ಕುಸುಮಾಕರ ದೇವರಗೆಣ್ಣೂರು

From Wikipedia

ಕುಸುಮಾಕರ ದೇವರಗೆಣ್ಣೂರು ಕಾವ್ಯನಾಮದಲ್ಲಿ ಸಾಹಿತ್ಯಕೃಷಿ ಮಾಡುತ್ತಿರುವ ವಸಂತ ಅನಂತ ದಿವಾಣಜಿ ಇವರು ವಿಜಾಪುರದಲ್ಲಿರುವ ದೇವರಗೆಣ್ಣೂರು ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ , ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು.

೧೯೫೬ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೩೫ ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.

ಕುಸುಮಾಕರ ದೇವರಗೆಣ್ಣೂರು ಇವರು ಅನೇಕ ಮರಾಠಿ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.ಕನ್ನಡದಲ್ಲಿ ೫ ಕಾದಂಬರಿಗಳನ್ನು ರಚಿಸಿದ್ದಾರೆ.:

ನಾಲ್ಕನೆಯ ಆಯಾಮ, ನಿರಿಂದ್ರಿಯ, ಪರಿಘ, ಬಯಲು-ಬಸಿರು.

ಅವರ ಪಿ.ಎಚ್ ಡಿ. ಮಹಾಪ್ರಬಂಧ : ಪ್ರಸಾದಯೋಗ ಸಾಹಿತ್ಯ ವಿಮರ್ಶೆ: ಗಾಳಿ ಹೆಜ್ಜೆ ಹಿಡಿದ ಸುಗಂಧ

  • ೧೯೬೬ರಲ್ಲಿ ಇವರ ‘ನಾಲ್ಕನೆಯ ಆಯಾಮ’ ಕಾದಂಬರಿಗೆ ಹಾಗು ೧೯೯೯ರಲ್ಲಿ ‘ನಿಬೀಂದ್ರಿಯ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.
  • ‘ಬಯಲು ಬಸಿರು’ ಕಾದಂಬರಿಗೆ ಮುಂಬೈನ ಗುರುನಾರಾಯಣ ಪ್ರಶಸ್ತಿ ಲಭಿಸಿದೆ.
  • ೨೦೦೬ರಲ್ಲಿ ಸತ್ಯಕಾಮ ಪ್ರಶಸ್ತಿ ಪ್ರದಾನವಾಗಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ೨೦೦೩