನವವಿಧ ಭಕ್ತಿಲಿ ನಲಿನಲಿದಾಡಿ ಅಂಡಜದೊಳಾಡುತ್ತಾನೆ | ಭಾನು- 1 ಮಂಡಲದೊಳು ನಾರಾಯಣನೆಂಬೊವನೆ || ಕುಂಡಲಿ ತುದಿಯೊಳಿದ್ದಾನೆ | ಶ್ರೀ ಪು- | ರಂದರವಿಠಲ ಪಾಲಿಸುತ್ತಾನೆ ಶ್ರೀಗಿರಿಯನ್ನು ಅಂತರಂಗದಲ್ಲಿ ಕಾಣಬೇಕು ( ರಾಗ-ಆನಂದಭೈರವಿ, ತಾಲ-ದೀಪಚಂದಿ) ಶ್ರೀಗಿರಿಯ ಸುಕ್ಷೇತ್ರಕಿಂದು | ಹೋಗಿ ಯಾತ್ರೆಯ ಮಾಡಿ ಬಂದೆ<noinclude></noinclude> 0ivo36znu3f2pmkxamcna77nsgl4zui ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೭ 104 98966 276047 2024-10-25T16:16:51Z सुबोध कुलकर्णी 3142 OCR 276047 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಶ್ರೀಗಿರಿಯು ಶರೀರದೊಳಗುಂಟು | ಓಂ ಶ್ರೀಗುರುಸಿದ್ದಾ | ಯೋಗಿ ಜನರ ಮರ್ಮ ಬ್ಯಾರುಂಟು ಆರು ಬೆಟ್ಟವ ದಾಟಿ ನಡೆದು | ಮೂರು ಕೊಳ್ಳದ ಮೂಲಕ್ಕಿಳಿದು || ಏರಿದೆನೊ ಕೈಲಾಸ ದ್ವಾರವ | ಓಂ ಶ್ರೀಗುರುಸಿದ್ದಾ | ಸಾರಿ ಬಡಗಲ ಗುಡಿಯ ಕಂಡೆನು ಏಳು ಸುತ್ತಿನ ಕೋಟೆಯೊಳಗೆ | ನೀಲದುಪ್ಪರಿಗೆಗಳ ನಡುವೆ || ತಾಳ ಮದ್ದಲೆ ಗಂಟೆ ಭೇರಿಗಳು | ಓಂ ಶ್ರೀಗುರುಸಿದ್ದಾ | ವೇಳೆ ವೇಳೆಗೆ ತಾವೆ ನುಡಿಯುವವೊ ಒಂಭತ್ತು ಬಾಗಿಲಗಳದರೆ | ಳಿಂಬಾದ ಬೀದಿಗಳು ನಾಲ್ಕು || ತುಂಬಿ ಸೂಸುವ ಕೊಳಗಳೇಳುಂಟು | ಓಂ ಶ್ರೀಗುರುಸಿದ್ದಾ | ಸ್ತಂಭವೆರಡು ಶಿಖರವೊಂದುಂಟು ಪಾತಾಳ ಗಂಗೆಯೊಳು ಮಿಂದು | ಓತು ಶಿಖರೇಶ್ವರನಿಗೇರಿ || ಜ್ಯೋತಿರ್ಲಿಂಗಕ್ಕೆ ದೃಷ್ಟಿಯನಿಟ್ಟಿದೆನೋ | ಓಂ ಶ್ರೀಗುರುಸಿದ್ಧಾ | ಜ್ಯೋತಿರ್ಲಿಂಗವು ಕರದಿ ಕಾಣಿಸಿತೋ ಬರುವ ಕೋಣಗಳೆಂಟ ಬಡಿದೆ | ಹಿರಿಯ ಹುಲಿಗಳನಾರ ತಡೆದೆ || ಮೊರೆವ ಸರ್ಪದ ಹೆಡೆಯ ಮೆಟ್ಟಿದೆನೋ | ಓಂ ಶ್ರೀಗುರುಸಿದ್ದಾ | ಚರಿಪ ಕಪಿಯನು ಹಿಡಿದು ಕಟ್ಟಿದೆನೋ ಸಪ್ತ ನದಿಯ ಸಂಗಮ ದಾಟಿ | ಗುಪ್ತ ಕದಳೀ ಬನದಲ್ಲಿ ಸುಳಿದು || ಲಿಪ್ತ ಗುಹೆಯೊಳಗೊಬ್ಬನೆ ಪೊಕ್ಕಿದೆನೊ | ಓಂ ಶ್ರೀಗುರುಸಿದ್ದಾ | ಸಪ್ತವರ್ಣದ ಲಿಂಗವ ಕಂಡಿಹೆ ಇಂದ್ರ ದಿಕ್ಕಿನೊಳೆದ್ದು ಸೂರ್ಯ- 1 ಚಂದ್ರ ಗುಪ್ತದ ಪುರದೊಳು ಮುಳುಗಿ || ಚಂದಚಂದದ ಬೆಳಕು ತೋರುವದು | ಓಂ ಶ್ರೀಗುರುಸಿದ್ದಾ | ನಿಂದು ನೋಡಲು ಬಯಲಿಗೆ ಬಯಲಾಯಿತೆ<noinclude></noinclude> 0stj2iiotc3iylc9h560scu29jjwijk ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೮ 104 98967 276048 2024-10-25T16:19:39Z सुबोध कुलकर्णी 3142 OCR 276048 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಗಿರಿಶಿಖರಕಗ್ನಿ ಮುಖದೊ- | ಇರುವ ಅರ್ಕೆಶ್ವರನ ಹಿಂದೆ || ಸುರಿಯುವಮೃತ ಪಂಚಧಾರಗಳು | ಓಂ ಶ್ರೀಗುರುಸಿದ್ದಾ | ಅರಿತು ಸೇವಿಸಿ ಮರಣವಿಲ್ಲವೊ ಇಂತು ಶ್ರೀಶೈಲದ ಘನವ | ಭ್ರಾಂತಿಯಳಿದು ತಿರುಗಿ ನೋಡಿ || ಅಂತರಂಗದ ಗುಡಿಯ ಹೊಕ್ಕೆನೋ | ಓಂ ಶ್ರೀಗುರುಸಿದ್ಧಾ | ಶಾಂತಮಲ್ಲ ತಾನೆ ತಾನಾದೆನೊ ಪ್ರಾಕೃತಿಕ, ಪಾರಮಾರ್ಥಿಕ ಹಾಗೂ ತಾತ್ವಿಕ ಅಂಗಗಳು (ಇಷ್ಟಲಿಂಗ) (ರಾಗ-ಕಾಂಬೋಧಿ, ತಾಲ-ದೀಪಚಂದಿ) ಪರತರ ಶಿವಲಿಂಗವೆಳಸಿ ನಿನಗಾಗಿ | ಕರ ಕಂಜದೊಳು ಕಾಣಿಸಿತು ಯೋಗಿ ಯಜಿಸು ಮೊದಲ ಪೀಠವೆ ಬಿಂದುವಾಗಿ ಮೇಲೆ ನಿಂದೆ- 1 ಸದ ಪೀಠವದು ನಾದವಾಗಿ ಗೋಮುಖವೆ || ಸದಮಳ ಕಳೆಯಾಗಿ ಸಕಲಾತೀತವೆ ಲಿಂ- 1 ಗದ ನಿಜವಾಗಿರಲದರೊಳುಜ್ವಲಿಪ ತರು ವಿಸ್ತಾರವನೊಳಕೊಂಡಿರ್ದ ಬೀಜದ | ಪರಿಯಂತರಾರಧಗಳಿಗಿಂಬುವಡೆದ || ಪರಬೊಮ್ಮಕಾಶ್ರಯವಾಗಿಹ ನಿಜಶಕ್ತಿ | ವೆರಸಿ ತನಗೆ ತಾನಾಧಾರವಾಗಿರ್ಪ ಮರು ಮಂಡಲವನುಚ್ಚಳಿಸಿ ಗುಣವರ್ಣ | ಮೂರನು ಮೀರಿ ಬೋಧಮಾತ್ರವಾಗಿ || ತೋರುವ ನಿಜಗುರು ಶಂಭುಲಿಂಗವದು ತಾನೆ | ಬೇರೆನಿಸದೆ ನಿನ್ನ ಕಣ್ಣ ಮುಂದಿಹುದು<noinclude></noinclude> hi7f0psef3fx4ejsadgnj05bkvpblm5 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೯ 104 98968 276049 2024-10-25T16:21:34Z सुबोध कुलकर्णी 3142 OCR 276049 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ (ಪ್ರಾಣಲಿಂಗ) (ರಾಗ-ಸೋಹನಿ, ತಾಲ-ದೀಪಚಂದಿ) ಪ್ರಾಣಲಿಂಗವಿದನು ಗುರುವಿ | ನಾಣತಿಯೊಳು ಕೇಳಿ ನೋಡಿ | ಮಾಣದೇಕ ಚಿತ್ತದಿಂದ ಜಾನಿಪನೆ ಕೃತಾರ್ಥನು ಅಸುವೆ ರವಿಯ-ಪಾನಮಿಂದು | ವೆನಿಪುದವರೊಳಗಲದೊಂದಿ | ಮಿಸುವ ಶ್ರಾಂತ ಸಾಂತವಾದ ಶೈವಶಕ್ತಿ ಬೀಜದ || ಬೆಸುಗೆಯಾದ ತಾಣದೇಕವರ್ಣದಖಿಳ ವೃತ್ತಿಮಯದ | ಪೆಸರು ತಳೆದು ಶ್ರವಣವಿಷಯವಾದ ಪರಮನಾದವೆ ಮೂಲಲಿಂಗ ನಾಭಿಹೃದಯ ಕಂಠ ಕೂರ್ಚ ಗೋತ್ರ ಮೊತ್ತ | ಜಾಲದಂಬುಜಾಕ್ಷರಾದಿ ದೈವ ಮಂತ್ರಶಕ್ತಿಯ || ಮೇಳದೊಡನೆ ಕೆಂಪು ಮಿಂಚು ರನ್ನ ಚಿನ್ನ ಸೊಡರು ಚಂಚ | ಲಾಲತಾಗ್ನಿ ದೀಪ್ತರೂಪದೋರ್ಪ ದಿವ್ಯ ಬಿಂದುವೆ ಪಲವು ವಿವರವಾಂತ ಕುಂಭದೊಳಗಣಚಲ ದೀಪದೊಂದು | ಬೆಳಗು ಮಸಗುವಂತೆ ದೇಹಕರಣ ನಿರಕ ಮುಖದೊಳು || ಪೊಳೆದು ವಿಶ್ವ ದೃಶ್ಯ ವೀಥಿಗಳನ್ನು ಬೇರೆ ಬೇರೆ ತೋರ್ಕೆ- | ಗೊಳಿಪ ಚಾರು ಚಿತ್ಕಲ ಪ್ರಪೂರ್ಣ ಶಂಭುಲಿಂಗವೆ ( ಭಾವಲಿಂಗ) (ರಾಗ-ಮಾಲ ಕಂಸ, ತಾಲ-ದೀಪಚಂದಿ) ಭಾವಲಿಂಗವನೆ ಬಿಡದೆ ನೀನು | ಪರಿ- 1 ಭಾವಿಸು ಭೇದವಿಲ್ಲದೆ ಯೋಗಿ ಗುರುಮಂತ್ರ ಶಕ್ತಿಯಿಂದುದಿಸದೆ | ಯೋಗ | ಕರಣ ಮಥನದೊಳುಜ್ವಲಿಸದೆ || ಕರಹೃದಯದ ಹವಣೆನಿಸದೆ | ನಿತ್ಯ | ಪರಿಪೂರ್ಣಾನಂದವಚ್ಚಳಿಯದೆ ದೀಪವು ದೀಪದ ಕಿರಣವ | ತಾನೆ | ವ್ಯಾಪಿಸಿ ತೋರುವ ಪ್ರಭೆಯಂತೆ || ರೂಪಿಸಿ ಬೆಳಗುವಿಷ್ಟ ಪ್ರಾಣ | ಲಿಂಗಾ- | ರೋಪವಿಲ್ಲದ ನಿರುಪಾಧಿಯ<noinclude></noinclude> orr9pavs7ogb8hkwvpyq1sx300ijn2m ಪುಟ:ಕನ್ನಡ ಪರಮಾರ್ಥ ಸೋಪಾನ.pdf/೯೦ 104 98969 276050 2024-10-25T16:36:15Z सुबोध कुलकर्णी 3142 OCR 276050 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಸುಕರದರ್ಚನೆ ಧ್ಯಾನವೆಸಗಲು | ತೋರ್ಪ | ಸಕಲಾಸಕಲ ನಿಷ್ಕಳಂಗಳ || ನಿಕರ ವಿಷಯ ವಿಕಲ್ಪನೆ ಗೂಡ- 1 ದೊಪ್ಪು - 1 ವಕಲಂಕ ನಿತ್ಯ ನಿರ್ಮಲವಾದ ಪೊರಗೊಳಗಣ ನೇತ್ರಮಾನಸ | ದಿಂದೆ | ಕುರುಹುವಡೆದು ಬಣ ಬಗೆಯಾಗಿ || ಬರಿ ಬಳಕೆಯೊಳೊಂದದವಿರಳ | ದೀಪ್ತಿ 1 ಕರಿಗೊಂಡು ವಿಕೃತಿಯೊಂದಿಲ್ಲದ ಸ್ಕೂಲ ತತ್ವಾತ್ಮಕ ಜೀವನ | ವೃತ್ತಿ- 1 ಜಾಲವಂಟಿದ ಸೂಕ್ಷಾಂತರದೊಳು || ಮೇಳವಿಸದ ಸದಮಳ ಪರ- 1 ಮಾನು- | ಕೂಲದಿಂದಖಿಳ ಸಾಕ್ಷಿಕವಾದ ನೋಟದ ಸಮರತಿ ಕೂಟದ | ಮೇಲೆ ಮೀಟೆನಿಸುವ ಪರವಶನಂತೆ || ನಾಟಿಸುತಿಹ ರೂಪ ರುಚಿಗಳ | ಮೀರಿ | ಸಾಟಿದೋರದ ತೃಪ್ತಿಮಯವಾದ ತರುಮಲ ಶಾಖೆಯನೊಳಕೊಂಡ | ಬೀಜ- 1 ದಿರವಿನಂದದೊಳು ಷರ್ಡದ | ನೆರವಿಗೆ ಪರಮ ಕಾರಣವಾಗಿ | ಕಾರ್ಯ- | ಕಾರಣ ಕರ್ಮದ ತೋರ್ಕೆವಡೆಯದ ಮಂದರಾಚಲದ ಚಲನೆ ನಿಂದ | ಸದಾ | ಸಿಂಧುವಿನಂತೆ ಬುದ್ದಿ ವೃತ್ತಿ- | ಯೊಂದಿಲ್ಲದಿಹ ಕಾಲದೊಳು ನಿತ್ಯ | ಬೋಧಾ- | ನಂದಮುದ್ರೆಯೊಡೆಯದಿರ್ಪ ತನುಕರ್ಮವನು ವಾಯುಜಯವನು | ಹಾರ- 1 ದನುಭವ ಮಾತ್ರದೊಳು ಅಪರೋಕ್ಷ. || ವೆನಿಸುವ ಗುರು ಶಂಭುಲಿಂಗದ | ನಿಜ | ದನುವಿನ ಚಿನ್ಮಾತ್ರವೆನಿಸುವ<noinclude></noinclude> alo5nz0hvytjv3r8642agk191qriz1e ಪುಟ:ಕನ್ನಡ ಪರಮಾರ್ಥ ಸೋಪಾನ.pdf/೯೧ 104 98970 276051 2024-10-25T16:40:39Z सुबोध कुलकर्णी 3142 OCR 276051 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಪ್ರಕರಣ ಹದಿನೈದು ಅನುಭಾವದ ಉಗಮವೂ ಪ್ರಮಾಣಗಳೂ ಅನುಭಾವದ ತಾತ್ವಿಕ ಪ್ರಮಾಣ ನಿಜ ಊಹಿಸಬಾರದು ಸಂಪನ್ನಾ ಅದು ವಚನಕೆ ಗೋಚರಮಲ್ಲೊಂದು | ಅದು ಮನಸಿಗೆ ವಿಷಯಮಲ್ಲೆಂದು || ಕೇಳು ಮತ್ತೊಂದು ಅನುವಿಂದ | ಪೇಳು ಉಪದೇಶಿಸಬೇಕದರಿಂದ ಸತ್ಯಜ್ಞಾನ ಸುಖಾತ್ಮಕವೆಂದು | ನಿತ್ಯ ಪರಿಪೂರ್ಣತೆಯೆಂದು || ದೃಶ್ಯವಿಲಕ್ಷಣ ವೀಕ್ಷಿಸುದೆಂದು | ಜಾನಿಸಿ ಪೇಳಿತು ಶ್ರುತಿಗಳ ಮೊತ್ತ || ಅನುಭಾವದ ನೈತಿಕ ಪ್ರಮಾಣ ( ರಾಗ-ಸಾರಂಗ, ತಾಲ-ಕೇರ ವಾ) ನಿಜ ಗುಹ್ಯದ ಮಾತು | ಸಾಧುರಿಗಲ್ಲದೆ ತಿಳಿಯದು ಗೊತ್ತು ಕಣ್ಣಿಲೆ ಕಂಡು ಹೇಳದ ಮಾತು | ಪುಣ್ಯವಂತರಿಗಿದೆ ಹೊಳಿದೀತು || ಇನ್ನೊಬ್ಬರಿಗೇನ ತಿಳಿದೀತು | ಚಿನ್ಮಯದ ವಸ್ತು ನೀತಿಗೆ ನಿಜವಾಗಿಹ ಮುಕುಟ | ಮಾತಿಗೆ ಮುಟ್ಟಿದವನೆ ಬಲು ನಿಗಟ | ಮತಿಹೀನರಿಗೆ ಒಗಟ | ಯತಿಜನರಿಗೆ ಪ್ರಗಟ<noinclude></noinclude> 44mnhtsh0ahws1p40zw2p7nt9cc1a09 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೯೨ 104 98971 276052 2024-10-25T16:42:58Z सुबोध कुलकर्णी 3142 OCR 276052 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಸೋsಹಂ ಸೊನ್ನೆಯ ಮಾತನೆ ಕೇಳಿಕೊ | ಗುಹ್ಯ ಗುರುತು ಹೇಳುವ ಗುರು ಬಳಿಕೆ || ಮಹಿಪತಿ ನಿನ್ನೊಳು ನೀ ತಿಳಕೆ | ಸಿದ್ಧದ ಬಲು ಬೆಳಕೊ ಅನುಭಾವದ ಅತೀಂದ್ರಿಯ ಪ್ರಮಾಣ ( ರಾಗ-ಆನಂದಭೈರವಿ, ತಾಲ-ದೀಪಚಂದಿ ) ಅಂದವಾದ ಶ್ರೀಗಂಧದ ಗಿಡದೊಳು | ನಿಂದ ಹಣ್ಣುಗಳನು ಕಾಣದೆ ಇವನ್ನು ಸವಿಯದೆ ಹೋಗದಿರೆಂದಾದರೂ || ಓಂ ಸುಜ್ಞಾನಿಗಳಿರಾ ! ಅಂದವರಿಗೆ ಅಮೃತಸಾರವು ಕಣ್ಣು ಇಲ್ಲದವನೆ ನೋಡಿ | ಕಾಲು ಇಲ್ಲದವನೆ ಏರಿ | ಕೈಯಿಲ್ಲದವನೆ ಹರಿಯಬಂದನು || ಓಂ ಸುಜ್ಞಾನಿಗಳಿರಾ ! ಬಾಯಿ ಇಲ್ಲದವನೆ ತಿಂದನೊ ಏಳೆಂಟು ಆರು ಹತ್ತು ಮಂದಿ | ಕಳ್ಳರು ವೇಳೆ ಇದೇ ಎಂದು ನೋಡಿ | ಕಳ್ಳಮತಿಯಲ್ಲಿ ಕಾಯಿ ಹರಿಯಬಂದರು | ಓಂ ಸುಜ್ಞಾನಿಗಳಿರಾ ! ಕೋಳಿ ಕೂಗಿತಷ್ಟರೊಳಗೆ ಗಿಡವ ಕಾಯುವ ಕಾವಲುಗಾರ | ನೋಡಲು ಬಂದು ತಡಮಾಡದಲೆ ಉಡಿಗೆ ಉಟ್ಟಿದ್ದು ಸಿಡಿಲಿನಂತೆ ಹೊಡೆದನೋ || ಓಂ ಸುಜ್ಞಾನಿಗಳಿರಾ! ಹಿಡಿದು ಪಾರ ಜಿಲ್ಲೆಗೆ ಕಳುಹಿದನೊ || ೪ || ಜಿಲ್ಲಾ ದೊರೆಯು ಅಲ್ಲಿಯ ಸಾಹೇಬ | ಕಳ್ಳರನೆಲ್ಲ ವಿಚಾರಮಾಡಿ | ಕಳ್ಳತನಕೆ ಸಲ್ಲುವಷ್ಟು ಜುರ್ಮಾನವ || ಓಂ ಸುಜ್ಞಾನಿಗಳಿರಾ ! ಆಳಿಗರವತ್ತು ದಂಡವ ಮಾಡಿದನು ದಂಡದ ರೂಪಾಯಿ ಕೊಡುವದಕ್ಕೆ | ಬಂದೆ ಗುರುವಿನ ಅಡಿಗಳ ಪಿಡಿದು | ದಂಡ ಕೊಟ್ಟು, ಧನ್ಯರಾದರು | ಓಂ ಸುಜ್ಞಾನಿಗಳಿರಾ | ಕಂಡೆನಯ್ಯಾ ಶ್ರೀಗುರುಕರುಣದಿ<noinclude></noinclude> hzmd1mpsa8fxq99lo9ie8f3pufbt0s0 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೯೩ 104 98972 276053 2024-10-25T16:44:54Z सुबोध कुलकर्णी 3142 OCR 276053 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಪಾರಮಾರ್ಥಿಕ ಅನುಭವಗಳಲ್ಲಿಯ ಅದಲುಬದಲು ಹಾಗೂ ಅನುಬೋಧೆ (i) ( ರಾಗ-ಭೂಪ, ತಾಲ- ದೀಪಚಂವಿ) ಇದರೊಳಾರಯ್ಯ ನೀನು | ಆತ್ಮಾ | ವರಗಿ ನಾನೆಂದಹಂಕರಿಸಿ ಓ ಎಂದಂಬೆ ನೋಡುವವನೊಬ್ಬ ತಾ ಕೇಳಲರಿಯನು ನುಡಿಯ | ನೋಡಲರಿಯನು ಕೇಳುವವ ರೂಪಾ || ಆಡುವವ ನುಡಿಯೊಬ್ಬ, ಪರಿಮಳಂಗಳ ತಿಳಿಯಾ | ಆಡಲರುವಿಲ್ಲ ಘ್ರಾಣೇಂದ್ರಿಯವಗೆ ಕುಡುವವಗ ನಡೆಯಿಲ್ಲ, ನಡೆವವರ ಕರವಿಲ್ಲ | ಬಿಡದೆ ಜೇಷ್ಟಿ ಸುವವಗೆ ರೂಪವಿಲ್ಲ || ಬಿಡನಾರು ಮರು ಇಪ್ಪತ್ತೈದು ಕೂಟದಲ್ಲಿ | ಗಡಣದಿಂದಿಹ ಮನಿಗೆ ಕ್ಷೇತ್ರಜ್ಞನೊಬ್ಬನಿಹ ತನ್ನ ನಿಜ ತಾನರಿಯೆ ಧನ್ಯ ತಾನೆಂದೆಂಬೆ | ನಿನ್ನ ಬಲ್ಲರಿಕಿದು ನೋಡುಚಿತವೆ || ಇನ್ನಾರೆ ತಂದೆ ಮಹಿಪತಿ ಬೋಧವನು ಸವಿದು | ಕಣ್‌ದೆರೆದಚ್ಚುತನ ನೆನೆದು ತಿಳಿಯೋ (ii) ( ಉಗಾಭೋಗ ) ಕಣ್ಣಿಲಿ ಕೇಳುವ ಕಾಂಬುವನರಿವ ಆಘ್ರಾಣಿಸುವ ಆಸ್ವಾದಿಸುವ ಶ್ರವಣದಿ ಕೇಳುವ ಕಾಂಬುವನರಿವ ಆಘ್ರಾಣಿಸುವ ಆಸ್ವಾದಿಸುವ. ರಸನದಿ ಕೇಳುವ ಕಂಬುವನರಿವ ಆಘ್ರಾಣಿಸುವ ಆಸ್ವಾದಿಸುವ. ಸ್ಪರುಶದಿ ಕೇಳುವ ಕಾಂಬುವನರಿವ ಆಘ್ರಾಣಿಸುವ ಆಸ್ವಾದಿಸುವ.<noinclude></noinclude> dq2iy81guei89fvhuux31rlpz9qyv0j ಪುಟ:ಕನ್ನಡ ಪರಮಾರ್ಥ ಸೋಪಾನ.pdf/೯೪ 104 98973 276054 2024-10-25T16:47:09Z सुबोध कुलकर्णी 3142 OCR 276054 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಪ್ರಾಣದಿ ಕೇಳುವ ಕಾಂಬುವನರಿವ ಆಘ್ರಾಣಿಸುವ ಆಸ್ವಾದಿಸುವ, ಲೋಕವಿಲಕ್ಷಣ ದಿವ್ಯ ಕರಣ ಲೋಗರಿಗಾಶ್ಚರ್ಯ ಪುರಂದರವಿಠಲ, ಈ ಬೆಲೆಯುಳ್ಳ ದಿವ್ಯ ಮುತ್ತನ್ನು ದೀನಭಾವದಿಂದಲೇ ಕೊಳ್ಳಬಹುದು ( ರಾಗ-ಮಿಶ್ರ ಕಾಫಿ, ತಾಲ-ಕೇರವಾ ) ಮುತ್ತು ಕೊಳ್ಳಿರೋ ಜನರು ಮುತ್ತು ಕೊಳ್ಳಿರೋ ಮುತ್ತು ಬಂದಿದೆ ಕೊಳ್ಳಿ ಸಚ್ಚಿದಾನಂದ ದಿವ್ಯ ಜ್ಞಾನವೆಂಬೋ ದಾರದಲ್ಲಿ ಪೋಣಿಸಿದ ದಿವ್ಯ ಮುತ್ತು | ಧ್ಯಾನದಿಂದ ಕೊಂಬುದಿದನು ದೀನರಾದ ಬಲ್ಲ ಜನರು ಕಟ್ಟಲಾಗದು ಮೂಗಿನಲ್ಲಿ ಇಟ್ಟು ಮೆರೆಯಲಾಗದಿದು | ಭ್ರಷ್ಟಜನಕ್ಕೆ ಕಾಣಿಸದಂಥ ಕೃಷ್ಣನೆಂಬೊ ಆಣಿ ಮುತ್ತು ಹಿಡಿಯಲಿಕ್ಕೆ ಸಿಲುಕದಿದು ಕಾಡೆ ಕಾಣದೆಂದು ಬೆಲೆಯು | ಪೊಡವಿಗೆಲ್ಲ ಪುರಂದರವಿಠಲ ಒಡೆಯನೆಂಬೊ ದಿವ್ಯ ಮುತ್ತು || ೩ || ಈ ದಿವ್ಯ ಮುತ್ತು ಯಾರಿಗೂ ಕಾಣದು ( ರಾಗ-ಬಿಲಾವಲ, ತಾಲ-ದೀಪಚಂದಿ) ಆರಿಗೆ ಕಾಣದಿ ಮುತ್ತು | ಗುರುವಿನ ಕರುಣಾಗದೆ | ತಿಳಿಯದು ಗೊತ್ತು ಕೋಟಿಸೂರ್ಯರ ಪ್ರಭೆ ಮೀಟಾಗಿಹುದು || ಕಾಷ್ಟದೊಳಗ್ನಿಯಂತಿಹುದು | ಅದು | ನೋಟಕ್ಕೆ ಅದು ಕಾಂಬದು | ನಿಜ | ನಿಷ್ಠೆ ಯುಳ್ಳವರಿಗೆ ಘಟ್ಟಿಗೊಂಡಿಹುದು ಕತ್ತಲೆಯೊಳು ಕಾಂಬುವುದು | ಇದು | ಎತ್ತ ನೋಡಲು ಪ್ರಭೆಯೆತ್ತಿ ತೋರುವುದು || ನೆತ್ತಿಯೊಳು ಗೊತ್ತು ಮಾಡಿಹುದು ! ಅದು ಉತ್ತರ ಉನ್ಮನಿ ಸೇರಿಕೊಂಡಿಹುದು<noinclude></noinclude> qkaamgxpkke3z793y39154gxhdvl9n7 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೯೫ 104 98974 276055 2024-10-25T16:49:36Z सुबोध कुलकर्णी 3142 OCR 276055 proofread-page text/x-wiki <noinclude><pagequality level="1" user="सुबोध कुलकर्णी" /></noinclude>ಕನ್ನಡ ಪರಮಾರ್ಥ ಸೋಪಾನ ಸೂತ್ರದ ಬಲವಿರಬೇಕು | ಆ | ಸೂತ್ರವ ಹಿಡಿದು ತಾ ಬಂದಿರಬೇಕು || ತಾಪತ್ರಿಗುಣ ಅಳಿಯಬೇಕು | ಸೂ- | ಪಾತ್ರ ಸುಜ್ಞಾನದ ನೆಲೆ ತಿಳಿಯಬೇಕು ಉದಯಾಸ್ತವರಡದಕಿಲ್ಲಾ | ವೇದ | ಶ್ರುತಿಶಾಸ್ತ್ರ ಆಗಮಕದು ನಿಲಕಿಲ್ಲಾ || ತನ್ನೊಳು ತಾ ತಿಳಿಯಲಿಲ್ಲಾ | ಇದು | ಕಲ್ಲು ಮೆತ್ತಗೆ ಮಾಡುವವನೆ ಬಲ್ಲಾ ರೇವಗಿಪುರಕೆ ಹೋಗಬೇಕು | ದೊಡ್ಡ | ಮಹಾಮೇರು ಪರ್ವತವನು ಹತ್ತಬೇಕು || ಅಭಿಮಾನದಿ ಗವಿ ಹೊಗಬೇಕು | ದೊಡ್ಡ | ರೇವಣಸಿದ್ದಲಿಂಗನ ನೋಡಬೇಕು ಈ ಮುತ್ತಿನ ಮಹಿಮೆಯು ಮುಂದೆ ತಿಳಿಯಬಹುದು ( ರಾಗ-ಬಿಲಾವಲ, ಕಾಲ-ದೀಪಚಂದಿ) ಮುತ್ತು ಬಂದಿದೆ ಕೊಳ್ಳಿರಣ್ಣಾ | ಅದಕೆ | ಎಷ್ಟೆಲ್ಲಾ ಏನಿಲ್ಲಾ ಬೆಲೆಯಾಗದಣಾ ಥಳ ಥಳ ಹೊಳೆಯುತದಾ | ಅದು | ಬಲ್ಲ ಜಾಣರಿಗೆ ಬಯಲೊಳಗಾ || ಕೂದಲ ಎಳೆಕಿಂತ ಸಹಾ | ಅದು | ಬಣ್ಣ ಬಣ್ಣದ ಬ್ರಹ್ಮಲೋಕಣ್ಣಾ ತನುವೆಂಬ ತರಾಜ ಪಿಡಿದು | ಆದಿ | ಶರಣರು ತೂಗ್ಯಾರು ಬೇಸರ ಕಳೆದು || ಮನವೆಂಬ ಮಣಿದಾರ ಪಿಡಿದು | ಕ | ಹೋಗದೆ ತೂಗ್ಯಾರು ಯೋಗ ಮಾಡಿದವರು ಮುತ್ತಿನ ಮಹಿಮೆ ಮುಂದದ | ಇದರ | ಗೊತ್ತು ತಿಳಿಯದ ಮಂದಿ ಸತ್ತು ಹೋಗಳಿದ || ಸುತ್ತು ಮುತ್ತಲು ಸುಳಿಯುತಲದ | ಗುರು | ಚಿದಾನಂದನ ಚಿತ್ತದೊಳಗದ<noinclude></noinclude> pj0ao1i98b610hl3mwr2omkj47h7sqs ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೧ 104 98975 276056 2024-10-26T06:39:53Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸ್ತಾವನೆ ಶ್ರೀ ಗುರುದೇವ ಡಾ|| ರಾನಡೆಯವರು ಶ್ರೇಷ್ಠ ಅನುಭಾವಿಗಳು, ಪ್ರಕಾಂಡ ಪಂಡಿತರು. ಅವರ ಅಲೌಕಿಕ ಬುದ್ಧಿ ಯು ಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ಲೀಲೆ ಯಿಂದ ವಿಹರಿಸುತ್ತಿದ್ದಿತು. ಎಲ್ಲಿಯೂ ಅದು ತಡವರಿಸುತ್ತಿ... 276056 proofread-page text/x-wiki <noinclude><pagequality level="1" user="~aanzx" /></noinclude>ಪ್ರಸ್ತಾವನೆ ಶ್ರೀ ಗುರುದೇವ ಡಾ|| ರಾನಡೆಯವರು ಶ್ರೇಷ್ಠ ಅನುಭಾವಿಗಳು, ಪ್ರಕಾಂಡ ಪಂಡಿತರು. ಅವರ ಅಲೌಕಿಕ ಬುದ್ಧಿ ಯು ಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ಲೀಲೆ ಯಿಂದ ವಿಹರಿಸುತ್ತಿದ್ದಿತು. ಎಲ್ಲಿಯೂ ಅದು ತಡವರಿಸುತ್ತಿರಲಿಲ್ಲ. ಅದರ ಫಲ ವಾಗಿ ಅವರು ಅನೇಕ ಶಾಸ್ತ್ರಗಳನ್ನು ಸಹಜವಾಗಿ ಅರಿತರು. ದರ್ಶನವು ಅವರ ಅತ್ಯಂತ ಪ್ರೀತಿಯ ವಿಷಯ. ಗಣಿತ ವಿಜ್ಞಾನಗಳಲ್ಲಿಯೂ ಅವರು ಪಾರಂಗತರು. ಅವರ ಭಾಷಾಪ್ರಭುತ್ವವೂ ಅವರ್ಣನೀಯವಾದುದು. ನಮ್ಮ ಪ್ರಾಚೀನ ಭಾಷೆ ಗಳಾದ ಸಂಸ್ಕೃತ-ಲ್ಯಾಟಿನ್ ಹಾಗೂ ಗ್ರೀಕ, ಆಧುನಿಕ ಪಾಶ್ಚಾತ್ಯ ಭಾಷೆಗಳಾದ ಇಂಗ್ಲಿಷ್ ಹಾಗೂ ಜರ್ಮನ್ ಮತ್ತು ಭಾರತೀಯ ಭಾಷೆಗಳಾದ ಮರಾಠಿ, ಕನ್ನಡ ಹಾಗೂ ಹಿಂದಿ ಇವನ್ನು ಅವರು ಚೆನ್ನಾಗಿ ಅಭ್ಯಸಿಸಿ, ಅವುಗಳ ಮೇಲೆ ಒಳ್ಳೆಯ ಪ್ರಭುತ್ವವನ್ನು ಪಡೆದಿದ್ದರು. ಮರಾಠಿಯು ಅವರ ಮಾತೃ ಭಾಷೆ ಕನ್ನಡವು ಅವರ ಪ್ರಾದೇಶಿಕ ಭಾಷೆ, ಅವರು ಜನಿಸಿದುದು, ಬೆಳೆದುದು ಜಂಬು- ಕಂಡಿಯಲ್ಲಿ, ಕನ್ನಡನಾಡಿನಲ್ಲಿ, ಆದುದರಿಂದ ಅವರಿಗೆ ಮೊದಲಿನಿಂದ ಕನ್ನಡವು ಕೊಂಚ ತಿಳಿಯುತ್ತಿತ್ತು. ಓದಲು, ಬರೆಯಲು ಬರುತ್ತಿರಲಿಲ್ಲ. ಆದರೆ ಮುಂದೆ ಕನ್ನಡ ನುಡಿ ಯನ್ನು ಸೂಕ್ಷ್ಮವಾಗಿ ಅಭ್ಯಸಿಸಬೇಕೆಂದು ಅವರಿಗೆ ಪ್ರಬಲವಾಗಿ ಹೊಳೆದ ಮೂಲಕ ಅವರು ತಮ್ಮದೇ ಆದ ಪದ್ದತಿಯಿಂದ ಬೇಗನೆ ಅದನ್ನು ಕಲಿತರು ಮತ್ತು ಕನ್ನಡ ಲಿಪಿಯ ಪರಿಚಯವಿಲ್ಲದಿದ್ದರೂ, ಅದರಲ್ಲಿ ಪಾರಂಗ ತತೆಯನ್ನು ಪಡೆದರು, e ಕನ್ನಡ ನುಡಿ ಹಾಗೂ ಕನ್ನಡಿಗರ ಅನುಭಾವವು ಶ್ರೀ ಗುರುದೇವರ ಗಮನ ಸೆಳೆದ ಬಗೆಯು ತುಂಬ ಸ್ವಾರಸ್ಯವುಳ್ಳದ್ದಾಗಿದೆ. ಶ್ರೀ ಗುರುದೇವರ ಸದ್ದು ರು ಗಳಾದ ಉಮದಿಯ ಶ್ರೀ ಭಾವೂಸಾಹೇಬ ಮಹಾರಾಜರವರು ಹಾಗೂ ಅವರ ಪರಾತ್ಪರ ಸದ್ಗುರುಗಳಾದ ನಿಂಬರಗಿಯ ಶ್ರೀ ನಾರಾಯಣರಾವ ಇಲ್ಲವೆ ಶ್ರೀ ಗುರುಲಿಂಗಜಂಗಮ ಮಹಾರಾಜರವರು ಕನ್ನಡಿಗರು. ಅವರು ಮರಾಠಿ ಭಾಷೆ ಯನ್ನೂ ಬಲ್ಲರು. ಆದರೆ ತಮ್ಮ ಪರಮಾರ್ಥ- ಪ್ರವಚನಗಳಿಗಾಗಿ ಅವರು ಆಗಾಗ ಕನ್ನಡವನ್ನೇ ಬಳಸುತ್ತಿದ್ದರು. ಆ ಸಮಯದಲ್ಲಿ ಅವರು ಕನ್ನಡ ಅನುಭಾವ ಪದಗಳನ್ನು ಹೇಳಿಸುತ್ತಿದ್ದರು. ಅವುಗಳ ಅರ್ಥವನ್ನು ವಿವರಿಸು ತಿದ್ದರು. ಶ್ರೀ ಗುರುದೇವರಿಗೆ ಕನ್ನಡ ಮಾತು ತಿಳಿದರೂ ಪದಗಳ ಅರ್ಥ ತಿಳಿಯುತ್ತಿರಲಿಲ್ಲ. ಅವರ ಸದ್ಗುರುಗಳು ಒಮ್ಮೆ ಅವರನ್ನು ಈ ರೀತಿ ಎಚ್ಚರಿಸಿ ದರೆಂದು ಶ್ರೀ ಗುರುದೇವರೇ ತಮ್ಮ ಉಪನ್ಯಾಸವೊಂದರಲ್ಲಿ ಅರುಹಿರುವರು. “ಕನ್ನಡಿಗರ ಅನುಭಾವವು ತುಂಬ ವಿಶಾಲವಾದ ವಿಷಯ. ನನ್ನ ಗುರು ಗಳಿಂದಲೂ, ಪರಾತ್ಪರ ಗುರುಗಳಿಂದಲೂ ನನಗದರ ಪರಿಚಯವಾದುದು ನನ್ನ<noinclude></noinclude> dwfhnkd2gcret9kfpa8tztf5043iia0 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೨ 104 98976 276057 2024-10-26T06:40:11Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸುದೈವವೇ ಸರಿ, ನಾನು ಕನ್ನಡಿಗನಿರುವದು ನನಗೊಂದು ಅಭಿಮಾನದ ವಿಷಯ. ಯಾಕೆಂದರೆ ರಾಮದಾಸ, ತುಕಾರಾಮರ ಗ್ರಂಥಗಳನ್ನು ಬಿಟ್ಟರೆ. ನನ್ನ ಸದ್ಗುರುಗಳು ಕನ್ನಡದ ಮುಖಾಂತರವಾಗಿಯೇ ನನಗೆ ಅನುಭಾವದ ಸತ್ಯತೆ ಯನ್ನು ಮೊದಲು ಮನಗ... 276057 proofread-page text/x-wiki <noinclude><pagequality level="1" user="~aanzx" /></noinclude>ಸುದೈವವೇ ಸರಿ, ನಾನು ಕನ್ನಡಿಗನಿರುವದು ನನಗೊಂದು ಅಭಿಮಾನದ ವಿಷಯ. ಯಾಕೆಂದರೆ ರಾಮದಾಸ, ತುಕಾರಾಮರ ಗ್ರಂಥಗಳನ್ನು ಬಿಟ್ಟರೆ. ನನ್ನ ಸದ್ಗುರುಗಳು ಕನ್ನಡದ ಮುಖಾಂತರವಾಗಿಯೇ ನನಗೆ ಅನುಭಾವದ ಸತ್ಯತೆ ಯನ್ನು ಮೊದಲು ಮನಗಾಣಿಸಿದರು. ಒಮ್ಮೆ ನಾವಿಬ್ಬರೂ ವಿಜಾಪುರ ಜಿಲ್ಲೆ ಯಲ್ಲಿಯ ಹೊರ್ತಿ ಎಂಬ ಗ್ರಾಮದಲ್ಲಿದ್ದೆವು. ಆಗ ಅಲ್ಲಿ ಒಬ್ಬರು ಪದ ವೊಂದನ್ನು ಹೇಳಿದರು. ನಾನದನ್ನು ಕೇಳುತ್ತಿರುವಾಗ ಸದ್ಗುರುಗಳು ಅದರ ಅರ್ಥವನ್ನು ಅರುಹಲು ನನ್ನನ್ನು ಆಜ್ಞಾಪಿಸಿದರು. ಆಗ ನಾನಂದೆ: “ಈ ಪದದಲ್ಲಿಯ 'ಗರುಡ' ಮತ್ತು 'ಉರಗ' ಎರಡು ಶಬ್ದಗಳನ್ನುಳಿದು ನನಗೆ ಏನೂ ಅರ್ಥವಾಗಲಿಲ್ಲ.” ಅದಕ್ಕೆ ಅವರೆಂದರು: “ಇಂಥ ಅಲ್ಪತಿಳುವಳಿಕೆಯಿಂದ ನೀವು ತೃಪ್ತರಾಗಕೂಡದು. ನೀವು ಕನ್ನಡವನ್ನು ಚೆನ್ನಾಗಿ ಕಲಿಯಬೇಕು.” ಅದೇ ಸಮಯಕ್ಕೆ ಲಿಪ್ಯಂತರದ ಹಾಗೂ ಭಾಷಾಂತರದ ಮುಖಾಂತರ ಅರ್ಥವನ್ನ ರಿಯುವದು, ಬೇರೆ ಭಾಷೆಯನ್ನು ಕಲಿಯುವ ಒಂದು ಉತ್ತಮ ಪದ್ದತಿಯೆಂದು ನನ್ನ ಕೆಲ ಸ್ನೇಹಿತರು ನನಗೆ ಅರುಹಿದರು. ಇದನ್ನು ಕುರಿತು ನನ್ನ ವಿದ್ಯಾ- ಗುರುಗಳಾದ ಡೆಕ್ಕನ ಕಾಲೇಜಿನ ಪ್ರಿ. ಬೇನರವರು ಈ ರೀತಿ ಹೇಳುತ್ತಿದ್ದರು. “ಪರಕೀಯ ಭಾಷೆಯನ್ನು ಸಹಜ ಹಾಗೂ ಸುಲಭವಾಗಿ ಕಲಿಯಬೇಕಾದರೆ ಅದರಲ್ಲಿಯ ಒಂದು ಸುಲಭ ಹಾಗೂ ಪ್ರಮಾಣಭೂತವಾದ ಗ್ರಂಥವನ್ನು ತೆಗೆದು ಕೊಳ್ಳಬೇಕು. ಭಾಷಾಂತರದ ಮುಖಾಂತರವಾಗಿ ಅದರ ಎಲ್ಲ ಅಂಶಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಈ ರೀತಿ ಜರ್ಮನ್, ಫ್ರೆಂಚ್, ಲ್ಯಾಟಿನ್ ಹಾಗೂ ಗ್ರೀಕ ಭಾಷೆಗಳನ್ನೂ ಬಾಯಬಲವೊಂದನ್ನೆ, ಆಯಾ ಭಾಷೆಗಳಲ್ಲಿಯ ಅದರ ಭಾಷಾಂತರಗಳೊಡನೆ ಲಕ್ಷ್ಯಪೂರ್ವಕವಾಗಿ ಓದಿ ಕಲಿಯಬಹುದು.” ನಾನು ಇಲ್ಲಿಯೂ ಅದೇ ಪದ್ಧತಿಯನ್ನು ಅನುಸರಿಸಿದೆ. ಶ್ರೀ ಬಾಬಾಚಾರ್ಯ ಕಾವ್ಯ ಎಂಬವರು ೧೯೦೮ರಲ್ಲಿ 'ಮಹಾರಾಜರವರ ವಚನ' ಎಂಬ ಗ್ರಂಥವನ್ನು ವಿಜಾ ಪುರದಲ್ಲಿ ಪ್ರಸಿದ್ದಿಸಿದರು. ಅದು ನಿಂಬರಗಿ ಮಹಾರಾಜರವರ ವಚನವನ್ನು ಒಳಗೊಂಡಿತ್ತು ವೀರಶೈವರಾದ ಅವರ ಬೋಧೆಯು, ಬ್ರಾಹ್ಮಣರಾದ ನನ್ನ ಸದ್ಗುರುಗಳ ಮುಖಾಂತರ ಪರಂಪರಾಗತವಾಗಿ ನಮಗೆ ಲಭಿಸಿತ್ತು. ಆ ಗ್ರಂಥವು ದೇವನಾಗರೀ ಲಿಪಿಯಲ್ಲಿ ಮುದ್ರಿತವಾಗಿತ್ತು. ಆದುದರಿಂದ ನನಗದು ತುಂಬ ಉಪಯುಕ್ತವಾಯಿತು.” ಈ ಬಗೆಯಾಗಿ ಶ್ರೀ ಗುರುದೇವರು ಕನ್ನಡವನ್ನು ಕಲಿಯಲು ಪ್ರಾರಂಭಿಸಿ, ಅದನ್ನು ಚೆನ್ನಾಗಿ ಅರಗಿಸಿಕೊಳ್ಳಲು ಯತ್ನಿಸಿ, ಅದರಲ್ಲಿ ಹುದುಗಿಕೊಂಡಿರುವ ಅನುಭಾವ ಜ್ಞಾನಭಂಡಾರದ ಸಂಪೂರ್ಣ ಲಾಭವನ್ನು ಪಡೆದರು. “ಬೋಧಸುಧೆ'ಯೆಂಬುದು ಶ್ರೀ ಗುರುದೇವರ ಕನ್ನಡದಲ್ಲಿಯ ಮೊದ ಲನೆಯ 'ಹಿರಿಯ-ಕಿರಿಯ- ಗ್ರಂಥ', ಗಾತ್ರ ಕಿರಿದು, ವಿಷಯ ಹಿರಿದು. ಅದರ<noinclude></noinclude> 0w2bygp1b0djyjldr5jz9szr9l5qlpr ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೩ 104 98977 276058 2024-10-26T06:43:02Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ರಚನಾಕ್ರಮವನ್ನು ರೂಪಿಸಿ, ಅದನ್ನವರು ತಮ್ಮ ಸ್ನೇಹಿತರಿಂದ ಬರೆಯಿಸಿದರು. ಅದರಲ್ಲಿ ಅವರ ಪರಾತ್ಪರ ಸದ್ಗುರುಗಳಾದ ಶ್ರೀ ನಿಂಬರಗಿ ಮಹಾರಾಜರವರ ನೈತಿಕ ಹಾಗೂ ಪಾರಮಾರ್ಥಿಕ ಬೋಧೆಯು ನೆಲೆಸಿರುವದು. ಶ್ರೀ ಗುರುದೇ ವರು ಈ... 276058 proofread-page text/x-wiki <noinclude><pagequality level="1" user="~aanzx" /></noinclude>ರಚನಾಕ್ರಮವನ್ನು ರೂಪಿಸಿ, ಅದನ್ನವರು ತಮ್ಮ ಸ್ನೇಹಿತರಿಂದ ಬರೆಯಿಸಿದರು. ಅದರಲ್ಲಿ ಅವರ ಪರಾತ್ಪರ ಸದ್ಗುರುಗಳಾದ ಶ್ರೀ ನಿಂಬರಗಿ ಮಹಾರಾಜರವರ ನೈತಿಕ ಹಾಗೂ ಪಾರಮಾರ್ಥಿಕ ಬೋಧೆಯು ನೆಲೆಸಿರುವದು. ಶ್ರೀ ಗುರುದೇ ವರು ಈ ಸಂತವರರನ್ನು ಆಧುನಿಕ ಕನ್ನಡನಾಡಿನ ಶ್ರೇಷ್ಠ ತಮ ಸಂತರೆಂತಲೂ, ಆಧುನಿಕ ಭಾರತದ ಶ್ರೇಷ್ಠತಮ ಸಂತರಲ್ಲಿ ಓರ್ವರೆಂತಲೂ ಭಾವಿಸಿದ್ದರು. ಅವರನ್ನು ಕುರಿತು ತಮ್ಮ ಉಪನ್ಯಾಸವೊಂದರಲ್ಲಿ, ಶ್ರೀ ಗುರುದೇವರು ಈ ರೀತಿ ಹೇಳಿದರು: “ಎರಡು ವರುಷಗಳ ಪೂರ್ವದಲ್ಲಿ ಲಚ್ಯಾಣ ಗ್ರಾಮದಲ್ಲಿ ಪಾರ- ಮಾರ್ಥಿಕ ಪರಿಷತ್ತು ಸೇರಿದಾಗ, ಅದಕ್ಕೆ ನಾನು ಮುಂದಿನ ಸಂದೇಶವನ್ನು ಕಳುಹಿಸಿದೆ : “ಶ್ರೀ ನಿಂಬರಗಿ ಮಹಾರಾಜರ ಸಂಪ್ರದಾಯವೇ ಕರ್ನಾಟಕ ದಲ್ಲಿಯ ಧರ್ಮಪಂಥಗಳಲ್ಲಿ ಏಕತೆಯನ್ನು ನಿರ್ಮಿಸಬಲ್ಲ ತಳಹದಿ.” ಅವರು ಹಿರಿಯ ವೀರಶೈವರು; ಹಾಗೂ ಅವರ ಶಿಷ್ಯರು ಹಿರಿಯ ಬ್ರಾಹ್ಮಣರು. ಅವ- ರಿಬ್ಬರು ರು ಕೂಡಿ ಪಾರಮಾರ್ಥಿಕ ಜೀವನಕ್ಕೆಯ ಹಿರಿಯ ಭೂಷಣಪ್ರಾಯರು. ನನ್ನ ಸ್ವಂತ ಪಾರಮಾರ್ಥಿಕ ಅನುಭವದಿಂದಷ್ಟೇ ಅಲ್ಲದೆ, ಮಹಾರಾಷ್ಟ್ರ, ಕರ್ನಾ ಟಕ ಹಾಗೂ ಪ್ರಪಂಚದಲ್ಲಿಯ ಬೇರೆ ಧರ್ಮಸಂಪ್ರದಾಯಗಳೊಡನೆ ಅವರ ಬರಹ-ಬೋಧನೆಗಳನ್ನು ಸರಿಹೋಲಿಸಿ, ನಾನಿದನ್ನು ತಮಗೆ ಅರುಹಬಲ್ಲೆ. ಮೇಲ್ಕಾಣಿಸಿದ ಸಂದೇಶದಲ್ಲಿ ನಾನು ಮತ್ತೂ ಹೇಳಿದ್ದೇನೆಂದರೆ : “ನಿಂಬರಗಿ ಗ್ರಾಮವು ವಿಜಾಪೂರ ಜಿಲ್ಲೆಯಲ್ಲಿ, ಒಂದು ತೀರ ದೂರದ ಮೂಲೆಯಲ್ಲಿದ್ದರೂ ಮತ್ತು ಶ್ರೀ ನಿಂಬರಗಿ ಮಹಾರಾಜರವರು ತೀರ ಅಪ್ರಸಿದ್ಧರಿದ್ದರೂ, ಅವರು ಉದ್ಯಾನದ ಮೂಲೆಯೊಂದರಲ್ಲಿ ನೆಡಲಾದ ಬಕುಲ ವೃಕ್ಷದಂತಿರುವರು. ಅದರ ಹೂಗಳ ಪಾರ್ಥಿವ ಪರಿಮಳವು ಇಡಿ ಉದ್ಯಾನವನ್ನು ತುಂಬಿಬಿಡುವಂತೆ, ಇವರ ಪಾರಮಾರ್ಥಿಕ ಪರಿಮಳವು ಇಡಿ ಕರ್ನಾಟಕದಲ್ಲಿ ಪಸರಿಸದಿರದು. ಪ್ರತಿ ಯೊಂದು ವಿಷಯದ ಬೆಲೆಯು ಅದರಲ್ಲಿಯ ಸತ್ಯತ್ವ ಹಾಗೂ ಅದರ ಸತ್ಪರಿ. ಣಾಮ ಇವನ್ನವಲಂಬಿಸಿರುವದು. ಆದುದರಿಂದ ನಮ್ಮಲ್ಲಿಯ ಪ್ರತಿಯೊಬ್ಬರು ಚೆನ್ನಾಗಿ ಬಾಳುವದನ್ನು ಕರ್ತವ್ಯತತ್ಪರವಾಗಿ ಬಾಳುವದನ್ನು ಭಕ್ತಿಯುತ ರಾಗಿ ಬಾಳುವದನ್ನು ನಿರ್ಣಯಿಸಿದರೆ, ನಮ್ಮ ಕೃತಿಗಳ ಹಿರಿಮೆಯೂ ನಮ್ಮ ಸದ್ಗುರುಗಳ ಹಿರಿಮೆಯ ಕುರುಹಾಗಬಲ್ಲದು. ಈ ದೃಷ್ಟಿಯಿಂದ ನಾನು ಶ್ರೀ ನಿಂಬರಗಿ ಮಹಾರಾಜರವರ ಸಂದೇಶವನ್ನು ಕಾಣಲಿರುವೆ.” - - ( ಈ ಬೋಧಸುಧೆ'ಯ ತರುವಾಯ 'ಕನ್ನಡ ಸಂತರ ಪರಮಾರ್ಥ ಪಥ' ಎಂಬ ಉದ್ಧಂಥದ ಸಿದ್ಧತೆಯು ನಡೆಯಿತು. 'ಪಾರಮಾರ್ಥಿಕ ಪ್ರಪಂಚದ ನಾಗರಿಕರಾದ ಶ್ರೀ ಗುರುದೇವರು ಕನ್ನಡ ಅನುಭಾವ ಪದಗಳ ವಿಶಾಲ ಸಾಗರ ದಲ್ಲಿ, ತಮ್ಮ ಆಯ್ಕೆಯ ಜಾಳಿಗೆಯನ್ನು ಆಳವಾಗಿ ಎಸೆದು, ಕೆಲ ಅತ್ಯುತ್ತಮ ಪದಗಳನ್ನೂ ವಚನಗಳನ್ನೂ ಆರಿಸಿದರು. ಅವರ ಆಯ್ಕೆಯು ವಿಶಿಷ್ಟವಾದ<noinclude></noinclude> qwsshdwghcdggp93q4fgfxg21pzw2u7 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೪ 104 98978 276059 2024-10-26T06:43:05Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: . e ಮತ-ಪಂಥಗಳಿಗೆ ಸೀಮಿತವಾಗಿರಲಿಲ್ಲ. ಎಲ್ಲ ಸಂತರು ಅವರು ವೈಷ್ಣವರೇ ಇರಲಿ, ಶೈವರೇ ಇರಲಿ, ಇಲ್ಲವೆ ವೀರಶೈವರೇ ಇರಲಿ-ಶ್ರೀ ಗುರುದೇವರಿಂದ ಸಮನಾದ ಗೌರವವನ್ನು ಪಡೆದರು. ಅವರು ಓರ್ವ ಮಹಮ್ಮದೀಯ ಸಂತರ ಪದಗಳನ್ನೂ ಆಯ್ದರು. ಮ... 276059 proofread-page text/x-wiki <noinclude><pagequality level="1" user="~aanzx" /></noinclude>. e ಮತ-ಪಂಥಗಳಿಗೆ ಸೀಮಿತವಾಗಿರಲಿಲ್ಲ. ಎಲ್ಲ ಸಂತರು ಅವರು ವೈಷ್ಣವರೇ ಇರಲಿ, ಶೈವರೇ ಇರಲಿ, ಇಲ್ಲವೆ ವೀರಶೈವರೇ ಇರಲಿ-ಶ್ರೀ ಗುರುದೇವರಿಂದ ಸಮನಾದ ಗೌರವವನ್ನು ಪಡೆದರು. ಅವರು ಓರ್ವ ಮಹಮ್ಮದೀಯ ಸಂತರ ಪದಗಳನ್ನೂ ಆಯ್ದರು. ಮೇಲಾಗಿ ಅವರು ಸುಪ್ರಸಿದ್ಧ ಸಂತರ ಪದಗಳನ್ನ ಹೈ ಆರಿಸಲಿಲ್ಲ. ಹಲ ಅಪ್ರಸಿದ್ಧ ಸಂತರ ಪದಗಳನ್ನು ಕೂಡ ಸ್ವೀಕರಿಸಿದರು-ಸತ್ಕರಿ ಸಿದರು. ಅವನ್ನು ಸುಪ್ರಸಿದ್ಧ ಸಂತರ ಪದಗಳಂತೆಯೇ ಗೌರವಿಸಿದರು. ಈ ಬಗೆ ಯಾಗಿ ಅವರು ಆಯ್ದ ಪದಗಳ ಶೈಲಿಯಲ್ಲಿಯೂ ತುಂಬ ವಿವಿಧತೆಯು ಕಂಗೊ ಳಿಸುವದು. ಅವುಗಳಲ್ಲಿ ಸುಸಂಸ್ಕೃತರಾದ ಪಂಡಿತರ ಅಭಿಜಾತ-ಸಂಸ್ಕೃತಪ್ರಚುರ ಶೈಲಿಯಂತೆ ತೀರ ನಿರಕ್ಷರ ಹಳ್ಳಿಗರ ಉರುಟು ಮಾತಿನ ಶೈಲಿಯ ಕಾಣ ಬರುವದು. ಕನ್ನಡ ಅನುಭಾವದ ಹೂದೋಟದಿಂದ ಇಂಥ ವಿವಿಧ ಹೂವು ಗಳನ್ನು ಈ ಅನುಭಾವಿ-ವಾಲಾಕಾರನು ಆಯ್ದಿರುವನು. ಅವನ್ನು ನಾನು ಆಯುದು ಮುಖ್ಯ ವಾಗಿ “ಸ್ವಾಂತಃ ಸುಖಾಯ” “ನನ್ನ ಪಾರಮಾರ್ಥಿಕ ಬೆಳ ವಣಿಗೆಗಾಗಿ, ಆನಂದಕ್ಕಾಗಿ.” ಆದರೆ ಅದರಿಂದ ಅವು ಅನ್ಯರ ಪಾರಮಾರ್ಥಿಕ ಸಾಧನದ ಪೂರ್ಣತೆಗೆ ನೆರವಾದರೆ ನನಗೂ ಅದರಿಂದ ಆನಂದವಾಗದಿರದು" ಎಂದು ಶ್ರೀ ಗುರುದೇವರು ಉಸುರಿರುವರು. ಈ ಅನುಭಾವ ಪದಗಳನ್ನು ಆರಿಸುವ ಶ್ರೀ ಗುರುದೇವರ ಪದ್ಧತಿಯು ಕೂಡ ತುಂಬ ಅಸಾಧಾರಣವಾದುದು. ಅವರದನ್ನು ತಮ್ಮ 'ಹಿಂದಿ ಪರಮಾತ್ಮ ಸೋಪಾನ'ದ ಮುನ್ನುಡಿಯಲ್ಲಿ ಈ ರೀತಿ ಅರುಹಿರುವರು (ಪು. ೩): ಈ (ಹಿಂದಿ) ಪದಗಳ ವಿಶಾಲ ಭಾಂಡಾರದೊಳಗಿಂದ ಅವುಗಳ ಆಯ್ಕೆ ಯನ್ನು ಮಾಡುವದು ಅಷ್ಟೊಂದು ಸುಲಭಸಾಧ್ಯವಿರಲಿಲ್ಲ. ವೈಚಾರಿಕ ನಾವೀನ್ಯ ಹಾಗು ಪಾರಮಾರ್ಥಿಕ ಪ್ರಾಧಾನ್ಯ-ಇವು ನಮ್ಮ ಆಯ್ಕೆ ಯ ಮುಖ್ಯ ನಿಕಷಗಳು. ನಾವು ಈ ಪದಗಳನ್ನು ಸಾಹಿತ್ಯ ಗ್ರಂಥಗಳಿಂದ ಆರಿಸಲು ಯತ್ನಿಸಲಿಲ್ಲ. ಸ್ನೇಹಿತ ರೊಡನೆ ಹಾಗೂ ವಿದ್ಯಾರ್ಥಿಗಳೊಡನೆ ಓದುವ, ಇಲ್ಲವೆ ಚರ್ಚಿಸುವ ಕಾಲಕ್ಕೆ ಅವು ತಾವಾಗಿಯೇ ನಮ್ಮೆದುರು ಬಂದಾಗ, ನಾವವನ್ನು ಸ್ವೀಕರಿಸಿರುವೆವು.” ಕನ್ನಡ ಪದಗಳನ್ನು ಶ್ರೀ ಗುರುದೇವರು ಇದೇ ಬಗೆಯಾಗಿ ಆಯ್ದಿರುವರು. ಶ್ರೀ ಗುರುದೇವರ ಸಂಪ್ರದಾಯವು ಕನ್ನಡ ಸಂತರದಿರುವ ಮೂಲಕ, ಅದರಲ್ಲಿ ಕನ್ನಡ ಪದಗಳು ತುಂಬ ಬಳಕೆಯಲ್ಲಿದ್ದವು. ಅವನ್ನಿವರು ಸಹಜವಾಗಿ ಪಡೆದರು. ಎರಡನೆಯದಾಗಿ ಕನ್ನಡ ನಾಡು ಸಾಧುಸಂತರ ನೆಲೆವೀಡಾದ ಮೂಲಕ ಇಲ್ಲಿ ಇಂಥ ಪದಗಳು ಹೇರಳವಾಗಿ ಪ್ರಚಲಿತವಿರುವವು. ಹಳ್ಳಿ ಹಳ್ಳಿಗಳಲ್ಲಿ ವಾಸಿಸಿರುವ ಅನೇಕ ಸಂತರು ತಮ್ಮ ಪಾರಮಾರ್ಥಿಕ ಆರ್ತತೆ ಯನ್ನೂ ಅನುಭಾವವನ್ನೂ ಇಂಥ ಅಂದವಾದ ಪದರತ್ನಗಳಲ್ಲಿ ಅರುಹಿ, ಅವನ್ನು ನಮ್ಮ ನಾಡಿನ ಮೂಲೆಮೂಲೆಗಳಲ್ಲಿ ಹರುಹಿರುವರು. ಅಂಥ ಪದಗಳು ಅನೇಕ<noinclude></noinclude> 6hm8p48sego76qgnng22htfs3dijeuh ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೫ 104 98979 276060 2024-10-26T06:43:09Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಶತಮಾನಗಳಿಂದ ಸಾಧಕರನೇಕರ ನಾಲಗೆಯ ಮೇಲೆ ನಲಿದಾಡುತ್ತಿರುವವು. ಅವರ ಜೀವನವನ್ನು ಚೆನ್ನಾಗಿ ರೂಪಿಸಿರುವವು. ನಿಂಬಾಳಕ್ಕೆ ಆಗಾಗ ಬರುವ ಅತಿಥಿಗಳೂ ಸಾಧಕರೂ ಶ್ರೀ ಗುರುದೇವರೆದುರು ಇಂಥ ಪದಗಳನ್ನು ಹೇಳು ತಿದ್ದರು. ಈ ರೀ... 276060 proofread-page text/x-wiki <noinclude><pagequality level="1" user="~aanzx" /></noinclude>ಶತಮಾನಗಳಿಂದ ಸಾಧಕರನೇಕರ ನಾಲಗೆಯ ಮೇಲೆ ನಲಿದಾಡುತ್ತಿರುವವು. ಅವರ ಜೀವನವನ್ನು ಚೆನ್ನಾಗಿ ರೂಪಿಸಿರುವವು. ನಿಂಬಾಳಕ್ಕೆ ಆಗಾಗ ಬರುವ ಅತಿಥಿಗಳೂ ಸಾಧಕರೂ ಶ್ರೀ ಗುರುದೇವರೆದುರು ಇಂಥ ಪದಗಳನ್ನು ಹೇಳು ತಿದ್ದರು. ಈ ರೀತಿ ಹಲ ಅತ್ಯುತ್ತಮ ಪದಗಳು ಅರಸದಲೇ ಬರುತ್ತಿದ್ದವು. ಅವರಿಂದ ಆಯ್ಕೆ ಗೊಂಡು ಅವರ ಸಂಗ್ರಹದಲ್ಲಿ ಸೇರುತ್ತಿದ್ದವು. ಅವರೆಡೆ ಈ ಪದಗಳ ಆಯ್ಕೆಯಂತೆ ಅವನ್ನು ಅಭ್ಯಸಿಸುವ ಹಾಗೂ ಅವುಗಳ ರಹಸ್ಯವನ್ನು ಅರಿಯುವ ಶ್ರೀ ಗುರುದೇವರ ಪದ್ಧತಿಯು ತುಂಬ ಅಪೂರ್ವ ವಾದುದು; ವಿಲಕ್ಷಣವಾದುದು. ಅವರ ಅಭ್ಯಾಸವು ಆಳವಾದುದು, ಸಾರಗ್ರಾಹಿ ಯಾದುದು; ಆಮೂಲಾಗ್ರವಾದುದು. ಅವರು ಮೊದಲು ಪದಗಳನ್ನು ಕೇಳುತ್ತಿದ್ದರು. ತರುವಾಯ ಅವುಗಳ ಅರ್ಥವನ್ನು ಹೇಳಿಸಿಕೊಳ್ಳುತ್ತಿದ್ದರು. ಆಮೇಲೆ ಅವನ್ನು ಎರಡನೆಯ ಸಲ ಹಾಡಲು ಹೇಳುತ್ತಿದ್ದರು. ಆಗ ಅವು ಅವರಿಗೆ ಸೇರಿದರೆ ತಮ್ಮ ಶಿಷ್ಯರೊಬ್ಬರಿಗೆ ಅವನ್ನು ದೇವನಾಗರೀ ಲಿಪಿಯಲ್ಲಿ ಬರೆದುಕೊಂಡು ತಮ್ಮ ಸಂಗ್ರಹದಲ್ಲಿ ಸೇರಿಸಲು ತಿಳಿಸುತ್ತಿದ್ದರು. ಇದು ಅವರ ಮೊದಲನೆಯ ಆಯ್ಕೆ, ಈ ಮೇರೆಗೆ ಆರಿಸಲಾದ ಪದಗಳನ್ನು ಅವರು ಆಗಾಗ ತಮ್ಮ ಧ್ಯಾನದ ಸಮಯದಲ್ಲಿ ಕೂಡ ಹೇಳಿಸಿಕೊಳ್ಳುತ್ತಿದ್ದರು. ಈ ಬಗೆಯಾಗಿ ಅವರ ಅಧ್ಯಯನವು-ಶ್ರವಣ ಮನನವು ಎಷ್ಟೋ ವರುಷ ನಡೆಯುತ್ತಿದ್ದಿತು. ಅದರ ಫಲವಾಗಿ ಅವರು ಆಯಾ ಪದಗಳ ತಿರುಳಿನೊಡನೆ ಸಮರಸರಾಗುತ್ತಿ- ದ್ದರು. ಶ್ರೀ ಗುರುದೇವರ ಪಾರಮಾರ್ಥಿಕ ಅನುಭವಗಳು ಕೂಡ ವಿಲಕ್ಷಣ ವಾಗಿದ್ದವು. ಅವು ಅನಂತವಿರುವವು ಎಂದು ಅವರೇ ಹೇಳಿರುವರು. ತಮ್ಮ “ಭಗವದ್ಗೀತೆಯ ಸಾಕ್ಷಾತ್ಕಾರ ದರ್ಶನ” ಎಂಬ ಉದ್ಧಂಥದಲ್ಲಿ ಅವರು ಇದನ್ನು ಕುರಿತು ಹೇಳಿರುವದೇನೆಂದರೆ : “ಸಾಕ್ಷಾತ್ಕಾರಕ್ಕೆ ಕೊನೆಯಿಲ್ಲ, ಪೂರ್ಣತೆಯಿಲ್ಲ. ನಾವು ಪರತತ್ತ್ವವನ್ನು ಸಮೀಪಿಸುತ್ತ ಸಾಗುವೆವು ಆದರೆ ಅದನ್ನು ಸಾಕ್ಷಾ ತಾಗಿ ಎಂದೂ ಸೇರುವದಿಲ್ಲ.” ಶ್ರೀ ಗುರುದೇವರ ಪಾರಮಾರ್ಥಿಕ ಅನುಭವಗಳ ಎತ್ತರವು ಅಲೌಕಿಕವಿದ್ದ ಮೂಲಕ ಅವರೆಡೆ ತಾವಾಗಿಯೇ ಬಂದ ಎಲ್ಲ ಪದಗಳ ರಹಸ್ಯವನ್ನು ಅವರು ಪೂರ್ತಿಯಾಗಿ ಅರಿಯಬಲ್ಲವರಾಗಿದ್ದರು. ಕನ್ನಡ ಪಂಡಿತರೂ ಅರಿಯಲರಿಯದ ಪದಗಳನ್ನು ಕೂಡ ಅವರು ತಿಳಿಯಾಗಿ ವಿವರಿಸುತ್ತಿದ್ದರು. ಪರಮಾತ್ಮನ ಬೆಳಕಿನಿಂದ ಹೊಳೆಯುವ ಅವರ ಪ್ರಜ್ಞೆಯು ಈ ಪದಗಳ ಅಜ್ಞಾತ ಸ್ಥಲಗಳ ಮೇಲೆಯೂ ವಿಪುಲವಾದ ಹೊಸ ಬೆಳಕನ್ನು ಬೀರಿ, ಆಯಾ ಅನುಭಾವಿಗಳ ಭಾವ-ಅನುಭಾವಗಳನ್ನು ಅವರು ತಿಳಿಯಾಗಿ ವಿಶದಗೊಳಿಸುತ್ತಿದ್ದರು ; ಆಧುನಿಕ ವಿಜ್ಞಾನಪ್ರಿಯ ಜನರು ಒಪ್ಪುವಂತೆ ಅವನ್ನು ಯುಕ್ತಿಯುಕ್ತವಾಗಿ ವಿವರಿಸುತ್ತಿದ್ದರು. ಈ ರೀತಿ ನಮ್ಮ ಹಿಂದಿನ ಹಿರಿಯ ಅನುಭಾವಿಗಳ ಪಾರಮಾರ್ಥಿಕ ಸಂದೇಶವನ್ನು ಇಂದಿನ ಪ್ರಪಂಚದಲ್ಲಿ ಆದುದರಿಂದ<noinclude></noinclude> ltasqq24woqlg5fvgpeua7tu9mvwznh ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೬ 104 98980 276061 2024-10-26T06:43:13Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 0 ಬೀರಲು, ಅವರಿಗೆ ಆಧುನಿಕ ಅನುಭಾವಿ ದಾರ್ಶನಿಕರೋರ್ವರು ಲಭಿಸಿದರೆನ್ನಲು ಅಡ್ಡಿಯಿಲ್ಲ. ಧರ್ಮಪರಮಾರ್ಥಗಳನ್ನು ಕಾಣುವ ಶ್ರೀ ಗುರುದೇವರ ದೃಷ್ಟಿಯು ಈ ಬಗೆಯದಿತ್ತು. “ದರ್ಶನದ ಅಧ್ಯಯನದಲ್ಲಿ ನಲವತ್ತು ವರುಷ ಕಳೆದವನ... 276061 proofread-page text/x-wiki <noinclude><pagequality level="1" user="~aanzx" /></noinclude>0 ಬೀರಲು, ಅವರಿಗೆ ಆಧುನಿಕ ಅನುಭಾವಿ ದಾರ್ಶನಿಕರೋರ್ವರು ಲಭಿಸಿದರೆನ್ನಲು ಅಡ್ಡಿಯಿಲ್ಲ. ಧರ್ಮಪರಮಾರ್ಥಗಳನ್ನು ಕಾಣುವ ಶ್ರೀ ಗುರುದೇವರ ದೃಷ್ಟಿಯು ಈ ಬಗೆಯದಿತ್ತು. “ದರ್ಶನದ ಅಧ್ಯಯನದಲ್ಲಿ ನಲವತ್ತು ವರುಷ ಕಳೆದವನಾದ ನಾನು ಧರ್ಮ-ಧರ್ಮಗಳಲ್ಲಾಗಲಿ ಧರ್ಮದ ವಿವಿಧ ಶಾಖೆಗಳಲ್ಲಾಗಲಿ ಯಾವ ಬಗೆಯ ಭಿನ್ನತೆಯೂ ಇರುವದಿಲ್ಲ ಎಂಬುದನ್ನು ಚೆನ್ನಾಗಿ ಬಲ್ಲೆ. ಆದರೆ ಅವು ಭಗವಂತನನ್ನು ಮಾತ್ರ ಭಜಿಸಬೇಕು.” “ಈ ಎಲ್ಲಾ ಧರ್ಮಗಳ ಅಂತ ರಂಗವನ್ನು ಸೇರಿ, ಅವುಗಳ ಸಮಾನ ಅಂಶವನ್ನು ಕಂಡುಹಿಡಿಯುವದು, ದಾರ್ಶನಿಕನ ಕರ್ತವ್ಯ.” “ದಾರ್ಶನಿಕನು ಪಾರಮಾರ್ಥಿಕ ಅನುಭವವನ್ನು ವಿವ ರಿಸುವಾಗ, ಅವನು ಹಿಂದು, ಮುಸ್ಲಿಮ ಇಲ್ಲವೇ ಕ್ರಿಶ್ಚಿಯನ್ ಯಾವ ಧರ್ಮ ದವನೂ ಇರುವದಿಲ್ಲ. ಅವನು ಪ್ರಪಂಚದ ನಾಗರಿಕನು, ವಿಶೇಷವಾಗಿ ಪಾರ- ಮಾರ್ಥಿಕ ಪ್ರಪಂಚದ ನಾಗರಿಕನಿರುವನು.” ಈ ಗ್ರಂಥದ ಸಿದ್ಧತೆಯು ನಡೆದಾಗ ಶ್ರೀ ಗುರುದೇವರು ಕರ್ನಾಟಕ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಕನ್ನಡ ಸಂತರ ಅನುಭಾವವನ್ನು ಕುರಿತು ಎರಡು ಉಪನ್ಯಾಸಗಳನ್ನು ಕೊಟ್ಟರು. ಮೊದಲನೆಯದು ಕ್ರಿ.ಶ. ೧೯೫೦ ಅಗಸ್ಟ್ ೨೬ನೆಯ ದಿನ ಧಾರವಾಡದಲ್ಲಿಯೂ, ಎರಡನೆಯದು ಕ್ರಿ.ಶ. ೧೯೫೧ ನವಂಬರ ೨೫ನೆಯ ದಿನ ಬೆಳಗಾವಿಯಲ್ಲಿಯೂ ಕೊಡಲಾಯಿತು. ಮೊದಲ- ನೆಯ ಉಪನ್ಯಾಸದ ವಿಷಯವು “ಕನ್ನಡಿಗರ ಅನುಭಾವದ ಪೀಠಿಕೆ” ಎಂಬು ದಾಗಿಯೂ ಎರಡನೆಯದರ ವಿಷಯವು “ಕನ್ನಡಿಗರ ಅನುಭಾವದ ಸಾರ ಸಂಗ್ರಹ" ಎಂಬುದಾಗಿಯೂ ಇದ್ದಿತು. ಎರಡೂ ಉಪನ್ಯಾಸಗಳು ಜನತೆಯ ಮನ್ನಣೆಯನ್ನು ಪಡೆದವು. ಅದನ್ನು ಕಂಡ, ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಗುರುಗಳು ಈ ವಿಷಯವನ್ನು ಕುರಿತು ಒಂದು ಉಪನ್ಯಾಸಮಾಲೆ ಯನ್ನೇ ಕ್ರಮಶಃ ರಚಿಸಲು ಶ್ರೀ ಗುರುದೇವರನ್ನು ಆಮಂತ್ರಿಸಿದರು. ಅದೇ ಮೇರೆಗೆ, ಆ ಉಪನ್ಯಾಸಗಳನ್ನು ಏರ್ಪಡಿಸಲೂ ಅವನ್ನು ಗ್ರಂಥರೂಪದಲ್ಲಿ ಪ್ರಸಿದ್ಧಿ ಸಲ ವಿಶ್ವವಿದ್ಯಾಲಯದವರು ಒಪ್ಪಿಕೊಂಡರು. ಆ ಮೇರೆಗೆ ಶ್ರೀ ಗುರುದೇವರು ಒಟ್ಟಾರೆ ೨೦ ಉಪನ್ಯಾಸಗಳನ್ನು ಕೊಡುವದು ಗೊತ್ತಾಯಿತು. ಆದರೆ ಶ್ರೀ ಗುರುದೇವರು ಅವುಗಳಲ್ಲಿ ೧೪ ಉಪನ್ಯಾಸಗಳನ್ನು ಕೊಡುವದು ಸಾಧ್ಯವಾಯಿತು. ಈ ಉಪನ್ಯಾಸಗಳನ್ನು ಅವರ ಸ್ವಂತ ಧ್ವನಿ ಸಂಗ್ರಹದ ಪಟ್ಟಿಯ ಮೇಲೆ (Tape recorder) ಕ್ರಮಶಃ ಬರೆದಿಡಲಾಯಿತು. ಮತ್ತು ತರುವಾಯ ಅವರ ಲಘು ಲೇಖಕನಿಂದ ಅವನ್ನು ಟೈಪ್ ಮಾಡಲಾಯಿತು. ಅವರು ಉಳಿದ ೬ ಉಪನ್ಯಾಸಗಳನ್ನು ೩ ಧಾರವಾಡದಲ್ಲಿಯೂ ೩ ಬೆಂಗಳೂ- ರಿನಲ್ಲಿಯೂ ಕೊಡುವವರಿದ್ದರು. ಆದರೆ ಭಗವಂತನ ಬಯಕೆಯು ಬೇರೆಯಾ<noinclude></noinclude> bw3a8gjb8p0inudznus84l6gq4n00nl ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೭ 104 98981 276062 2024-10-26T06:43:37Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಿದ್ದಿತು. ಅವರ ಈ ಕಾವ್ಯವು ಪೂರಿ ಯಾಗುವ ಪೂರದಲ್ಲಿಯೇ ಭಗವಂತನು ತನ್ನ ಪ್ರೇಷಿತನನ್ನು ತನ್ನೆಡೆ ಮರಳಿ ಕರೆದೊಯ್ದನು. ಶ್ರೀ ಗುರುದೇವರು ಅಕಸ್ಮಾತ್ತಾಗಿ ಕ್ರಿ.ಶ. ೧೯೫೭ ಜೂನ್ ೬ನೆಯ ದಿನ ಸಮಾಧಿಸ್ಥರಾದರು. ಅದರ ಮೂಲಕ ಅ... 276062 proofread-page text/x-wiki <noinclude><pagequality level="1" user="~aanzx" /></noinclude>ಗಿದ್ದಿತು. ಅವರ ಈ ಕಾವ್ಯವು ಪೂರಿ ಯಾಗುವ ಪೂರದಲ್ಲಿಯೇ ಭಗವಂತನು ತನ್ನ ಪ್ರೇಷಿತನನ್ನು ತನ್ನೆಡೆ ಮರಳಿ ಕರೆದೊಯ್ದನು. ಶ್ರೀ ಗುರುದೇವರು ಅಕಸ್ಮಾತ್ತಾಗಿ ಕ್ರಿ.ಶ. ೧೯೫೭ ಜೂನ್ ೬ನೆಯ ದಿನ ಸಮಾಧಿಸ್ಥರಾದರು. ಅದರ ಮೂಲಕ ಅವರು ಉಪನ್ಯಾಸಗಳನ್ನು ಕೊಡುವದು ಸಾಧ್ಯವಾಗಲಿಲ್ಲ. ಕೊನೆಯ ೬ ಉಪನ್ಯಾಸಗಳು ಬಹಳ ಬೆಲೆಯುಳ್ಳ ವಿಷಯಗಳನ್ನು ಒಳಗೊಂಡಿದ್ದು ವು. ಅವರ ನಿಧನದಿಂದ ಕರ್ನಾಟಕವು ಇಂಥ ವಿಷಯವನ್ನು ಕುರಿತ ಅವರ ವಿಶದೀ ಕರಣವನ್ನು ಅರಿಯುವ ಸುಸಂಧಿಗೆ ಎರವಾಯಿತು. ಕನ್ನಡ ಸಂತರ ಹಿರಿಮೆಯು ಜಗತ್ತಿನಲ್ಲೆಲ್ಲ ಹರಡಬೇಕೆಂದು ಉಪನ್ಯಾಸಗಳು ಆಂಗ್ಲ ಭಾಷೆಯಲ್ಲಿ ಕೊಡಲಾ ದವು. ಗ್ರಂಥವೂ ಅದೇ ಭಾಷೆಯಲ್ಲಿ ರಚಿಸಲ್ಪಟ್ಟಿತು. ಇದು ಈ ಗ್ರಂಥದ ಸಿದ್ಧತೆಯ ಕಿರುಪರಿಚಯ. ಶ್ರೀ ಪ್ರಸ್ತುತ ಗ್ರಂಥವಾದ 'ಪರಮಾರ್ಥ ಸೋಪಾನ'ವು ಮೇಲ್ಕಾಣಿಸಿದ ಗುರುದೇವರ 'ಪರಮಾರ್ಥಪಥ'ದ ಆಧಾರಗ್ರಂಥವು. ಇದರಲ್ಲಿ ಶ್ರೀ ಗುರುದೇವರು ೫೨ ಸಂತ ಕವಿಗಳಿಂದ ಆಯ್ದ ೧೩೯ ಪದ-ವಚನಗಳನ್ನು ೧೯ ಪ್ರಕರಣಗಳಲ್ಲಿ ವಿಂಗಡಿಸಿ ಸಂಗ್ರಹಿಸಲಾಗಿದೆ. ಮೊದಲನೆಯದು ಪೀಠಿಕಾ ಪ್ರಕರಣವು, ಅದರಲ್ಲಿ 'ಪರಮಾರ್ಥಿಕ ಪಥ'ದ 'ದಾರ್ಶನಿಕ' ಪೀಠಿಕೆಯ ಸಾರ- ವನ್ನು ಕೊಡಲಾಗಿದೆ. ಈ ೨೦ ಪ್ರಕರಣಗಳ ಕ್ರಮವು ಮೇಲ್ಕಾಣಿಸಿದ ಆಂಗ್ಲ ಗ್ರಂಥದ ಕ್ರಮವನ್ನು ಅನುಸರಿಸುವದು ಪ್ರತಿಯೊಂದು ಪ್ರಕರಣದಲ್ಲಿ ಸುಮಾರು ೭ ರಿಂದ ೯ ಪದಗಳು ಬಂದಿರುವವು. ಪ್ರತಿಯೊಂದು ಪದಕ್ಕೂ ವಚನಕ್ಕೂ-ಶ್ರೀ ಗುರುದೇವರು ಒಂದು ಆಂಗ್ಲ ಶೀರ್ಷಿಕೆಯನ್ನು ಕೊಟ್ಟರು ವರು. ಅವುಗಳ ಭಾವಾನುವಾದವನ್ನು ಅವುಗಳ ಮೇಲ್ಬಾಗದಲ್ಲಿ ಮುದ್ರಿಸಲಾ ಗಿದೆ. ಮೂಲ ಆಂಗ್ಲ ಶೀರ್ಷಿಕೆಗಳನ್ನು ಗ್ರಂಥದ ಅನುಬಂಧವೊಂದಕ್ಕೆ ಕೊಡ ಲಾಗಿದೆ. ಈ ಪದ ವಚನಗಳಿಗೆ ಶ್ರೀ ಗುರುದೇವರು ಕೆಲ ಟಿಪ್ಪಣಿಗಳನ್ನು ಆಂಗ್ಲ ಭಾಷೆಯಲ್ಲಿ ಬರೆದಿರುವರು. ಅವನ್ನು ಅನುಬಂಧದ ಮೊದಲು ಸೇರಿಸಲಾಗಿದೆ. ಈ ರೀತಿ ಈ ಪರಮಾರ್ಥ ಸೋಪಾನವು ಆಂಗ್ಲ ಹಾಗೂ ಕನ್ನಡ ಗ್ರಂಥದ ಓದುಗರಿಗೆ ಉಪಯುಕ್ತವಾಗುವಂತೆ ರಚಿಸಲಾಗಿದೆ. - ಇದು ಆಧಾರಗ್ರಂಥವಾದುದರಿಂದ ಇದರ ರಚನಾಕ್ರಮವು ಮೂಲಗ್ರಂಥದ ರಚನಾಕ್ರಮವನ್ನು ಅನುಸರಿಸಿರುವದು ತೀರ ಸಹಜ. ಆದುದರಿಂದ ಆ ಕ್ರಮ ವನ್ನೂ ಅದರ ತಿರುಳನ್ನೂ ಸಾಧ್ಯವಿದ್ದ ಮೇರೆಗೆ ಶ್ರೀ ಗುರುದೇವರ ಮಾತಿ ನಲ್ಲಿಯೇ ಅರುಹಿ ವಿವರಿಸುವೆ. “ಮೊದಲನೆಯ ದಾರ್ಶನಿಕ ಪೀಠಿಕೆಯಲ್ಲಿ ಜ್ಞಾನಶಾಸ್ತ್ರ, ಮನಃಶಾಸ್ತ್ರ ಹಾಗೂ ಪರತತ್ತ್ವಶಾಸ್ತ್ರಗಳ ದೃಷ್ಟಿಯಿಂದ ಅನುಭಾವದ ಲಕ್ಷಣಗಳನ್ನು ಕೊಡ ಲಾಗಿದೆ ಮತ್ತು ಅವುಗಳ ನೆರವಿನಿಂದ ಪೂರ್ವ ಪಶ್ಚಿಮಗಳ ಹಿರಿಯ ದಾರ್ಶ<noinclude></noinclude> hus1qj3hclk9eeauoqb0pteh16usu1f ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೮ 104 98982 276063 2024-10-26T06:44:38Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನಿಕರೊಡನೆಯ ಅನುಭಾವಿಗಳೊಡನೆಯ ಕನ್ನಡ ಅನುಭಾವಿಗಳನ್ನು ಸರಿ ಹೋಲಿಸಲಾಗಿದೆ. ಆಮೇಲೆ ಪಾರಮಾರ್ಥಿಕ ಜೀವನದ ಬಗೆಗೆ ಆಸಕ್ತಿಯನ್ನುಂಟು ಮಾಡುವ ಪ್ರೇರಣೆಗಳನ್ನೂ ವಿವರಿಸಲಾಗಿದೆ. ಪರಮಾತ್ಮನ ಭಕ್ತಿಯಿಂದ ತುಂಬಿದ, ಬಾಳನ... 276063 proofread-page text/x-wiki <noinclude><pagequality level="1" user="~aanzx" /></noinclude>ನಿಕರೊಡನೆಯ ಅನುಭಾವಿಗಳೊಡನೆಯ ಕನ್ನಡ ಅನುಭಾವಿಗಳನ್ನು ಸರಿ ಹೋಲಿಸಲಾಗಿದೆ. ಆಮೇಲೆ ಪಾರಮಾರ್ಥಿಕ ಜೀವನದ ಬಗೆಗೆ ಆಸಕ್ತಿಯನ್ನುಂಟು ಮಾಡುವ ಪ್ರೇರಣೆಗಳನ್ನೂ ವಿವರಿಸಲಾಗಿದೆ. ಪರಮಾತ್ಮನ ಭಕ್ತಿಯಿಂದ ತುಂಬಿದ, ಬಾಳನ್ನು ಪ್ರೀತಿಸಹಚ್ಚುವ ಅನೇಕ ಪ್ರೇರಣೆಗಳನ್ನೂ ಅರುಹಲಾಗಿದೆ. ತರುವಾಯ ಬಂದಿರುವದು ನೈತಿಕ ಸಿದ್ಧತೆಯ ವಿಚಾರ. ಪರಮಾತ್ಮನನ್ನು ಪಡೆಯಬಯಸುವ ಸಾಧಕನೂ, ತನ್ನ ಪಾರಮಾರ್ಥಿಕ ಸಾಧನದಲ್ಲಿಯ ಪ್ರಗತಿ ಗಾಗಿ ನೈತಿಕ ಸಿದ್ಧತೆಯನ್ನು ನಡೆಸಲೇಬೇಕು. ಆಮೇಲೆ ಸದ್ಗುರುಗಳ ಸ್ವರೂಪ ಹಾಗೂ ಶಿಷ್ಯನ ಪಾರಮಾರ್ಥಿಕ ಬೆಳವಣಿಗೆಗಾಗಿ ಅವನು ಮಾಡುವ ಕಾರ್ಯ ಇವನ್ನೂ ವಿವರಿಸಿದೆ. ಇದು ಓದುಗರನ್ನು ಗುರು-ಶಿಷ್ಯರ ಸಂಬಂಧದೆಡೆ ಒಯ್ಯು ತರುವಾಯ ಸಂತ-ದೇವರ ಸಂಬಂಧ ಹಾಗೂ ದೇವರ ಸ್ವರೂಪ ಈ ವಿಷಯಗಳು ಬಂದಿರುವವು. ದೇವರ ನಾಮದ ವಿಷಯವು ಅವನ್ನು ಹಿಂಬಾಲಿ ಸುವದು. ಉತ್ತರ ಭಾರತದ ಹಾಗೂ ಮಹಾರಾಷ್ಟ್ರದ ಸಂತರಂತೆ ಕನ್ನಡದ ಸಂತರೂ ದೇವರ ನಾಮಕ್ಕೆ ತುಂಬ ಪ್ರಾಧಾನ್ಯವನ್ನು ನೀಡಿರುವರು. ಆಮೇಲೆ ಧ್ಯಾನಪದ್ಧತಿಯನ್ನೂ ವಿವರಿಸಲಾಗಿದೆ. ಕನ್ನಡ ಸಂತರು ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಬಳಸಿದ ಧ್ಯಾನಪದ್ಧತಿಯು ಅಪೂತ್ವವಾದುದು. ಇದಾದ ತರುವಾಯ ಪಾರಮಾರ್ಥಿಕ ಸಾಧನದ ಅಂತಿಮ ಗುರಿಯಾದ ಸಾಕ್ಷಾತ್ಕಾರವು ಚರ್ಚಿಸಲಾಗಿದೆ. ಈ ಸಾಕ್ಷಾತ್ಕಾರವನ್ನು ಸವಿವರವಾಗಿ ಸುಸ್ಪಷ್ಟವಾಗಿ ಬಣ್ಣಿಸು ವಲ್ಲಿ ಕನ್ನಡ ಸಂತರು ತುಂಬ ಅನುಪಮರು, ಶ್ರೇಷ್ಠ ತವರು. ಈ ಸಂದರ್ಭದಲ್ಲಿ ಸಾಕ್ಷಾತ್ಕಾರದ ಪ್ರಮಾಣಗಳನ್ನೂ ಅದರ ಪ್ರಾರಂಭದ ರೀತಿಯನ್ನೂ ರೂಪ, ತೇಜ, ನಾದ, ಸಮ್ಮಿಶ್ರ ಹಾಗೂ ಶ್ರೇಷ್ಠ ತಮ ಎಂಬ ಸಾಕ್ಷಾತ್ಕಾರದ ಬೇರೆ ಬೇರೆ ಪ್ರಕಾರಗಳನ್ನು ವಿವರಿಸಲಾಗಿದೆ. ಕೊನೆಗೆ ಪೂರ್ಣತೆಯನ್ನು ಪಡೆದ ಅನುಭಾವಿಯ ಮೇಲೆ ಪರಮಾತ್ಮನ ಸಾಕ್ಷಾತ್ಕಾರದಿಂದ ಉಂಟಾಗುವ ವಿವಿಧ ಪರಿಣಾಮ ಗಳನ್ನು ಅರುಹಲಾಗಿದೆ". ಇದು ಈ ಗ್ರಂಥದಲ್ಲಿಯ ಪದ ವಚನಗಳ ಒಳತಿರುಳು. ವಿವರವನ್ನು ಪದಗಳಿಂದಲೇ ಅರಿತುಕೊಳ್ಳಬೇಕು. ಶ್ರೀ ಗುರುದೇವರ ಅಭಿಮತದ ಮೇರೆಗೆ ಈ ಗ್ರಂಥವನ್ನು ಸಿದ್ಧಪಡಿಸಲು ಹಾಗೂ ಈ ಪ್ರಸ್ತಾವನೆಯನ್ನು ಬರೆಯಲು ಆಜ್ಞಾಪಿಸಿ, ಶ್ರೀ ಗುರುದೇವರಿಗೆ ಸೇವೆಸಲ್ಲಿಸಲು ನನಗೆ ಸುಸಂಧಿಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ 'ಸಂಪಾದಕ ಸಮಿತಿ'ಯವರಿಗೂ, ಕರ್ನಾಟಕ ವಿಶ್ವವಿದ್ಯಾಲಯದವರಿಗೂ, ನನ್ನ ಅನಂತ ವಂದನೆಗಳು. ಶಾಂತಿಕುಜ-ವಿಕ್ರಮಪುರ ಅಥಣಿ ೩೦-೮-೧೯೬೨ ವು. ಶ್ರೀ. ದೇಶಪಾಂಡೆ<noinclude></noinclude> 6tzjl6pmyxul4f4xi6ze85v85yrjpjo ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೦ 104 98983 276064 2024-10-26T06:45:26Z ~aanzx 6806 /* Without text */ 276064 