ಜಿ.ಆರ್.ಪಾಂಡೇಶ್ವರ

From Wikipedia

ಜಿ.ಆರ್.ಪಾಂಡೇಶ್ವರ ಎಂದು ಹೆಸರಾದ ಗಣಪತಿರಾವ ಪಾಂಡೇಶ್ವರ ೨೩ ಜುಲೈ ೧೯೦೮ರಲ್ಲಿ ಬ್ರಹ್ಮಾವರದಲ್ಲಿ ಜನಿಸಿದರು. ತಾಯಿ ಸೀತಮ್ಮ; ತಂದೆ ರಾಮಚಂದ್ರರಾವ.

ಜಿ.ಆರ್.ಪಾಂಡೇಶ್ವರರವರು ಕೆಲಕಾಲ ಜಯಕರ್ನಾಟಕ ಪತ್ರಿಕೆಗೆ ಸಂಪಾದಕರಾಗಿದ್ದರು.ಉತ್ತರ ಕನ್ನಡಜಿಲ್ಲೆಯ ಹೊನ್ನಾವರದಲ್ಲಿ ನಾಗರಿಕ ಎನ್ನುವ ಪತ್ರಿಕೆ ನಡೆಯಿಸುತ್ತಿದ್ದರು. ೧೭ನೆಯ ವಯಸ್ಸಿನಲ್ಲಿಯೆ ವಿವೇಕಾನಂದ ಚರಿತಮ್ ಎನ್ನುವ ಕಾವ್ಯ ರಚಿಸಿದರು. ೨೦ನೆಯ ವಯಸ್ಸಿನಲ್ಲಿ ಅಂದರೆ ೧೯೨೮ರಲ್ಲಿ ಫ್ರ್ಯಾಗ್ರಂಟ್ ಬಡ್ಸ್ ಎನ್ನುವ ಇಂಗ್ಲಿಷ್ ಕವನ ಸಂಕಲನವನ್ನು ಹೊರತಂದರು.

ಸ್ವಾತಂತ್ರ್ಯ ಹೋರಾಟದಲ್ಲೂ ಸಹ ಜಿ.ಆರ್.ಪಾಂಡೇಶ್ವರರು ಭಾಗವಹಿಸಿದ್ದಾರೆ.