ಧರಮ್ ಸಿಂಗ್

From Wikipedia

ಧರಂ ಸಿಂಗ್
ಧರಂ ಸಿಂಗ್

ಧರಮ್ ಸಿಂಗ್ ಭಾರತದ ಕರ್ನಾಟಕ ರಾಜ್ಯದ ೧೭ನೆ ಮುಖ್ಯಮಂತ್ರಿಗಳು. ಇವರು ಕಾಂಗ್ರೆಸ್ ಪಕ್ಷದ ಸದಸ್ಯರು.

ಗುಲ್ಬರ್ಗ ಜಿಲ್ಲೆಯ, ಜೇವರಗಿ ತಾಲೂಕಿನ, ನೇಲೋಗಿ ಗ್ರಾಮದಲ್ಲಿ ೧೯೩೬ ರಲ್ಲಿ ಜನಿಸಿದ ಧರಂ ಸಿಂಗ್, ಹೈದರಾಬಾದ್ ನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗು ಎಲ್.ಎಲ್.ಬಿ. ಪದವಿಗಳನ್ನು ಪಡೆದಿದ್ದಾರೆ. ವಕೀಲರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ ಮೇಲೆ ೬೦ ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ಗುಲ್ಬರ್ಗ ಜಿಲ್ಲೆಯ ಜೇವರಗಿ ವಿಧಾನಸಭಾ ಕ್ಷೇತ್ರದಿಂದ ಸತತ ಎಂಟು ಬಾರಿ ಚುನಾಯಿತರಾಗಿದ್ದಾರೆ. ೧೯೮೦ ರಲ್ಲಿ ಗುಲ್ಬರ್ಗ ಕ್ಷೇತ್ರದಿಂದ ಲೋಕಸಭೆಗೆ ಸಹ ಚುನಾಯಿತರಾಗಿದ್ದರು.

ಮುಖ್ಯಮಂತ್ರಿಯಾಗುವ ಮೊದಲು ಕರ್ನಾಟಕ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಲೋಕೋಪಯೊಗಿ ಖಾತೆಯನ್ನು ನಿರ್ವಹಿಸಿದ್ದರು. ಇದಕ್ಕಿಂತ ಮೊದಲು ಗೃಹ ಖಾತೆ, ಸಮಾಜ ಸುಧಾರಣಾ ಖಾತೆ, ಅಬಕಾರಿ ಖಾತೆ, ಆದಾಯ ಖಾತೆ ಮೊದಲಾದ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ) ಯ ಅಧ್ಯಕ್ಷತೆಯನ್ನು ಸಹ ವಹಿಸಿದ್ದರು.


[ಬದಲಾಯಿಸಿ] ಕರ್ನಾಟಕದ ಮುಖ್ಯಮಂತ್ರಿಗಳು

ಹೆಚ್.ಡಿ.ಕುಮಾರಸ್ವಾಮಿ | ಧರಮ್ ಸಿಂಗ್ | ಎಸ್.ಎಂ.ಕೃಷ್ಣ | ಜೆ ಹೆಚ್ ಪಟೇಲ್ | ಹೆಚ್.ಡಿ.ದೇವೇಗೌಡ | ವೀರಪ್ಪ ಮೊಯ್ಲಿ | ಬಂಗಾರಪ್ಪ | ವೀರೇಂದ್ರ ಪಾಟೀಲ್ | ಎಸ್ ಆರ್ ಬೊಮ್ಮಾಯಿ | ರಾಮಕೃಷ್ಣ ಹೆಗಡೆ | ಆರ್ ಗುಂಡೂರಾವ್ | ಡಿ ದೇವರಾಜ ಅರಸ್ | ಎಸ್. ನಿಜಲಿಂಗಪ್ಪ | ಎಸ್ ಆರ್ ಕಂಠಿ | ಬಿ ಡಿ ಜತ್ತಿ | ಕಡಿದಾಳ್ ಮಂಜಪ್ಪ | ಕೆಂಗಲ್ ಹನುಮಂತಯ್ಯ | ಚೆಂಗಲರಾಯ ರೆಡ್ಡಿ