proofread-page text/x-wiki <noinclude><pagequality level="0" user="~aanzx" /></noinclude><noinclude></noinclude> gzltgpjelicgd79dxmggh43tmpfuqo7 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೧ 104 98984 276065 2024-10-26T06:46:19Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ಒಂದು ಪೀಠಿಕೆ ಪೀಠಿಕೆಯಲ್ಲಿನ ಮುಖ್ಯಾಂಶಗಳು ಈ ಕೆಳಗಿನಂತಿವೆ ಎನ್ನಬಹುದು: ಅನುಭಾವವು ಒಂದು ವಿಶಿಷ್ಟವಾದ ಸರ್ವವ್ಯಾಪಕ ಜೀವನಪದ್ಧತಿ. ಅದು ಇಡೀ ಮಾನವಕುಲವನ್ನು ಒಳಸೂತ್ರದಿಂದ ಹೊಂದಿಸಿ ಒಂದೆಡೆ ತರುವದ... 276065 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ಒಂದು ಪೀಠಿಕೆ ಪೀಠಿಕೆಯಲ್ಲಿನ ಮುಖ್ಯಾಂಶಗಳು ಈ ಕೆಳಗಿನಂತಿವೆ ಎನ್ನಬಹುದು: ಅನುಭಾವವು ಒಂದು ವಿಶಿಷ್ಟವಾದ ಸರ್ವವ್ಯಾಪಕ ಜೀವನಪದ್ಧತಿ. ಅದು ಇಡೀ ಮಾನವಕುಲವನ್ನು ಒಳಸೂತ್ರದಿಂದ ಹೊಂದಿಸಿ ಒಂದೆಡೆ ತರುವದು. ಪ್ರಪಂಚದಲ್ಲಿಯ ಎಲ್ಲ ತತ್ವಜ್ಞಾನಗಳನ್ನು ಒಳಹೊಕ್ಕು ಸೂಕ್ಷ್ಮವಾಗಿ ಪರೀಕ್ಷೆ ಸಿದರೆ ಅವೆಲ್ಲವುಗಳಲ್ಲಿ ಒಂದೇ ಮಾದರಿಯ ಬೋಧೆಯಿದ್ದುದು ಕಂಡು ಬರುವದು. ಡಾ| ರಾನಡೆಯವರು ಹೇಳುವುದೇನೆಂದರೆ "ಇದನ್ನು ನಾನು ನನ್ನ 'ಮಹಾರಾಷ್ಟ್ರದ ಅನುಭಾವ' ಹಾಗೂ 'ಹಿಂದೀ ಅನುಭಾವ' ಈ ಗ್ರಂಥಗಳಲ್ಲಿ ವಿಶದಮಾಡಿರುವೆನು. ಕನ್ನಡ ಅನುಭಾವಿಗಳಲ್ಲಿಯೂ ನಾವು ಅದನ್ನೇ ಕಾಣ ಬಹುದು. ಕಳೆದ ನಾಲ್ವತ್ತು ವರುಷಗಳಲ್ಲಿಯ ನನ್ನ ತತ್ವಜ್ಞಾನದ ಅಭ್ಯಾಸದ ಫಲವಾಗಿ, ನಾನು ಕಂಡುಹಿಡಿದ ಅನುಭಾವಶಾಸ್ತ್ರದ ಕೆಲ ಸಾಮಾನ್ಯ ಸಿದ್ದಾಂ ಗಳನ್ನು ನಾನೀಗ ಅರುಹಲಿರುವೆ. ಏಕೆಂದರೆ ಪ್ರಪಂಚದ ಅನುಭಾವಿಗಳಲ್ಲಿ ಕನ್ನಡ ಅನುಭಾವಿಗಳ ಸ್ಥಾನವನ್ನು ಗೊತ್ತುಪಡಿಸಲು ಅದರ ಪರಿಚಯವು ಅವಶ್ಯ.' ಮೊದಲು ಅನುಭಾವವೆಂದರೇನು ಎಂಬುದನ್ನು ಅರಿತುಕೊಳ್ಳುವಾ. ಅನುಭಾವವು ಅಂತಃಪ್ರಜ್ಞೆಯ ಮೂಲಕ (Intuition) ಬಂದ ಅನುಭವ. ಈ ಅಂತಃಪ್ರಜ್ಞೆಯು ಸದ್ಗುರುಗಳ ಅನುಗ್ರಹದಿಂದ ಪಾರಮಾರ್ಥಿಕ ಸಾಧನ ದಿಂದ ನಮ್ಮಂತರಂಗದಲ್ಲಿ ಜನಿಸುವ ಶಕ್ತಿ ವಿಶೇಷ. ಅದು ಬುದ್ಧಿ ಯನ್ನೂ, ಭಾವನೆಯನ್ನೂ, ಕಲ್ಪನಾಶಕ್ತಿಯನ್ನೂ ಮೀರಿರುವದು. ಆದುದರಿಂದ ಅಂತಃಪ್ರಜ್ಞೆಯ ಮೂಲಕ ನಮಗೆ ಲಭಿಸಿದ ಪಾರಮಾರ್ಥಿಕ ಅನುಭವಗಳು ಅತೀಂದ್ರಿಯವಾದವುಗಳು. ಏಕೆಂದರೆ ಅವನ್ನು ಕುರಿತು ಅನುಭಾವಿಗಳು, 'ಕುರು ಡನು ಕಂಡ, ಕಿವುಡನು ಕೇಳಿದ. ಕುಂಟನು ಹಿಂಬಾಲಿಸಿದ ಅನುಭವ' ಎಂದು ಬಣ್ಣಿಸಿರುವರು. ಆದ್ದರಿಂದ ಈ ಅನುಭಾವವು ಪರಮಾರ್ಥಸಾಧನೆಯಿಂದ ಅನುಗ್ರಹಜನ್ಯ, ಪ್ರಜ್ಞಾಜಾಗ್ರತಿಯಿಂದ ದೊರೆತ ಸತ್ಯವಸ್ತುವಿನ ಅತೀಂದ್ರಿಯ ಅನುಭವವೇ ಸರಿ! ಅನುಭಾವದ ಬೇರೆ ಕೆಲ ಲಕ್ಷಣಗಳನ್ನು ಅರುಹಬಹುದು. ಅವುಗಳಲ್ಲಿ ಈ ಸಾತತ್ಯವು ನಿತ್ಯ ಪ್ರಗತಿಯಿಂದ ಸಾತತ್ಯವು (Continuity) ಒಂದು. ಬೆಳವಣಿಗೆಯಿಂದ ಕೂಡಿರಬೇಕು. ನಮ್ಮ ಅನುಭಾವವು ಕ್ಷಣಕ್ಷಣಕ್ಕೆ, ದಿನ ಕ ಕ. ೧<noinclude></noinclude> kozc6do53g23d1z1rncnw7dww66akqo ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೩ 104 98985 276066 2024-10-26T06:47:04Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಸರಿಹೋಲುವ ಸಂತರೂ ಕನ್ನಡಿಗರಲ್ಲಿ ಇಲ್ಲದಿಲ್ಲ. ಪ್ರಭುವು ಕ್ರಿಸ್ತನನ್ನೂ, ಬಸವಣ್ಣನು ಸೇಂಟಪಾಲನನ್ನೂ, ಚೆನ್ನ ಬಸವನು ಲ್ಯೂಥರನನ್ನೂ ಹೋಲುವನು ಎನ್ನಲಡ್ಡಿ ಯಿಲ್ಲ. ಮಹಾರಾಷ್ಟ್ರದ ಸಂತರೆಡೆ... 276066 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಸರಿಹೋಲುವ ಸಂತರೂ ಕನ್ನಡಿಗರಲ್ಲಿ ಇಲ್ಲದಿಲ್ಲ. ಪ್ರಭುವು ಕ್ರಿಸ್ತನನ್ನೂ, ಬಸವಣ್ಣನು ಸೇಂಟಪಾಲನನ್ನೂ, ಚೆನ್ನ ಬಸವನು ಲ್ಯೂಥರನನ್ನೂ ಹೋಲುವನು ಎನ್ನಲಡ್ಡಿ ಯಿಲ್ಲ. ಮಹಾರಾಷ್ಟ್ರದ ಸಂತರೆಡೆ ಸಾರಿದರೆ ಅಲ್ಲಿಯ ಈ ಬಗೆಯ ಹೋಲಿಕೆಯು ಕಾಣದಿರದು. ಬಸವನು ತುಕಾರಾಮನಿಗೆ ಸಮಾನನು. ಚೆನ್ನ ಬಸವನ ಸಂಘಟನಾಶಕ್ತಿಯ, ಪ್ರಚಾರಪ್ರಭುತ್ವವೂ ರಾಮದಾಸರ ಆ ಬಗೆಯ ಸಾಮರ್ಥ್ಯವನ್ನು ಹೋಲುವದು. ಜಗನ್ನಾಥದಾಸರು ಹಾಗು ನಿಜಗುಣಿಗಳು ಪಾಂಡಿತ್ಯದಲ್ಲಿಯೂ ಸಾಹಿತ್ಯದ ವಿಪುಲತೆಯಲ್ಲಿಯೂ ಏಕನಾಥರಿಗೆ ಸಮಾನರು. ಕನಕದಾಸನು ಒಂದು ಬಗೆಯಿಂದ ಚೋಖಾಮೇಳನನ್ನು ಹೋಲು ವನು. ಅನುಭಾವದಲ್ಲಿ, ಕಾವ್ಯ ನಿರ್ಮಿತಿಯಲ್ಲಿ ಅವರೀರ್ವರಲ್ಲಿ ಅಂತರವಿದೆ ನಿಜ! ಆದರೂ ಅವರಿಬ್ಬರೂ ಒಳ್ಳೆಯ ಅನುಭಾವಿಗಳೆಂಬುದರಲ್ಲಿ ಸಂದೇಹವಿಲ್ಲ. ಕಾಖಂಡಿಕೆಯು ಮಹಿಪತಿಸ್ವಾಮಿಗಳು ಗ್ಯಾರದ ಮಹಿಪತಿಗಳನ್ನು ಹೋಲುವರು. ಇಬ್ಬರೂ ಹಿರಿಯ ವಿದ್ವಾಂಸರು, ದೊಡ್ಡ ಕವಿಗಳು, ಮಹಾನ್ ಅನುಭಾವಿಗಳು. ದುರ್ದೈವದಿಂದ ಇಬ್ಬರ ಸಾಹಿತ್ಯದ ಪ್ರಕಾಶನವೂ ಅಭ್ಯಾ ಸವೂ ಇನ್ನೂ ಸರಿಯಾಗಿ ಆಗಿರುವುದಿಲ್ಲ; ಆದುದರಿಂದ ಇಬ್ಬರೂ ತುಂಬ ಅಜ್ಞಾತರಾಗಿಯೇ ಉಳಿದಿರುವರು. ಇದೇ ಬಗೆಯ ಹೋಲಿಕೆಯನ್ನು ಹಿಂದೀ ಹಾಗೂ ಕನ್ನಡ ಸಂತರಲ್ಲಿಯೂ ಕಾಣಬಹುದು. ಹಿಂದೀ ಸಾಹಿತ್ಯದಲ್ಲಿ ತುಲಸೀ ದಾಸರಿಗಿರುವ ಸ್ಥಾನವು ಕನ್ನಡದಲ್ಲಿ ಪುರಂದರದಾಸರಿಗುಂಟು. ಸಾಹಿತ್ಯದ ದೃಷ್ಟಿಯಿಂದ ಇಬ್ಬರೂ ಸಮಾನರಿದ್ದರೂ, ಅನುಭಾವದಲ್ಲಿ ಪುರಂದರದಾಸರು ತುಲಸೀದಾಸರನ್ನೂ ಮೀರಿರುವರೆನ್ನಬಹುದು. ತುಲಸೀದಾಸರಂತೆ ಅವರು ಸಗುಣಭಕ್ತಿಯಿಂದ ತಮ್ಮ ಸಾಧನವನ್ನು ಪ್ರಾರಂಭಿಸಿದರೂ ಮುಂದವರು ಹಿರಿಯ ಯೋಗಿಗಳಾದರು. ವಿಜಯದಾಸರು ಸೂರದಾಸರನ್ನೂ, ಕನಕದಾಸರು ರೈದಾಸರನ್ನೂ, ಶರೀಫ ಸಾಹೇಬರು ಕೆಲ ಅಂಶಗಳಲ್ಲಿ ಕಬೀರದಾಸರನ್ನೂ, ಸರ್ಪಭೂಷಣರು ಚರಣದಾಸರನ್ನೂ ಹೋಲುವರು. "ಈ ರೀತಿ ಕನ್ನಡ ಅನುಭಾವಿಗಳು ಜಗತ್ತಿನ ಅನುಭಾವಿಗಳಲ್ಲಿ ಬಹು ಉನ್ನತವಾದ ಸ್ಥಾನವನ್ನು ಪಡೆದಿರುವರು. ಜಗತ್ತಿನ ಅನುಭಾವಕ್ಕೆ ಒಳ್ಳೆಯ ಬೆಲೆಯುಳ್ಳ ಕಾಣಿಕೆಯನ್ನು ಸಲ್ಲಿಸಿರುವರು," ಎಂದು ಡಾ| ರಾನಡೆಯವರು ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಮಾಡಿರುವರು.<noinclude></noinclude> jl12ibdsri7l5tp1uij8di1p9s5x894 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೪ 104 98986 276067 2024-10-26T06:47:18Z ~aanzx 6806 /* Without text */ 276067 proofread-page text/x-wiki <noinclude><pagequality level="0" user="~aanzx" /></noinclude><noinclude></noinclude> gzltgpjelicgd79dxmggh43tmpfuqo7 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೨ 104 98987 276068 2024-10-26T06:47:53Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 9 ಕನ್ನಡ ಪರಮಾರ್ಥ ಸೋಪಾನ ದಿನಕ್ಕೆ ವರುಷವರುಷಕ್ಕೆ ಬೆಳೆಯುತ್ತಿರಬೇಕು; ಮತ್ತು ಅದರ ಫಲವಾಗಿ ಸಾಧಕನು ಬರಬರುತ್ತ ಪರಮಾತ್ಮನನ್ನು ಸಮೀಪಿಸುತ್ತಿರಬೇಕು. ಕೊನೆಗೆ ಅವನು ಪರಮಾತ್ಮನಲ್ಲಿ ಬೆರೆಯುವನೋ ಇಲ್ಲವೋ, ನಮಗೆ ಹ... 276068 proofread-page text/x-wiki <noinclude><pagequality level="1" user="~aanzx" /></noinclude>9 ಕನ್ನಡ ಪರಮಾರ್ಥ ಸೋಪಾನ ದಿನಕ್ಕೆ ವರುಷವರುಷಕ್ಕೆ ಬೆಳೆಯುತ್ತಿರಬೇಕು; ಮತ್ತು ಅದರ ಫಲವಾಗಿ ಸಾಧಕನು ಬರಬರುತ್ತ ಪರಮಾತ್ಮನನ್ನು ಸಮೀಪಿಸುತ್ತಿರಬೇಕು. ಕೊನೆಗೆ ಅವನು ಪರಮಾತ್ಮನಲ್ಲಿ ಬೆರೆಯುವನೋ ಇಲ್ಲವೋ, ನಮಗೆ ಹೇಳಲು ಬರು ವಂತಿಲ್ಲ! ಏಕೆಂದರೆ ಸಂತಶ್ರೇಷ್ಠರಾದ ಜ್ಞಾನೇಶ್ವರರು ಉಸುರುವ ಮೇರೆಗೆ, "ಭಕ್ತ-ಭಗವಂತರಲ್ಲಿ ಕೆಲವೊಂದು ಭೇದವು ಕೊನೆಯ ವರೆಗೂ ಉಳಿದೇ ತೀರುವದು. ಸಾರ್ವತ್ರಿಕತೆಯು (Universality) ಅಂದರೆ ಎಲ್ಲಾ ಮಾನವ ಬಳಗಗಳಲ್ಲಿಯ ಅಸ್ತಿತ್ವ, ಅನುಭಾವದ ಇನ್ನೊಂದು ಕುರುಹು. ವಿಶ್ವದ ಎಲ್ಲ ಅನುಭಾವಿಗಳ ಅನುಭಾವಗಳನ್ನು ಕಲೆಹಾಕುವುದು ಸಾಧ್ಯವಾದರೆ ಅವುಗಳಲ್ಲಿ ನೂರಕ್ಕೆ ಎಂಬತ್ತರಿಂದ ತೊಂಬತ್ತರಷ್ಟು ಸಾಮ್ಯವಿರುವದನ್ನು ಕಾಣಬಹುದು. ಆತ್ಮಾನಂದವು (Beatification) ಅನುಭಾವದ ಅತಿ ಮಹತ್ವದ ಕುರುಹು. ಈ ಆತ್ಮಾನಂದದ ವಿಷಯವಾಗಿಯೂ, ಒಂದು ತತ್ವಜ್ಞಾನದ ಪರಂಪರೆಯು ಬೆಳೆಯಲಿದೆ. ಅದರ ತಾತ್ವಿಕ ವಿವೇಚನೆಯನ್ನೊಳಗೊಂಡ ಹೊಸ ಗ್ರಂಥ ವನ್ನು ಬರೆಯುವ ಅಪೇಕ್ಷೆಯು ಬಹುಕಾಲದಿಂದ ನನ್ನಲ್ಲಿ ನೆಲೆಸಿರುವದು ಎಂದು ಡಾ| ರಾನಡೆಯವರು ಬರೆದಿರುವರು. ಜಗತ್ತಿನಲ್ಲಿಯ ಎಲ್ಲ ಅನುಭಾವಿ ಗಳು ತಮ್ಮೆದುರಿರಿಸಿದ ಅತ್ಯುನ್ನತವಾದ ಧೈಯವೆಂದರೆ ಆತ್ಮಾನಂದವೇ. ಈ ಆನಂದಾನುಭವವೇ ಎಲ್ಲ ಸತ್ಪುರುಷರನ್ನು ಒಂದೆಡೆ ತರುವದು. ಮತ್ತು ಅವರನ್ನು ಏಕಸೂತ್ರದಿಂದ ಕಟ್ಟುವದು. ಕನ್ನಡ ಅನುಭಾವಿಗಳನ್ನು ಸಾಮಾನ್ಯವಾಗಿ ಎರಡು ಪಂಗಡಗಳಲ್ಲಿ ವಿಂಗ ಡಿಸಬಹುದು: ಶೈವರು ವೈಷ್ಣವರು ಎಂದು. ನಿಜವಾದ ಅನುಭಾವಿಯು ಶೈವನೂ ಅಲ್ಲ ವೈಷ್ಣವನೂ ಅಲ್ಲ. ಅವೆರಡೂ ಒಂದೇ ಅನುಭಾವದಲ್ಲಿ ಕೂಡಬಹುದು. ಎಲ್ಲ ಅನುಭಾವಿಗಳಿಗೆ ಕಾಣುವ ಶೇಷನು, ಶೈವರಿಗೂ ವೈಷ್ಣವರಿಗೂ ಒಂದೇ ಬಗೆಯಾಗಿ ಪೂಜ್ಯನು. ಶೇಷನು ಶಿವನ ಭೂಷಣನಾದರೆ ವಿಷ್ಣುವಿನ ಹಾಸಿಗೆಯಾಗಿರುವನು. ಅವನು ಅವರಿಬ್ಬರನ್ನೂ ಒಂದುಗೂಡಿಸುವನು. "ನಾನಿಲ್ಲಿ ಅವರೀರ್ವರ (ಶೈವ ವೈಷ್ಣವರ) ಅನುಭಾವಗಳನ್ನು, ಇಬ್ಬರಿಗೂ ಆಗುವ ಅನುಭವಗಳನ್ನು ವಿವರಿಸಲಿರುವೆ; ಅವರಲ್ಲಿಯ ಭೇದಗಳನ್ನಲ್ಲ. ಅನುಭಾವದ ಬೆಳವಣಿಗೆಗೆ ಅವರಿತ್ತ ಕಾಣಿಕೆಯೇನು ಎಂಬುದೆ ನನ್ನೆದುರಿನ ಸಮಸ್ಯೆ!" ಹೀಗೆಂದಿರುವರು ಡಾ| ರಾನಡೆಯವರು. ಜಗತ್ತಿನ ಬೇರೆ ಅನು ಈ ದೃಷ್ಟಿಯಿಂದ ಕನ್ನಡ ಅನುಭಾವಿಗಳಲ್ಲಿಯೂ ಭಾವಿಗಳಲ್ಲಿಯೂ ತುಂಬಾ ಹೋಲಿಕೆ ಕಾಣುವದು. ಗ್ರೀಕ ತತ್ವಜ್ಞರನ್ನು ನೋಡುವಾ, ಪ್ರಭುದೇವನು ಸಾಕ್ರೆಟೀಸನನ್ನು, ಬಸವೇಶ್ವರನು ಪ್ಲೇಟೋನನ್ನು, ಚೆನ್ನ ಬಸವನು ಫೀಡೋನನ್ನು ಹೋಲುವನು ಎನ್ನಬಹುದು. ಅದೇ ರೀತಿ ಸರ್ವಜ್ಞನು ಹಿಡಾಟಾಸನನ್ನು ಸರಿಗಟ್ಟಬಹುದು. ಕ್ರಿಶ್ಚನ್ ಸಂತರನ್ನು<noinclude></noinclude> 6isu00cgpr3qohegyt1nlwewycfhkzs ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೫ 104 98988 276069 2024-10-26T06:48:11Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ಎರಡು ಪರಮಾರ್ಥ ಪ್ರೇರಣೆಗಳು (ಭಾಗ ೧) - 0 ಪರಮಾತ್ಮನ ವೈಭವದಲ್ಲಿ ಮೈಮರೆವ ಹಿರಿಯ ಪಾರಮಾರ್ಥಿಕ ಆದರ್ಶ 4 ( ರಾಗ-ಭೈರವಿ, ತಾಲ-ದಾದರಾ) ಬಹು ದೊಡ್ಡದೀ ಜನ್ಮ ಜಂಬುದ್ವೀಪಾಂತರದಿ ಬಹು ದೊಡ್ಡದೀ ಜನ್ಮವು ಭಾಳಾಕ್ಷಹರನ ಸ... 276069 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ಎರಡು ಪರಮಾರ್ಥ ಪ್ರೇರಣೆಗಳು (ಭಾಗ ೧) - 0 ಪರಮಾತ್ಮನ ವೈಭವದಲ್ಲಿ ಮೈಮರೆವ ಹಿರಿಯ ಪಾರಮಾರ್ಥಿಕ ಆದರ್ಶ 4 ( ರಾಗ-ಭೈರವಿ, ತಾಲ-ದಾದರಾ) ಬಹು ದೊಡ್ಡದೀ ಜನ್ಮ ಜಂಬುದ್ವೀಪಾಂತರದಿ ಬಹು ದೊಡ್ಡದೀ ಜನ್ಮವು ಭಾಳಾಕ್ಷಹರನ ಸ್ತುತಿ ಬಿಡದೆ ಕೊಂಡಾಡಿದರೆ ಬಹು ದೊಡ್ಡದೀ ಜನ್ಮವು ಮೂಡಲ ದಿಕ್ಕಿನೊಳು ಮೂಡಿತ್ತು ಈ ಚಿಕ್ಕಿ ನಾಡೆಲ್ಲ ಬೆಳಕಾದಿತೋ ತಮ್ಮಾ || ಎಡಬಲ ಮಧ್ಯದಿ ಶೋಭಿಸಿ ಕಂಡಿತಿದು ಪಡೆದು ಬಂದವರಿಗೆ ತವಾ ಐದರೊಳಗೈದು ಹುದುಗಿಕೊಂಡಿಹುದು ಐದರೊಳಗೈದು ಕಲಸೊ ತಮ್ಮಾ || ಕಾಯವಿರಹಿತನಾಗಿ ಪ್ರಭುಮಹಿಮೆಯೊಳು ಸಿಲುಕಿ ಲಯವಾಗಬೇಕೋ ತವಾ ಪಶ್ಚಿಮ ದಿಕ್ಕಿನಲಿ ಮಿಂಚಿ ಕೆಂಡವ ಕರೆದು ಕಿಚ್ಚೆದ್ದು ಅಡಗಿತಲ್ಲೋ ತಮ್ಮಾ || ಸಚ್ಚಿದಾನಂದನ ಧ್ಯಾನದೊಳು ಇರಲಿಕ್ಕೆ ನಿಶ್ಚಿಂತನಾಗಬೇಕೊ ತವಾ ಹಸರು ಹಳದಿ ಕೆಂಪು ಹಸನಾಗಿ ತೋರುತ ಋಷಿಗಿರಿಯಿಂದ ಉದುರಿತಲ್ಲೋ ಸೂಸುವ ಮನ ಒಬ್ಬುಳಿಯಾಗಿ ಗುರು- | ತಮ್ಮಾ || ಘೋಷದೊಳಗೆ ಲಯವಾಗಬೇಕೋ ತಮ್ಮಾ ! ಬೈಲಿಗೆ ಬೈಲು ನಿರ್ಬೈಲು ತೋರುತಲಿದೆ | ಅದು ಮೂಲ ಬ್ರಹ್ಮ ತಿಳಿಯಬೇಕೋ ತಮ್ಮಾ || ರೇವಗೀಪುರದ ಶ್ರೀಸಿದ್ಧಲಿಂಗೇಶನ | ಶರಣನಿಸಬೇಕೊ ತಮ್ಮಾ || ಅ. ಪ. || || G || || 2 ||<noinclude></noinclude> 5t9maamr8sf4mqrym9ue6zrr86dsr6m ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೬ 104 98989 276070 2024-10-26T06:48:24Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಪರಮಾತ್ಮನ ಅರಿವು ಮರವುಗಳಿಂದ ಮಗುವಿನಲ್ಲಿ ಉಂಟಾಗುವ ಪರಿಣಾಮಗಳನ್ನು ಕುರಿತ ಕವಿಕಲ್ಪನೆಗಳು ( ರಾಗ-ಭೈರವಿ, ತಾಲ-ದೀಪಚಂದಿ ) B ಅಳುತಿದ್ಯಾ ಕಂದಾ ಅಳುತಿದ್ಯಾ | ನೀನು | ತಿಳಿಯದ ಮರ್ತ್ಯಕ್ಕೆ ಮರ... 276070 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಪರಮಾತ್ಮನ ಅರಿವು ಮರವುಗಳಿಂದ ಮಗುವಿನಲ್ಲಿ ಉಂಟಾಗುವ ಪರಿಣಾಮಗಳನ್ನು ಕುರಿತ ಕವಿಕಲ್ಪನೆಗಳು ( ರಾಗ-ಭೈರವಿ, ತಾಲ-ದೀಪಚಂದಿ ) B ಅಳುತಿದ್ಯಾ ಕಂದಾ ಅಳುತಿದ್ಯಾ | ನೀನು | ತಿಳಿಯದ ಮರ್ತ್ಯಕ್ಕೆ ಮರೆತು ಬಂದೆನೆಂದು ಮಾಯದ ತೊಟ್ಟಿಲೊಳು ಕೈ ಕಾಲು ಒತ್ತುತ | ಮೋಹದ ಸಿಂಬಿಯೊಳು ಹೊರಳಾಡುತ || ಜೀವ ಮನಸು ಎಂಬ ತಗಣಿ ಉಂಗುಟಕ ಹತ್ತಿ ದೇಹಕ್ಕೆ ಯಳ್ಳಷ್ಟು ಸುಖವಿಲ್ಲೆಂದು ತಂದೆತಾಯಿಗಳಿಂದ ಬಂಧನದೊಳು ಬಿದ್ದಿ ಮುಂದೇನು ಗತಿಯೆಂದು ಕೆಡುವೆನೆಂದು || ಅಂದಛಂದದಿ ಬಂದು ಮೊಲೆಕೊಟ್ಟು ಹಾಲೆರೆದು ಬಂದಂಥ ವಿಷಯಕ್ಕೆ ಬಲಿಯ ಹಾಕುವರೆಂದು ನಾವು ಮಗನಿಗೆ ಮದುವೆ ಮಾಡುವೆನೆಂದು | ತಾವು ಬಿದ್ದ ಕುಣಿಯಲ್ಲಿ ಎನ್ನ ನೂಕುವರೆಂದು || ಜಾವ ಜಾವಕೆ ಒಮ್ಮೆ ನೋಡಿ ಹಿಗ್ಗು ತಲಿ | ದೇವ ಕೂಡಲೂ ಕೇಶ ಕೂಡಿಕೊ ಎನುತಲಿ | 5 || 0 1 || a || a ಬೇರೆ ಬೇರೆ ಇಂದ್ರಿಯಗಳು ವಿನಾಶದೆಡೆ ಸೆಳೆದೊಯ್ಯುವ ಬಗೆ ( ವಚನ ) ನೈನೇಂದ್ರಿಯ ವಿಷಯದಿಂದ ಪತಂಗ ಕೆಡುವದು ದೀಪದ ಜ್ವಾಲೆಯಲ್ಲಿ, ಶ್ರವಣೇಂದ್ರಿಯ ವಿಷಯದಿಂದ ಎರಳೆ ಕೆಡುವದು ಬೇಟೆಗಾರನ ಸರಳಿನಲ್ಲಿ. ಘ್ರಾಣೇಂದ್ರಿಯ ವಿಷಯದಿಂದ ಭ್ರಮರವು ಕೆಡುವದು ಸಂಪಿಗೆಯ ಪುಷ್ಪದಲ್ಲಿ.<noinclude></noinclude> 4s5kp5bf0736vhw936jgcgzl3bjrsyn ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೮ 104 98990 276071 2024-10-26T06:48:43Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ as ಈ ಅನಾಥ ಏಕಾಕಿ ಹತಭಾಗಿಯನ್ನು ಯಾಕೆ ತೊರೆದೆಯಯ್ಯ ಪ್ರಭೆ? ( ರಾಗ-ಕಾಂಬೋಧಿ, ತಾಲ-ದಾದರಾ ) ಯಾಕೆನ್ನ ಈ ರಾಜ್ಯಕೆಳತಂದೆ ಹರಿಯೆ | ಸಾಕಲಾರದೆ ಎನ್ನನೇಕೆ ಪುಟ್ಟಿಸಿದಿ || ಎನ್ನ ಕುಲದವರಿಲ್ಲ ಎನಗೊಬ... 276071 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ as ಈ ಅನಾಥ ಏಕಾಕಿ ಹತಭಾಗಿಯನ್ನು ಯಾಕೆ ತೊರೆದೆಯಯ್ಯ ಪ್ರಭೆ? ( ರಾಗ-ಕಾಂಬೋಧಿ, ತಾಲ-ದಾದರಾ ) ಯಾಕೆನ್ನ ಈ ರಾಜ್ಯಕೆಳತಂದೆ ಹರಿಯೆ | ಸಾಕಲಾರದೆ ಎನ್ನನೇಕೆ ಪುಟ್ಟಿಸಿದಿ || ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ | ಮನ್ನಿಸುವ ದೊರೆಯಿಲ್ಲ ಮನಕೆ ಜಯವಿಲ್ಲ | ಹೊನ್ನು ರನ್ನಗಳೆಲ್ಲ ಕರುಣೆ ತೋರುವರಿಲ್ಲ | ಇಲ್ಲಿ ತರವಲ್ಲ ಇಂದಿರೇಶನೆ ಬಲ್ಲ || ದೇಶಪರಿಚಯವಿಲ್ಲ ಬೇಸರ ಕಳೆವರಿಲ್ಲ | ಪರಮಾತ್ಮನಲ್ಲದೆ ಪರಗತಿಯು ಇಲ್ಲ || ಹರಣದಲಿ ಹುರುಡಿಲ್ಲ ಕರಣದಲಿ ದೃಢವಿಲ್ಲ | ದೊರೆ ಪುರಂದರ ವಿಠಲ ತಾನೆ ಬಲ್ಲ || [Q] || 3 || 2 ಭಕ್ತಿ, ವಿರತಿ, ಅರಿವು ಎಂಬ ಬಿಲ್ಲುಬಾಣಗಳಿಂದ, ಅಂತರಂಗದಲ್ಲಿಯ ಹುಲಿ, ಕರಡಿ, ಸಿಂಹಗಳನ್ನು ಕೊಲ್ಲಿರಯ್ಯ ( ರಾಗ-ಭೂಪ, ತಾಲ-ದೀಪಚಂದಿ) ಕಾಯಕಾಂತಾರವ ಹೊಕ್ಕು ಬೇಟೆಯನಾಡಿ | ವಾಯ ಮೋಹದ ಮೃಗಗಳ ಕೊಲ್ಲಿರೋ ಕೋಪವೆಂಬುವ ಹಿರಿಯ ಹುಲಿಯುಂಟು | ಪಾಪವೆಂಬ ಸೂಕರವುಂಟು || ಚಾಪಲ್ಯವೆಂಬ ಜಿಂಕೆಯುಂಟು | ಕಾಪಟ್ಯವೆಂಬ ನರಿಯುಂಟು ಮೆರೆವಷ್ಟಮದಗಳೆಂಬ ಕೋಣಗಳುಂಟು | ಬರಿಯ ದಂಭವೆಂಬ ಕರಡಿಯುಂಟು ಉರಿವ ಮತ್ಸರ ಕೇಸರಿಯುಂಟು | || ಪ || ⠀ ಮರವು ಎಂದೆಂಬ ಮದ್ದಾನೆಯುಂಟು 119 11<noinclude></noinclude> pe39c297ixg9pzetffmkhpu2p6qcivy ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೯ 104 98991 276072 2024-10-26T06:48:55Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಭರತಿ ಸದ್ಭಕ್ತಿ ಎಂದೆಂಬ ಬಿಲ್ಲನೆ ಮಾಡಿ | ವಿರತಿ ಎಂದೆಂಬ ಸಿಂಜಿನಿಯ ಹೂಡಿ || ಅರಿವೆಂಬ ಬಾಣವನ್ನೆಚ್ಚಿ ಕೆಡಹುತ | ಗುರುಸಿದ್ದನಂಭ್ರಪಂಕಜಕೆರಗಿ || all 2 ಅಯ್ಯ ! ನಿದ್ರೆಯಲ್ಲಿ ಕನಸಿನಲ್ಲಿ ಮೈಮರ... 276072 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಭರತಿ ಸದ್ಭಕ್ತಿ ಎಂದೆಂಬ ಬಿಲ್ಲನೆ ಮಾಡಿ | ವಿರತಿ ಎಂದೆಂಬ ಸಿಂಜಿನಿಯ ಹೂಡಿ || ಅರಿವೆಂಬ ಬಾಣವನ್ನೆಚ್ಚಿ ಕೆಡಹುತ | ಗುರುಸಿದ್ದನಂಭ್ರಪಂಕಜಕೆರಗಿ || all 2 ಅಯ್ಯ ! ನಿದ್ರೆಯಲ್ಲಿ ಕನಸಿನಲ್ಲಿ ಮೈಮರೆತ ದಾರಿಕಾರನೆ ! ನಿನ್ನ ಗುರಿಯು ಬಲು ದೂರವಿರುವುದಯ್ಯ! ಎಚ್ಚರಾಗು ! ಮುಂದೆ ಸಾಗಯ್ಯ! - ( ರಾಗ - ಶಂಕರಾಭರಣ, ತಾಲ - ದೀಪಚಂಡಿ ) ಎಲೋ ದಾರಿಕಾರನೆ ಮಲಗಿಕೊಂಬರೆ ಹೀಗೆ | ಬಲು ದೂರ ವೈಕುಂಠ ಪ್ರವಾಸವು ತಲೆಯೊಳು ನಿಂತು ನಗುವಳು ಮೃತ್ಯು ದೇವತೆ | ಹಲವು ಹಂಬಲಿಸಲು ಫಲವೇನು ಕನಸಿನೊಳು || ಅ. ಪ. | ಸ್ಥಳವು ನಿನ್ನದು ಬಿಟ್ಟು ಹಳವ ಸೇರಿದರಿನ್ನು | ತಿಳಿವಳಿಕೆ ಬರಬಾರದೆ ಮಾನವಾ || ತೊಳಲು ದಾರಿಯಲ್ಲಿ ಖಲರು ನಿನ್ನಯ ಬದುಕ | ಸೆಳೆಯದೆ ಬಿಡರಯ್ಯ ಉಳಿಸಿ ಮಾನವಾ ಬರುವ ಮುಂದೆ ತಂದ ಸರುಕೆಲ್ಲ ತೀರಿತು | ತಿರುಗಿ ಬರುವದಲ್ಲ ಬರಿಗಂಟು || ಕರಿ, ಹುಲಿ, ತೋಳ, ನಾಯಿ, ನರಿ, ಕೋಣ, ಕರಡಿಗಳು | }}} |0|| ಕ. ಕ, ೨ ಹರಿದು ತಿಂಬುವು ನಿನ್ನ ತೆರಳಗೊಡವು ಮುನ್ನ || 9 || ಹಿಂದೆ ಹಲವು ಕವಚಂಗಳ ಕಳಕೊಂಡಿ | ಇಂದೀ ಕವಚವಾದರು ಪೋಗುದು || ಮುಂದಿನ್ನು ಸಾಧಿಸಿ ಪುರಂದರ ವಿಠಲನ | ಪೊಂದಿ ಪಾದಕೆ ಸುಖಿಸಿ ಮಾನವಾ || a ||<noinclude></noinclude> s4a5ogr64qcn2fkwpufj93a0this7dz ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೦ 104 98992 276073 2024-10-26T06:49:26Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ಮೂರು ಪರಮಾರ್ಥ - ಪ್ರೇರಣೆಗಳು (ಭಾಗ ೨) ಮಾನವನ ಜೀವನವ್ಯಾಪಾರಗಳೆಲ್ಲ ಕ್ಷಣಭಂಗುರವಾದವುಗಳು ( ರಾಗ - ಭೂಪ, ತಾಲ - ದೀಪಚಂದಿ) ಹೇಗೆ ಇರಬೇಕು ಸಂಸಾರದಲ್ಲಿ || ಹೇಗೆ ಬರೆದಿದೆ ಪ್ರಾಚೀನದಲ್ಲಿ ಹಕ್ಕಿ ಅಂಗಳದಲ್ಲಿ ಬಂದ... 276073 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ಮೂರು ಪರಮಾರ್ಥ - ಪ್ರೇರಣೆಗಳು (ಭಾಗ ೨) ಮಾನವನ ಜೀವನವ್ಯಾಪಾರಗಳೆಲ್ಲ ಕ್ಷಣಭಂಗುರವಾದವುಗಳು ( ರಾಗ - ಭೂಪ, ತಾಲ - ದೀಪಚಂದಿ) ಹೇಗೆ ಇರಬೇಕು ಸಂಸಾರದಲ್ಲಿ || ಹೇಗೆ ಬರೆದಿದೆ ಪ್ರಾಚೀನದಲ್ಲಿ ಹಕ್ಕಿ ಅಂಗಳದಲ್ಲಿ ಬಂದು ಕೂತಂತೆ || ಆ ಕ್ಷಣದಲ್ಲಿ ಹಾರಿಹೋದಂತೆ | | ನಾನಾ ಪರಿಯಲ್ಲಿ ಸಂತೆ ನೆರೆದಂತೆ || ಮಕ್ಕಳಾಡಿ ಮನೆ ಕಟ್ಟಿದಂತೆ || ನಾನಾ ಪಂಥವ ಹಿಡಿದು ಹೋದಂತೆ ಸಾಕೆಂದು ಆಟ ಅಳಿಸಿ ಪೋದಂತೆ || a:ll ವಸತಿಕಾರನು ವಸತಿ ಬಂದಂತೆ || ತುಸು ಹೊತ್ತೇರೆ ಹೊರಟು ಹೋದಂತೆ | 9 || ಸಂಸಾರಪಾಶವ ನೀನೆ ಬಿಡಿಸಯ್ಯ || ಕಂಸಾರಿ ಪುರಂದರ ವಿಠಲರಾಯ G ಚಿಂತೆಯ ಸಾರ್ವತ್ರಿಕ ಸಾಮ್ರಾಜ್ಯವು ( ರಾಗ- ಪುರಿಯ ಧನಾತ್ರಿ, ತಾಲ - ದೀಪಚಂದಿ) ಅನುಗಾಲವು ಚಿಂತೆಯು ಮನುಜರಿಗೆ ಮನ ಹೋಗಿ ಮಾಧವನ ಒಳಗೂಡು ತನಕ ಸತಿಯು ಇದ್ದರು ಚಿಂತೆ ಇಲ್ಲದಿದ್ದರೂ ಚಿಂತೆ | ಮತಿಹೀನ ಸತಿಯಾದರು ಚಿಂತೆಯು ಪೃಥಿವಿಯೊಳಗೆ ಸತಿ ಅತಿ ಚೆಯಾದರೂ ಮಿತಿಮಾರಿ ನಡೆದರೆ ಅವಳೊಂದು ಚಿಂತೆ 00<noinclude></noinclude> izlhqbkroru6gzrvf2s671aby8761cb ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೯ 104 98993 276074 2024-10-26T07:00:28Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: {| |- ! !! !! !! ಪುಟ |- | ಮುನ್ನುಡಿ || ... || ... || ೧ |- | ಪ್ರಸ್ತಾವನೆ || ... || ... || ೩ ! colspan=5| ಪ್ರಕರಣ |- | ೧. ಪೀಠಿಕೆ ‍|- | ೨. ಪರಮಾರ್ಥ ಪ್ರೇರಣೆಗಳು (ಭಾಗ ೧) ೩. ಪರಮಾರ್ಥ-ಪ್ರೇರಣೆಗಳು (ಭಾಗ ೨) ೪. ನೈತಿಕ ಸಿದ್ಧತೆ ಜಿ, ಸದ್ಗುರುವಿನ ಸ್ವಭಾವ ೬. ಸದ್ದ... 276074 proofread-page text/x-wiki <noinclude><pagequality level="1" user="~aanzx" /></noinclude>{| |- ! !! !! !! ಪುಟ |- | ಮುನ್ನುಡಿ || ... || ... || ೧ |- | ಪ್ರಸ್ತಾವನೆ || ... || ... || ೩ ! colspan=5| ಪ್ರಕರಣ |- | ೧. ಪೀಠಿಕೆ ‍|- | ೨. ಪರಮಾರ್ಥ ಪ್ರೇರಣೆಗಳು (ಭಾಗ ೧) ೩. ಪರಮಾರ್ಥ-ಪ್ರೇರಣೆಗಳು (ಭಾಗ ೨) ೪. ನೈತಿಕ ಸಿದ್ಧತೆ ಜಿ, ಸದ್ಗುರುವಿನ ಸ್ವಭಾವ ೬. ಸದ್ದು ರುವಿನ ಕಾರ್ಯ ೭. ಗುರು-ಶಿಷ್ಯರ ಸಂಬಂಧ (ಭಾಗ ೧) ೮. ಗುರು-ಶಿಷ್ಯರ ಸಂಬಂಧ (ಭಾಗ ೨) ೯. ಸಂತರ ಲಕ್ಷಣಗಳು ೧೦. ದೇವ-ಭಕ್ತರ ಸಂಬಂಧ ೧೧. ಪರಮಾತ್ಮನ ಸ್ವರೂಪ ೧೨. ಪರಮಾತ್ಮನ ನಾಮ (ಭಾಗ ೧) ೧೩. ಪರಮಾತ್ಮನ ನಾಮ (ಭಾಗ ೨) ೧೪. ಧ್ಯಾನಪದ್ಧತಿ ೧೫. ಅನುಭಾವದ ಉಗಮವೂ ಪ್ರಮಾಣಗಳೂ ೧೬. ರೂಪ ತೇಜ ನಾದಾದಿಗಳ ಅನುಭಾವ ೧೭. ಸಮ್ಮಿಲಿತ ಅನುಭಾವ ೧೮. ಪರತರ ಅನುಭಾವ ೧೯. ಸಾಕ್ಷಾತ್ಕಾ ರದ ಪರಿಣಾಮಗಳು (ಭಾಗ ೧) ೨೦. ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) ೧. ಕವಿಗಳ ಕಾಲ-ಗ್ರಂಥಗಳು ೨, ಟಿಪ್ಪಣಿಗಳು ಅನುಬಂಧ ೩. ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು ೪. ಅಕ್ಷರಾನುಕ್ರಮ ... 