ಚಾವುಂಡರಾಯ
From Wikipedia
ಚಾವುಂಡರಾಯ ಕ್ರಿ.ಶ.೧೦ನೇ ಶತಮಾನದ ಜೈನ ಕವಿ .ಇವನು ಗಂಗರ ದೊರೆ ರಾಚಮಲ್ಲನ ಮಂತ್ರಿ ಮತ್ತು ದಂಡನಾಯಕನಾಗಿದ್ದನು.ವಿದ್ವತ್ತಿಗೂ,ಸಾಹಿತ್ಯಕ್ಕೂ ಪೋಷಕನಾಗಿದ್ದನು.ಅಪ್ರತಿಮ ವೀರ,ರಾಜಕಾರಣಿಯಾಗಿದ್ದರೂ ಸ್ವತಃ ತರ್ಕ,ವ್ಯಾಕರಣ,ಗಣಿತ,ವೈದ್ಯಶಾಸ್ತ್ರ ಹಾಗೂ ಸಾಹಿತ್ಯದಲ್ಲಿ ಪಾರಂಗತನಾಗಿದ್ದನು.ಚಾವುಂಡರಾಯನಿಗೆ ಗೊಮ್ಮಟನೆಂಬ ಹೆಸರೂ ಇತ್ತು.
[ಬದಲಾಯಿಸಿ] ಕೃತಿಗಳು
೧.ತ್ರಿಷಷ್ಠಿ ಲಕ್ಷಣ ಮಹಾಪುರಾಣ
೨.ಚಾವುಂಡರಾಯ ಪುರಾಣ - ಗದ್ಯ ಕೃತಿ.ಜೈನಧರ್ಮದ ಮಹಾಪುರುಷರಾದ ೬೩ ಮಂದಿ ಶಲಾಕಾಪುರುಷರನ್ನು ಕುರಿತದ್ದು(೨೪ ತೀರ್ಥಂಕರರು ,೧೨ ಚಕ್ರವರ್ತಿಗಳು ,ಪ್ರತಿ ೯ ಮಂದಿ ಬಲದೇವ,ವಾಸುದೇವ, ಪ್ರತಿವಾಸುದೇವರು)
[ಬದಲಾಯಿಸಿ] ಗೊಮ್ಮಟ
ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಗೊಮ್ಮಟನ ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿ ಪ್ರತಿಷ್ಥಾಪನೆ ಮಾಡಿಸಿದನು.ಇವನು ಪ್ರಸಿದ್ಧನಾಗಿರುವುದು ಬಾಹುಬಲಿಯ ಈ ಪ್ರಸಿದ್ಧ ಭವ್ಯ ವಿಗ್ರಹದ ಕೆತ್ತನೆಯಿಂದ.