ಭಾರತೀ
From Wikipedia
ಭಾರತೀ( ತಿರುಮಲೆ ರಾಜಮ್ಮ ) ಇವರ ಜನನ ೧೯೦೦ ನವೆಂಬರ ೨೦ ರಂದು. ಖ್ಯಾತ ಪತ್ರಕರ್ತರಾದ ತಿ.ತಾ.ಶರ್ಮರು ಇವರ ಪತಿ. ತಮ್ಮ ಪತಿಯೊಂದಿಗೆ ಪತ್ರಕರ್ತೆಯಾಗಿ ದುಡಿದದ್ದಲ್ಲದೆ ಸ್ವತಂತ್ರ ಸಾಹಿತ್ಯರಚನೆಯನ್ನೂ ಮಾಡಿದ್ದಾರೆ. ಒಟ್ಟು ೧೪ ಕೃತಿಗಳನ್ನು ರಚಿಸಿರುವ ಭಾರತೀಯವರು ಜೀವನ ಚರಿತ್ರೆ ಹಾಗು ನಾಟಕಗಳನ್ನು ಮಾತ್ರ ಬರೆದಿದ್ದಾರೆ. ಅಲ್ಲದೆ ತಮಿಳು ಹಾಗು ತೆಲುಗು ಭಾಷೆಗಳಿಂದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಆರ್ಯ ಕೈಲಾಸಂ ಹಾಗು ವೈಣಿಕ ಶಿಖಾಮಣಿ ಶೇಷಣ್ಣ ಇವು ಭಾರತೀಯವರು ಬರೆದ ಜೀವನಚರಿತ್ರೆಗಳಲ್ಲಿ ಮುಖ್ಯವಾದವು.
೧೯೬೭ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಶ್ರೇಷ್ಠ ಸಾಹಿತಿ ಎಂಬ ಗೌರವ ಪಡೆದಿದ್ದಾರೆ. ೧೯೭೨ ರಲ್ಲಿ 'ಭಾರತೀ ಅಬಿನಂದನಾ ಗ್ರಂಥ' ವನ್ನು ಇವರಿಗೆ ಸಮರ್ಪಿಸಲಾಯಿತು. ೧೯೮೦ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಲೇಖಕಿಯರ ಸಮ್ಮೇಳನದಲ್ಲಿ ಇವರನ್ನು ಸನ್ಮಾನಿಸಲಾಗಿದೆ.
ಭಾರತೀಯವರು ೧೯೮೪ ಅಕ್ಟೋಬರ ೨೪ ರಂದು ನಿಧನರಾದರು.