20 22 maBE ೮೨ 62 89 F2 ೧೦೩ ೧೪೧ 6000 ೧೪೮<noinclude></noinclude> eehalvk6d4106o6pr5i0d61ivbyqa4t 276110 276074 2024-10-26T07:37:57Z ~aanzx 6806 276110 proofread-page text/x-wiki <noinclude><pagequality level="1" user="~aanzx" /></noinclude>{| |- ! !! !! !! !! ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 | ಪ್ರಕರಣ |- | ೧. || ಪೀಠಿಕೆ || ... || ... || ೧ ‍|- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ ‍|- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ ‍|- | ೪. || ನೈತಿಕ ಸಿದ್ಧತೆ || ... || ... || ೧೪ ‍|- | ೫. || ಸದ್ಗುರುವಿನ ಸ್ವಭಾವ || ... || ... || ೧೮ ‍|- | ೬. || ಸದ್ದು ರುವಿನ ಕಾರ್ಯ || ... || ... || ೨೩ ‍|- |೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ ‍|- |೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ ‍|- |೯. || ಸಂತರ ಲಕ್ಷಣಗಳು || ... || ... || ೩೯ ‍|- |೧೦. || ದೇವ-ಭಕ್ತರ ಸಂಬಂಧ || ... || ... || ೪೫ ‍|- |೧೧. || ಪರಮಾತ್ಮನ ಸ್ವರೂಪ || ... || ... || ೫೦ ‍|- |೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ ‍|- |೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ ‍|- |೧೪. || ಧ್ಯಾನಪದ್ಧತಿ || ... || ... || ೬೪ ‍|- |೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍|- |೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ ‍|- |೧೭. || ಸಮ್ಮಿಲಿತ ಅನುಭಾವ || ... || ... || ೮೨ ‍|- |೧೮. || ಪರತರ ಅನುಭಾವ || ... || ... || ೮೭ ‍|- |೧೯. || ಸಾಕ್ಷಾತ್ಕಾ ರದ ಪರಿಣಾಮಗಳು (ಭಾಗ ೧) || ... || ... || ೯೨ ‍|- |೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5| ಅನುಬಂಧ ‍|- |೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ ‍|- |೨. || ಟಿಪ್ಪಣಿಗಳು || ... || ... || ೧೦೪ ‍|- |೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ ‍|- |೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> cuag27nxzslmu5nex10k5bsbzuzhuzk 276111 276110 2024-10-26T07:44:15Z ~aanzx 6806 276111 proofread-page text/x-wiki <noinclude><pagequality level="1" user="~aanzx" /></noinclude>{| |- ! !! !! !! !! ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ದು ರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍|- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ ‍|- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾ ರದ ಪರಿಣಾಮಗಳು (ಭಾಗ ೧) || ... || ... || ೯೨ ‍|- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5| ಅನುಬಂಧ ‍|- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ ‍|- | ೨. || ಟಿಪ್ಪಣಿಗಳು || ... || ... || ೧೦೪ ‍|- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ ‍|- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> qnyezlvesjmw20g6t83tams6ro6xjhc 276112 276111 2024-10-26T07:45:58Z ~aanzx 6806 276112 proofread-page text/x-wiki <noinclude><pagequality level="1" user="~aanzx" /></noinclude>{| |- ! !! !! !! !! ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ದು ರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍|- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ ‍|- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾ ರದ ಪರಿಣಾಮಗಳು (ಭಾಗ ೧) || ... || ... || ೯೨ ‍|- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5| ಅನುಬಂಧ ‍|- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ ‍|- | ೨. || ಟಿಪ್ಪಣಿಗಳು || ... || ... || ೧೦೪ ‍|- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ ‍|- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> chsixfba2pe5go3x1waq16almobv30m 276113 276112 2024-10-26T07:47:33Z ~aanzx 6806 276113 proofread-page text/x-wiki <noinclude><pagequality level="1" user="~aanzx" /></noinclude>{| |- ! !! !! !! !! ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ದು ರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍|- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ ‍|- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾ ರದ ಪರಿಣಾಮಗಳು (ಭಾಗ ೧) || ... || ... || ೯೨ ‍|- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5| ಅನುಬಂಧ ‍|- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ ‍|- | ೨. || ಟಿಪ್ಪಣಿಗಳು || ... || ... || ೧೦೪ ‍|- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ ‍|- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> l1ztoikwovc0wlhelyaw2gavakvmyyx 276114 276113 2024-10-26T07:48:18Z ~aanzx 6806 276114 proofread-page text/x-wiki <noinclude><pagequality level="1" user="~aanzx" /></noinclude>{| |- ! !! !! !! !! ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ದು ರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍|- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ |- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾ ರದ ಪರಿಣಾಮಗಳು (ಭಾಗ ೧) || ... || ... || ೯೨ ‍|- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5| ಅನುಬಂಧ ‍|- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ ‍|- | ೨. || ಟಿಪ್ಪಣಿಗಳು || ... || ... || ೧೦೪ ‍|- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ ‍|- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> at53ze36bupnaf5pm5xy0p57unl0j7u 276115 276114 2024-10-26T07:57:17Z ~aanzx 6806 276115 proofread-page text/x-wiki <noinclude><pagequality level="1" user="~aanzx" /></noinclude>{| |- ! !! !! !! !! ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 style="text-align: center;" | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ದು ರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍ |- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ |- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾ ರದ ಪರಿಣಾಮಗಳು (ಭಾಗ ೧) || ... || ... || ೯೨‍ |- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5 style="text-align:center;" | ಅನುಬಂಧ‍ |- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ |- | ೨. || ಟಿಪ್ಪಣಿಗಳು || ... || ... || ೧೦೪ |- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ |- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> 6awac7s6dh2jern9iwngj6dswigq3qv 276119 276115 2024-10-26T07:59:37Z ~aanzx 6806 276119 proofread-page text/x-wiki <noinclude><pagequality level="1" user="~aanzx" /></noinclude>{| |+ ವಿಷಯಸೂಚಿಕೆ |- ! !! !! !! !! ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 style="text-align: center;" | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ದು ರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍ |- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ |- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾ ರದ ಪರಿಣಾಮಗಳು (ಭಾಗ ೧) || ... || ... || ೯೨‍ |- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5 style="text-align:center;" | ಅನುಬಂಧ‍ |- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ |- | ೨. || ಟಿಪ್ಪಣಿಗಳು || ... || ... || ೧೦೪ |- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ |- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> nqbw4z5lpgjqlx7q8rbfxv1b6xotfgz 276120 276119 2024-10-26T07:59:55Z ~aanzx 6806 276120 proofread-page text/x-wiki <noinclude><pagequality level="1" user="~aanzx" /></noinclude>{| |+ '''ವಿಷಯಸೂಚಿಕೆ''' |- ! !! !! !! !! ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 style="text-align: center;" | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ದು ರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍ |- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ |- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾ ರದ ಪರಿಣಾಮಗಳು (ಭಾಗ ೧) || ... || ... || ೯೨‍ |- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5 style="text-align:center;" | ಅನುಬಂಧ‍ |- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ |- | ೨. || ಟಿಪ್ಪಣಿಗಳು || ... || ... || ೧೦೪ |- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ |- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> h2vuw3nsvsi5tzu56pwq5o41t1plox8 276121 276120 2024-10-26T08:06:53Z ~aanzx 6806 /* Proofread */ 276121 proofread-page text/x-wiki <noinclude><pagequality level="3" user="~aanzx" /></noinclude>{| |+ '''ವಿಷಯಸೂಚಿಕೆ''' |- ! !! !! !! !! ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 style="text-align: center;" | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ಗುರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍ |- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ |- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೧) || ... || ... || ೯೨‍ |- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5 style="text-align:center;" | ಅನುಬಂಧ‍ |- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ |- | ೨. || ಟಿಪ್ಪಣಿಗಳು || ... || ... || ೧೦೪ |- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ |- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> gw2p4dr8qg7u42i3n08bjtmr8ytl4rn 276130 276121 2024-10-26T08:55:57Z ~aanzx 6806 276130 proofread-page text/x-wiki <noinclude><pagequality level="3" user="~aanzx" /></noinclude>{| |+ '''ವಿಷಯಸೂಚಿಕೆ''' |- ! style="margin-left:5px;"| !! !! !! !! ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 style="text-align: center;" | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ಗುರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍ |- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ |- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೧) || ... || ... || ೯೨‍ |- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5 style="text-align:center;" | ಅನುಬಂಧ‍ |- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ |- | ೨. || ಟಿಪ್ಪಣಿಗಳು || ... || ... || ೧೦೪ |- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ |- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> 5i2j33sgs8giy5g8zovdbtb2vpswm4y 276131 276130 2024-10-26T09:06:15Z ~aanzx 6806 276131 proofread-page text/x-wiki <noinclude><pagequality level="3" user="~aanzx" /></noinclude>{| |+ '''ವಿಷಯಸೂಚಿಕೆ''' |- ! style="padding-left:5px;"| ! style="padding-left:5px;"| ! style="padding-left:5px;"| ! style="padding-left:5px;"| ! style="padding-left:5px;"| ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 style="text-align: center;" | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ಗುರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍ |- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ |- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೧) || ... || ... || ೯೨‍ |- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5 style="text-align:center;" | ಅನುಬಂಧ‍ |- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ |- | ೨. || ಟಿಪ್ಪಣಿಗಳು || ... || ... || ೧೦೪ |- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ |- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> qgvzgscvk974hrfi1fgnjchxv1lwkzm 276132 276131 2024-10-26T09:12:56Z ~aanzx 6806 276132 proofread-page text/x-wiki <noinclude><pagequality level="3" user="~aanzx" /></noinclude>{| |+ '''ವಿಷಯಸೂಚಿಕೆ''' |- ! scope="col" style="width: 20px;" | ! style="padding-left:5px;"| ! scope="col" style="width: 50px;" | ! scope="col" style="width: 50px;" | ! scope="col" style="width: 20px;" | ಪುಟ |- | || ಮುನ್ನುಡಿ || ... || ... || ೧ |- | || ಪ್ರಸ್ತಾವನೆ || ... || ... || ೩ |- ! colspan=5 style="text-align: center;" | ಪ್ರಕರಣ |- | ೧. || ಪೀಠಿಕೆ || ... || ... || ೧ |- | ೨. || ಪರಮಾರ್ಥ ಪ್ರೇರಣೆಗಳು (ಭಾಗ ೧) || ... || ... || ೫ |- | ೩. || ಪರಮಾರ್ಥ-ಪ್ರೇರಣೆಗಳು (ಭಾಗ ೨) || ... || ... || ೧೦ |- | ೪. || ನೈತಿಕ ಸಿದ್ಧತೆ || ... || ... || ೧೪ |- | ೫. || ಸದ್ಗುರುವಿನ ಸ್ವಭಾವ || ... || ... || ೧೮ |- | ೬. || ಸದ್ಗುರುವಿನ ಕಾರ್ಯ || ... || ... || ೨೩ |- | ೭. || ಗುರು-ಶಿಷ್ಯರ ಸಂಬಂಧ (ಭಾಗ ೧) || ... || ... || ೨೭ |- | ೮. || ಗುರು-ಶಿಷ್ಯರ ಸಂಬಂಧ (ಭಾಗ ೨) || ... || ... || ೩೩ |- | ೯. || ಸಂತರ ಲಕ್ಷಣಗಳು || ... || ... || ೩೯ |- | ೧೦. || ದೇವ-ಭಕ್ತರ ಸಂಬಂಧ || ... || ... || ೪೫ |- | ೧೧. || ಪರಮಾತ್ಮನ ಸ್ವರೂಪ || ... || ... || ೫೦ |- | ೧೨. || ಪರಮಾತ್ಮನ ನಾಮ (ಭಾಗ ೧) || ... || ... || ೫೬ |- | ೧೩. || ಪರಮಾತ್ಮನ ನಾಮ (ಭಾಗ ೨) || ... || ... || ೬೦ |- | ೧೪. || ಧ್ಯಾನಪದ್ಧತಿ || ... || ... || ೬೪ |- | ೧೫. || ಅನುಭಾವದ ಉಗಮವೂ ಪ್ರಮಾಣಗಳೂ || ... || ... || ೭೧ ‍ |- | ೧೬. || ರೂಪ ತೇಜ ನಾದಾದಿಗಳ ಅನುಭಾವ || ... || ... || ೭೭ |- | ೧೭. || ಸಮ್ಮಿಲಿತ ಅನುಭಾವ || ... || ... || ೮೨ |- | ೧೮. || ಪರತರ ಅನುಭಾವ || ... || ... || ೮೭ |- | ೧೯. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೧) || ... || ... || ೯೨‍ |- | ೨೦. || ಸಾಕ್ಷಾತ್ಕಾರದ ಪರಿಣಾಮಗಳು (ಭಾಗ ೨) || ... || ... || ೯೭ |- ! colspan=5 style="text-align:center;" | ಅನುಬಂಧ‍ |- | ೧. || ಕವಿಗಳ ಕಾಲ-ಗ್ರಂಥಗಳು || ... || ... || ೧೦೩ |- | ೨. || ಟಿಪ್ಪಣಿಗಳು || ... || ... || ೧೦೪ |- | ೩. || ಪದಗಳ ಮೂಲ ಆಂಗ್ಲ ಶೀರ್ಷಿಕೆಗಳು || ... || ... || ೧೪೧ |- | ೪. || ಅಕ್ಷರಾನುಕ್ರಮ || ... || ... || ೧೪೮ |}<noinclude></noinclude> lin2wdyoilk7i5ivcxqigdartquufg1 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೧ 104 98994 276075 2024-10-26T07:08:12Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ ಡ ಪರಮಾರ್ಥ ಸೋಪಾನ ಮಕ್ಕಳಿದ್ದರು ಚಿಂತೆ ಇಲ್ಲದಿದ್ದರೂ ಚಿಂತೆ | ಅತ್ತು ಅನ್ನಕೆ ಕಾಡುವ ಚಿಂತೆಯು || ತುತ್ತಿಗೆ ಸಾಲದೆಂಬ ಬಡತನದ | ಕಕ್ಕುಲತೆ ದೇಶದೊಳಿಲ್ಲದ ಚಿಂತೆ ಬಳಗವಿಲ್ಲದ ಚಿಂತೆ ಬಳಗವಾದರೂ ಚಿಂತೆ | ಮೇಲೆ ಸಂ... 276075 proofread-page text/x-wiki <noinclude><pagequality level="1" user="~aanzx" /></noinclude>ಕನ ಡ ಪರಮಾರ್ಥ ಸೋಪಾನ ಮಕ್ಕಳಿದ್ದರು ಚಿಂತೆ ಇಲ್ಲದಿದ್ದರೂ ಚಿಂತೆ | ಅತ್ತು ಅನ್ನಕೆ ಕಾಡುವ ಚಿಂತೆಯು || ತುತ್ತಿಗೆ ಸಾಲದೆಂಬ ಬಡತನದ | ಕಕ್ಕುಲತೆ ದೇಶದೊಳಿಲ್ಲದ ಚಿಂತೆ ಬಳಗವಿಲ್ಲದ ಚಿಂತೆ ಬಳಗವಾದರೂ ಚಿಂತೆ | ಮೇಲೆ ಸಂಬಳ ಭಾಗದ ಚಿಂತೆಯು ಸಾಲ ಕೊಡೋ ಚಿಂತೆ ಸಾಲ ತೆಗೆಯೋ ಚಿಂತೆ | ಮಲೋಕದೊಳಗೆಲ್ಲ ಚಿಂತೆ ಕಾಣಣ್ಣಾ ಮನೆಯಿಲ್ಲದ ಚಿಂತೆ ಮನೆಯಾದರೂ ಚಿಂತೆ | ಮನೆಯ ವಾರ್ತೆ ನಡೆಯದ ಚಿಂತೆಯು || ತೊಂಡನಾಗಿ ಪೊತ್ತು ತಿರುಗುವ ಚಿಂತೆ ಭೂ- 1 ಮಂಡಲದೊಳಗೆಲ್ಲ ಚಿಂತೆ ಕಾಣಣ್ಣಾ ಬಡವನಾದರು ಚಿಂತೆ ಬಲ್ಲಿದನಾದರು ಚಿಂತೆ | ಕೆಡ ಹೊನ್ನು ಮನೆಯೊಳಿದ್ದರೂ ಚಿಂತೆಯು ಪೊಡವಿಯೊಳಗೆ ನಮ್ಮ ಪುರಂದರ ವಿಠಲನ | ಬಿಡದೆ ಚಿಂತಿಸಿದರೆ ಚಿಂತೆ ನಿಶ್ಚಿಂತೆ & 00 || 6 || |||| 11 & 11 11 & ಪರಮಾತ್ಮನು ನಿನಗೆ ಪಾರಮಾರ್ಥಿಕ ಪದವಿಯನ್ನು ಕೊಡುವುದಲ್ಲದೆ ಐಹಿಕ ವೈಭವವನ್ನೂ ಸಲ್ಲಿಸಿ, ನಿನ್ನ ಚಿಂತೆಯನ್ನು ಕಳೆಯಬಹುದು (ರಾಗ-ಭೈರವಿ, ತಾಲ-ಜಲದಕ್ಕಾ ) ಚಿಂತೆಯಾತಕೆ | ಬಯಲ ಭ್ರಾಂತಿಯಾತಕೊ ಕಂತುಪಿತನ ದಿವ್ಯನಾಮ | ಮಂತ್ರವನ್ನು ಜಪಿಸುವವಗೆ ಕಾಲಕಾಲದಲ್ಲಿ ಬಿಡದೆ | ವೇಳೆಯರಿತು ಕೂಗುವಂಥ || ಕೋಳಿ ತನ್ನ ಮರಿಗೆ ಮೊಲೆಯ ಹಾಲು | ಕೊಟ್ಟು ಸಲುಹಿತೆ || ೧ || ಸಡಗರದಿ ನಾರಿಯರು | ಹಡೆಯುವಾಗ ಸೂಲಗಿತ್ತಿ || ಅಡವಿಯೊಳಗೆ ಹೆರುವ ಮೃಗವ | ಹಿಡಿದು ರಕ್ಷಿಸುವರಾರೋ || ೨ || ಹೆತ್ತ ತಾಯಿ ಸತ್ತು ಹೋಗಲು | ಕೆಟ್ಟೆವೆಂಬರು ಲೋಕಜನರು ಮತ್ತೆ ಗುಂಗುರಿಗೆ ತಾಯಿ | ಹತ್ತರಿದ್ದು ಸಲುಹಿತೆ ಪರದಲ್ಲಿ ಪದವಿಯುಂಟು | ಇಹದಲ್ಲಿ ಸೌಖ್ಯವುಂಟು || || a || ಗುರುಪುರಂದರ ವಿಠಲನ | ನಾಮ ನೆನೆದವರಿಗೆ | 8 ||<noinclude></noinclude> trgund1dtkjxz7ge9f0ddn468ofrdsc ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೨ 104 98995 276076 2024-10-26T07:08:27Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 09 ಕನ್ನಡ ಪರಮಾರ್ಥ ಸೋಪಾನ ವಿಶ್ವದೊಡೆಯನೆ! ಎನ್ನಂತರಂಗದಲ್ಲಿಯ ಚಿಂತೆಯನ್ನು ಕಳೆಯಲು ಏಕೆ ದಯಮಾಡಲೊಲ್ಲೆ ? ( ರಾಗ-ಭೈರವಿ (ಕರ್ನಾಟಕಿ), ತಾಲ-ದೀಪಚಂದಿ) ಯಾಕೆ ದಯಮಾಡವಲ್ಲಿ | ಶ್ರೀಹರಿಯೆ | ಮೂಕನಾಗುವರೆ ಹೀಗೆ ಲೋಕವನು ರಕ್... 