ಕೊ.ಚನ್ನಬಸಪ್ಪ

From Wikipedia

ಕೊ.ಚನ್ನಬಸಪ್ಪನವರು ೧೯೨೨ ಫೆಬ್ರುವರಿ ೨೧ರಂದು ಬಳ್ಳಾರಿ ಜಿಲ್ಲೆಯ ಆಲೂರು ಮಜರಾಕಾನಾ ಮಡುವಿನಲ್ಲಿ ಜನಿಸಿದರು. ತಾಯಿ ಬಸಮ್ಮ ; ತಂದೆ ಕೋಣನ ವೀರಣ್ಣ.

[ಬದಲಾಯಿಸಿ] ವೃತ್ತಿ

ನ್ಯಾಯವಾದಿಗಳಾಗಿ ವೃತ್ತಿ ಪ್ರಾರಂಭಿಸಿದ ಚನ್ನಬಸಪ್ಪನವರು ನ್ಯಾಯಮೂರ್ತಿಗಳಾಗಿ ನಿವೃತ್ತರಾದರು.

[ಬದಲಾಯಿಸಿ] ಕೃತಿಗಳು

  • ಖಜಾನೆ
  • ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ
  • ರಕ್ತತರ್ಪಣ
  • ಹಿಂದಿರುಗಿ ಬರಲಿಲ್ಲ
  • ನ್ಯಾಯಾಲಯದ ಸತ್ಯಕಥೆಗಳು
  • ಗಡಿಪಾರು
  • ನಮ್ಮೂರ ದೀಪ
  • ಪ್ರಾಣಪಕ್ಷಿ
  • ಹೃದಯ ನೈವೇದ್ಯ
  • ದಿವಾನ್ ಬಹಾದ್ದೂರ್
  • ಶ್ರೀ ಮೃತ್ಯುಂಜಯ ಸ್ವಾಮಿಗಳು
  • ಶ್ರೀ ಅರವಿಂದರು
  • ಶ್ರೀ ಅರವಿಂದರು ಮತ್ತು ಅವರ ಆಶ್ರಮ
  • ಶ್ರೀ ರಾಮಕೃಷ್ಣ ಲೀಲಾ ನಾಟಕ
  • ರಾಮಕೃಷ್ಣರ ದೃಷ್ಟಾಂತ ಕಥೆಗಳು
  • ಬೆಳಕಿನೆಡೆಗೆ
  • ನಮಗೆ ಬೇಕಾದ ಸಾಹಿತ್ಯ
  • ನನ್ನ ಮನಸ್ಸು
  • ನನ್ನ ನಂಬುಗೆ
  • ಗಾಯಕನಿಲ್ಲದ ಸಂಗೀತ
  • ಆ ಮುಖ ಈ ಮುಖ
  • ಈ ರಾಜ್ಯದೊಡೆಯ ರೈತ

[ಬದಲಾಯಿಸಿ] ಪುರಸ್ಕಾರ

  • “ಖಜಾನೆ”ಗೆ ಭಾರತ ಸರಕಾರದ ನೂತನ ಅಕ್ಷರಸ್ಥರ ಸಾಹಿತ್ಯಸ್ಪರ್ಧೆಯಲ್ಲಿ ಬಹುಮಾನ ದೊರಕಿದೆ
  • “ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ”ಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಪುರಸ್ಕಾರ ಲಭಿಸಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪಡೆದಿದ್ದಾರೆ.