ಬರಗೂರು ರಾಮಚಂದ್ರಪ್ಪ

From Wikipedia

ಬರಗೂರು ರಾಮಚಂದ್ರಪ್ಪನವರು ೧೯೪೬ ಅಕ್ಟೋಬರ ೧೮ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ ; ತಂದೆ ರಂಗದಾಸಪ್ಪ. ಇವರು ಬೆಂಗಳೂರು ವಿಶ್ವವಿದ್ಯಾನಿಲಯ ದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು.

ಇವರ ಕೃತಿಗಳು:

  • ಒಂದು ಊರಿನ ಕತೆಗಳು
  • ಕನ್ನಡಾಭಿಮಾನ
  • ಕಪ್ಪು ನೆಲದ ಕೆಂಪು ಕಾಲು
  • ಮರಕುಟಿಗ
  • ರಾಜಕಾರಣಿ
  • ಸಾಹಿತ್ಯ
  • ಸುಂಟರಗಾಳಿ
  • ಸೂತ್ರ
  • ಕಾಂಟೆಸಾದಲ್ಲಿ ಕಾವ್ಯ
  • ಸಂಸ್ಕೃತಿ,ಶ್ರಮ ಮತ್ತು ಸೃಜನಶೀಲತೆ

[ಬದಲಾಯಿಸಿ] ಪುರಸ್ಕಾರ

  • ಬರಗೂರು ರಾಮಚಂದ್ರಪ್ಪನವರ ಕಥಾಸಂಕಲನ ‘ಸುಂಟರಗಾಳಿ’ಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.