276076 proofread-page text/x-wiki <noinclude><pagequality level="1" user="~aanzx" /></noinclude>09 ಕನ್ನಡ ಪರಮಾರ್ಥ ಸೋಪಾನ ವಿಶ್ವದೊಡೆಯನೆ! ಎನ್ನಂತರಂಗದಲ್ಲಿಯ ಚಿಂತೆಯನ್ನು ಕಳೆಯಲು ಏಕೆ ದಯಮಾಡಲೊಲ್ಲೆ ? ( ರಾಗ-ಭೈರವಿ (ಕರ್ನಾಟಕಿ), ತಾಲ-ದೀಪಚಂದಿ) ಯಾಕೆ ದಯಮಾಡವಲ್ಲಿ | ಶ್ರೀಹರಿಯೆ | ಮೂಕನಾಗುವರೆ ಹೀಗೆ ಲೋಕವನು ರಕ್ಷಿಪ ಲಕ್ಷ್ಮೀಕಾಂತನು ನೀನೆ | ವಾಕ್ಯ ಮೊರೆಗಳ ಕೇಳಿ ದಯಮಾಡೊ ಶ್ರೀಹರಿಯೆ || ಆ, ಪ. || ಮನಸಿನೊಳಿದ್ದ ಚಿಂತಿ | ಶ್ರೀಹರಿಯೆ | ಪೇಳುವೆ ನಾ ನಿನಗೆ || ಅನ್ಯದೇವತೆಗಳಿಗೆ ಹೇಳಲಾರೆನು ದೇವಾ | ದಾನವಾಂತಕ ರಂಗಾ ನೀನೆ ದಯವಾಡೊ ಕೃಷ್ಣಾ ಅರ್ಥವಿಲ್ಲದ ಬಾಳ್ವೆಯು | ಶ್ರೀಹರಿಯೆ | ವ್ಯರ್ಥವಾದಿತು ಜನ್ಮವು || ಕರ್ತು ನಿನ್ನ ಯ ನಾನು ಕಾಡಿ ಬೇಡುವನಲ್ಲ | ತುರ್ತದಲ್ಲಿ ದಯಮಾಡೊ ತುಲಸೀದಲಪ್ರಿಯ ರಂಗ ಮೂರು ಲೋಕದ ಕರ್ತಾ ನೀ | ಶ್ರೀಹರಿಯೆ | || || || 9 || ಸಾರುವೆ ನಾ ನಿನಗೆ || ಕಾರುಣ್ಯ ನಿಧಿ ನಮ್ಮ ಪುರಂದರ ವಿಠಲನು | ದೀನ ಮನೋಹರ ಪೂರ್ಣ ಸಹಾಯಕಾರಿ 83 ಅಯ್ಯ ! ನೀನೆನ್ನ ಸಲುಹುವದಾದರೆ, ಇದೀಗ ಸಲುಹಯ್ಯ! ( ರಾಗ-ಸಿಲು, ತಾಲ-ಕೇಶವಾ ) ಇದೆ ಸಮಯ ಹರಿಯೆ | ದೊರೆಯ ಇದೇ ಸಮಯ ನಿನ್ನ | ಪದಾ ತೋರುತೆ || ಸದಾ ಎನ್ನನು ನೋಡಿ | ಮುದದಿ ಸಲಹುವರೆ ನಾನಾ ಜನ್ಮದಿ ಬಂದು | ಜ್ಞಾನ ವಿಹೀನನಾಗಿ || ಹೀನನಾದವಗೆ ಸು- | ಜ್ಞಾನ ಪಾಲಿಸುವರೆ ಆಶಾಪಾಶದಿ ಸಿಲುಕಿ | ಶ್ರೀಶಾ ಮರೆತೆ ನಿನ್ನ || ಲೇಸು ದಾರಿಯ ತೋರಿ | ದಾಸನ ಕಾಯುವರೆ || Q || || ಅ. ಪ. || || 9 ||<noinclude></noinclude> 633ox2svf5ajpqucpz1jplhenzyx2yc ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೩ 104 98996 276077 2024-10-26T07:08:45Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಸಂತರ ಸಂಗವ | ಸಂತ ಪಾಲಿಸಿ || ಅಂತರಂಗದ ಏ- | ಕಾಂತ ಭಜನೆಗಾಗಿ ಹಿಂದಿನ ಸುಕೃತದಿ | ಬಂದೆ ಮಾನವನಾಗಿ || 04 (1 & || ಮುಂದಿನ ಪದವನು | ಹೊಂದಿಸಿ ಪೊರೆಯಲು || ' || ಶ್ರೀಪತಿ ವಿಜಯ ವಿ- | ತಲ ಶ್ರೀವೆಂಕಟ | ತಾಪತ್ರಯದಿ... 276077 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಸಂತರ ಸಂಗವ | ಸಂತ ಪಾಲಿಸಿ || ಅಂತರಂಗದ ಏ- | ಕಾಂತ ಭಜನೆಗಾಗಿ ಹಿಂದಿನ ಸುಕೃತದಿ | ಬಂದೆ ಮಾನವನಾಗಿ || 04 (1 & || ಮುಂದಿನ ಪದವನು | ಹೊಂದಿಸಿ ಪೊರೆಯಲು || ' || ಶ್ರೀಪತಿ ವಿಜಯ ವಿ- | ತಲ ಶ್ರೀವೆಂಕಟ | ತಾಪತ್ರಯದಿಂ| ಕಾಪಾಡುವದಕೆ || 8 || ಪರಮಾತ್ಮನಿಗಾಗಿ ನಡೆಯಿಸಿದ ವಿಫಲ ಶೋಧ-ಪರಿಶ್ರಮಗಳ ತರುವಾಯ ಆತನಿಂದ ದೊರೆತ ಆಕಸ್ಮಿಕ ನೆರವು (ರಾಗ-ಭೈರವ, ತಾಲ-ದೀಪಚಂದಿ) ಎಲ್ಲಿದ್ಯೋ ಹರಿ ಹೇಳಯ್ಯ | ಎಲ್ಲಿ ತಿಳಿಯುತ್ತದೆ ನಿಮ್ಮಾಟದ ನೆಲೆಯ ನಾಲ್ಕಾರು ಹದಿನೆಂಟು ಮಂದಿಯ ಕೇಳಿದೆ | ಸಿಲುಕನೆಂದವರಾಡು || ಮಲಕು ಎಂಭತ್ತು ನಾಲ್ಕು ಲಕ್ಷನೂ ಸೋಸಿದೆ | ಸಿಲುಕಿ ನಿನ್ನ ನಿಜ ನೆಲೆಯು ತೋರದೆ ನಾನಾ ಮತ ನಾನಾ ಮಾರ್ಗ ಶೋಧಿಸಿದೆ | ಖನ ನಿನ್ನದು ತಿಳಿಯದೆ || ನಾನು ನಾನೆಂಬವರಿಗನುಸರಿಸಿದೆ | ನೀನಿರುವ ಸ್ಥಳದ ಗಾಳಿಯು ಬೀಸದೆ ಬೀಳದವರ ಕಾಲು ಬಿದ್ದು ನಾ ಕೇಳಿದೆ | ಸುಳುಹು ನಿನ್ನದು ತೋರದೆ || ತಲೆ ಕೆಳಗೆ ಮಾಡಿ ತಪಸವ ಮಾಡಿದೆ | ಒಲವು ನಿಮ್ಮದು ಎಂದಿಗೂ ಆಗದೆ || 9 || || 2 || ಪಡೆದ ಬವಣೆ ಬಟ್ಟು ಹುಡುಕದಾ ಹುಡುಕಿದೆ | ತೊಡಕು ನಿಮ್ಮದು ತಿಳಿಯದೆ || ಒಡನೆ ಎನ್ನೊಳು ಬಂದು ಅಡಕವ ಹರಿಸಿದಿ | ಮನೋನ್ಮನವಾಗಿ ಕಂಗಳ ತೆರಿಸಿದಿ | ಬಡವನಾಧಾರೆಂದು ಕೈಯ ಬಿಡದೆ ಸ್ವಾನುಭವಸುಖ ನೀಡಿದಿ || ಹೀನ ಮಹಿಪತಿ ಮನೋಹರನ ಮಾಡಿದಿ | il 9 || ಅನುದಿನ ಘನಸುಖದೊಳು ಇರಿಸಿದಿ || 8 ||<noinclude></noinclude> nmzz58q7vl6q4k09kzlgqmvbyxex1cl ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೪ 104 98997 276078 2024-10-26T07:09:03Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ನಾಲ್ಕು ನೈತಿಕ ಸಿದ್ಧತೆ ಮಾನವ ಜೀವನದಿಂದ ಲಭಿಸಿದ ಬೆಲೆಯುಳ್ಳ ಸುಸಂಧಿಯನ್ನು ದೂರೀಕರಿಸದಿರು ( ರಾಗ-ಭೈರವಿ, ತಾಲ-ದೀಪಚಂದಿ) ಮಾನವ ಜನ್ಮ ದೊಡ್ಡದು | ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ || ಪ || ಕಣ್ಣು ಕೈಕಾಲು ಕಿವ... 276078 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ನಾಲ್ಕು ನೈತಿಕ ಸಿದ್ಧತೆ ಮಾನವ ಜೀವನದಿಂದ ಲಭಿಸಿದ ಬೆಲೆಯುಳ್ಳ ಸುಸಂಧಿಯನ್ನು ದೂರೀಕರಿಸದಿರು ( ರಾಗ-ಭೈರವಿ, ತಾಲ-ದೀಪಚಂದಿ) ಮಾನವ ಜನ್ಮ ದೊಡ್ಡದು | ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ || ಪ || ಕಣ್ಣು ಕೈಕಾಲು ಕಿವಿ ನಾಲಿಗೆ ಇರಲಿಕ್ಕೆ | ಮಣ್ಣು ಮುಕ್ಕಿ ಮರುಳಾಗುವರೇ || ಹೊನ್ನು ಹೆಣ್ಣಿಗೆ ಮೆಚ್ಚಿ ಹರಿನಾಮಾಮೃತ | ಉಣದೆ ಉಪವಾಸ ಮಾಡುವರೆ ಪ್ರಾಣಿ ಕಾಲನ ದೂತರು ಕರಪಿಡಿದೆಳೆವಾಗ | ತಾಳು ತಾಳೆಂದರೆ ತಾಳುವರ || ದಾಳಿ ಬಾರದ ಮುನ್ನ ಧರ್ಮವ ಕೈಕೊಳ್ಳಿ ಸುಳ್ಳಲ್ಲ ಸಂಸಾರ ಸುಳಿಗಾಳಿಯಂತಿದೆ ಏನು ಕಾರಣ ನಮ್ಮ ಯದುಪತಿಯ ಮರೆತಿರಿ | ಧನಧಾನ್ಯ ಪುತ್ರರು ಕಾಯುವರೆ || ಇನ್ನು ಆದರೂ ಏಕೋಭಾವದಿ ಪೂಜಿಸಿ | ಉನ್ನತ ಪುರಂದರ ವಿಠಲನ ಭಜಿಸಿರಿ 9 ಮನಸಿನ ಮುರಗಿಯ ತಿದ್ದಿ ಸೋ ದೇವಾ ? ( ರಾಗ-ಭೈರವಿ, ತಾಲ-ದೀಪಚಂದಿ) ಮನಸಿನ ಮುರಿಗೆಯ ತಿದ್ದಿ ಸೋ ದೇವಾ ಪ್ರಾತಃಕಾಲಕ್ಕೆ ಎದ್ದು ಪರದ್ರವ್ಯ ಅಪಹಾರ | ಸಾಧುರ ನಿಂದೆಯನಾಡುತಲ್ಯಾದ || ಸಾಧಿಸಿ ಯಮನವರು ಎಳೆದೊಯ್ಯುವಾಗ | ಸತ್ತೆ ಸತ್ತೆನೆಂದು ಮರುಗುತಲ್ಯಾದ 11011<noinclude></noinclude> 9jl1z6dv96bbyenxxlmuh3nnwmyog8o ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೫ 104 98998 276079 2024-10-26T07:09:20Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಯತಿವೇಷವ ತಾಳಿ ದೇಶಭ್ರಷ್ಟನಾಗಿ ! ಕಾಶಿಯ ಕ್ಷೇತ್ರಕ್ಕೆ ಹೊರಟಿತು ಮನಸು | ಕಾಶಿಯ ದಾರಿಯೊಳು ವೇಶ್ಯಗೆ ಮೆಚ್ಚಿ | ಕೇಶವ ನಿಮ್ಮನು ಮರೆಯಿತು ಮನಸು ಬಲ್ಲವಗೆ ಆರ್ಜವ ಮಾಡುತಲ್ಯಾದ | ಬಡವರಿಗೆ ನೋಯ... 276079 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಯತಿವೇಷವ ತಾಳಿ ದೇಶಭ್ರಷ್ಟನಾಗಿ ! ಕಾಶಿಯ ಕ್ಷೇತ್ರಕ್ಕೆ ಹೊರಟಿತು ಮನಸು | ಕಾಶಿಯ ದಾರಿಯೊಳು ವೇಶ್ಯಗೆ ಮೆಚ್ಚಿ | ಕೇಶವ ನಿಮ್ಮನು ಮರೆಯಿತು ಮನಸು ಬಲ್ಲವಗೆ ಆರ್ಜವ ಮಾಡುತಲ್ಯಾದ | ಬಡವರಿಗೆ ನೋಯಿಸಿ ನುಡಿಯುತಲ್ಯಾದ || ಗುರುಲಿಂಗ ಜಂಗಮ ಚರಣವ ನಂಬದೆ | ಅಡವಿಯಲ್ಲಿ ಚರಿಸ್ಯಾಡುತಲ್ಯಾದ || 6 || 11 & 11 Q ನಾಲಿಗೆಗೆ ವಿಧಿಸಲಾದ ನೈತಿಕ ಹಾಗೂ ಪಾರಮಾರ್ಥಿಕ ಔಷಧ ( ರಾಗ- ಜೋನಪುರಿ, ತಾಲ- ಝಸತಾಲ) ಸುಮ್ಮನಿರು ನಾಲಿಗೆ ಸುಮ್ಮನಿರು ನಾಲಿಗೆ | ಸಾಕ್ಷಾತ ನಾಲಿಗೆ ಸುಮ್ಮನಿರು ಸುಮ್ಮನಿದ್ದರೆ ನೀನು ಬ್ರಹ್ಮನಾಗುವಿ | ಸುಮ್ಮನಿದ್ದೆನೆಂಬ ಹಮ್ಮನಳಿದು ಪರರ ನಿಂದಿಸಬೇಡ ಪರವಸ್ತು ಮರೆಯಬೇಡ | ಪರತರಾನಂದವನು ಬಿಡಲೆ ಬೇಡ || ಪರರು ಎನ್ನವರೆಂದು ಭೇದ ಮಾಡಲಿ ಬೇಡ | ಪರಕೆ ಪರತರವಾದ ಪರವಸ್ತು ನೀನು ಕೋಪ ತಾಪವು ಬೇಡ ಕೋಪದವರೆನಬೇಡ | ಕೋಪದವರ ಕೂಡ ಸಹವಾಸ ಬೇಡ || || ಅ. ಪ. || ⠀ ⠀ ಕೋಪತಾಪವ ಮೀರಿ ಸೋಪಾನವನೇರಿ | ಭೂಪ ಚಿದ್ರೂಪನು ತಾನೆ ಆಗಿ || 3 || ಶಾಂತ ಗುರುವಿನ ಹೊಂದಿ ಶಾಂತಗಣದೊಳಗಾಡಿ | ಶಾಂತನಾಗಿದ್ದರೆ ಶಾಂತಿಯಹುದು || ಶಾಂತ ನಿರುಪಾಧಿಯ ಕಾಂತಿಯೊಳು ಮನ ಮುಳುಗಿ | ಶಾಂತ ಸರ್ವಾಂತರ್ಯಾಮಿಯಾಗಿ || Q ||<noinclude></noinclude> 6ndswt1930q91cl86a3mh12q8a7mym8 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೬ 104 98999 276080 2024-10-26T07:09:38Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಒಂದು ಹಿರಿದಾದ ಕೃಷಿ ರೂಪಕ ( ರಾಗ - ಸುರಟ, ತಾಲ- ದಾದರಾ ) ಶರೀರವೆಂಬುವ ಹೊಲನ ಹಸನ ಮಾಡಿ | ಪರತತ್ವ ಬೆಳೆಯನು ಬೆಳೆದುಣ್ಣಿರೋ ಶಮ ದಮ ಎಂದೆಂಬ ಎರಡೆತ್ತುಗಳ ಹೂಡಿ | ವಿಮಲ ಮಾನಸವ ನೇಗಿಲನೆ ಮಾಡಿ || ಮಮಕ... 276080 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಒಂದು ಹಿರಿದಾದ ಕೃಷಿ ರೂಪಕ ( ರಾಗ - ಸುರಟ, ತಾಲ- ದಾದರಾ ) ಶರೀರವೆಂಬುವ ಹೊಲನ ಹಸನ ಮಾಡಿ | ಪರತತ್ವ ಬೆಳೆಯನು ಬೆಳೆದುಣ್ಣಿರೋ ಶಮ ದಮ ಎಂದೆಂಬ ಎರಡೆತ್ತುಗಳ ಹೂಡಿ | ವಿಮಲ ಮಾನಸವ ನೇಗಿಲನೆ ಮಾಡಿ || ಮಮಕಾರವೆಂದೆಂಬ ಕರಿಕೆಯನು ಕಳೆದು | ಸಮತೆ ಎಂದೆಂಬ ಗೊಬ್ಬರವ ಚೆಲ್ಲಿ ಗುರುವರನುಪದೇಶವೆಂಬ ಬೀಜವ ಬಿತ್ತಿ | ಮೆರೆವ ಸಂಸ್ಕಾರ ಸೃಷ್ಟಿಯ ಬಲ || ಅರಿವೆಂಬ ಪೈರನ್ನು ಬೆಳೆಸುತೆ, ಮುಸುಕಿರ್ದ | ದುರಿತ ದುರ್ಗುಣವೆಂಬ ಕಳೆಯ ಕಿತ್ತಿ ಸ್ಥಿರಮುಕ್ತಿ ಎಂದೆಂಬ ಧಾನ್ಯವ ಬೆಳೆದುಂಡು | ಪರಮಾನಂದದೊಳು ದಣ್ಣನೆ ದಣಿದು || ಗುರುಸಿದ್ಧನಡಿಗರಗುತ್ತೆ ಭವವೆಂಬ ಬರುವನು ತನ್ನ ಸೀಮೆಗೆ ಕಳುಹಿ || ಪ || 10 11 || & 11 ಮೊದಲಿನ ಭಕ್ತಿಯು ಬದಲಾಗದಿರಲಿ ! ಆತ್ಮಾನಂದವು ಲಭಿಸುವವರೆಗೆ ಸಾಧನವು ಎಡೆಬಿಡದೆ ನಡೆಯಲಿ ! ( ರಾಗ-ದೇಸ, ತಾಲ-ದಾದರಾ ) ತಿಳಿಯಬೇಕು | ನಿಜಸುಖದ ನಿಲಯ ಸಹಜಾನಂದ ಮೊದಲ ಭಕ್ತಿಗೆ | ಬದಲವಾಗದೆ | ಮಧುರ ವಚನದಲ್ಲಿ ಮನಸು | ಕದಲದೇಕ ರೂಪವಾಗಿ ಸುಳುವು ಅರಿವು | ಒಳಗೆ ಮರೆವುದೆ || ಜಳಜಳಾದ ಮನದಿ ಬ್ರಹ್ಮ- | ನಾಳದೊಳಗೆ ಸತ್ಯವನ್ನು ಗುರುಬೋಧದಿ | ಅರಿತು ಮುದದಿ || ಪರಿಪರಿಯ ವಿಕಲ್ಪ ನಳಿದು | ನಿರುಪಾಧಿಯಾಗುವ ಕೀಲ || 6 || 110 || || 2 ||<noinclude></noinclude> jomxv3sghi10ziz70e0ch0xosluz2aa ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೭ 104 99000 276081 2024-10-26T07:09:58Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ದೈವಿ ಪರಷವು ಅಂತರಂಗದಲ್ಲಿ ನೆಲೆಸಿರುವಾಗ ಬೇರೆಯವರೆದುರು ಸೆರಗೊಡ್ಡು ಎದೇಕಯ್ಯ? ( ರಾಗ-ದೇಸ, ತಾಲ-ದೀಪಚಂದಿ ) ಏನು ಹೇಳಲಿ ಎನ್ನ ಅಜ್ಞಾನವಶದಿಂದ | ನಾನು ನನ್ನನು ಮರೆತೆ ನಾನಾ ಜನ್ಮವ ತಿರುಗಿ ತ... 276081 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ದೈವಿ ಪರಷವು ಅಂತರಂಗದಲ್ಲಿ ನೆಲೆಸಿರುವಾಗ ಬೇರೆಯವರೆದುರು ಸೆರಗೊಡ್ಡು ಎದೇಕಯ್ಯ? ( ರಾಗ-ದೇಸ, ತಾಲ-ದೀಪಚಂದಿ ) ಏನು ಹೇಳಲಿ ಎನ್ನ ಅಜ್ಞಾನವಶದಿಂದ | ನಾನು ನನ್ನನು ಮರೆತೆ ನಾನಾ ಜನ್ಮವ ತಿರುಗಿ ತಿರುಗಿ | ಹೀನ ಮನೆ ಸಂಸಾರಕಾಗಿ || ಶ್ವಾನಸಕರನಂತೆ ಮನೆಮನೆ | ನವಿಲ್ಲದೆ ವ್ಯರ್ಥ ತಿರುಗಿದೆ ೧೭. || ಪ || || ಅ.ಪ. || ಆತ್ಮನ ಅರಿಯದೆ ಯಾತಕು ಬರದಾದ ಭೂತಪಂಚತತ್ವ ದೇಹವನು ಮೆಚ್ಚಿ | ಏತರಿಂದಲಿ ಬಂದಿವೆನಗಿದು | ಜೀವಶಿವರೆಂದೆಂಬ ಭೇದವು | ಮಾತುಮಾತಿಗೆ ಶಬ್ದ ಸೂತಕ | ಪಾತಕದೊಳು ಮುಳುಗಿಹೋದೆ || ೧ || ಭಾನುಕೋಟಿಪ್ರಕಾಶ ಬ್ರಹ್ಮಾಂಡ ತುಂಬಿ | ತಾನಾಗಿ ಹೊಳೆಯುತದೆ || ಏನು ಕಾರಣ ಕಾಳಕತ್ತಲೆ | ಮಾಯಮುಸುಕು ತೋರಗೊಡದಿದು | ನಾನು ನೀನೆಂದೆಂಬ ಭೇದವು | ಏನು ಕಾರಣ ತಿಳಿಯಗೊಡದಿದು 0 || G || ಪರುಷವು ತನ್ನಲ್ಲಿ ಪರಿಪೂರ್ಣವಿರಲಿಕ್ಕೆ! ಸೆರಗೊಡ್ಡಿ ಬೇಡುವರೆ ಬಡವರನು || ಹರನು ತಾನೆಂದಾದ ಮೇಲೆ | ನರರ ಬಾಧೆಗೆ ಸಿಲುಕುದೇಕೆ | ಗುರು ಕೂಡಲೂರೇಶನ | ಕರುಣವಿಲ್ಲದೆ ಚರಣ ಕಾಣವು || a || ಕ. ಜೆ. ೩<noinclude></noinclude> cmkflmvj07g4qcbz399ggf13df8payt ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೮ 104 99001 276082 2024-10-26T07:10:16Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ಐದು ಸದ್ಗುರುವಿನ ಸ್ವಭಾವ ದೇವ ಸದ್ಗುರುಗಳ ಅಭೇದ ( ರಾಗ-ಭೂಪ, ತಾ-ದೀಪಚಂದಿ ) ದೇವನಲ್ಲವೇನೋ | ಸದ್ಗುರು ಮಹಾ- | ದೇವನಲ್ಲವೇನೋ ಆದಿಯೊಳು ಸಿದ್ದರು | ಹೋದ ದಾರಿಯ ತೋರಿ | . ಭೇದವ ಬಿಡಿಸಿದ | ಸಾಧುಮೂರುತಿ ಗುರು || ಅ.ಪ. ||... 276082 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ಐದು ಸದ್ಗುರುವಿನ ಸ್ವಭಾವ ದೇವ ಸದ್ಗುರುಗಳ ಅಭೇದ ( ರಾಗ-ಭೂಪ, ತಾ-ದೀಪಚಂದಿ ) ದೇವನಲ್ಲವೇನೋ | ಸದ್ಗುರು ಮಹಾ- | ದೇವನಲ್ಲವೇನೋ ಆದಿಯೊಳು ಸಿದ್ದರು | ಹೋದ ದಾರಿಯ ತೋರಿ | . ಭೇದವ ಬಿಡಿಸಿದ | ಸಾಧುಮೂರುತಿ ಗುರು || ಅ.ಪ. || ನರಜನ್ಮದೊಳಗೆ ಬಂದು | ಪ್ರಪಂಚದ | ಕಡಲಮಧ್ಯದಲಿ ನಿಂದು || ಅರಿತು ಮರೆತು ಒಮ್ಮೆ | ಗುರುವೆಂದು ನೆನೆದರೆ | ಗುರುತಿಟ್ಟು ಅವರಿಗೆ | ಪರತತ್ವ ತೋರಿದ || 0 || ಆಶಾಪಾಶವ ಬಿಡಿಸಿ | ಮಾಡಿದ ಬಹು | ದೋಷಕರ್ಮವ ಕೆಡಿಸಿ || ನ್ಯಾಸಧ್ಯಾಸದಿ ಜಪ | ಮಾಡೆಂದು ಬೋಧಿಸಿ | ಪ್ರಕಾಶ ತೋರಿದ | ಈಶ ಮಹೇಶನು || 9 |! ಭಕ್ತಿಭಾವವ ನೋಡದೆ | ನಂಬಿದವರಿಗೆ | ಮುಕ್ತಿಯ ಪಾಲಿಸುವ || a || ಕರ್ತು ಸದ್ಗುರು ಭವ- | ತಾರಕ ದೇವನು | 0 ಪ್ರತ್ಯಕ್ಷನಾದಂಥ | ಪರಬ್ರಹ್ಮರೂಪನು 5 ಸದ್ದು ರುವಿನ ಅನುಗ್ರಹದ ರೀತಿ-ಪರಿಣಾಮಗಳು ( ರಾಗ-ಕಾಫಿ, ತಾಳ-ಕೇರವಾ ) ಎಂಥಾ ಗಾರುಡಿಗಾ ಸದ್ಗುರು ಗುರುವಿನ ನಂಬಿ ನಾ ಗುಣವೆಲ್ಲ ಕಳಕೊಂಡೆ ಶರಣು ಮಾಡೆಂದರೆ ಶರಣು ಮಾಡಲು ಪೋದೆ 1 ಕರದೊಳು ಇದ್ದ ನಿಜಭೂತಿ || ಶಿರದ ಮೇಲೆ ಎನ್ನ ಮೈ ಮೇಲೆ ಎಳೆಯಲು | ಶರೀರವ ಮರೆತು ನಾ ಸಾಕ್ಷಿಯಾದೆನು CO || ಅ.ಪ. || 0<noinclude></noinclude> fat89siw077hzbxd7k6m2vfk9tsfw1k ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೯ 104 99002 276083 2024-10-26T07:10:32Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಯಾರೂ ಇಲ್ಲದ ನೋಡಿ ಬೇರೆನ್ನ ಕರೆದೊಯ್ದು | ಮರಕಿವಿಯೊಳು ಇಟ್ಟು ಮಂತ್ರಿಸಿದ || ನಾರಿ ಬದುಕು ಮನೆ ಮಕ್ಕಳನೆಲ್ಲ | ಸೇರಿ ಸೇರದಂತೆ ಮಾಡಿದನೇ ಗುರು ಭವಗೇಡಿ ಕುಲಗೇಡಿ ಸಂಗಗೇಡಿಯಾದೆ | ಇವರ ವಿಶ್ವಾ... 276083 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಯಾರೂ ಇಲ್ಲದ ನೋಡಿ ಬೇರೆನ್ನ ಕರೆದೊಯ್ದು | ಮರಕಿವಿಯೊಳು ಇಟ್ಟು ಮಂತ್ರಿಸಿದ || ನಾರಿ ಬದುಕು ಮನೆ ಮಕ್ಕಳನೆಲ್ಲ | ಸೇರಿ ಸೇರದಂತೆ ಮಾಡಿದನೇ ಗುರು ಭವಗೇಡಿ ಕುಲಗೇಡಿ ಸಂಗಗೇಡಿಯಾದೆ | ಇವರ ವಿಶ್ವಾಸದ ಫಲದಿಂದಾಗಲೆ || ಇವರ ಮೇಲೆ ಎನ್ನ ವ್ಯಾಕುಲ ಹತ್ತಲು | ವ್ಯವಹಾರವೆಂಬುದು ಎಡವಟ್ಟಾಯಿತು ಮಂತ್ರಿಸಿದಾಗಳೆ ಮರುಳು ಎನ್ನ ಮನ | ಮಂತ್ರ ತಂತ್ರಕೆ ಬಗ್ಗಿ ತಲ್ಲ || ಮಂತ್ರದ ಮಹಿಮೆಯ ಮಹಾಮಹಿಮನ ಕೈ | ಮಾಂತ್ರಿಕರೊಳು ಬಲು ದೊಡ್ಡವನೆ ಗುರು CF || 9 || || 2 || || || ಇವರ ನಂಬಿದ ಮೇಲೆ ಇವರಂತೆ ಆಗದೆ | ಭುವನಕ್ಕೆ ಬಂದದ್ದು ಫಲವೇನು || ವಿವರಿಸಿ ಹುರುಳಿಲ್ಲ ಹೇಳು ಕೇಳುವದೇನು | ಭುವನ ರಕ್ಷಕ ಚಿದಾನಂದ ತಾನಾದನು || 8 || a ವಿಷಯಸರ್ಪದ ವಿಷವನ್ನು ಕಳೆವ ಸದ್ದು ರು [ ರಾಗ-ನೋಡಿ (ಕರ್ನಾಟಕಿ), ತಾಲ-ದಾದರಾ] ಹಾವು ತುಳಿದನೆ ಮಾನಿನಿ ಹಾವು ತುಳಿದು ಹಾರಿ ನಿಂತೆ | ಜೀವ ಕಳವಳಗೊಂಡಿತು ಗೆಳತೀ | ಭಾವ ಸ್ಮೃತಿಯು ತಪ್ಪಿ ಮನದಿ | ದೇವ ನೀನೆ ಗತಿಯು ಎಂದೆ B ಹರಿಗೆ ಹಾಸಿಗೆಯಾದ ಹಾವು | ಹರನ ಕೊರಳೊಳಿರುವ ಹಾವು || ಧರೆಯ ಹೊತ್ತು ಮೆರೆವ ಹಾವಿನ | ಶಿರವ ಮೆಟ್ಟಿದೆ ಶಿವನ ದಯದಿ || ೨ || ಬೋಧಾನಂದದಿಂದ ಬರುವ | ಹಾದಿಯಲ್ಲಿ ಮಲಗಿ ಇರುವ || ನಾದದಿಂದ ಧ್ವನಿಯ ಕೊಡುವ | ಮೋದರೂಪ ಕ್ರೋಧರೂಪ ಘೋರತರದ ಉರಗವದರ | ಕೊರೆಹಲ್ಲು ಮುರಿದರಿಂದ | || a || ಸತ್ಯ ಶಿಶುನಾಳಧೀಶನ ಸೇವಕಗೆ ಕತ್ತಲೆಯಲ್ಲಿ ಕಾಲಿಗೆ ಸುತ್ತಿಕೊಂಡ || ೪ ||<noinclude></noinclude> r7uy2nn92vmwvqdzlm8y0nkmox8f88g ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೦ 104 99003 276084 2024-10-26T07:10:49Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 30 ಕನ ಡ ಪರಮಾರ್ಥ ಸೋಪಾನ ಗೊರಲಿಗಳ ಗುಂಪಿನಿಂದ ತಿನ್ನಲ್ಪಟ್ಟ ವಿಷಯಸರ್ಪ ( ರಾಗ-ದೇಸ, ತಾಲ-ಕೇರವಾ) ಹಾವು ಕಚ್ಚಿತವಾ| ದಾರಿಗೆ ತಿಳಿಯದಿದರ ಮಹಿಮಾ ಹಾವಿನ ವಿಷವು ಎನಗೇರಿತವಾ| ದೇವರ ಕರುಣೆಯಿಂದ ನಾನುಳಿದೆನವಾ || ಅ.ಪ. || ಮೀರ... 276084 proofread-page text/x-wiki <noinclude><pagequality level="1" user="~aanzx" /></noinclude>30 ಕನ ಡ ಪರಮಾರ್ಥ ಸೋಪಾನ ಗೊರಲಿಗಳ ಗುಂಪಿನಿಂದ ತಿನ್ನಲ್ಪಟ್ಟ ವಿಷಯಸರ್ಪ ( ರಾಗ-ದೇಸ, ತಾಲ-ಕೇರವಾ) ಹಾವು ಕಚ್ಚಿತವಾ| ದಾರಿಗೆ ತಿಳಿಯದಿದರ ಮಹಿಮಾ ಹಾವಿನ ವಿಷವು ಎನಗೇರಿತವಾ| ದೇವರ ಕರುಣೆಯಿಂದ ನಾನುಳಿದೆನವಾ || ಅ.ಪ. || ಮೀರಿದ ಹಾವಮ್ಮಾ ಮೂರು ಲೋಕ ನುಂಗಿತವಾ|| ಬೇಸರಿಲ್ಲದೆ ಮಾಡ್ಯಾನ ಬ್ರಹ್ಮಾ ನೆನಪಾದರೆ ಮೈ ಅಂಬುದು ಮೂರು ಮೊಳದ ಹುತ್ತು | ಒಂಭತ್ತು ರಂಧ್ರಗಳದತ್ತು ಯಾವ ರಂಧ್ರದಿಂದ ಹಾವು ಸೇರಿತು | ಒಳಗಿನ ಗೊರಲಿ ಜುಮಾ || ೧ || ಎತ್ತ ಹೋಯಿತು || ೨ || ಬಾಲ ಮೇಲಕೆತ್ತಿ | ಭೋರೆಂಬ ಶಬ್ದ ನುಡೀತೈತಿ || ಮಣಿಪುರ ಕಮಲದಲಿ ಮಲಗಿಕೊಂಡೈತಿ | ಬೆಲೆಯಿಲ್ಲದ ರತ್ನ ಅದರ ಹೆಡೆಯೊಳಗೈತಿ || ೩ || ಗೊಲ್ಲನ ಹುಡುಕಿದೆವಾ | ಗೊಲ್ಲನು ಮಂತ್ರ ಹೇಳಿದ ಪ್ರಣಮ || ಗೊಲ್ಲನ ಮಂತ್ರಕ್ಕೆ ಅಂಜಿತು ಹಾವಾ | ವಿಷದ ಕೊಳವಿ ತೊಳೆದು ಹೊದಿರೋ ಕರ್ಮಾ ಸಣ್ಣ ಗೊರಲಿ ಬಂತು | ಹಾವಿನ ಹುತ್ತು ಸಹಿತ ನುಂಗಿತು || ಯಾವ ಸ್ಥಾನದಲ್ಲಿ ಆ ಗೊರಲಿ ಇತ್ತು . ಮೂಲ ಪ್ರಣವ || 8 || ಬಲ್ಲವಗೇ ಗೊತ್ತು || ೫ || ಗೊರಲಿ ಹಾವಿಗೆ ನುಂಗಿ | ಧರೆಯೊಳು ಮೆರೆಯುವ ಶಿರಸಂಗಿ || ದೊರೆ ಶ್ರೀಗುರು ಬಲಭೀಮ ಯೋಗಿ) ಆತನ ಚರಣಕೆರಗಿದರೆ ಸ್ವರ್ಗಕೆ ಸಾಗೀ || ೬ || ಕರುಣವ ದಯಪಾಲಿಸಲು ಗುರುವಿಗೆ ಕರುಳಿನ ಕರೆ ! ( ರಾಗ-ತಿಲಂಗ, ತಾಲ-ತ್ರಿತಾಲ ) ಕರುಣಿಸೋ ಗುರು ಎನಗೆ ಅರಗಳಿಗೆ ನೀ ಎನ್ನ ಹೃದಯದಿಂದಗಲದ ಹಾಂಗೆ ಕಣ್ಣಿನೊಳಗೆ ನಿನ್ನ ಕಾಣದಿದ್ದರೆ ಪೂರ್ಣ | ಪ್ರಾಣ ನಿಲ್ಲದೋ ನಿಮಿಷಾರ್ಧವಿಲ್ಲಿ |<noinclude></noinclude> t7kactix8bbh3e7anq3l9bm0n441k5h ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೧ 104 99004 276085 2024-10-26T07:11:22Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಕ್ಷಣಕ್ಷಣಕ್ಕೊದಗಿ ನೀ ನ ತೋರದಿದ್ದರೆ | ತನು ವಿಕಳಿತವಾಗಿ ಕ್ಷೀಣ ಹೊಂದುವದೋ ಬೇಡುವದೊಂದೆ ನಾ ಬಿಡದೆ ನಿಜರೂಪವ | ರೂಢಿಯೊಳಗೆ ದೃಢ ನಿಶ್ಚಯದಿ || ಎಡಬಲ ನೋಡದೆ ಕಡಲು ಹೊಕ್ಕಿಹೆ ನಿನ್ನ | ಕಡೆಗಾಣ... 276085 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಕ್ಷಣಕ್ಷಣಕ್ಕೊದಗಿ ನೀ ನ ತೋರದಿದ್ದರೆ | ತನು ವಿಕಳಿತವಾಗಿ ಕ್ಷೀಣ ಹೊಂದುವದೋ ಬೇಡುವದೊಂದೆ ನಾ ಬಿಡದೆ ನಿಜರೂಪವ | ರೂಢಿಯೊಳಗೆ ದೃಢ ನಿಶ್ಚಯದಿ || ಎಡಬಲ ನೋಡದೆ ಕಡಲು ಹೊಕ್ಕಿಹೆ ನಿನ್ನ | ಕಡೆಗಾಣಿಸೋ ಎನ್ನೊಡೆಯನೆ ಪಿಡಿದು ಕೈ ಸುತ್ತು ಸುಳಿಯುತಲೆನ್ನ ಚಿತ್ತದಿಂದಗಲದೆ | ನಿತ್ಯವಾಗಿರೋ ಹೃತ್ಕಮಲದಲಿ || ಹೆತ್ತ ತಾಯಿಯೋಪಾದಿ ತುತ್ತು ತುತ್ತಿಗೆ ಒಮ್ಮೆ | ಹತ್ತರಿದ್ದು ಸಂತತ ಸಲಹೆ ಮಹಿಪತಿಗೆ ಸದ್ಗುರುವಿನ ಕರುಣಕ್ಕೆ ಎಣೆಯೇ ಇಲ್ಲ ( ರಾಗ-ದರಬಾರಿ, ತಾಲ-ದೀಪಚಂದಿ ) ಗುರುರಾಯನಂಥ ಕರುಣಾಳು | ಕಾಣೆ ನಾ ಈ ಜಗದೊಳು ಏನೆಂದರಿಯದ ಪಾಮರ ನಾನು | ಜ್ಞಾನಭಕುತಿವೈರಾಗ್ಯರಹಿತನು | ತಾನೊಲಿದೀಗೆನ್ನ ನುದ್ಧರಿಸಿದನು ಮಾಡುವ ಘನ, ತುಸು ತಪ್ಪನು ಹಿಡಿವ | ಬೇಡಿಸಿಕೊಳ್ಳದೆ ನೀಡುತ ಪೊರೆವ | ರೂಢಿಗಾದನೋ ಇಹಪರದೊಡೆಯ ತನ್ನ ವನೆನಿಸಿದ ಮಾತಿಗೆ ಕೂಡಿ | Bo 30 || G || || Q || || || || 9 || ಮನ್ನಣೆ ಇತ್ತನು ಅಭಯವ ನೀಡಿ | ಇನ್ನೇನು ಹೇಳಲೀ ಸುಖ ನೋಡಿ || a || ತನ್ನನುಭವ ನಿಜ ಮಾತಿನ ಗುಟ್ಟು | ಎನ್ನೊಳು ಸರಿ ಘನ ತೋರಿಸಿ ಕೊಟ್ಟು | ಧನ್ಯನ ಮಾಡಿದ ಸೇವೆಯೊಳಿಟ್ಟು || 3 | ತಂದೆ ತಾಯಿ ಬಂಧುಬಳಗೆನಗಾಗಿ | ಇಂದು ಸದ್ಗುರು ಮಹಿಪತಿ ಮಹಾಯೋಗಿ | ಕಂದನ ಸಲಹೋ ನೀ ಲೇಸಾಗಿ || 8 ||<noinclude></noinclude> bjoi6i96azn3omcvus5mjdgavtlo8sj ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೨ 104 99005 276086 2024-10-26T07:11:56Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 66 ಕನ್ನಡ ಈ ಪರಮಾರ್ಥ ಸೋಪಾನ 2 ಸದ್ಗುರು ಕೃಪೆಯಿಂದುಂಟಾಗುವ ಯೌಗಿಕ ಪರಿಣಾಮಗಳು (ರಾಗ- ಖಮಾಜ್, ತಾಲ-ಕೇರವಾಗಿ ಮಂಗಲವಾಗಿಹುದು ಸದ್ದು ರುವಿಗೆ | ಕಂಗಳ ಕೊನೆಯಲಿ ಥಳ ಥಳ ಹೊಳೆಯುವ ತಿಂಗಳ ಬೆಳಕಿನ ತಿಳಿರಸ ಉಕ್ಕುವ ಆರು ಚಕ್... 276086 proofread-page text/x-wiki <noinclude><pagequality level="1" user="~aanzx" /></noinclude>66 ಕನ್ನಡ ಈ ಪರಮಾರ್ಥ ಸೋಪಾನ 2 ಸದ್ಗುರು ಕೃಪೆಯಿಂದುಂಟಾಗುವ ಯೌಗಿಕ ಪರಿಣಾಮಗಳು (ರಾಗ- ಖಮಾಜ್, ತಾಲ-ಕೇರವಾಗಿ ಮಂಗಲವಾಗಿಹುದು ಸದ್ದು ರುವಿಗೆ | ಕಂಗಳ ಕೊನೆಯಲಿ ಥಳ ಥಳ ಹೊಳೆಯುವ ತಿಂಗಳ ಬೆಳಕಿನ ತಿಳಿರಸ ಉಕ್ಕುವ ಆರು ಚಕ್ರವ ಮೀರಿ | ಸೂಕ್ಷ್ಮ | ದ್ವಾರದೊಳಗೆ ಸೇರಿ || 216 ಏರಿ ಸಾಸಿರದಳ ಪದ್ಮಸಿಂಹಾಸನದಿ | ಭೂರಿ ಬ್ರಹ್ಮಾನಂದ ಪದವಿಯ ಸೇರುವ ವಿರತಿ ಎಂಬುವ ಬತ್ತಿ | ಭಕ್ತಿ | ಎರಕವಾಗಿಹ ಸುಧೃತ || ಎರಡು ಒಂದಾಗಲು ಅರಿವೆಂಬ ಜ್ಯೋತಿಯು | ಉರಿಯಲು ತಾಮಸ ಕತ್ತಲೆ ಕಳೆದ ರವಿಶಶಿಗಳ ತೆರದಿ | ಬೆಳಗುವ | ಪ್ರವಿಮಲ ಚಿತ್ಕಳೆಯ || ಒಳಹೊರಗೆರಡೆಂಬುವದನೇ ಅರಿಯದೆ | ಅವಿರಳ ಗುರುಮಹಾಲಿಂಗನ ತೇಜದ || ಅ.