ಗರುಡ ಸದಾಶಿವರಾವ

From Wikipedia

ಗರುಡ ಸದಾಶಿವರಾಯರು ಕ್ರಿ.ಶ.೧೮೮೦ರ ಸುಮಾರಿಗೆ ಜನಿಸಿದ್ದರು. ಇವರ ತಂದೆ ಗುರುನಾಥ ಶಾಸ್ತ್ರಿ. ಗರುಡ ಸದಾಶಿವರಾಯರು ‘ಗದಗ ಶ್ರೀ ದತ್ತಾತ್ರೇಯ ನಾಟಕ ಮಂಡಳಿ’ ಯನ್ನು ಕಟ್ಟಿ, ಕರ್ನಾಟಕದ ಉದ್ದಗಲಕ್ಕೂ ಸಹಸ್ರಾರು ಪ್ರದರ್ಶನಗಳನ್ನು ನೀಡಿದರು.

ಲೋಕಮಾನ್ಯ ತಿಲಕರ ರಾಷ್ಟ್ರೀಯ ಹೋರಾಟಕ್ಕೆ ಸಂಬಂಧಿಸಿದ ‘ಬಂಧವಿಮೋಚನೆ’ ನಾಟಕದಿಂದ ರಂಗಪ್ರವೇಶ ಮಾಡಿದ ಗರುಡರು ೫೦ಕ್ಕೂ ಹೆಚ್ಚು ವರ್ಷಗಳನ್ನು ರಂಗಭೂಮಿಯ ಮೇಲೆ ಕಳೆದಿದ್ದಾರೆ. ಸುಮಾರು ೫೦ ಪೌರಾಣಿಕ,ಸಾಮಾಜಿಕ,ಐತಿಹಾಸಿಕ ಹಾಗು ರಾಷ್ಟ್ರೀಯ ನಾಟಕಗಳನ್ನು ಬರೆದು ಪ್ರಯೋಗಿಸಿದ್ದಾರೆ. ಇವರ ‘ಪಾದುಕಾ ಪಟ್ಟಾಭಿಷೇಕ’ ರಂಗಭೂಮಿಯ ಇತಿಹಾಸದಲ್ಲಿಯೆ ಮಹತ್ವದ ನಾಟಕ.


ಗರುಡರ ಕೆಲವು ಪ್ರಸಿದ್ಧ ನಾಟಕಗಳು:

  • ಪಾದುಕಾ ಪಟ್ಟಾಭಿಷೇಕ
  • ಸತ್ಯಸಂಕಲ್ಪ
  • ಎಚ್ಚಮನಾಯಕ
  • ಮಾರ್ಕಂಡೇಯ
  • ಕೀಚಕವಧೆ
  • ಬಲಸಿಂಹ ತಾರಾ
  • ಶಕ್ತಿವಿಲಾಸ
  • ಶಶಿಕಲಾ
  • ಉಗ್ರಕಲ್ಯಾಣ
  • ವಿಷಮ ವಿವಾಹ
  • ಕಂಸವಧೆ
  • ನಾನು ಕನ್ನಡಿಗ
  • ಶ್ರೀ ಶರಣ ಬಸವೇಶ್ವರ
  • ತುಕಾರಾಮ