ಕೆರೂರು ವಾಸುದೇವಾಚಾರ್ಯ

From Wikipedia

ಕೆರೂರು ವಾಸುದೇವಾಚಾರ್ಯರು ೧೮೬೬ರಲ್ಲಿ ಬಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸಾಚಾರ್ಯ. ತಾಯಿ ಪದ್ಮಾವತಿ.

ಕನ್ನಡದ ನವೋದಯದ ಮೊದಮೊದಲ ಸಾಹಿತಿಗಳಲ್ಲಿ ಇವರೊಬ್ಬರು. ಕಾದಂಬರಿ ಅಲ್ಲದೆ ನಾಟಕಗಳನ್ನೂ ಸಹ ಅನುವಾದಿಸಿ, ಬರೆದು, ರಂಗದ ಮೇಲೆ ಆಡಿಸಿದ್ದಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿಗಳು

  • ಇಂದಿರೆ - (೧೯೦೮) - ಈ ಕಾದಂಬರಿಯು ಬಾಲ್ಯ ವಿವಾಹ, ವಿಧವಾ ವಿವಾಹದ ಕಥಾವಸ್ತುವನ್ನು ಹೊಂದಿದೆ.
  • ಯದುಮಹಾರಾಜ
  • ಭ್ರಾತೃಘಾತಕ ಔರಂಗಜೇಬ
  • ವಾಲ್ಮೀಕಿ ವಿಜಯ
  • ಯವನ ಸೈರಂಧ್ರಿ

[ಬದಲಾಯಿಸಿ] ನಾಟಕಗಳು

  • ನಳದಮಯಂತಿ
  • ರುಕ್ಮಿಣಿ ಹರಣ
  • ಸುರತನಗರದ ಶ್ರೇಷ್ಠಿ (ಮೂಲ : ಶೇಕ್ಸ್ಪಿಯರನ “ಮರ್ಚಂಟ್ ಆಫ್ ವೆನಿಸ್)
  • ವಸಂತಯಾಮಿನಿ ಸ್ವಪ್ನಚಮತ್ಕಾರ (ಮೂಲ : ಶೇಕ್ಸ್ಪಿಯರನ “ ಮಿಡ್ಸಮರ್ನೈಟ್ಸ್ ಡ್ರೀಮ್)
  • ವಶೀಕರಣ (ಆಲಿವರ್ ಗೋಲ್ಡ್ಸ್ ಸ್ಮಿತ್‍ನ ನಾಟಕವೊಂದರ ಅನುವಾದ)

[ಬದಲಾಯಿಸಿ] ಕಥಾ ಸಂಕಲನ

  • ತೊಳೆದ ಮುತ್ತು
  • ಪ್ರೇಮ ವಿಜಯ
  • ಬೆಳಗಿದ ದೀಪಗಳು

[ಬದಲಾಯಿಸಿ] ಪತ್ರಿಕೋದ್ಯಮ

ಕೆರೂರು ವಾಸುದೇವಾಚಾರ್ಯರು “ಶುಭೋದಯ” ಹಾಗು “ಸಚಿತ್ರ ಭಾರತ” ಎನ್ನುವ ಎರಡು ಪತ್ರಿಕೆಗಳನ್ನು ನಡೆಯಿಸುತ್ತಿದ್ದರು.

[ಬದಲಾಯಿಸಿ] ಇತರ ವಿಷಯಗಳು

ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯ ಸಂಘವು ೧೯೬೪ ರಲ್ಲಿ ವಾಸುದೇವ ಪ್ರಶಸ್ತಿ ಎಂಬ ಸ್ಮಾರಕ ಸಂಪುಟವನ್ನು ಪ್ರಕಟಿಸಿತು.

[ಬದಲಾಯಿಸಿ] ನಿಧನ

ಕೆರೂರು ವಾಸುದೇವಾಚಾರ್ಯರು ೧೯೨೧ರಲ್ಲಿ ನಿಧನರಾದರು.