ಪ. || || G || 1| 0 || || all<noinclude></noinclude> kzkpvzntm67avc9lsjjlvdfyrso6pqb ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೩ 104 99006 276087 2024-10-26T07:12:14Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ಆರು ಸದ್ಗುರುವಿನ ಕಾರ್ಯ ಸಮ ರುವಿನ ತತ್ವಜ್ಞಾನ ಹಾಗೂ ಮೂಲ್ಯ ಜ್ಞಾನ ವಿಷಯಕ ಲಕ್ಷಣಗಳು ( ರಾಗ-ಕಾಫಿ, ತಾಲ-ದಾದರಾ ) ಯೋಗಿ ಬಂದನೋ ಶಿವಯೋಗಿ ಬಂದನೋ ಭೋಗ ಸುಖವ ತ್ಯಾಗ ಮಾಡಿ | ಆಗಮೋಕ್ತದಿಂದ ನಡೆವ ತತ್ವಮಸಿ ಮಹಾವಾ... 276087 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ಆರು ಸದ್ಗುರುವಿನ ಕಾರ್ಯ ಸಮ ರುವಿನ ತತ್ವಜ್ಞಾನ ಹಾಗೂ ಮೂಲ್ಯ ಜ್ಞಾನ ವಿಷಯಕ ಲಕ್ಷಣಗಳು ( ರಾಗ-ಕಾಫಿ, ತಾಲ-ದಾದರಾ ) ಯೋಗಿ ಬಂದನೋ ಶಿವಯೋಗಿ ಬಂದನೋ ಭೋಗ ಸುಖವ ತ್ಯಾಗ ಮಾಡಿ | ಆಗಮೋಕ್ತದಿಂದ ನಡೆವ ತತ್ವಮಸಿ ಮಹಾವಾಕ್ಯ | ತಮ್ಮ ತಿಳಿಸಿ ಮಾಯ ಮೋಹ || ಕತ್ತಲೆಯ ಕಡಿದು ಚಿತ್ರ | ನಿತ್ಯದಲ್ಲಿ ನಿಲಿಸುವಂಥ ತಮ್ಮ ತಾವು ಮರೆತು ಜನರು | ಹಮ್ಮಿನೊಳಗೆ ಬಿದ್ದರಿವರು || ಕರ್ಮವನ್ನು ಕಡಿದು ಪರ- 1 ಬ್ರಹ್ಮವನ್ನು ತೋರಿಸುವಂಥ || ಅ.ಪ. || 02 || 9 || ತಂದೆ ಭವತಾರಕನ ಪಾದ | ಹೊಂದಿದವರಿಗೆಲ್ಲ ಪರಮಾ- | ನಂದ ಪದವಿ ಕೊಟ್ಟು ದಯಾ | ಸಿಂಧು ಮುಕ್ತಿ ಪಡಿಸುವಂಥ 9 || Q || ದೇವ-ಗುರುಗಳಲ್ಲಿಯ ಅನನ್ಯ ಭಕ್ತಿಯು ನಿನ್ನನ್ನು ವಿಷಯದಾಸ್ಯದಿಂದ ಮುಕ್ತಗೊಳಿಸುವದು ( ರಾಗ-ಭೂಪ, ತಾಲ-ಕೇರವಾ ) ಶಬಾಸ ಗಬರು ದರೋಡೆ ಬರತದ 1 ಅಬಬ ನೋಡಿದರ ಅರ್ಭಾಟ ಸಬದ ಐತಿದು ಸಾಧುರ ಪುಣ್ಯ | ಶುಭ ನುಡೀತದ ಶಕುನದ ಹಕ್ಕಿ 192 || ಅ.ಪ. ||<noinclude></noinclude> a30c1rxhe0o9c5bqkjqfy0fla5mpelh ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೪ 104 99007 276088 2024-10-26T07:12:57Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 28 ಕನ್ನಡ ಪರಮಾರ್ಥ ಸೋಪಾನ ಐದು ಮಂದಿ ನೆಲಗಳ್ಳರು ಕೂಡಿ | ಸಾರಿ ಆತ್ಮದಲ್ಲಿ ಸೇರುವರು || ಐಕ್ಯದಿಂದ ಶ್ರೀ ಗುರುವಿನ ನೆನೆದರೆ | ಐದು ಮಂದಿ ಬಿಟ್ಟೋಡುವರು ಎಂಟು ಹತ್ತು ಮಂದಿ ಬಂಟರು ಕೂಡಿ | ಮುತ್ತಿಗೆ ಹಾಕಿ ನಿನ್ನ ಕೆಡಹು... 276088 proofread-page text/x-wiki <noinclude><pagequality level="1" user="~aanzx" /></noinclude>28 ಕನ್ನಡ ಪರಮಾರ್ಥ ಸೋಪಾನ ಐದು ಮಂದಿ ನೆಲಗಳ್ಳರು ಕೂಡಿ | ಸಾರಿ ಆತ್ಮದಲ್ಲಿ ಸೇರುವರು || ಐಕ್ಯದಿಂದ ಶ್ರೀ ಗುರುವಿನ ನೆನೆದರೆ | ಐದು ಮಂದಿ ಬಿಟ್ಟೋಡುವರು ಎಂಟು ಹತ್ತು ಮಂದಿ ಬಂಟರು ಕೂಡಿ | ಮುತ್ತಿಗೆ ಹಾಕಿ ನಿನ್ನ ಕೆಡಹುವರು | ಸತ್ಯನಾದ ಶ್ರೀಗುರುವಿನ ನೆನೆದರೆ | ಹತ್ತು ಮಂದಿ ಬಿಟ್ಟೋಡುವರು ನೋಡಿ ಒಗಿಯೊ ಕಾಡವು ಹುಲಿಗಳು | ಬೇಡಿದ ಪದಾರ್ಥ ದೊರಕುವದು || || 9 || ಕೂಡಿ ಭಜಿಸಿ ಶ್ರೀ ಚಿದಾನಂದನ | ಮೂಲ ಮಂತ್ರ ಪ್ರಣವ ದೊರಕುವದು || a || & ಸದ್ದು ರುವಿನ ಕರುಣಾಗ್ನಿ ಜೀವನದಲ್ಲಿಯ ಒಂಟಿ, ಜೋಡು ಹಾಗೂ ಮಮುಖ ಮುಳ್ಳುಗಳನ್ನು ಸುಡಬಲ್ಲದು ( ರಾಗ-ಭೂಪ, ತಾಲ-ಕೇರವಾ) ಏನ ಭರಾ ನಟಿತಪ್ಪಾ ಎನಗೆ ಮುಳ್ಳಾ | ಬ್ಯಾನಿ ತಾಳ ಹೇಳಲಾರೆನಪ್ಪಾ ಇದರ ಘೋಳಾ ಹಡ್ಡಿ ನೋಡಿದರ ಸಿಗವಲ್ಲದಂಥಾ ಮಾಯಾದ ಮುಳ್ಳಾ | ಇದು ಬಹಳ ಮಂದಿಗೆ ಮುರಿದು ಮಾಡೆತೆಪ್ಪಾ ಮಳ್ಳಾ ಮಾನಾಭಿಮಾನ ಎರಡು ಜೋಡ ಮುಳ್ಳಾ | ಎನ್ನ ಕಿವ್ಯಾಗ ಬಡಿದು ಕಂಡಿತಪ್ಪಾ ಜಿಹ್ವಾಳಾ || ಸಾರಾರಾ ವಿಷವೇರಿ ಅಂಗಾಲಾ | ತಲ್ಯಾಗ ಜುಮ್ಮ ಹಿಡಿದು ಅಳಕಿತಪ್ಪಾ ನಾಭಿಸಲಾ ಸ್ವಾದರುಚಿವೆಂಬೆರಡು ಜೋಡಮುಳ್ಳಾ 1 || ಅ.ಪ. || || || ಇವು ಬಹಾಳ ಮಂದಿಗು ಮುರಿದು ವಾಡ್ಯಾವಪ್ಪಾ ಘೋಳಾ || ನಾಲಗಿಯೊಳಗ ಮುರದೀತಪ್ಪಾ ಬ್ಯಾಲದ ಮುಳ್ಳಾ | ಎನ್ನ ಹೊಟ್ಟೆಯೊಳಗ ಉರುಪ ಬಿಟ್ಟಿದೆಯಂಥಾ ಕಾಳಾ ಹೆಣ್ಣು ಹೊನ್ನು ಮಣ್ಣು ಇವು ಮೂರು ಮುಳ್ಳಾ | ಎನ್ನ ಕಣೋಳು ಚುಚ್ಯಾವಪ್ಪಾ ಎಂಥಾ ಕಾಳಾ || ಎಲ್ಲಾಕಿಂತಾ ದೊಡ್ಡು ಇವು ಡೊಣ್ಣೆ ಮುಳ್ಳಾ | || 9 || ಮೂರು ಲೋಕಕೆಲ್ಲಾ ಮುರಿದು ವಾಡ್ಯಾವಪ್ಪಾ ಬುಳ್ಳಾ || ೩ ||<noinclude></noinclude> hfv4gnu7w9irxjd61ihufqwv10zxkiu ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೫ 104 99008 276089 2024-10-26T07:13:10Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕ, ಸ, ೪ ಕನ್ನಡ ಪರಮಾರ್ಥ ನೋಪಾನ ಬೇಕಾಗಿ ಮುರಸಿಕೊಂಡಿರಪ್ಪಾ ನೀವು ಮುಳ್ಳಾ | ನಿಮ್ಮ ಕಾಲ ತಾವೇ ಬೇಲ್ಯಾಗ ಹೋಗಿ ಹಾಯ್ದಿಲ್ಲಾ || ತಾ ಮಾಡಿ ನನಗ ತಂದು ಇಟ್ಟು, ಕಾಳಾ | ನಾನು ಯಾರ ಮುಂದೆ ಹೇಳಲೆಪ್ಪಾ ನನ್ನ ಘೋಳಾ || ಲೈನ ದಾರಿಲಿ... 276089 proofread-page text/x-wiki <noinclude><pagequality level="1" user="~aanzx" /></noinclude>ಕ, ಸ, ೪ ಕನ್ನಡ ಪರಮಾರ್ಥ ನೋಪಾನ ಬೇಕಾಗಿ ಮುರಸಿಕೊಂಡಿರಪ್ಪಾ ನೀವು ಮುಳ್ಳಾ | ನಿಮ್ಮ ಕಾಲ ತಾವೇ ಬೇಲ್ಯಾಗ ಹೋಗಿ ಹಾಯ್ದಿಲ್ಲಾ || ತಾ ಮಾಡಿ ನನಗ ತಂದು ಇಟ್ಟು, ಕಾಳಾ | ನಾನು ಯಾರ ಮುಂದೆ ಹೇಳಲೆಪ್ಪಾ ನನ್ನ ಘೋಳಾ || ಲೈನ ದಾರಿಲಿ ನಾಯಿಟ್ಟು ನಂದ್ಯಾಳಾ | ಗುರು ಸಂಗತಿಲಿ ಸುಟ್ಟೇನಪ್ಪಾ ಇಷ್ಟು ಮುಳ್ಳಾ ೪ ಸದ್ಗುರುವು ಸಂಕಟಗಳಲ್ಲಿ ರಕ್ಷಿಸುವ * ರಾಗ-ಜಂಗಲಾ, ತಾಲ-ಕೇರವಾ) ಗುರುವೆ ನಿಮ್ಮ ಸ್ಮರಣೆಯ ನಾನು ಮರೆಯಲಾರೆನು ಮರೆಯಲಾರೆ ಮರೆಯಲಾರೆ ಮರೆತಿರಲಾರೆನು ಕಾಲಹರಣ ನೀಲಕಂಠ ಪಾಲಿಸೆನ್ನನು | ಬಾಲಕರಿಗೆ ಅಭಯ ಕೊಟ್ಟು ಸಲಹು ಶಂಕರನೇ ತನುವ ಮನವ ಧನವ ನಿಮಗೆ ಒಪ್ಪಿಸಿರುವೆನೋ | ಮನವ ನಿಮ್ಮ ಪಾದದಲ್ಲಿ ನಿಲ್ಲಿಸಿರುವೆನೋ ಬಂದ ದುರಿತ ದೂರವಾಡೋ ಇಂದು ಶಂಕರಾ | ತಂದೆ ಭಜಕ ಭಕ್ತಹರಳ-ದೋಷಪರಿಹಾರಾ ಧರೆಯೊಳು ಹಿರಿಯ ಹರಿದಾಸ ಪರಂದರದಾಸನೇ | ಮೆರೆಯುವ ದೊಡ್ಡ ಪೇಟ ಬಸವ ಗುರುವರ್ಯನೇ ಪ್ರಲೋಭನಗಳಿಂದ ಸದ್ಗುರು ಪರಾವೃತ್ತಗೊಳಿಸುವ 1 ( ರಾಗ-ಭೈರವ, ತಾಲ-ದೀಪಚಂದಿ) ಏನು ಅನ್ಯಾಯ ತಿಳಿಯದು ದೇವಾಧಿದೇವಾ | ಅನ್ಯಾಯ ಕ್ಷಮಿಸದೆ ಎನ್ನ ಒಪ್ಪಿಸಿಕೊಟ್ಟ ದೇವಾ ನಿಮ್ಮ ಬೋಧವ ಕೇಳಿ ಸಾರಾಸಾರ ವಿಚಾರದೊಳಗೆ ಆಗಿ | ನಿಮ್ಮ ಪುಣ್ಯದಿಂದ ಅನ್ಯಾಯ ನಾ ಮಾಡಿಲ್ಲ | ನ್ಯಾಯ ಅನ್ಯಾಯವು ನಿಮಗೆ ಒಪ್ಪಿತು ದೇವಾ ಎನ್ನ ಮಾಯಾ ಎನಗೆ ಶಸ್ತ್ರವನೆ ಹೊಡೆವ | ಸಮಯಕ್ಕೆ ಸಾಕ್ಷಾತ್ಕಾರದಲೆ ಸ್ವಾಮಿ ತಾನೆ ನಿಂತ | ಅವನ ಧ್ಯಾನ ಮಾಡೆಂದು ತಿಳಿಸಿ ಹೇಳಿದ ದೇವಾ ಉಮದಿ ಪ್ರಭು ನಿಮ್ಮ ಸುಳುವು ಸೂಕ್ಷ್ಮವನು ಕೂಡಿ | ನಿಮ್ಮ ಹೊರತು ನಾನಿನ್ಯಾರಿಗೆ ಉಸುರಲಿ ದೇವಾ 535 || 8 || || ಅ.ಪ. || || 0 || || 9 || || Q || lle ll ||0|| || 6 || || a ||<noinclude></noinclude> oc74j7eci84vfm9221jdywlji5zdzgs ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೬ 104 99009 276090 2024-10-26T07:13:21Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 32 ಕನ್ನಡ ಪರಮಾರ್ಥ ಸೋಪಾನ 2 ಸದ್ಗು ರುವು ಪೂರ್ಣ ಆತ್ಮರೂಪವನ್ನು ತೋರಿಸುವ ( ರಾಗ-ಬಿಲಾವಲ, ತಾಲ-ತ್ರಿತಾಲ) ಹ್ಯಾಂಗೆ ತೀರೀತು ನಿನ್ನುಪಕಾರ] ಇದು ಅಪರಂಪಾರ ಹ್ಯಾಂಗೆ ಹಿಂಗಿಸಲಿ ಜನ್ಮದ ಅವತಾರ | ಗುರುರಾಯಾ ಗಂಭೀರಾ ||ಅ.ಪ|| ಭ... 276090 proofread-page text/x-wiki <noinclude><pagequality level="1" user="~aanzx" /></noinclude>32 ಕನ್ನಡ ಪರಮಾರ್ಥ ಸೋಪಾನ 2 ಸದ್ಗು ರುವು ಪೂರ್ಣ ಆತ್ಮರೂಪವನ್ನು ತೋರಿಸುವ ( ರಾಗ-ಬಿಲಾವಲ, ತಾಲ-ತ್ರಿತಾಲ) ಹ್ಯಾಂಗೆ ತೀರೀತು ನಿನ್ನುಪಕಾರ] ಇದು ಅಪರಂಪಾರ ಹ್ಯಾಂಗೆ ಹಿಂಗಿಸಲಿ ಜನ್ಮದ ಅವತಾರ | ಗುರುರಾಯಾ ಗಂಭೀರಾ ||ಅ.ಪ|| ಭೂತಪಂಚಕ ದೇಹವನು ಧರಿಸಿ 1 ನೂತನ ತನು ತೊಡಿಸಿ | ದಾತ ಐದಕ್ಷರವನು ಕಲಿಸಿ | ಚಿತ್ತವ ತಾನೊಲಿಸಿ | ಇತರ ಭಯವ ಪರಿಹರಿಸಿ | ಪ್ರಾರಬ್ಧವನೊರಿಸಿ ಸಕಲಸ್ವರೂಪ ತಾನಾಗಿ | ನಾನೆಂಬುದ ನೀಡಿ | ಮುಕುರಾನಂದ ಬೋಧಿಸಲಾಗಿ | ನಿಖಿಲ ನಿಸ್ಸಂಗಿ | ಮುಕ್ತಾಂಗಿಯ ಮದುವೆಯಾಗಿ | ಸಂತರಿಗೆ ಶಿರಬಾಗಿ Hol || 9 || ಧರೆಯೊಳು ಕಡಕೊಳ ಕ್ಷೇತ್ರ ಉಪಮೆಯರಿಯನು ಪಾತ್ರ | ಸುರನರಲೋಕ ವಿಚಿತ್ರ | ಕರುಣಾರಸನೇತ್ರ | ಸುಕ್ಕಿ ಮೀರಿದ ವಿಚಿತ್ರ | ಮಾಡಿದನು ಪವಿತ್ರ || 2 || 2 ಪರಮಾತ್ಮನ ಬಗೆಬಗೆಯ ರೂಪಗಳ ದರ್ಶನವೇ ಮುಕ್ತಿ ( ರಾಗ-ದುರ್ಗಾ, ತಾಲ-ತ್ರಿತಾಲ) ಸಾರಿ ಚೆಲ್ಲಿದೆ ಮುಕುತಿ | ಗುರು | ತೋರಿಸಿದಲ್ಲದೆ ಕಾಣಿಸದಣ್ಣಾ ವೇದದ ಮೊದಲಿನ ಮೂಲವಿದು | ಮೇದಿನಿಯೊಳು ತಾ ತುಂಬಿಹುದು || ಹಾದಿ ಹಾದಿಗೆ ಬಿತ್ತಿಹುದು | ಇದು | ಸಾಧಕ ಜನರಿಗೆ ಕಾಣುವದಣ್ಣಾ ಎತ್ತ ನೋಡಲೂ ಪರಬ್ರಹ್ಮವಿದು | ಸುತ್ತಮುತ್ತಲೂ ಸುಳಿಯುವದು | ಮತ್ತೆ ಮತ್ತೆಯಾಗಿ ಕಾಂಬುವದು | ಗುರು- | ಪುತ್ರರಿಗಲ್ಲದೆ ಕಾಣಿಸದಣಾ 83 ಹಿಂದೆ ನೋಡಲು ಬಂದಿಹುದು | ಮುಂದೆ ನೋಡಲು ನಿಂದಿಹುದು || ಸಂದಿ ಸಂದಿಗೆ ಜಡಿದಿಹುದು| ಆ.) ನಂದ ಗುಹೇಶ್ವರಲಿಂಗವಿದಾ || ಪ || 10 || 9 || || 2 ||<noinclude></noinclude> 7ec26p3mt2hmki3nbvl46s9hwvw2q61 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೭ 104 99010 276091 2024-10-26T07:13:34Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ಏಳು ಗುರು-ಶಿಷ್ಯರ ಸಂಬಂಧ (ಭಾಗ ೧) 0 ಅಯ್ಯ! ಗುರುದೇವ ! ನಿನ್ನ ಉಪಕೃತಿಯನ್ನು ಮರೆಯಲಾರೆ ! ( ರಾಗ- ದೇಸ, ತಾಲ-ದೀಪಚಂದಿ) ಗುರುದೇವ ! ನೀ ಮಾಡಿದುಪಕೃತಿಯನು ನಾನು ಮರೆಯೆನೆಂದಿಗೂ ಇಹದೊಳು ಪೊಡವಿಯೊಳಖಿಲ ವೇದಾಗಮಶಾಸ್... 276091 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ಏಳು ಗುರು-ಶಿಷ್ಯರ ಸಂಬಂಧ (ಭಾಗ ೧) 0 ಅಯ್ಯ! ಗುರುದೇವ ! ನಿನ್ನ ಉಪಕೃತಿಯನ್ನು ಮರೆಯಲಾರೆ ! ( ರಾಗ- ದೇಸ, ತಾಲ-ದೀಪಚಂದಿ) ಗುರುದೇವ ! ನೀ ಮಾಡಿದುಪಕೃತಿಯನು ನಾನು ಮರೆಯೆನೆಂದಿಗೂ ಇಹದೊಳು ಪೊಡವಿಯೊಳಖಿಲ ವೇದಾಗಮಶಾಸ್ತ್ರಗಳ | ಬಿಡದೆ ಸಾಧಿಸಿದ ವಾದಿಗಳೆಲ್ಲಾ || ಹೊಡೆದಾಡಿ ಕಾಣದಾ ಪರತತ್ವವನು ನೀನು | ತಂದೆನ್ನ ಕರಕೆ ಕೊಟ್ಟದರಿಂದ ಕಂದಮೂಲಗಳ ಸೇವಿಸಿ ವಾಯುಗಳನೊತ್ತಿ | ಬಂಧಿಸಿ ಪಂಚಾಗ್ನಿ-ಮಧ್ಯದಿ || ನಿಂದು ಯೋಗಿಗಳು ನೋಡದಾ ಪರಬ್ರಹ್ಮ | ತಂದೆನ್ನ ಕಣ್ಣಿ ಗೆ ತೋರಿದರಿಂದೆ ತರುಳ ಎನ್ನಯ ಮೇಲೆ ದಯ ಹುಟ್ಟಿ ಶಿವನೆ | ಶ್ರೀಗುರುಸಿದ್ಧನೆಂಬ ನಾಮವನಾಂತು || ಗುರುರೂಪದಿಂದನ್ನ ಬೋಧಿಸಿ ತನ್ನೊಳು | ಬೆರಸುತ್ತೆ ಮೋಕ್ಷವಿತ್ತುದರಿಂದ 6 ಸದ್ದು ರುವಿನ ಪ್ರಾರ್ಥನೆ ( ರಾಗ-ಕೇದಾರ, ತಾಲ-ದಾದರಾ ) ದೇವ! ಹಿರಿಗುರುರಾಯ ! ತಿಳಿಯದೆ ನಿನ ಮಾಯ | ಸೆಳೆಯದಿರಲೆನ್ನ ಮನ ಜಗದ ವೈಭವವು || ಭಾವ ಬಲಿಯಲಿ ಧ್ಯಾನದಲ್ಲಿ ಬೆರೆಯಲೆನ್ನ ಮನ | ದೇವರಲಿ ತನ್ನ ದಿವ್ಯ ವೈಭವವ ನಿನ್ನ ನಾಮವ ಮನವು ನಿತ್ಯ ನೆನೆಯುತಲಿರಲಿ | ಮೈಯು ಸವೆಯಲಿ ನಿನ್ನ ಸೇವೆಯಲ್ಲಿ 92 || 9 || || & || ||||<noinclude></noinclude> lag91qj6kfqzuxu80mhqdw5hpr47hxh ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೮ 104 99011 276092 2024-10-26T07:14:04Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಮತಿಯು ಹೊಳೆಯಲಿ ನಾಥ, ತೊಳಗಲೆನ್ನಯ ಮಾತು | ಕೃತಿಯು ಬೆಳಗಲಿ ನಿನ್ನ ಬೆಳಕಿನಲ್ಲಿ ನಿನ್ನ ಒಲವಿನ ಸೆಲೆಯು ತೊರೆದು ಸುಧೆಯನು ಸುರಿದು | ಸಂತತೆನ್ನನು ಪೊರೆದು ಬೆಳೆಸುತಿರಲಿ || ನಿನ್ನ ಕರುಣವೆ ಅ... 276092 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಮತಿಯು ಹೊಳೆಯಲಿ ನಾಥ, ತೊಳಗಲೆನ್ನಯ ಮಾತು | ಕೃತಿಯು ಬೆಳಗಲಿ ನಿನ್ನ ಬೆಳಕಿನಲ್ಲಿ ನಿನ್ನ ಒಲವಿನ ಸೆಲೆಯು ತೊರೆದು ಸುಧೆಯನು ಸುರಿದು | ಸಂತತೆನ್ನನು ಪೊರೆದು ಬೆಳೆಸುತಿರಲಿ || ನಿನ್ನ ಕರುಣವೆ ಅನ್ನ ನಿನ್ನ ಕರುಣವೆ ನೀರು | ನಿನ್ನ ಕರುಣವೆ ಉಸಿರು ಎನಗಾಗಲಿ ಒಡನೆ ಆಡಿದ ಮಾತು ಮಿಂಚಿನೈಸಿರಿ ತಳೆದು | ಸಂಚರಿಸಿ ಬೆಳಕು ಬಲ ನೀಡುತ್ತಿರಲಿ || ಹೃದಯದಾಳದ ನುಡಿಯು ಗುಡುಗಿನಾರ್ಭಟದಿಂದ | ಗುಡುಗಿ ಎದೆಯಿಂ ದೈನ್ಯ ದೂಡುತಿರಲಿ & || G || || Q || || 8 || ಅಯ್ಯ! ಗುರುರಾಯಾ ! ಘೋರ ರೋಗದಿಂದ ನೀನೆನ್ನ ಕಾಯ್ದೆ ! ( ರಾಗ-ಭೂಪ, ತಾಲ-ದೀಪಚಂದಿ ) ಗೋಪಾಲದಾಸ ರಾಯಾ | ನಿನ್ನಯ ಪಾದ | ನಾ ಪೊಂದಿದೆನೊ ನಿಶ್ಚಯ ಈ ಪೀಡಿಪ ತ್ರಯ ತಾಪಗಳೊಡಿಸಿ | ಕೈಪಿಡಿದೆನ್ನನು ನೀ ಪಾಲಿಸನುದಿನ ಘೋರ ವ್ಯಾಧಿಗಳ ನೋಡಿ | ವಿಜಯರಾಯ | ಭೂರಿ ಕರುಣವ ಮಾಡಿ | ತೋರಿದರಿವರೆ ರಕರೆಂದಂದಿ- | ನಾರಭ್ಯ ತವ ಪಾದ ಸೇರಿದೆ ಸಲುಹೆಂದು | ಸೂರಿಜನ ಸಂಪ್ರೀಯ ಸುಗುಣೋ- | ದಾರ ಎನ್ನಯ ದೋಷನಿಚಯವ || ದೂರ ಗೈಸು ದಯಾಂಬುಧಿಯೇ ನಿ- | ವಾರಿಸಿದೆ ಕರಬಡಿದು ಬೇಗನೆ ಅಪಮೃತ್ಯುವನು ತೊಡೆದೆ | ಎನ್ನೊಳಗಿಪ್ಪ | ಅಪರಾಧಗಳ ಮರೆದೆ | ಚಪಲ-ಚಿತ್ತನಿಗೊಲಿದು ವಿಪುಲ ಮತಿಯನಿತ್ತು ನಿಪುಣನೆಂದೆನಿಸಿದೆ ತಪಸಿಗಳಿಂದಲಿ || || ಅ.ಪ. || 85<noinclude></noinclude> 8cnxk8iaz1ocut02sjcwirmaiur84zl ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೯ 104 99012 276093 2024-10-26T07:14:18Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಕೃಪಣ-ವತ್ಸಲ ನಿನ್ನ ಕರುಣಕೆ | ಉಪಮೆ ಕಾಣೆನೆ ಸಂತತವು ಕಾ- || ಶ್ಯಪಿಯೊಳಗೆ ಬುಧರಿಂದ ಜಗದಾ- | ಧಿಪನ ಕಿಂಕರನೆನಿಸಿ ಮರೆದೆ - ಎನ್ನ ಪಾಲಿಸಿದಂದದಿ | ಸಕಲ ಪ್ರತಿ | ಪನ್ನರ ಸಲಹೋ ಮುದದಿ || ಅನ್ಯರಿಗಿಪರಿ... 276093 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಕೃಪಣ-ವತ್ಸಲ ನಿನ್ನ ಕರುಣಕೆ | ಉಪಮೆ ಕಾಣೆನೆ ಸಂತತವು ಕಾ- || ಶ್ಯಪಿಯೊಳಗೆ ಬುಧರಿಂದ ಜಗದಾ- | ಧಿಪನ ಕಿಂಕರನೆನಿಸಿ ಮರೆದೆ - ಎನ್ನ ಪಾಲಿಸಿದಂದದಿ | ಸಕಲ ಪ್ರತಿ | ಪನ್ನರ ಸಲಹೋ ಮುದದಿ || ಅನ್ಯರಿಗಿಪರಿ ಬಿನ್ನ ಪಗೈಯೆ ಜ- | ಗನ್ನಾಥ ವಿಠಲನ್ನ ಸಂಸ್ತುತಿಸುವ ಧೀರ || ನಿನ್ನ ನಂಬಿದ ಜನರಿಗೀಪರಿ | ಬನ್ನವೆ, ಭಕ್ತಾನುಕಂಪಿ ಶ- | ರಣ್ಯ | ಬಂದೊದಗಿ ಸಮಯದಿ ಅ- | ಹರ್ನಿಸಿ ಧ್ಯಾನಿಸುವೆ ನಿನ್ನ ನಾನು ಎನ್ನೊಡೆಯನ ಗುಲಾಮನು ( ರಾಗ-ಮಿಶ್ರ ಕಾಫಿ, ತಾಲ-ಕೇರವಾ) ಕಡಕೊಳದ ನಾ ಗುಲಾವಾ | ನೀವು | ಕರೆದಲ್ಲಿಗೆ ನಾ ಬರಾಂವಾ ಹಾಕಿಕೊಟ್ಟ ಜಹಾಗಿರ ಇನಾಮಾ | ನಾ | ಗುರುವಿಗೆ ಮಾಡತೀನಿ ಸಲಾವಾ ಜಗದೊಳಗೆ ನಾ ಇರಾಂವಾ | ಜಗ | ಕ್ರೀಡೆಯೊಳಗೆ ನಾ ಆಡಾಂವಾ || ಜನರಿಗೆ ಸಣ್ಣಾಗಿ ನಡ್ಯಾಂವಾ | ನಾ | ಗುರುವಿನ ಗೂಳ್ಳಾಗಿ ಮೆರಾಂವಾ ದಶೇಂದ್ರಿಯ ಗಣಗಳ ಕಲ್ಯಾಂವಾ | ನಾ | ದಶರಥರಾಯನಾಂಗ ಹೊಳ್ಯಾಂವಾ || ಕಸರತ ಕಮಾಯಿ ಮಾಡಾಂವಾ | ನಾ | ಕಬೀರ, ಕಮಾಲನಾಂಗ ಹಾಡಾಂವಾ ಕೈಲಾಸದೊಳಗ ನಾ ಇರಾಂವಾ | ನಾ | ರಸರಾಯ ಹೋಳಿಗಿ ತುಪ್ಪಾ ಜಡ್ಯಾಂ ವಾ ಗಣ ಬಿಟ್ಟು ಗುರುವಿನ ಕೂಡಾಂವಾ | ಗುರು | ಮಡಿವಾಳಯ್ಯನ ಹಾಡಿ ಹರಸಾಂವಾ || 9 | || Q || || ಪ || || ಅ.ಪ. || ||| || 6 || || 2 11<noinclude></noinclude> teaqfha35or29db1e6b3l0ek1mnhrzy ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೦ 104 99013 276094 2024-10-26T07:14:29Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ 98 ತನ್ನ ಸದ್ದು ರುವಿನ ಕೈಯಲ್ಲಿಯ ಕೊಳಲಿನಂತಿರುವ ನಂಬಿಗೆಯ ಮೂರುತಿಯೆ ಆದರ್ಶ ಶಿಷ್ಯನು ( ರಾಗ-ಮುರ್ಗಾ, ತಾ-ದೀಪಚಂದಿ) ಕರ್ಪುರಾರತಿಯನ್ನು ಬೆಳಗುವೆನು | ಜಿಗಜಿನ್ನಿ- ಜೇಯಗೆ ಕರ್ಪುರಾರತಿಯನ್ನ... 276094 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ 98 ತನ್ನ ಸದ್ದು ರುವಿನ ಕೈಯಲ್ಲಿಯ ಕೊಳಲಿನಂತಿರುವ ನಂಬಿಗೆಯ ಮೂರುತಿಯೆ ಆದರ್ಶ ಶಿಷ್ಯನು ( ರಾಗ-ಮುರ್ಗಾ, ತಾ-ದೀಪಚಂದಿ) ಕರ್ಪುರಾರತಿಯನ್ನು ಬೆಳಗುವೆನು | ಜಿಗಜಿನ್ನಿ- ಜೇಯಗೆ ಕರ್ಪುರಾರತಿಯನ್ನು ಬೆಳಗುವೆ | ನಿರ್ಮಲಾಂತಃಕರಣ- ಯತಿಗೆ || ನಿರ್ಮಮತ್ವದ ಮಾನ್ಯ ಮೂರ್ತಿಗೆ | ನಿರ್ಗುಣನ ನಿರ್ಬಯಲ ಕೀರ್ತಿಗೆ ನಂಬಿಗೆಯು ಅಂಬರದಿ ಬಂದಿಹುದೋ | ಉದ್ದಾರ ಕಾರ್ಯಕೆ | ತಪವೆ ತೊಳಗುತ ಜಗದೊಳಿಳಿದಿಹುದೊ || ತನ್ನ ಹಿರಿತನವನ್ನು ಅರಿಯದೆ | ಧನ್ಯಗುರುವಿನ ಮಹಿಮೆ ಸಾರುವ || ಚಿನ್ಮಯನ ಚಿನ್ನಾದ ಬೀರುವ | ದೇವರಾಯನ ದಿವ್ಯಕೊಳಲಿಗೆ || ಅ.ಪ. || ಕರ್ಪುರವು ತಾನುರಿಯ ಸೇರುತಲಿ | ಅದು ಉರಿಯುತುರಿಯುತ | ಉರಿಯೊಳಗೆ ಅಳಿದುಳಿಯುವಂದದಲಿ || ಗುರುವಿನಲ್ಲಿಯೆ ತಾನು ಬೆರೆಯುವ | ಅವರ ಹಿರಿತನದಲ್ಲಿ ಮೆರೆಯುವ || ಹಿರಿಯ ಆನಂದವನು ಕರೆಯುವ | ಭಾವೂರಾಯರ ಭವ್ಯ ಬೆಳಕಿಗೆ ಸದ್ಗುರುವಿನ ಪಾದಪೂಜೆಯ ಮಾಡಿ ಮುಕ್ತನಾದೆ ( ರಾಗ-ಪುರಿಯಾ ಧನಾಶ್ರೀ, ತಾಲ- ದೀಪಚಂದಿ) ಪಾದಪೂಜೆಯ ಮಾಡಿ ಮುಕ್ಕಾದೆ | ಗುರು ಲಿಂಗ ಜಂಗಮ | ಪಾದಪೂಜೆಯ ಮಾಡಿ ಮುಕ್ತಾದೆ ಪಾದಪೂಜೆಯ ಮಾಡಿ ಮುಕ್ತ- 1 ನಾಗಿ ದಶವಿಧ ನಾದಘೋಷದಿ || ವಾದ ಭೇದವನಳಿದು ಚಿಪ್ಪನ | ಬೋಧ ಮಂಟಪದಲ್ಲಿ ಕುಳಿತು || ಅ.ಪ. ||<noinclude></noinclude> 1kq2lxepebgqq7hxsnztyrttq8d9tvk ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೧ 104 99014 276095 2024-10-26T07:14:43Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಕಾಯಾ ವಾಚಾ ಮನಸು ಶುದ್ದಾಗಿ | ಭಯವಿಲ್ಲದ ಹಾಗೆ | ಮಾಯಾ ಮೋಹವ ಎರಡು ತಾ ನೀಡಿ || ಕಾಯಾ ಕಾಶೀ ಕ್ಷೇತ್ರದಲ್ಲಿ | ರಾಯ ವಿಶ್ವನಾಥ ತಾನೆ || ತೋಯ ಯವ ಬೆರಸಿದಂತೆ | ನ್ಯಾಯ ಮಾಡುವ ಜಂಗಮನ ಇಡಾ-ಪಿಂಗಳಾ ಜೋಡಗ... 276095 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಕಾಯಾ ವಾಚಾ ಮನಸು ಶುದ್ದಾಗಿ | ಭಯವಿಲ್ಲದ ಹಾಗೆ | ಮಾಯಾ ಮೋಹವ ಎರಡು ತಾ ನೀಡಿ || ಕಾಯಾ ಕಾಶೀ ಕ್ಷೇತ್ರದಲ್ಲಿ | ರಾಯ ವಿಶ್ವನಾಥ ತಾನೆ || ತೋಯ ಯವ ಬೆರಸಿದಂತೆ | ನ್ಯಾಯ ಮಾಡುವ ಜಂಗಮನ ಇಡಾ-ಪಿಂಗಳಾ ಜೋಡಗೂಡಿಸಿ | ನಡು ನಾಡಿಗಡ | ಎಡದ ಹಿಮ್ಮಡ-ದಶನ ಒದಗೀಸಿ || ಜಡಿದು ಆಸನ ಬಲಿದು ಕುಳಿತು | ಒಡನೆ ಪ್ರಾಣಾಪಾನವೆರಡೂ || ಹಿಡಿದು ಎಬ್ಬಿಸಿ ನಡೆದು ತ್ರಿಕುಟದಿ | ಮುಳುಗಿ ಆಡುವ ಜಂಗಮನ ಪಿಂಡ ಬ್ರಹ್ಮಾಂಡೆರಡು ಶಿರದೊಲುಮೆ | ಷಡಲಜಮೇಗಿನ | ಪುಂಡರೀಕನ ಸಹಸ್ರದಳದೊಲುಮೆ || ಕಂಡು ತಕ್ಕುಖ ಉಂಡು ಸುಖದಿ ಅ- | ಖಂಡ ಜ್ಯೋತಿಯ ಬೆಳಗ ಮುದದೊಳು || ಕಂಡು ಪಶ್ಚಿಮ ತುದಿಯ ಬೈಲೊಳು | ಮಂಡಿಸಿದ ಮಹಾಲಿಂಗರಂಗನ 2 ಪರತರವಾದ ವಸ್ತುವಿಗಿಂತ ಸದ್ಗುರು ಹಿರಿಯನು ( ರಾಗ-ದರಬಾರಿ, ತಾಲ-ಕೇರವಾ) ಗುರುತಾ ತೋರಿದ ಗುರುವಿನ | ಮರೆತು ನಾನಿರಲಿ ಹ್ಯಾಂಗ || ಗುರುವಿನಿಂದ ಅಧಿಕ ಉಂಟೆ ? - ಪರಕೆ ಪರವಾದ ವಸ್ತು ಆಧಾರ ಅಗ್ನಿ ಯ ಸ್ಥಳದ | ಭೇದ ಅರುಹಿಸಿ ಕೊಟ್ಟಾ || ನಾದ-ಬಿಂದು-ಕಳೆಯ | ಹಾದಿ ತೋರಿಸಿ ಬಿಟ್ಟಾ || ಸಾಧಿಸಿ ಮೂಲ ಮಂತ್ರ | ಕರ್ಣದೊಳು ಊದಿ ಬಿಟ್ಟಾ 20 || o || || a ||<noinclude></noinclude> 9jinrz8kl9yy41dfv3866ma9734k7mv ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೨ 104 99015 276096 2024-10-26T07:14:56Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 22 ಕನ ಡ ಪರಮಾರ್ಥ ಸೋಪಾನ ನಾಸಿಕ-ಕೊನೆಯೊಳು | ಸೂಸುವ ವಾಯುಗಳ್ಳೆದು || ಭಾಸ್ಕರ- ಕೋಟಿ- | ಪ್ರಕಾಶದಿ ಮೆರೆವುದು || ಸಾಸಿರ ದಳದೊಳು | ಸುಳಿಸುಳಿದಾಡುವದು ಅಂಗ-ಲಿಂಗದ ಸಂ. | ಯೋಗವ ಹೇಳಿದನು || ಹಿಂಗದಿರೆಂದು ಎ | ಜ್ವರ ಕೊಟ್ಟು ಪೋ... 