ಎಚ್.ಎಲ್.ಕೇಶವಮೂರ್ತಿ

From Wikipedia

ಎಚ್.ಎಲ್.ಕೇಶವಮೂರ್ತಿಯವರು ೧೯೩೯ ಡಿಶಂಬರ ೨೮ರಂದು ಮಂಡ್ಯ ಜಿಲ್ಲೆಯ ಹೆರಗನಹಳ್ಳಿಯಲ್ಲಿ ಜನಿಸಿದರು. ಇಂಜನಿಯರಿಂಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಡ್ಯಪಿ.ಇ.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.


[ಬದಲಾಯಿಸಿ] ಸಾಹಿತ್ಯ

ಎಚ್.ಎಲ್.ಕೇಶವಮೂರ್ತಿಯವರು ಕನ್ನಡದ ಹೆಸರಾಂತ ಹಾಸ್ಯ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ:

  • ನೀನ್ಯಾಕೊ ನಿನ್ನ ಹಂಗ್ಯಾಕೊ ಮಾವ
  • ಎಂಗಾರ ಟಿಕೆಟ್ ಕೊಡಿ
  • ಗೌರವಾನ್ವಿತ ದಗಾಕೋರರು
  • ಇಸ್ಪೀಟು ನ್ಯಾಯ
  • ಜೆಂಟ್ಸ್ ದ್ರೌಪದಿ ವಸ್ತ್ರಾಪಹರಣ ಪ್ರಕರಣವು..

[ಬದಲಾಯಿಸಿ] ಪ್ರಶಸ್ತಿ

೧೯೭೨ರಲ್ಲಿ ಇವರ ‘ನೀನ್ಯಾಕೊ ನಿನ್ನ ಹಂಗ್ಯಾಕೊ’ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.