276096 proofread-page text/x-wiki <noinclude><pagequality level="1" user="~aanzx" /></noinclude>22 ಕನ ಡ ಪರಮಾರ್ಥ ಸೋಪಾನ ನಾಸಿಕ-ಕೊನೆಯೊಳು | ಸೂಸುವ ವಾಯುಗಳ್ಳೆದು || ಭಾಸ್ಕರ- ಕೋಟಿ- | ಪ್ರಕಾಶದಿ ಮೆರೆವುದು || ಸಾಸಿರ ದಳದೊಳು | ಸುಳಿಸುಳಿದಾಡುವದು ಅಂಗ-ಲಿಂಗದ ಸಂ. | ಯೋಗವ ಹೇಳಿದನು || ಹಿಂಗದಿರೆಂದು ಎ | ಜ್ವರ ಕೊಟ್ಟು ಪೋದನು | ಕಂಗಳಾಗ್ರದಿ ಶಿವ- | ಲಿಂಗ ತೋರಿಸಿಕೊಟ್ಟನು ಕುಂಡಲ ಮಧ್ಯದಿ | ಜ್ಯೋತಿ ಕುಣಿದಾಡುವದು || ಅಣುರೇಣು ತೃಣಕಾಷ್ಟದಿ | ಸಮನಾಗಿ ನಿಲ್ಲುವದು || ಪ್ರಣವ ಸ್ವರೂಪ ಪರ- 1 ಬ್ರಹ್ಮ ತಾನಾದ ಮೇಲೆ ಭವ ತೊಲಗಿ ಹೋಯಿತು | ಬಹು ಪುಣ್ಯ ದೊರಕಿತು | ಭುವನ ಕಂದರವಾಯಿತು | 00 ಗಟ್ಟಿ ರವೆ ತೋರಿತು ಅವಿರಲಾತ್ಮಕ ಗುರು- | ಲಿಂಗ ಜಂಗಮನಲ್ಲಿ | 6 || Il a b || || || 8 ||<noinclude></noinclude> s7brlp0pcyiyw6d3nn5ag4dhk0e2il0 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೩ 104 99016 276097 2024-10-26T07:15:12Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕ, ಸ, ಪ್ರಕರಣ ಎಂಟು ಗುರು-ಶಿಷ್ಯರ ಸಂಬಂಧ (ಭಾಗ ೨) ಗುರುಚರಣ-ಕಮಲದಲಿ ಶೃಂಗನಾಗಯ್ಯ ! (ರಾಗ,ಜಯಜಯವಂತಿ, ತಾಲತ್ರಿತಾಲ) ಗುರುಚರಣ-ಕಮಲದಲಿ | ಶೃಂಗನಾಗೊss ನೀ ಸ್ಥಿರವಿಲ್ಲ ಸಂಸಾರ | ನರ ಜನ್ಮದೊಳು ಬಂದು || ಪರತತ್ವ ತಿಳಿದು ಸಾ- | ಧ... 276097 proofread-page text/x-wiki <noinclude><pagequality level="1" user="~aanzx" /></noinclude>ಕ, ಸ, ಪ್ರಕರಣ ಎಂಟು ಗುರು-ಶಿಷ್ಯರ ಸಂಬಂಧ (ಭಾಗ ೨) ಗುರುಚರಣ-ಕಮಲದಲಿ ಶೃಂಗನಾಗಯ್ಯ ! (ರಾಗ,ಜಯಜಯವಂತಿ, ತಾಲತ್ರಿತಾಲ) ಗುರುಚರಣ-ಕಮಲದಲಿ | ಶೃಂಗನಾಗೊss ನೀ ಸ್ಥಿರವಿಲ್ಲ ಸಂಸಾರ | ನರ ಜನ್ಮದೊಳು ಬಂದು || ಪರತತ್ವ ತಿಳಿದು ಸಾ- | ಧುರ ಸಂಗಿಯಾಗೋ ನೀ ಮೌನ ಹಿಡಿದು ಮುದ್ರೆ ಬಲಿದು | ಜ್ಞಾನ-ಜ್ಯೋತಿಯೊಳಗೆ ನಲಿದು || ಸ್ವಾನುಭವಾಮೃತ ಸವಿದು | ನಿಸ್ಸ೦ಗನಾಗೊ ನೀ ಮುಪ್ಪಿನ ಮುನಿಯ ಪಿಡಿದು ವಚನ | ಕಪ್ಪುಗೊರಳ ಕಾಡಸಿದ್ಧ - || ನಿದ್ದೆಡೆಗೆ ಹೋಗಿ ಸಾಷ್ಟಾಂಗನಾ ನೀ ಪಾಪಪೂರ್ಣ ಜೀವನದಿಂದ ಭಕ್ತಿ-ಜೀವನದೆಡೆಗೆ ಕುರುಬರೋ (ರಾಗ-ಪುರಿಯಾ ಧನಾತ್ರಿ, ತಾಲ- ದೀಪಚಂದಿ) ನಾವು ಕುರುಬರೋ ಹೀಗೆ ಈಸೆಂದು ಕುರಿಮರಿ | ಕಾಯ್ದುಕೊಂಡಿರುವಂಥ ಆರೈದು ಮೂರಾರು ಹತ್ತು ಟಗರಗಳು | ಮಾಯಾಗಿ ಹೋಗ್ಯಾವ ಈ ಊರ ಒಳಗೆ || ಬ್ಯಾರೆ ಇನ್ನೂ ರದಾ ಹದಿನಾರು ಸಾವಿರ | ಸೂರಾಗಿ ಹೋಗಿರುವ ಕುರಿಮರಿ ಕಾಯ್ಕಂಥ | G || | ಅ. ಪ. || ||0||<noinclude></noinclude> 5txag0dlzm3wqz16lewjcsu83gkviry ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೪ 104 99017 276098 2024-10-26T07:15:25Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 28 ಕನ್ನಡ ಪರಮಾರ್ಥ ಸೋಪಾನ ಒಳಗೆ ಹೊರಗೆ ಒಂದೇ ಪರಿಯಲ್ಲಿ ನಾರುವದು | ಬಲು ಜಿಡ್ಡು ನಾರುವದು ಇನ್ನು ಬೇರೆ | ಕೊಳೆ ಕೊಳೆತ ಮಲ ಮೂತ್ರ ತುಂಬಿ ಸೋರುತಲಿದೆ | ಹಳೆಯ ದೋಷದ ರಗಟೆ ಎಳಕೊಂಡು ತಿರುಗುವಂಥ ಏರು ಹಾಳಾಗಲಿ ನೆರೆಯು ಬೀ... 276098 proofread-page text/x-wiki <noinclude><pagequality level="1" user="~aanzx" /></noinclude>28 ಕನ್ನಡ ಪರಮಾರ್ಥ ಸೋಪಾನ ಒಳಗೆ ಹೊರಗೆ ಒಂದೇ ಪರಿಯಲ್ಲಿ ನಾರುವದು | ಬಲು ಜಿಡ್ಡು ನಾರುವದು ಇನ್ನು ಬೇರೆ | ಕೊಳೆ ಕೊಳೆತ ಮಲ ಮೂತ್ರ ತುಂಬಿ ಸೋರುತಲಿದೆ | ಹಳೆಯ ದೋಷದ ರಗಟೆ ಎಳಕೊಂಡು ತಿರುಗುವಂಥ ಏರು ಹಾಳಾಗಲಿ ನೆರೆಯು ಬೀಳಾಗಲಿ | ತೋಳ ಒಯ್ಯಲಿ ನಮ್ಮ ಕುರಿಮರಿಗಳನ್ನು || ಭಾಳಾಕ್ಷಹರ ನಮ್ಮ ಕೂಡಲೂರೇಶನ | ಒಳಗೆ ಹೊರಗೆ ಹೀಗೆ ಕಾಯ್ದುಕೊಂಡಿರುವಂಥ a || G || || a || ಜ್ಯೋತಿ, ನಾದ, ಸುಧೆಗಳ ಅತೀಂದ್ರಿಯ ಅನುಭವವನ್ನು ಸಲ್ಲಿಸುವಲ್ಲಿ ಕಾಣುವ ಸದ್ಗುರುವಿನ ಪ್ರಭಾವ (ರಾಗ, ಕಾಫಿ, ತಾಲ-ಕೇರವಾ) ಗುರುವಿನ ಹ್ಯಾಂಗ ಮರೆಯಲಿ || ಬೋಧ ಕೊಟ್ಟು ಸುಖದಲ್ಲಿಟ್ಟು | ನೀಗಿಸಿ ಬಿಟ್ಟವನ || ಪಾಪಗಳನು ಸುಟ್ಟವನ | ಜ್ಞಾನದ | ಮಾರ್ಗ ಹೇಳಿದವನ || ಮೊದಲ ಮೈಲಿಗೆ ಕಳಸಿ | ಒಳ್ಳೆ | ವಸ್ತ್ರ ಉಡಿಸಿದನ ಅದು ಇದು ಮನಸಿನ ಕಾಮನೆ | ಬಿಡಿಸಿ | ನಿಶ್ಚಯ ಮಾಡಿದನ || ಸದಮಲ ಮಹಾಜ್ಯೋತಿಯ | ಬೆಳಕಲಿ | ಇರಂತ ಹೇಳಿದನ || ಸದರಿನ ಮೇಲೆ ಕುಳ್ಳಿರಿಸೆನಗೆ | ಸುಧೆಯ ಕುಡಿಸಿದನ ಆಡಬಾರದಂಥಾ ಆಟಾ ಆಡಿ ತೋರಿದನ || ತೋರಬಾರದಂಥಾ ಸುಖವ | ತೋರಿಸಿಕೊಟ್ಟ ವನ || ||0||<noinclude></noinclude> cdnkpez1iimgz65hk6yns60i8qq29wi ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೫ 104 99018 276099 2024-10-26T07:15:50Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಮೀರಿದ ನಾದ ಬ್ರಹ್ಮದೊಳಗೆ | ನಲಿ ನಲಿದಾಡಿಸಿದನ || ಪೂರ್ಣವಾದ ಆನಂದದಲ್ಲಿ | ಸೇರಿಕೊಳ್ಳೆಂದವನ ಕಾಣಬಾರದಂಥಾ ವಸ್ತುವ | ಕಾಣಿಸಿ ಕೊಟ್ಟ ವನ || ಹೀನ ಮನದ ಸಂಶಯ ಬಿಡಿಸಿ | ನಿಶ್ಚಯ ಮಾಡಿದನ || ಕೋಣನಾಗಬ... 276099 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಮೀರಿದ ನಾದ ಬ್ರಹ್ಮದೊಳಗೆ | ನಲಿ ನಲಿದಾಡಿಸಿದನ || ಪೂರ್ಣವಾದ ಆನಂದದಲ್ಲಿ | ಸೇರಿಕೊಳ್ಳೆಂದವನ ಕಾಣಬಾರದಂಥಾ ವಸ್ತುವ | ಕಾಣಿಸಿ ಕೊಟ್ಟ ವನ || ಹೀನ ಮನದ ಸಂಶಯ ಬಿಡಿಸಿ | ನಿಶ್ಚಯ ಮಾಡಿದನ || ಕೋಣನಾಗಬ್ಯಾಡ ಅಂತ | ವಿವೇಕ ಹೇಳಿದನ || ಜ್ಞಾನಪತಿ ಪ್ರಿಯ ನಿರುಪಾಧಿಸಿದ್ಧನ ಕಾಣದೆ ಹ್ಯಾಂಗಿರಲಿ 9 ಸದ್ಗುರುವು ಶರೀರದಲ್ಲಿಯ ನವದ್ವಾರಗಳಿಗೆ ಒಮ್ಮೆಲೆ ಕೀಲಿ ಹಾಕಿ ಕತ್ತ ಲುಳ್ಳ ಅಂತರಂಗದಲ್ಲಿ ದಿವ್ಯ ಮಿಂಚಿನ ಬೆಳಕನ್ನು ಬೀರುವ ( ರಾಗ-ಕಾಫಿ, ತಾಲ-ತ್ರಿತಾಲ ) ಹ್ಯಾಂಗ ಮರೆಯಲಿ | ಗುರುವಿನ ಹ್ಯಾಂಗ ಮರೆಯಲೀ ಹ್ಯಾಂಗ ನಾನು ಮರೆಯಲವನ | ಶರೀರದಾಶೆಯ ಬಿಡಿಸಿದವನ || ಪರಿಪರಿಯಿಂದ ತಿಳಿಸಿ ಎನ್ನೊಳು | ಪರಬ್ರಹ್ಮನ ತೋರಿಸಿದವನ ಮೂಢತನದಿ ಹೇಡಿ | ನಾನು | ಆದೆನೋ ಬಲು ಖೋಡಿ || ಮನಸಿನ ಬೆನ್ನತ್ತಿ | ಕೇಡು | 9 ಮಾಡಿಕೊಂಡೆನೋ ಅತಿ || ಬಾಡಿಗೆತ್ತಿನಂತೆ ದುಡಿದು ದುಡಿದು | ಕಾಡ ಜನ್ಮ ತಿರುಗಿ ಕೆಟ್ಟನು ಮೂರು ಮಂದಿ ಪ್ರೀತಿಯ | ಗೆಳೆಯರ | ಮೋಹವ ಬಿಡಿಸಿದನು || ಆರು ಮಂದಿ ವೈರಿ- | ಗಳನು | 48 || 9 || || & || || ಅ. ಪ. ||<noinclude></noinclude> nq9ti94xy6spacoyuhucsr70e44svsb ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೬ 104 99019 276100 2024-10-26T07:16:06Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 26 ಕನ್ನಡ ಪರಮಾರ್ಥ ಸೋಪಾನ ಊರ ಹೊರಗ ಹಾಕಿದನು || ಪರಮಾರ್ಥದ ತತ್ವದೊಳು ಮನವ | ಸ್ಥಿರವಾಗಿ ನಿಲ್ಲಿಸಿಬಿಟ್ಟನು ಎಂಟು ಮಂದಿ ಬಂಟರ | ಹೊಡೆದು | ಸೊಂಟವ ಮುರಿದನು || ಏಳು ಪಾಳೇಗಾರರ | ಕಟ್ಟಿ | || 9 || ಗೋಳ ಹಿಡಿಸಿದನು || ಕಾಳಗತ್ತಲೆ... 276100 proofread-page text/x-wiki <noinclude><pagequality level="1" user="~aanzx" /></noinclude>26 ಕನ್ನಡ ಪರಮಾರ್ಥ ಸೋಪಾನ ಊರ ಹೊರಗ ಹಾಕಿದನು || ಪರಮಾರ್ಥದ ತತ್ವದೊಳು ಮನವ | ಸ್ಥಿರವಾಗಿ ನಿಲ್ಲಿಸಿಬಿಟ್ಟನು ಎಂಟು ಮಂದಿ ಬಂಟರ | ಹೊಡೆದು | ಸೊಂಟವ ಮುರಿದನು || ಏಳು ಪಾಳೇಗಾರರ | ಕಟ್ಟಿ | || 9 || ಗೋಳ ಹಿಡಿಸಿದನು || ಕಾಳಗತ್ತಲೆಯ ಮನೆಯೊಳಗೆ | ಕೊಟಿ ಖಂಚಿನ ಬೆಳಕ ತೋರಿದನು || 2 || ಒಂಬತ್ತು ಬಾಗಿಲಗಳಿ- | ಗೆಲ್ಲಾ | ಕೀಲಿ ಹಾಕಿದನು || ಮತ್ತೆ ನಾನು ಭವಕೆ | ಮರಳಿ | ಬರದಂತೆ ಮಾಡಿದನು || ಸುತ್ತು ಮುತ್ತು ಎತ್ತು ನೋಡಲು | ಚೆತ್ತು ಚಿದಾನಂದದಿ ಬೆರಸಿದನು 33 ಸದ್ಗುರುವಿನ ಕರುಣದ ಅಲೌಕಿಕ ಪರಿಣಾಮಗಳು ( ರಾಗ-ಸಿಲು, ತಾಳ-ಕೇರವಾ) n ಸೈ ಸೈ ಸದ್ಗುರುವಿನ ದಯದಿಂ | ದೆಲ್ಲ ಮೈಮರೆತೆನೆ ಐ ಐ! ಇದು ಏನು ಕಾರಣ | ಮೈಮರೆತು ಮತ್ತು ಳಿದನ || ಕೈ ಕೈ ತಲೆ ಮೇಲೆ ಇಡಲು | ವೈರಾಗ್ಯವ ಪಡೆದೆನೆ || ಫೈ ಥೈ ಥೈ ಅಂತೆ ಕುಣಿಸಿ | | | 9 || ತನ್ನತೆ ತಾ ಮಾಡಿದನೆ || ಅ. ಪ. || ನಾನು ನೀನೆನ್ನುವದೆರಡು | ತಾನೆ ತಾನಾದನೆ | ಮಾನ ಅಪಮಾನ ಎರಡೂ | ಪಾನ ಮಾಡಿದನೆ || ಜ್ಞಾನ-ವಾರ್ಗವ ತೋರಿ | ಧ್ಯಾನ ಹೇಳಿದನೆ | ೩ನ ತೋರಿಸಿ ವಿನೋದ ಮಾಡಿದನೆ<noinclude></noinclude> jdrk2r1flqqk8ypqsz17tjuogdfr0b4 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೭ 104 99020 276101 2024-10-26T07:16:24Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ನಾದಶಬ್ದದಲಿ ಮನಸ | ಲುಬ್ಧ ಮಾಡಿದನೆ | ವಾದಿ ವಿವಾದೀ ಕೂಡ | ಕಾದೆ ಗೆಲಿಸಿದನ || ಭೇದಾಭೇದವ ಅರಿಯದೆ | ಹಾದಿ ತೋರಿsದನೆ | ಈದ ಹುಲಿಯಂಥ ಮನಸ | ಸಾದ ಮಾಡಿದನೆ 22 || 9 || ಭ್ರುಕುಟ ಮಧ್ಯದಲ್ಲಿ ವಸ್ತು | ಪ್ರಕಟ... 276101 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ನಾದಶಬ್ದದಲಿ ಮನಸ | ಲುಬ್ಧ ಮಾಡಿದನೆ | ವಾದಿ ವಿವಾದೀ ಕೂಡ | ಕಾದೆ ಗೆಲಿಸಿದನ || ಭೇದಾಭೇದವ ಅರಿಯದೆ | ಹಾದಿ ತೋರಿsದನೆ | ಈದ ಹುಲಿಯಂಥ ಮನಸ | ಸಾದ ಮಾಡಿದನೆ 22 || 9 || ಭ್ರುಕುಟ ಮಧ್ಯದಲ್ಲಿ ವಸ್ತು | ಪ್ರಕಟ ಮಾಡಿದನೆ | ನಾಸಿಕಾಗ್ರದ ಕೊನೆಯ ಮೇಲೆ | ಭಾನುಪ್ರಕಾಶ ತೋರಿದನೆ || ಆಸನ ಬಲಿದು ಪೀಠವನಿಕ್ಕಿ | ಸಾಸಿರ ನಾಮ ಗೆಲಿದನೆ | ಈಶನು ದತ್ತ ಮಹೇಶ ದಿಗಂಬರ | ಘೋಷದೊಳಗೆ ಮನ ನಿಲಿಸಿದನೆ E ಸದ್ಗುರುವು ಕುರುಹಳಿದ ಸದ್ವಸ್ತುವಿನಲ್ಲಿ ಬೆರೆಯಿಸುವ (ರಾಗ-ಭೂಪ ತಾ-ದೀಪಚಂದಿ) ಬೋಧಿಸೆನ್ನನು ಗುರುವೆ | ನಿಮ್ಮಯ ದಿವ್ಯ | ಪಾದವ ನಂಬಿರುವೆ ವೇದಾಂತದೊಳು ಗೋಪ್ಯವಾದ ತತ್ವವನ್ನು | ಬೋಧಿಸಿ ಮನ ವಿನೋದಿಸಿ ಸುಖಿಸೆಂದು ಆದಿ ಅಂತ್ಯವ ಬೋಧಿಸಿ | ನಿರ್ಗುಣವಾದ | ನಾದಬ್ರಹ್ಮವ ಸಾಧಿಸಿ || ಹಾದಿ ನಾಲ್ಕರ ರ ನಡುವೆ | ವೇದಿಕೆಯೊಳು ಕುಳಿತು || ಮೋದದಿ ದಶವಿಧ | ನಾದವ ಕೇಳೆಂದು ಮೂಲ ಕುಂಡಲಿಯನೆತ್ತಿ | ಅಗ್ನಿಯದ ಮೇಲಣ ನೆಲೆಗೆ ಹತ್ತಿ || ಸಾಲಿಟ್ಟು ಸುರಿತಿರ್ಪ | ಹಾಲನು ಸವಿದುಂಡು || ನಿಲ ಜ್ಯೋತಿಯ ದಿವ್ಯ | ಜ್ವಾಲೆಯೊಳು ಬೆಳಗೆಂದು ರವಿಶಶಿಗಳ ತಡೆದು | ಸುಷುಮ್ಮಿಯ | || & || || ಪ || || ಅ. ಪ. || || 0 || || 9 || ನವಮಾರ್ಗದೊಳು ನಡೆದು ||<noinclude></noinclude> 8pk2tgmfinmm2zbvkkjpii40ndljz2o ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೮ 104 99021 276102 2024-10-26T07:16:35Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ ಡ ಪರಮಾರ್ಥ ಸೋಪಾನ ಜವದಿ ಪಶ್ಚಿಮ ದಿಕ್ಕಿ - 1 ನವನಿಯೊಳಿರುತಿರ್ಪ || ನವಮೋಕ್ಷ ಸುಖದನು- | ಭವದಿ ಮೈಮರೆಯೆಂದು ಪರಿಪೂರ್ಣಾನಂದ ಭಾವಾ | ತಾರಕ ರೂಪ | ಗುರುಸಿದ್ದ ದೇವ ದೇವಾ || ಅರಿದೆ ನಂಬಿರುವೆನು | ಮರೆದು ಎನ್ನೊಳು ನೀನು ||... 276102 proofread-page text/x-wiki <noinclude><pagequality level="1" user="~aanzx" /></noinclude>ಕನ ಡ ಪರಮಾರ್ಥ ಸೋಪಾನ ಜವದಿ ಪಶ್ಚಿಮ ದಿಕ್ಕಿ - 1 ನವನಿಯೊಳಿರುತಿರ್ಪ || ನವಮೋಕ್ಷ ಸುಖದನು- | ಭವದಿ ಮೈಮರೆಯೆಂದು ಪರಿಪೂರ್ಣಾನಂದ ಭಾವಾ | ತಾರಕ ರೂಪ | ಗುರುಸಿದ್ದ ದೇವ ದೇವಾ || ಅರಿದೆ ನಂಬಿರುವೆನು | ಮರೆದು ಎನ್ನೊಳು ನೀನು || ಕುರುಹನ್ನು ತೋರದೆ | ಬೆರೆದೇಕವಾಗೆಂದು || & \\ || 3 ||<noinclude></noinclude> 8wj1sipdj986lkf1semsklen7yn6whl ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೯ 104 99022 276103 2024-10-26T07:16:45Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ಒಂಬತ್ತು . ಸಂತರ ಲಕ್ಷಣಗಳು ಭಕ್ತಶ್ರೇಷ್ಠರು ಯಾರು ? ( ರಾಗ, ಕಾಂಬೋಧಿ, ತಾಲ, ಝಪತಾಲ) ಭಕ್ತನೆಂದರೆ ಭಕ್ತ ಪ್ರಹ್ಲಾದನು | ಮಿಕ್ಕ ಭಕ್ತರು ಎಲ್ಲ ಭಕ್ತವರರೇನು ? ಮಲತಾಯಿ-ಮೋಸದಿಂದಳಿಯೆ ಅರಸೊತ್ತಿಗೆಯು | ಬಲಿತ ಕೋಪ... 276103 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ಒಂಬತ್ತು . ಸಂತರ ಲಕ್ಷಣಗಳು ಭಕ್ತಶ್ರೇಷ್ಠರು ಯಾರು ? ( ರಾಗ, ಕಾಂಬೋಧಿ, ತಾಲ, ಝಪತಾಲ) ಭಕ್ತನೆಂದರೆ ಭಕ್ತ ಪ್ರಹ್ಲಾದನು | ಮಿಕ್ಕ ಭಕ್ತರು ಎಲ್ಲ ಭಕ್ತವರರೇನು ? ಮಲತಾಯಿ-ಮೋಸದಿಂದಳಿಯೆ ಅರಸೊತ್ತಿಗೆಯು | ಬಲಿತ ಕೋಪದಿ ಕಾನನವ ಸೇರುತ || ಅಳಿಯದಿಹ ಅರಸುತನ ಗಳಿಸೆ ಹರಿಯನು ನೆನೆವ | ಎಳೆಯ ಧ್ರುವನೆಂತು ತಾ ಭಕುತವರನಹನು ? ವೀಣೆಯಿನಿಸರದಲ್ಲಿ ಗಾನವನು ಬೆರಸುತಲಿ | ಹರಿಯ ಹೊಗಳುತ ಅಲೆವ ಬ್ರಹ್ಮಕುವರ || ಕಲಹವನ್ನು ಮೊಳಿಸಿ ಬೆಳೆಸುವದರಲಿ ನಲಿಯುತಿಹ | ಭಕುತ ಬಿರುದನು ಪಡೆಯೆ ಅರ್ಹನೇನು ? || 9 |] ನೂರಾರು ಕಥೆಗಳಿಂ ಮರಾರು ಗ್ರಂಥಗಳ 1 ಬರೆದು ಪುರುಷಾರ್ಥಗಳ ಮಹಿಮೆಯನ್ನು || ಸಾರ್ವಹವ್ಯಾಸದಲಿ ತುಂಬ ಮುಳುಗಿದ ವ್ಯಾಸ | ಭಕುತಿ ಶಾಂತಿಯನೆಂತು ಹೊಂದುತಿಹನು ? ಜ್ಞಾನಕರ್ಮದ ಬೆರಕೆ ಮೇಲೆಂದು ಬಗೆದದರ | || Q || ಹಿರಿಮೆಯನು ಬಿತ್ತರಿಪ ಗ್ರಂಥದಲ್ಲಿ 1 ಜ್ಞಾನಕರ್ಮದಿ ಇಂತು ಶಿಷ್ಯನಾದ ವಶಿಷ್ಠ |' ಭಕುತರಲಿ ಶ್ರೇಷ್ಠ ನೆಂತಾಗುತಿಹನು ? || 9 || ಜ್ಞಾನದಿಂದಲೆ ಭುಕ್ತಿ ಜ್ಞಾನದಿಂದಲೆ ಮುಕ್ತಿ | ಜ್ಞಾನವೇ ಚಿರಸುಖವ ಪಡೆವ ಯುಕ್ತಿ || ಜ್ಞಾನಶಕ್ತಿಯನಿನಿತು ತುಂಬ ಹೊಗಳುವ ಶುಕನು || ಪರಮ ಭಕ್ತನ ಪದವ ಪಡೆಯಬಹುದೇನು ? 4F 118 11<noinclude></noinclude> hvwdsaak89q77ixq7ejt86jwok6pi5b ಪುಟ:ಕನ್ನಡ ಪರಮಾರ್ಥ ಸೋಪಾನ.pdf/೬೦ 104 99023 276104 2024-10-26T07:16:58Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: VC ಕನ್ನಡ ಪರಮಾರ್ಥ ಸೋಪಾನ ಅರಸುತನದೈಸಿರಿಗೆ ಸೋತು ನ್ಯಾಯವ ಮರೆತು ದುರುಳರಳಿಗದಲ್ಲಿ ಬಾಳುತಿರಲು || ಶರಶಯ್ಕೆಯಲಿ ಕೊನೆಗೆ ಹರಿಯ ನೆನೆದರೆ ಭೀಷ್ಮ | ವರಭಕುತನೆಂತವನು ಎನಿಸುತಿಹನು ? ಹರಿಸುನು ತಾನೆಂದು ಹಿರಿತನದ ಹೆಮ... 276104 proofread-page text/x-wiki <noinclude><pagequality level="1" user="~aanzx" /></noinclude>VC ಕನ್ನಡ ಪರಮಾರ್ಥ ಸೋಪಾನ ಅರಸುತನದೈಸಿರಿಗೆ ಸೋತು ನ್ಯಾಯವ ಮರೆತು ದುರುಳರಳಿಗದಲ್ಲಿ ಬಾಳುತಿರಲು || ಶರಶಯ್ಕೆಯಲಿ ಕೊನೆಗೆ ಹರಿಯ ನೆನೆದರೆ ಭೀಷ್ಮ | ವರಭಕುತನೆಂತವನು ಎನಿಸುತಿಹನು ? ಹರಿಸುನು ತಾನೆಂದು ಹಿರಿತನದ ಹೆಮ್ಮೆಯಲಿ | ಹರಿಯ ಹಿರಿಮೆಯ ಮರೆತು ದುಡಿಸುತಿರುವ || ಹರಿಯೆದುರು ತನ್ನ ಮತಿ-ಮಹಿಮೆಯನೆ ಮೆರೆಸುತಿಹ | ನರಗೆ ವರಭಕುತಿ ಸುಖ ದೊರೆಯಬಹುದೇನು ? ಹಿರಿಯ ಪಾಪವು ಜರಿಯೆ ವೀರ ರಾಮನ ನೆನೆದು | ಹುತ್ತ ಹೊತ್ತರು ಮುನಿಯು ತಪಸಿನಿಂದ | ಈರುಳ್ಳಿ ಬೇಯಿಸಿದ ಬೆಳ್ಳಿ ಕಲಶವು ಕೂಡ | ಬೆಳ್ಳಗಾದರೂ ಗಂಧ ತಳ್ಳಬಹುದೇನು ? ರಾಮನಿಗೆ ಸೇವಕನು ಕಾಮನಿಗೆ ಪಾವಕನು | ಕಾಮವಿರಹಿತ ದಾಸ್ಯ ಕುಶಲನಿಹನು || ಪ್ರೇಮಯುತನಾದರೂ ಕುಲದ ಚಾಪಲ ಬಿಡದ ಭೀಮ ಭಕ್ತಾಗ್ರಣಿಯದೆಂತು ತಾನು ? ಹರಿಯ ಬಗೆಬಗೆಯಿಂದ ಭಜಿಪರಿವರೆ ಮಗೆ | ಭಕುತಿ ಭಾವವ ಸಲಿಸಿ ವಂದ್ಯರಹರು || ಹರಿಗಾಗಿಯೆ ಹರಿಯ ನಲಿವು ನೋವುಗಳಲ್ಲಿ | ಭಜಿಪ ಪ್ರಾದನೆ ವಂದ್ಯತಮನು G ಸಂತನು ಅಂಜಿಕೆಯನ್ನು ಮೀರಿರುವ ! ( ರಾಗ-ಕಲ್ಯಾಣ, ತಾಲ-ಆದಿತಾಳ ) ಅಂಜೀಕಿನ್ಯಾತಕಯ್ಯಾ | ಸಜ್ಜನರಿಗೆ ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ || 2 || || 2 || || || || 7 || || 00 || || ಪ || || ಅ. ಪ. || ಕನಸಲಿ ಮನಸಿಲಿ ಕಳವಳವಾದರೆ | ಹನುಮನ ನೆನೆದರೆ ಹಾರಿ ಹೋಗುದು ಪಾಪ 110 || ರೋಮ ರೋಮಕೆ ಕೋಟಿ ಲಿಂಗ ಉದುರಿಸಿದ | ಭೀಮನ ನೆನೆದರೆ ಬಿಟ್ಟು ಹೋಗುದು ತಾಪ ಪುರಂದರ ವಿಠಲನ ಪಾದಪೂಜೆಯ ವಾಳ್ | ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ || 9 || ]] & [1<noinclude></noinclude> 44rc1s9lumu3ezcrw8qmpo0mkx6fvti ಪುಟ:ಕನ್ನಡ ಪರಮಾರ್ಥ ಸೋಪಾನ.pdf/೬೧ 104 99024 276105 2024-10-26T07:18:46Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ & ಹರಿದಾಸರಿಗೆ ಭಯ-ಶೋಕಗಳು ಸೋಂಕಲರಿಯವು ! ( ರಾಗ-ಭೀಮಪಲಾಸ, ತಾಲ-ಶ್ರಿತಾಲ) ದಾಸರಿಗುಂಟೆ ಭಯಶೋಕಾ | ಹರಿ- ದಾಸರಿಗುಂಟೆ ಭಯಶೋಕಾ ವಾಸುದೇವನ ಸದಾ ಸ್ಮರಿಸುವ ಕಾಮಧೇನು ವರಕಲ್ಪ ವೃಕ ಚಿಂತಾಮಣಿ ಕೈ ಸ... 276105 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ & ಹರಿದಾಸರಿಗೆ ಭಯ-ಶೋಕಗಳು ಸೋಂಕಲರಿಯವು ! ( ರಾಗ-ಭೀಮಪಲಾಸ, ತಾಲ-ಶ್ರಿತಾಲ) ದಾಸರಿಗುಂಟೆ ಭಯಶೋಕಾ | ಹರಿ- ದಾಸರಿಗುಂಟೆ ಭಯಶೋಕಾ ವಾಸುದೇವನ ಸದಾ ಸ್ಮರಿಸುವ ಕಾಮಧೇನು ವರಕಲ್ಪ ವೃಕ ಚಿಂತಾಮಣಿ ಕೈ ಸೇರಿದಕಿ೦ತ || ನಾಮತ್ರಯದಿಂ ಬಪ್ಪಾ ಸುಖಕೆ ಸುದಾಮನೆ ಸಾಕ್ಷಿದಕೆಂಬೊ ಹರಿ ರಾಮಚಂದ್ರ ಶಬರಿಯ ತಿಂದೆಂಜಲ . ಅಜಮಿಳ ಮಾಡಿದ ಕುಕರ್ಮಗಳ || ಧೂಮಕೇತು ಭುಂಜಿಸುವಂದದಿ ಮೇಧ್ಯಾಮೇಧ್ಯವ ಕೈಕೊಂಬ ಹರಿ ಏನು ಮಾಡಿದಪರಾಧವ ಕ್ಷಮಿಸುವ ಏನು ಕೊಟ್ಟಿದನು ಕೈ ಕೊಂಬ || ಏನು ಬೇಡಿದಿಷ್ಟಾರ್ಥವ ಕೊಡುವ ದಯಾನಿಧಿ ಅನುಪಮನೆಂಬ ಹರಿ ಪ್ರಲ್ಲಾದವರದ ಪ್ರಕಟನಾಗದಲೆ ಎಲ್ಲರೊಳಿಪ್ಪನು ಪ್ರತಿದಿನದಿ || ಬಲ್ಲಿದರಿಗೆ ಬಲ್ಲಿದ ಜಗನ್ನಾಥ ವಿಠಲ ವಿಶ್ವವ್ಯಾಪ್ತನೆಂಬ ಹರಿ, 80 || ಅ. ಪ. || || G || ||0|| || 2 || || 8 || ಗೊರಲಿಯು ಕೆಂಡವನ್ನು ಕಡಿಯಬಹುದು; ಆದರೆ ಭಯವು ಸಂತರ ಅಂತರಂಗವನ್ನು ಸೇರಲರಿಯದು. ( ರಾಗ-ಮಾಂಡ, ತಾಲ-ಕೇರವಾ ) ಕೆಂಡಕ್ಕೆ ಗೊರಲಿಯು ಹತ್ತುವದುಂಟೆ | ಪಾಂಡುರಂಗನ ದಾಸರಿಗೆ ಭಯವುಂಟೆ ಆನಿ ಸಿಂಹನ ಕೂಡ ಅಣಕವಾಡುವದುಂಟೆ | ಶಾನ ಹೆಬ್ಬುಲಿ ಕೂಡ ಸರಸವಾಡುವದುಂಟೆ 10 ಕ, ಪ. ೬<noinclude></noinclude> cogh57ncs4vxe4p4qcxyoe0539fd38z ಪುಟ:ಕನ್ನಡ ಪರಮಾರ್ಥ ಸೋಪಾನ.pdf/೬೨ 104 99025 276106 2024-10-26T07:21:27Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಕತ್ತಲು ರವಿಗಿನ್ನು ಕವಿದು ಮುತ್ತಲುಂಟೆ | ಹುತ್ತಿನೊಳು ಕಪ್ಪಿ ಹೋಗುವದುಂಟೆ ಮಾರುತನ ಗುದ್ದಿದರೆ ಅಂಗ ನೋಯುವದುಂಟೆ | ಹೇಮಗಿರಿಗೆ ವಜ್ರ ಸೀಳುವದುಂಟೆ ಅತ್ತಿತ್ತ ಅಗಲದೆ ಚಿತ್ತ ಜನಯ್ಯನ | ಚಿ... 276106 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಕತ್ತಲು ರವಿಗಿನ್ನು ಕವಿದು ಮುತ್ತಲುಂಟೆ | ಹುತ್ತಿನೊಳು ಕಪ್ಪಿ ಹೋಗುವದುಂಟೆ ಮಾರುತನ ಗುದ್ದಿದರೆ ಅಂಗ ನೋಯುವದುಂಟೆ | ಹೇಮಗಿರಿಗೆ ವಜ್ರ ಸೀಳುವದುಂಟೆ ಅತ್ತಿತ್ತ ಅಗಲದೆ ಚಿತ್ತ ಜನಯ್ಯನ | ಚಿತ್ತ ದೊಳೆದ್ದವಗೆ ಚಿಂತೆಯುಂಟೆ ಸ್ವಾಮಿ ಶ್ರೀ ಪುರಂದರ ವಿಠಲರಾಯನ | ನಾಮಧಾರಿಗಳಿಗೆ ನರಕವುಂಟೆ 98 ಶರಣರನ್ನು ಕಾಡುವ ಅಪಾಯಕರ ಸಾಹಸವನ್ನು ಮಾಡದಿರು ! ( ವಚನ ) || G || il & ll || 9 || ಹಾವಿನ ಹೆಡೆಯ ಕೊಂಡು ಕೆನ್ನೆಯ ತುರಿಸಿಕೊಂಬಂತೆ ಉರಿಯ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸಿಕೊಂಬಂತೆ ಹುಲಿಯ ಮೀಸೆಯ ಹಿಡಿದು ಅಣಕವಾಡುವಂತೆ ಮರೆತು ಕೂಡಲ ಸಂಗಮನ ಶರಣರೊಡನೆ ಸರಸವಾಡಿದರೆ ಒಡಲಲ್ಲಿ ಸುಣ್ಣದ ಕಲ್ಲು ಕಟ್ಟಿಕೊಂಡು ಮಡುವ ಬಿದ್ದಂತೆ. ಸಂತರ ದೈಹಿಕ ಹಾಗೂ ಮಾನಸಿಕ ಕುರುಹುಗಳು ( ರಾಗ-ಮಿಶ್ರಕಾಫಿ, ತಾಲ-ದಾದರಾ ) ಹೌದಪ್ಪಾ ಹೌದಪ್ಪಾ ಹೌದು ದೇವರ | ನಿಂದು ನೀ ತಿಳಿದರೆ ಇಲ್ಲಪ್ಪಾ ದೂರ ತಂಬಾಕಿಲ್ಲದೆ ಬತ್ತಿ ಸೇದಿರಬೇಕು | ದಾರ ಕುಡಿಯದೆ ನಿಶಾ ಆಗಿರಬೇಕು || ಇಬ್ಬಡ ತಬ್ಬಡ ಇಲ್ಲದೆ ನಾಲಿಗೆ ಹೋಗಿರಬೇಕು | ಮೇಲಿ ಹೋಗಿ ಗುರುಪಾದಕೆ ಹೊಂದಿರಬೇಕು ನೀರು ಇಲ್ಲದ ಝಳಕ ಮಾಡಿರಬೇಕು | ಅರಿವಿ ಇಲ್ಲದೆ ಮಡಿ ಉಟ್ಟಿರಬೇಕು | ಉಣ್ಣದೆ ಹೊಟ್ಟೆ ತುಂಬಿರಬೇಕು | ಎಚ್ಚರದೊಳಗೆ ನಿದ್ದಿ ಹತ್ತಿರಬೇಕು || ಪ || || G ||<noinclude></noinclude> bn1abjjglwb1c956xfxlscoiz03bv2k ಪುಟ:ಕನ್ನಡ ಪರಮಾರ್ಥ ಸೋಪಾನ.pdf/೬೩ 104 99026 276107 2024-10-26T07:21:58Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಚಿಂತ್ಯಾಗ ಗ ಸಂತೋಷ ಆಗಿರಬೇಕು | ಭ್ರಾಂತಿ ಬಡಿದು ಬ್ರಹ್ಮ ದೊರಕಿರಬೇಕು || ಈ ಜನರಿಗೆ ಹುಚ್ಚಾಂಗ ಕಾಣಿಸಬೇಕು | ಹಿಂದು ಮುಂದಿನ ಸುದ್ದಿ ತಿಳಿದಿರಬೇಕು || ಸೂರ್ಯಚಂದ್ರನ ಕಳೆ ಬಂದಿರಬೇಕು | ಸಜ್ಜ... 276107 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಚಿಂತ್ಯಾಗ ಗ ಸಂತೋಷ ಆಗಿರಬೇಕು | ಭ್ರಾಂತಿ ಬಡಿದು ಬ್ರಹ್ಮ ದೊರಕಿರಬೇಕು || ಈ ಜನರಿಗೆ ಹುಚ್ಚಾಂಗ ಕಾಣಿಸಬೇಕು | ಹಿಂದು ಮುಂದಿನ ಸುದ್ದಿ ತಿಳಿದಿರಬೇಕು || ಸೂರ್ಯಚಂದ್ರನ ಕಳೆ ಬಂದಿರಬೇಕು | ಸಜ್ಜನ-ಸಂಗದಲ್ಲಿ ಬೆರತಿರಬೇಕು || ಕುಂದ ಇಲ್ಲದೆ ಮುಕ್ತಿ ದೊರಕಿರಬೇಕು | ನಿರುಪಾಧಿಗೆ ಮಗಾ ಹುಟ್ಟಿ ಹೀಂಗಿರಬೇಕು 2 ಸಂತರ ಹಿರಿಮೆಯು ಪರಿಸ್ಥಿತಿಯನ್ನು ಅವಲಂಬಿಸಿರುವದಿಲ್ಲ. ( ರಾಗ-ಜಂಗಲಾ, ತಾಲ-ಕೇರ ವಾ ) ಹೇಗಿದ್ದರೂ ಚಂದ ಜ್ಞಾನಿಯು ಜನ್ಮರೋಗವನಳಿದು ಬ್ರಹ್ಮಾನಂದನಾಗಿರೆ ಯೋಗದೊಳಿರೆ ಚಂದ | ಭೋಗದೊಳಿರೆ ಚಂದ | ಯೋಗವನರಿಯದಿದ್ದರೂ ಚಂದ || ತ್ಯಾಗಿಯಾದರೂ | ಬಹು ಲುಬ್ಧ ನಾದರೂ | ರಾಗಿಯಾದರೂ ವಿರಾಗಿಯಾದರೂ ಮನೆಯೊಳಿದ್ದರು ಚಂದ | ಮಠದೊಳಗಿದ್ದರು ಚಂದ | ಮನೆಮತದಾರೆಯನಳಿದರೂ ಚಂದ || ಧನವಂತನಾಗಿರೆ | ಧನಹೀನನಾಗಿರೆ | ಜನಸಂಗದೊಳಿದ್ದರೂ ಜನಸಂಗವಳಿದರೂ ಓದುತಲಿರೆ ಚಂದ | ಬರೆಯುತಲಿರೆ ಚಂದ | ಓದದೆ ಬರೆಯದಿದ್ದರು ಚಂದ || ವಾದಿಸುತಿದ್ದರೂ | ವಾದವನಳಿದರೂ | ವೇದಾಂತಿಯಾದರೂ ಸಿದ್ದಾಂತಿಯಾದರೂ ಕುಲದೊಳಿದ್ದರು ಚಂದ | ಕುಲವ ಬಿಟ್ಟರೂ ಚಂದ | ಸಭೆ ಕರ್ಮ ನಡೆಸಲು ಬಿಡಲು ಚಂದ || ಬಲು ಶೂರನಾದರೂ | ರಣ ಹೇಡಿಯಾದ | ಇಳೆಯಾನಾದರೂ ಸಲೆ ಭಂಡನಾದರೂ | a || | 8 || || ಪ || || ಅ. ಪ. || || 9 ||<noinclude></noinclude> cyjzyxj5t3hcngvtnbw6f2tc9znrfh3 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೬೪ 104 99027 276108 2024-10-26T07:22:15Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 88 ಕನ್ನಡ ಪರಮಾರ್ಥ ಸೋಪಾನ ತಿರಿದುಣ್ಣು ತಿರೆ ಚಂದ | ಕರೆದಿಕ್ಕುತಿರೆ ಚಂದ | ಗಿರಿಗುಹಾಂತರ ವಾಸಿಯಾದರೂ ಚಂದ || ಗುರುಭಕ್ತನಾದರೂ | ಗುರುಶಿಷ್ಯನಾದರೂ | ಗುರುಮಹಾಲಿಂಗನೆ ತಾನೆ ಆಗಿದ್ದರೆ ಪರಮಾತ್ಮನ ನಿಯತಿ ಮತ್ತು ಸ್ವಪ... 276108 proofread-page text/x-wiki <noinclude><pagequality level="1" user="~aanzx" /></noinclude>88 ಕನ್ನಡ ಪರಮಾರ್ಥ ಸೋಪಾನ ತಿರಿದುಣ್ಣು ತಿರೆ ಚಂದ | ಕರೆದಿಕ್ಕುತಿರೆ ಚಂದ | ಗಿರಿಗುಹಾಂತರ ವಾಸಿಯಾದರೂ ಚಂದ || ಗುರುಭಕ್ತನಾದರೂ | ಗುರುಶಿಷ್ಯನಾದರೂ | ಗುರುಮಹಾಲಿಂಗನೆ ತಾನೆ ಆಗಿದ್ದರೆ ಪರಮಾತ್ಮನ ನಿಯತಿ ಮತ್ತು ಸ್ವಪ್ರಯತ್ನ ( ಷಟ್ಟದಿ ) ದೇವಗಂಗೆಯೊಳುಳ್ಳವಗೆ ದುರಿ- ತಾವಳಿಗಳುಂಟೆ, ವಿಚಾರಿಸೆ ಪಾವುಗಳ ಭಯವುಂಟೆ, ವಿಹಗಾಧಿಪನ ಮಂದಿರದಿ || ಜೀವಕರ್ತೃತ್ವವ ಮರೆತು ಪ ರಾವರೇಶನೆ ಕರ್ತೃಯೆಂದರೆ- ದಾವ ಕರ್ಮವ ಮಾಡಿದರೂ ಲೇಪಿಸವು ಕರ್ಮಗಳು ಏನು ಮಾಡುವ ಪುಣ್ಯಪಾಪಗ ತಾನೆ ಮಾಡುವೆನೆಂಬುವಾಧಮ ಹೀನ ಕರ್ಮಕೆ ಪಾತ್ರ ನಾ ಪುಣ್ಯಕ್ಕೆ ಹರಿಯೆಂಬ || ಮಾನವನು ಮಧ್ಯಮನು ದ್ವಂದ್ವಕ ಶ್ರೀನಿವಾಸನೆ ಕರ್ತೃಯೆಂದು ಸ ದಾನುರಾಗದಿ ನೆನದು ಸುಖಿಸುವರೆ ನರೋತ್ತಮರು |||| || 6 ||<noinclude></noinclude> kxd5x4u6dvj3jui8yyrzwsi4608m3f8 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೬೫ 104 99028 276109 2024-10-26T07:22:30Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ಹತ್ತು ದೇವ-ಭಕ್ತರ ಸಂಬಂಧ ನಿನ್ನ ಮಾಯೆ ಜಗತ್ತನ್ನು ಸುತ್ತಿದರೆ, ಎನ್ನ ಪ್ರೇಮವು ನಿನ್ನನ್ನು ಸುತ್ತಿರುವದು ( ವಚನ ) ಜಗವ ಸುತ್ತಿಪ್ಪುದು ನಿನ್ನ ಮಾಯೆಯಯಾ ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ. ನೀನು ಜಗ... 276109 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ಹತ್ತು ದೇವ-ಭಕ್ತರ ಸಂಬಂಧ ನಿನ್ನ ಮಾಯೆ ಜಗತ್ತನ್ನು ಸುತ್ತಿದರೆ, ಎನ್ನ ಪ್ರೇಮವು ನಿನ್ನನ್ನು ಸುತ್ತಿರುವದು ( ವಚನ ) ಜಗವ ಸುತ್ತಿಪ್ಪುದು ನಿನ್ನ ಮಾಯೆಯಯಾ ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ. ನೀನು ಜಗಕೆ ಬಲ್ಲಿದನು ನಾನು ನಿನಗೆ ಬಲ್ಲಿದನು ಕಂಡಯ್ಯಾ. ಆನು ನಿನ್ನೊಳಗೆ ನೀನು ಎನ್ನೊಳಗೆ ಕರಿಯು ಕನ್ನಡಿಯೊಳಡಗಿದಂತಯಾ ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ, 9 ಪರಮಾತ್ಮನು ಸರ್ವಸಮರ್ಥನು ( ವಜನ ) ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬಕ್ಕು ಹರಿದು ಹೆದ್ದೊರೆಯು ಕೆರೆ ತುಂಬಿದಂತಯ್ಯಾ. ನೆರೆಯದ ವಸ್ತು ನೆರೆವುದು ನೋಡಯ್ಯಾ. ಅರಸು ಪರಿವಾರ ಕೈವಾರ ನೋಡಯ್ಯಾ. ಪರಮ ನಿರಂಜನನೆ ಮರೆದ ಕಾಲಕ್ಕೆ ತುಂಬಿದ ಹರವಿಯ ಕಲ್ಲು ಕೊಂಡಂತೆ ಕೂಡಲಸಂಗಮದೇವಾ, a ಈ ಸಂಕಟ ಸಮಯದಲ್ಲಿ ನಿನ್ನ ಪಾದಾರವಿಂದವ ತೋರಯ್ಯ ಪ್ರಭೋ ! [ ರಾಗ-ಭೈರವಿ ( ಕರ್ನಾಟಕಿ), ತಾಲ- ದೀಪಚಂದಿ] ಇಂದು ಎನಗೆ ಗೋವಿಂದ, ನಿನ್ನ ಪಾದಾರ- | ವಿಂದವ ತೋರೋ ಮುಕುಂದ ಇಂದಿರೆ ರಮಣ<noinclude></noinclude> bytakxfau01m3kfd2ctojel4gv2c6ue ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೭೬ 104 99029 276122 2024-10-26T08:15:26Z ~aanzx 6806 /* ಪರಿಶೀಲಿಸಲಾಗಿಲ್ಲ */ Created blank page 276122 proofread-page text/x-wiki <noinclude><pagequality level="1" user="~aanzx" /></noinclude><noinclude></noinclude> febwk3y90gcwgwy2vetnq7zoc4y673b 276125 276122 2024-10-26T08:16:37Z ~aanzx 6806 /* Without text */ 276125 proofread-page text/x-wiki <noinclude><pagequality level="0" user="~aanzx" /></noinclude><noinclude></noinclude> gzltgpjelicgd79dxmggh43tmpfuqo7 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೭೭ 104 99030 276123 2024-10-26T08:15:28Z ~aanzx 6806 /* ಪರಿಶೀಲಿಸಲಾಗಿಲ್ಲ */ Created blank page 276123 proofread-page text/x-wiki <noinclude><pagequality level="1" user="~aanzx" /></noinclude><noinclude></noinclude> febwk3y90gcwgwy2vetnq7zoc4y673b 276124 276123 2024-10-26T08:16:01Z ~aanzx 6806 /* Without text */ 276124 proofread-page text/x-wiki <noinclude><pagequality level="0" user="~aanzx" /></noinclude><noinclude></noinclude> gzltgpjelicgd79dxmggh43tmpfuqo7 ಸದಸ್ಯರ ಚರ್ಚೆಪುಟ:StepanieBehrens 3 99031 276128 2024-10-26T08:48:15Z ಕನ್ನಡ ವಿಕಿ ಸಮುದಾಯ 4988 ಹೊಸ ಬಳಕೆದಾರರ ಸ್ವಾಗತ 276128 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=StepanieBehrens}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೧೮, ೨೬ ಅಕ್ಟೋಬರ್ ೨೦೨೪ (IST) rwfgoqcu0gwldbi3j7l4tg4nfga8c2e ಸದಸ್ಯರ ಚರ್ಚೆಪುಟ:R sharanabasavashastri ilkal 3 99032 276129 2024-10-26T08:49:25Z ಕನ್ನಡ ವಿಕಿ ಸಮುದಾಯ 4988 ಹೊಸ ಬಳಕೆದಾರರ ಸ್ವಾಗತ 276129 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=R sharanabasavashastri ilkal}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೧೯, ೨೬ ಅಕ್ಟೋಬರ್ ೨೦೨೪ (IST) 65aslehiml4k2vcybl7wc8kh0mb4kci ಪುಟ:ಕನ್ನಡ ಪರಮಾರ್ಥ ಸೋಪಾನ.pdf/೯೬ 104 99033 276133 2024-10-26T09:15:09Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 26 ಕನ್ನಡ ಪರಮಾರ್ಥ ಸೋಪಾನ es ಪಾಪವಳಿದಾಗ ಕಾಣುವ ಹಾಗೂ ಕಾಣಿಸಿದಾಗ ಪಾಪವನ್ನಳಿಸುವ ದಿವ್ಯ ರತ್ನದ ದರ್ಶನ ( ರಾಗ-ಭೂಪ, ತಾಲ- ದೀಪಚಂದಿ ) ರತ್ನ ಬಂದಿದೆ ನೋಡಿರೋ | ಉನ್ನತ ಜೀವಾ | ರತ್ನ ಬಂದಿದೆ ನೋಡಿರೋ ಪೃಥ್ವಿಗಧಿಕ ಬ್ರಹ್ಮ... 276133 proofread-page text/x-wiki <noinclude><pagequality level="1" user="~aanzx" /></noinclude>26 ಕನ್ನಡ ಪರಮಾರ್ಥ ಸೋಪಾನ es ಪಾಪವಳಿದಾಗ ಕಾಣುವ ಹಾಗೂ ಕಾಣಿಸಿದಾಗ ಪಾಪವನ್ನಳಿಸುವ ದಿವ್ಯ ರತ್ನದ ದರ್ಶನ ( ರಾಗ-ಭೂಪ, ತಾಲ- ದೀಪಚಂದಿ ) ರತ್ನ ಬಂದಿದೆ ನೋಡಿರೋ | ಉನ್ನತ ಜೀವಾ | ರತ್ನ ಬಂದಿದೆ ನೋಡಿರೋ ಪೃಥ್ವಿಗಧಿಕ ಬ್ರಹ್ಮಪುರದಿಂದ ಬಂದಿದೆ | ರತ್ನ ಪರೀಕ್ಷೆಯ ಬಲ್ಲ ಸತ್ಪುರುಷರೆ ಶಿರದೊಳು ಅಡಗಿ ಅದೆ | ಯಾವಾಗಲೂ | ಕರದಲ್ಲಿ ಕಾಣುತಿದೆ || ಪರಚಂದ್ರ ಸೂರ್ಯ ಬೀದಿಗಳೊಳಗಿಟ್ಟದೆ | ದುರಿತ ಕರ್ಮಗಳಳಿದವಗೆ ಕಾಣುತಿದೆ ಅಷ್ಟ ದಳಗಳಿಂದ | ಆ ರತ್ನ ವು | ದಿಟವಾಗಿಹುದರಿಂದ || ದೃಷ್ಟಿಯನಗಲದೆ ನೋಡಿದ ಪುರುಷನು | ನಷ್ಟ ಪಾತಕನಾಗಿ ಶ್ರೇಷ್ಠನಾಗುವನಂತೆ ಕಳ್ಳರ ಭಯವಿಲ್ಲವೋ | ಆ ರತ್ನಕ್ಕೆ | ಸುಳ್ಳರ ಸುಳವಿಲ್ಲ || ಎಲ್ಲೆಲ್ಲಿ ನೋಡಲು ಅಲ್ಲಿ ಕಾಂಬುದು ತಾನು | ಒಲ್ಲೆನೆಂದರೆ ಬಿಡದೆದುರಿಗೆ ನಿಲ್ಲುವದು ಶಿರದೊಳು ರತ್ನವನ್ನು | ಧರಿಸಿದಂಥಾ | ಉರಗನ ಹೃದಯವನ್ನು ಉರಗಭೂಷಣ ಪಕ್ಷಿ-ಹಂಸವಾಹನ ಮುಖ್ಯ | ಸುರಮುನಿ ಹೃದಯದಿ ನಿತ್ಯ ಬೆಳಗುವಂಥಾ ದೊರೆ ದೇಸಾಯಿಗಳಲ್ಲಿಯೂ | ನವಕೋಟಿ | ನರ ನಾರಾಯಣನಲ್ಲಿಯ || ನೆರೆ ಚಕ್ರವರ್ತಿ ಬೊಕ್ಕ ಸದೊಳಗಿಲ್ಲ ಶ್ರೀ- | || ಪ || || ಅ.ಪ. || || 9 || il & || 1 & 11 ಗುರುಮಹಾಲಿಂಗ ರಂಗನ ಭಾಂಡಾರದೊಳಿಹ || 8 ||<noinclude></noinclude> jrzt66b3bu43b1vhdlt35tnqi6m3gd3 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೯೭ 104 99034 276134 2024-10-26T09:16:45Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ಹದಿನಾರು ರೂಪ ತೇಜ ನಾದಾದಿಗಳ ಅನುಭಾವ ಪರಬಿಂದು ಮಿಂಚು ಚಂದ್ರ ಸೂರ್ಯ ಪ್ರಾಣಲಿಂಗ ದರ್ಶನ ( ರಾಗ-ದುರ್ಗಾ, ತಾಲ-ದೀಪಚಂದಿ ) ಕಾಣುತಿದೆ ಪರಬಿಂದು | ಶಾಂಭವಿಯ ಕೊನೆಯಲ್ಲಿ ಲಕ್ಷವಿಡಲಾಕ್ಷಣದಿ ಸ್ಥಿರಕಾಯನಾಗಿ ಕು... 276134 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ಹದಿನಾರು ರೂಪ ತೇಜ ನಾದಾದಿಗಳ ಅನುಭಾವ ಪರಬಿಂದು ಮಿಂಚು ಚಂದ್ರ ಸೂರ್ಯ ಪ್ರಾಣಲಿಂಗ ದರ್ಶನ ( ರಾಗ-ದುರ್ಗಾ, ತಾಲ-ದೀಪಚಂದಿ ) ಕಾಣುತಿದೆ ಪರಬಿಂದು | ಶಾಂಭವಿಯ ಕೊನೆಯಲ್ಲಿ ಲಕ್ಷವಿಡಲಾಕ್ಷಣದಿ ಸ್ಥಿರಕಾಯನಾಗಿ ಕುಳಿತು | ವ್ಯವ- 1 ಹರಿಪ ಕರಣೇಂದ್ರಿಯಗಳನ್ನು ತಡೆದು || ಬಾಹ್ಯ ಪರಿಕರವನಳಿದು | ದೃಷ್ಟಿ | ಮನ ಪವನ ಬೆರಸಿ ನಾಸಾಗ್ರದಲ್ಲಿ ನೋಡ ಎಳೆಯಾದ ಮುತ್ತಿನಂತೆ | ದೀಪ | ದುರಿಯಂತೆ ಸೆಳೆ ಮಿಂಚಿನಂತೆ ರತ್ನದಂತೆ || ತೊಳಿಪ ವಿದ್ರುಮ ಬಳ್ಳಿಯಂತೆ | ಥಳ- | ಫಳಿದ ಶಶಿಸೂರ್ಯಕೋಟಿ ಪ್ರಜ್ಞೆಯಂತೆ ಒಳಗಿರ್ಪ ಪ್ರಾಣಲಿಂಗಾ | ಅದು | ಪಳಕ ಕೊಡದೊಳು ದೀಪದ ತೆರದೀ || ಹೊಳೆವ ನೇತ್ರದ್ವಾರದಿ ಹೊರ | ಹೊಮ್ಮಿ | ಬೆಳಗಿ ಗುರುಸಿದ್ಧ ತಾನೆ ಆಗಿ 5 || 9 || || a || ಶ್ರೀಸಮರ್ಥ ಸದ್ಗುರುವಿನ ಕರುಣದಿಂದ ನೆಲೆಯಿಲ್ಲದ ಸರ್ವವ್ಯಾಪಿಯಾದ ಪರಮಾತ್ಮನ ರೂಪವ ಕಂಡೆ ( ರಾಗ-ದುರ್ಗಾ, ತಾಲ-ದೀಪಚಂದಿ ) ವಸ್ತು ಕಂಡೆನೊ ಒಂದು | ಕರ್ತು ಸದ್ಗುರುವಿನ ಕೃಪೆಯಿಂದ ತೇಜಃಪುಂಜದ ರೂಪ | ಮೂರ್ಜಗದೊಳಗಿದು ಅಪರೂಪಾ | || ಪ ||<noinclude></noinclude> rnoioo6cr1w11r23ol3dsw2o27qf9z5 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೯೮ 104 99035 276135 2024-10-26T09:17:00Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 20 ಕನ್ನಡ ಪರಮಾರ್ಥ ಸೋಪಾನ ನಿಜ ನಿರ್ವಿಕಲ್ಪಾ | ಸಜ್ಜನ ಹೃದಯದ ಚಿದ ಘನದೀಪಾ ರೂಪಕೆ ನೆಲೆಯಿಲ್ಲ | ವ್ಯಾಪಕವಾಗಿಹುದು ಮೂಜಗವೆಲ್ಲ || ಗುಪ್ತ ಜ್ಞಾನಿಯೇ ಬಲ್ಲಾ | ಜಪ ತಪಗಳಿಗಿದು ಸಿಲುಕುವದಲ್ಲ ಬೈಲಿಗೆ ನಿರ್ಬೈಲ | ಭಾವಿಕ ಬ... 276135 proofread-page text/x-wiki <noinclude><pagequality level="1" user="~aanzx" /></noinclude>20 ಕನ್ನಡ ಪರಮಾರ್ಥ ಸೋಪಾನ ನಿಜ ನಿರ್ವಿಕಲ್ಪಾ | ಸಜ್ಜನ ಹೃದಯದ ಚಿದ ಘನದೀಪಾ ರೂಪಕೆ ನೆಲೆಯಿಲ್ಲ | ವ್ಯಾಪಕವಾಗಿಹುದು ಮೂಜಗವೆಲ್ಲ || ಗುಪ್ತ ಜ್ಞಾನಿಯೇ ಬಲ್ಲಾ | ಜಪ ತಪಗಳಿಗಿದು ಸಿಲುಕುವದಲ್ಲ ಬೈಲಿಗೆ ನಿರ್ಬೈಲ | ಭಾವಿಕ ಬಲ್ಲನು ಇದರ ಹೊಯಿಲಾ || ಮಹಿಪತಿಗನುಕೂಲಾ | ಜೀವನ್ಮುಕ್ತಿಗಿದೆ ಮೂಲಾ Q ಎನ್ನಂತರಂಗದಲ್ಲಿ ಲಿಂಗಪೂಜೆಯು ಸಂತತವಾಗಿ ನಡೆದಿರುವದು ( ರಾಗ-ಪರಿಯಾ ಧನಾಶ್ರೀ, ತಾಲ-ದೀಪಚಂದಿ) ಲಿಂಗಪೂಜಿ ಆಗತದಾ | ಯಾವಾಗ ನೋಡಲು | ಲಿಂಗಪೂಜಿ ಆಗತದಣ್ಣಾ ಲಿಂಗಪೂಜಿ ಆಗತದ | ಅಂಗ ಎಂಬೋ ಗುಡಿಯ ಒಳಗೆ | ಲಿಂಗದಂಥಾ ಮನಸು ತನ್ನ | ಕಂಗಳಿಗೆ ಕಾಣತದ ಆರು ಮೂರು ಕಟ್ಟಬೇಕಣ್ಣ | ಆ ಲಿಂಗಪೂಜೆಗೆ | ಆರು ಮೂರು ಕೆಡಿಸಬೇಕಣ್ಣಾ || 9 || || a || || ಪ || || ಅ.ಪ. || ಆರು ಮನಿಯಾ ದಾಟಬೇಕು | ಮೂರು ನದಿಯಾ ನಟ್ಟನಡುವೆ | ಏರಿ ಶಿಖರದಲ್ಲಿ ನೋಡಲು | ಭೇರಿಗುಟ್ಟಿ ಕೂಗುತದ ನಾಲ್ಕು ದಾರಿ ಉಂಟು ನೋಡಾ | ಆ ಲಿಂಗಪೂಜೆಗೆ | ಮೇಲ್ಕ ಏರಿ ನಿಲ್ಲಬೇಕಣ್ಣಾ || 26 ಕಾಕಬುದ್ದಿ ಕಳೆಯಬೇಕು | ನೂಕಬೇಕೊ ಮದಗಳೆಲ್ಲ ! ಏಕನಾಗಿ ನೋಡಲು ಅ. 1 ನೇಕ ಬೆಳಕ ಕಾಣುತ್ತದ ಯೋಗಿ ಉನ್ಮನಿ ವಾಸ ನೋಡಾ | ಆ ನಂಬಿದವರಿಗೆ | ಚಿನ್ಮಯ ರೂಪಾ ಹೊಳೆಯುತದಣ್ಣಾ || ಆಗ ಈಗ ಎನ್ನದೆ ದೇಹ | ಸಾಗಿ ನಿನ್ನ ಹೋಗತದ | ಹೋಗುವಾಗ ಗಂಗಾಧರನ | ಬೇಗ ನೀವು ಬಲ್ಲಿರಾ ||0|| || 5 || il & l<noinclude></noinclude> myuuu5suae91ku28fipa6drey3uwt00 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೯೯ 104 99036 276136 2024-10-26T09:17:18Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಆಷ್ಟವಿಧ ಪ್ರಾಣಲಿಂಗಪೂಜೆಯು ( ರಾಗ-ಭೂಪ ತಾಲ-ದೀಪಚಂದಿ ) ಲಿಂಗಪೂಜೆಯ ಮಾಡಿರೋ | ನಿಮ್ಮೊಳು ಪ್ರಾಣ- 1 ಲಿಂಗಪೂಜೆಯ ಮಾಡಿಕೊ ಗಂಗೆ ಯಮುನೆಗಳ ಸಂಗಮದೊಳು ಮಿಂದು | ಶೃಂಗಾಟ ಕದುಪರಿ ರಂಗಮಂಟಪದೊಳು ಪರ... 276136 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಆಷ್ಟವಿಧ ಪ್ರಾಣಲಿಂಗಪೂಜೆಯು ( ರಾಗ-ಭೂಪ ತಾಲ-ದೀಪಚಂದಿ ) ಲಿಂಗಪೂಜೆಯ ಮಾಡಿರೋ | ನಿಮ್ಮೊಳು ಪ್ರಾಣ- 1 ಲಿಂಗಪೂಜೆಯ ಮಾಡಿಕೊ ಗಂಗೆ ಯಮುನೆಗಳ ಸಂಗಮದೊಳು ಮಿಂದು | ಶೃಂಗಾಟ ಕದುಪರಿ ರಂಗಮಂಟಪದೊಳು ಪರಭಕ್ತಿ ಜಲವ ನೀಡಿ | ಮಜ್ಜ ನಗೈದು | ವಿರತಿ ಗಂಧವನೆ ತೀಡಿ || ಕರಣ ಇಂದ್ರಿಯ ಎಂಬ | ಮಿರುಗುವಕ್ಷತೆಯಿಟ್ಟು | ಅರಿವೆಂಬ ನಿರ್ಮಲ ಸರಸ ಪುಷ್ಪವ ಸೂಡಿ ಹರ್ಷವೆಂಬುವ ಧೂಪವ | ಸಮರ್ಪಿಸೆ | ಪರಬಿಂದು ರುಚಿ ದೀಪವ | ನಿರದೆ ಪರಿಪೂರ್ಣ ನೈವೇದ್ಯವನೆ ಮಾಡಿ | ಮೆರೆವ ತ್ರಿಗುಣವೆಂಬ ವರ ತಾಂಬೂಲವ ಕೊಟ್ಟು ಕರದಿಷ್ಟಲಿಂಗವಿದೆ | ಶರೀರದಲ್ಲಿ | ಪರವಸ್ತು ತಾನಾಗಿದೆ || ಹೊರವೊಳಗೆರಡೆನ್ನದರಿದರಿವನೆ ಮೀರಿ | ಗುರುಸಿದ್ದನಂಯೋಳ್ ಬೆರೆದೇಕಮಯವಾಗಿ 88 ಅಂತರಂಗದಲ್ಲಿಯ ಕಲ್ಪವೃಕ್ಷವನ್ನು ಕಾಣಿರಯ್ಯ | ( ರಾಗ- ಪುರಿಯಾ ಧನಾತ್ರಿ, ತಾಲ- ದೀಪಚಂದಿ) ಕಲ್ಲು ಮೆತ್ತಗೆ ಮಾಡಿಕೊಳ್ಳಣ್ಣಾ | ಬಲ್ಲವನ ಕೇಳಿ ಸಾರ 23 ಕಲ್ಲು ಮೆತ್ತಗೆ ಮಾಡಿಕೊಳ್ಳೋ | ಕಲ್ಲುಸಕ್ಕರೆಗಿಂತ ಸವಿಯೊ | ಅಮೃತ ತ ಸುರಿದು ನೀನು | ಜ್ಞಾನಜ್ಯೋತಿ ತುಂಬಿಕೊಳ್ಳೋ 2F || ಪ || || ಅ.ಪ. || |||| || 6 || || a || || ಅ.ಪ. || ಕಲ್ಲಿನೊಳಗೆ ಪರುಷ ಕಾಣಣ್ಣಾ | ಪರಬ್ರಹ್ಮನರಿಯದೆ | 03 ಕೈಯ ಒಳಗೆ ಬಂದೀತು ಹ್ಯಾಂಗಾ || ಕಲ್ಲುಕುಟ್ಟಿಗೆ ಅಲ್ಲಮ ಪ್ರಭು | ಶಿಲೆಯ ಒಡೆದು ಸೆಲೆಯ ತೆಗೆದ | ನೀರು ನೀರು ಕೂಡಿದ ಬಳಿಕ | ಭೇದಭಾವಗಳ್ಯಾಕ ಬೇಕೊ 11011<noinclude></noinclude> nzaz3x20dljpesw9v5oxbrujuytoo53 ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೦೦ 104 99037 276137 2024-10-26T09:17:32Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 60 ಕನ್ನಡ ಪರಮಾರ್ಥ ಸೋಪಾನ ಕಲ್ಲಿನಲಿ ಕಲ್ಪವೃಕ್ಷ ಕಾಣಾ | ಬೇಡಿದ ಫಲಗಳ 1 ಕೊಡುವ ಬೀದ ಉಂಟು ನೋಡಣ್ಣಾ || ಗುರು ಲಿಂಗ ಜಂಗಮ ಚರಣ | ಹೊಂದಿಡೋ ಎಂದಿಗಗಲದೆ | ಬೆಲ್ಲ ಸವಿಯು ಕೂಡಿದಂತೆ | ಕೂಡಿಕೊಳ್ಳೋ ನೀನು ಇಲ್ಲೆ | | 6 || ಅನಾಹತನಾ... 276137 proofread-page text/x-wiki <noinclude><pagequality level="1" user="~aanzx" /></noinclude>60 ಕನ್ನಡ ಪರಮಾರ್ಥ ಸೋಪಾನ ಕಲ್ಲಿನಲಿ ಕಲ್ಪವೃಕ್ಷ ಕಾಣಾ | ಬೇಡಿದ ಫಲಗಳ 1 ಕೊಡುವ ಬೀದ ಉಂಟು ನೋಡಣ್ಣಾ || ಗುರು ಲಿಂಗ ಜಂಗಮ ಚರಣ | ಹೊಂದಿಡೋ ಎಂದಿಗಗಲದೆ | ಬೆಲ್ಲ ಸವಿಯು ಕೂಡಿದಂತೆ | ಕೂಡಿಕೊಳ್ಳೋ ನೀನು ಇಲ್ಲೆ | | 6 || ಅನಾಹತನಾದವು ಎಲ್ಲ ವಿಕಾರ ಕಾಮನೆಗಳನ್ನು ನಾಶಗೊಳಿಸುವದು (ರಾಗ-ಮಾಂಡ, ತಾಲ-ಕೇರವಾ ) ನಾದವ ಕೇಳುತ ನಿದ್ರೆಯ ಮಾಡುವ | ಬ್ರಹ್ಮವು ತಾನಾಗಿ || ನಾದವ ಕೇಳಲು ನಾನಾ ಗುಣಗಳು | ಹೋದವು ತಾವಾಗಿ ಕೂಡಿತು ದೃಷ್ಟಿ ಪರಬ್ರಹ್ಮದೊಳು ತಾ | ಅನುದಿನದಲ್ಲಿ ಬೇಗೀ || ಮನಸೇಂದ್ರಿಯಗಳು ಹುಡುಕಿದರಿಲ್ಲಾ | ಹೋದವು ತಾವಾಗಿ ನಾನಾ ವರ್ಣದ ಛಾಯವ ನೋಡುತ | ನಿದ್ರೆಯ ಮಾಡಿದೆನೋ || ಭಾನುಕೋಟಿ ಪ್ರಕಾಶದ ಬೆಳಕಲಿ ನಾದವ ಕೇಳಿದೆನೋ ಕಾಣದ ರೂಪವು ಕಾಣುತ್ತಲೆ ನಾ | ಕಾಮಿಸಿ ಮಲಗಿದೆನೋ || ಬೋಧ ಚಿದಾನಂದ ಸದ್ಗುರುನಾಥನ | ಧ್ಯಾನವ ಮಾಡಿದೆನೋ 2. foll || a || ಪಾರಮಾರ್ಥಿಕ ಪರಮಾಮೃತದ ಸಿದ್ಧತೆಯನ್ನು ಬಣ್ಣಿಸುವ ಹಿರಿದಾದ ವಾಕ್ ಸಿದ್ಧಿಯ ರೂಪಕ (ರಾಗ-ಭೂಪ, ತಾಲ-ದೀಪಚಂದಿ } ನೆಲ್ಲು ಕುಟ್ಟುಣು ಬಾರಮ್ಮಾ | ಇಬ್ಬರು ಕೂಡಿ ನೆಲ್ಲು ಕುಟ್ಟುಣು ಬಾರೆ | ನಿಲ್ಲದೆ ಬೆನ್ನು ಹತ್ತಿ | ಹನ್ನೆರಡು ಹದಿನಾರು ನಲ್ಲೆಯರು ಕೂಡಿಕೊಂಡು || ಪ || | || ಅ.ಪ. ||<noinclude></noinclude> fh1fd4ef4cnivn8pzh8fyzp561b42sr ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೦೧ 104 99038 276138 2024-10-26T09:17:56Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕ, ಪ. ೧೧ ಕನ್ನಡ ಪರಮಾರ್ಥ ಸೋಪಾನ ತನುವೆಂಬ ಒಬ್ಬ ಮಾಡಿ | ಪ್ರಾಣವೆಂಬ | ಒನಲೆ ಹೇರಿ ಹಾಕಿ || ವಿವೇಕವೆಂಬ ಅಕ್ಕಿ ಹಸನ ಮಾಡಿ | ಹಳ್ಳ ತಗಿಯವಾ ಜ್ಞಾನದೃಷ್ಟಿಲೆ ನೋಡಿ ವಾಸನತ್ರಯಗಳೆಂಬ] ಒಲೆಗುಂಡು ಮಾಡಿ | ಪ್ರಾರಬ್ದ ಗಡಿಗೆ ಹ... 276138 proofread-page text/x-wiki <noinclude><pagequality level="1" user="~aanzx" /></noinclude>ಕ, ಪ. ೧೧ ಕನ್ನಡ ಪರಮಾರ್ಥ ಸೋಪಾನ ತನುವೆಂಬ ಒಬ್ಬ ಮಾಡಿ | ಪ್ರಾಣವೆಂಬ | ಒನಲೆ ಹೇರಿ ಹಾಕಿ || ವಿವೇಕವೆಂಬ ಅಕ್ಕಿ ಹಸನ ಮಾಡಿ | ಹಳ್ಳ ತಗಿಯವಾ ಜ್ಞಾನದೃಷ್ಟಿಲೆ ನೋಡಿ ವಾಸನತ್ರಯಗಳೆಂಬ] ಒಲೆಗುಂಡು ಮಾಡಿ | ಪ್ರಾರಬ್ದ ಗಡಿಗೆ ಹೇರಿ || ಕಾಮಕ್ರೋಧವೆಂಬ ಕಟ್ಟಿಗೆ ಉರಿಮಾಡಿ | ಪ್ರಪಂಚ ಪರಮಾರ್ಥ ಒಳಹೊರಗೆ ನೋಡಿ ಕುದಿಯುವ ಸಮಯದಲ್ಲಿ | ಮದದ ಉಕ್ಕು | ಮೀರಿ ಬರುತಲದಾ || ಸಧೀರ ಎಂಬು ಹುಟ್ಟಿಲೆ ಹೊಡೆದು | 80 11011 || 9 || ನೆಟ್ಟಗೆ ಅಡಿಗೆಯ ಧಿಟ್ಟಾಗಿ ಮಾಡಮ್ಮಾ || a |} ಪರಮಾನ್ನ ಪಾಯಸವು | ಪ್ರಾರಭೇದಿ | ಪ್ರಾಪ್ತವಾದೀತು ಏಳಮ್ಮಾ || ಗುರುಲಿಂಗ ಜಂಗಮ ಬೀಗರ ಕೂಡಿಕೊಂಡು | ಸ್ವಾನಂದ ಎಡಿಮಾಡಿ ಸವಿಯ ನೋಡಮ್ಮಾ || 11<noinclude></noinclude> dn1uyk1oy0zmtroeagwznuxtltixuvv ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೦೨ 104 99039 276139 2024-10-26T09:18:10Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕರಣ ಹದಿನೇಳು ಸಮ್ಮಿಲಿತ ಅನುಭಾವ ಆನಂದಮಯ ಚಿಪ್ಪನ, ಭಾನುವಿಲ್ಲದ ಬಿಸಿಲು, ಉಕ್ಕುವ ಅಮೃತಕುಂಭ (ರಾಗ-ಭೂಪ, ತಾ-ದೀಪಚಂದಿ ಆನಂದವಾದ ಚಿದ್‌ಘನ ವಸ್ತು ನಾ ಕಂಡೆ | ಭಾನುವಿಲ್ಲದ ಬಿಸಲೇನಮ್ಮಾ ತಾನು ಅಲ್ಲದೆ ತನ್ನ ತವರೂರ... 276139 proofread-page text/x-wiki <noinclude><pagequality level="1" user="~aanzx" /></noinclude>ಪ್ರಕರಣ ಹದಿನೇಳು ಸಮ್ಮಿಲಿತ ಅನುಭಾವ ಆನಂದಮಯ ಚಿಪ್ಪನ, ಭಾನುವಿಲ್ಲದ ಬಿಸಿಲು, ಉಕ್ಕುವ ಅಮೃತಕುಂಭ (ರಾಗ-ಭೂಪ, ತಾ-ದೀಪಚಂದಿ ಆನಂದವಾದ ಚಿದ್‌ಘನ ವಸ್ತು ನಾ ಕಂಡೆ | ಭಾನುವಿಲ್ಲದ ಬಿಸಲೇನಮ್ಮಾ ತಾನು ಅಲ್ಲದೆ ತನ್ನ ತವರೂರ ಮನೆಯೊಳು | ತಾನು ಮಾಡಿದ ಪುಣ್ಯ ತನಗವಾ ಕುಂಡಲದೊಳಗೊಂದು ನೀಲಗನ್ನಡಿ ಇಟ್ಟು 1 ಮಂಡಲದೊಳಗಾಡುವದೇನಾ | ಸೇರಿ ಉನ್ಮನಿಯೊಳು ಗುರುವಿನ ಪುಣ್ಯದಿ | ಘನವಸ್ತು ದೊರಕಿತು ಎನಗಾ ನಡುನೀರ ಮಧ್ಯದಿ ವಟವೃಕ್ಷ ನಾ ಕಂಡೆ | 4 ಹೂವಿಲ್ಲ ಮಿಡಿಗಾಯಿ ಹಣ್ಣಾ || ಅಖಂಡ ವನದೊಳು ಅಮೃತ ಕೊಡ ಉಕ್ಕಿ | ಉಂಡುಂಡು ಸುಖಿಸಿ ಬಾಳುವೆನವಾ ಕೈಲಾಸ ಭೂಮಿ ಅಲ್ಲಾ ಕನಕ ಭೂಷಣವಲ್ಲಾ | ಬೈಲೊಳಗಾಡುವದೇನಮ್ಮಾ || ವರಕವಿ ನಾಗಲಿಂಗ ಗುರುವಿನ ಪುಣ್ಯದಿ | ಸ್ಥಿರಮುಕ್ತಿ ದೊರಕಿತು ಎನಗವಾ G ಸಂಗವು ಮೇರಗತಿಯ, ತೇಜ-ನಾದ-ಸುಧೆಗಳ ಅನುಭಾವ ಸುಖವನ್ನು ನೀಡುವದು ( ರಾಗ-ಸಾರಂಗ, ತಾಲ- ಕರವಾ) ಇಂಥಾದೆಲ್ಲಿದೆ ತಾ ನೋಡಿ | ಸಂಗದ ಸುಖಾ ಒಂದೊಂದು ಪರಿ ಕೇಳಿಸುವ | ಹನ್ನೊಂದರ ಮೇಲಿನ್ನೊಂದರ ಘೋಷಾ || ಧಿಮಿ ಧಿಮಿ ಧಿಮಿ ಧಿಮಿ | ಧಿಮಿ ಧಿಮಿ ಧಿಮಿ ಧಿಮಿ | ಧಿಮಿಗುಡುತ್ತಿದೆ ಆನಂದದ ಘೋಷಾ || ಅ.ಪ. || 11 || || 9 || || & l ]]<noinclude></noinclude> cjn0x01i56u2l0w0v0bwtt5nj8r70ie ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೦೩ 104 99040 276140 2024-10-26T09:18:30Z ~aanzx 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡ ಪರಮಾರ್ಥ ಸೋಪಾನ ಉದಯಾಸ್ತಿಲ್ಲದ ಬೆಳಗಿನ ಪ್ರಭೆಯು | ತುದಿಮೊದಲಿಲ್ಲದೆ ತುಂಬಿತು ಪೂರ್ಣಾ | ಬುಧಜನರನುದಿನ ಸೇವಿಸುತಿರುವ | ಸದಮಲವಾದ ಸದಾ ಸವಿ ಸುಖಾ ವಿಹಿತ ವಿವೇಕದ ಅನುಭವ ಗೂಡಿ | ಬಾಹ್ಯಾಂತರದಲ್ಲಿ ಘನ ತೋರು... 276140 proofread-page text/x-wiki <noinclude><pagequality level="1" user="~aanzx" /></noinclude>ಕನ್ನಡ ಪರಮಾರ್ಥ ಸೋಪಾನ ಉದಯಾಸ್ತಿಲ್ಲದ ಬೆಳಗಿನ ಪ್ರಭೆಯು | ತುದಿಮೊದಲಿಲ್ಲದೆ ತುಂಬಿತು ಪೂರ್ಣಾ | ಬುಧಜನರನುದಿನ ಸೇವಿಸುತಿರುವ | ಸದಮಲವಾದ ಸದಾ ಸವಿ ಸುಖಾ ವಿಹಿತ ವಿವೇಕದ ಅನುಭವ ಗೂಡಿ | ಬಾಹ್ಯಾಂತರದಲ್ಲಿ ಘನ ತೋರುತಲಿಹ || ಸ್ವಹಿತ ಸುಖದ ಸುಧಾರಸಗರೆವಾ | ಮಹಿಪತಿ ಗುರುಕರುಣದ ಕೌತುಕ || 9 || || & ನಿಜವಾದ ಬ್ರಾಹ್ಮಣನು ಪಡೆಯುವ ಬಗೆಬಗೆಯ ಅನುಭಾವಗಳು ( ರಾಗ-ಮಾಂಡ, ತಾಲ-ಕೇರವಾ) ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವ | ಅವನೀಗ ಬ್ರಾಹ್ಮಣನು ಬ್ರಹ್ಮಭೇದವೆಂದು ಜಗವನು ಕಂಡವ | ಅವನೀಗ ಬ್ರಾಹ್ಮಣನು ಮೂಗಲಿ ವಾಯುವ ತುಂಬಿ ಎಳೆಯುವ | ಅವನೀಗ ಬ್ರಾಹ್ಮಣನು || ನಾಗಸ್ವರದ ಧ್ವನಿ ಕಿವಿಯಲಿ ಕೇಳುವ ಅವನೀಗ ಬ್ರಾಹ್ಮಣನು || ಬೇಗನೆ ನೆಲೆ ನೆಲೆ ಅರನ್ನು ಆಡರುವ | ಅವನೀಗ ಬ್ರಾಹ್ಮಣನು || ವೇಗದಿ ಚಂದ್ರನ ಮಂಡಲದಮೃತವನು | ಉಂಡವ ಬ್ರಾಹ್ಮಣನು ಮುತ್ತಿನ ಮಳೆಹನಿ ಉದುರುವಾಗ | ತೊಯ್ಯದವ ಬ್ರಾಹ್ಮಣನು || ಎತ್ತೆತ್ತ ನೋಡಲು ಸೂಸು ಬೆಳದಿಂಗಳ | ಕಾಣುವ ಬ್ರಾಹ್ಮಣನು || ಮತ್ತೆ ದ್ವಿದಳದ ಸಿಂಹಾಸನದಲಿ | ಕುಳಿತವ ಬ್ರಾಹ್ಮಣನು || ಉತ್ತಮ ಸಹಸ್ರ ಕಮಲವೇರಿಕೆಯಲಿ | ಸೇರುವ ಬ್ರಾಹ್ಮಣನು || ಅ.ಪ. || [ ] || 9 ||<noinclude></noinclude> 0vavqp3aubcy21av1q8nl2ff0pyi0oo