ಬಿ.ಶಿವಮೂರ್ತಿಶಾಸ್ತ್ರಿ
From Wikipedia
ಬಿ.ಶಿವಮೂರ್ತಿಶಾಸ್ತ್ರಿಗಳು ತುಮಕೂರಿನಲ್ಲಿ ೧೯೦೩ರಲ್ಲಿ ಜನಿಸಿದರು. ಇವರ ತಾಯಿ ನೀಲಮ್ಮ; ತಂದೆ ಬಸವಯ್ಯ ಸ್ವಾಮಿ.
ಶಿವಮೂರ್ತಿಶಾಸ್ತ್ರಿಗಳ ಖ್ಯಾತ ಕೀರ್ತನಕಾರರಾಗಿದ್ದಂತೆ, ಪತಿಕೋದ್ಯಮಿಗಳು ಹಾಗು ಸಾಹಿತಿಯಾಗಿದ್ದರು.
ಪರಿವಿಡಿ |
[ಬದಲಾಯಿಸಿ] ಪತ್ರಿಕೋದ್ಯಮ
ಶಿವಮೂರ್ತಿಶಾಸ್ತ್ರಿಗಳು ೧೯೩೮ರಲ್ಲಿ ‘ಶರಣ ಸಾಹಿತ್ಯ’ ಪತ್ರಿಕೆಯನ್ನು ಪ್ರಾರಂಭಿಸಿ, ೧೯೭೨ರವರೆಗೆ ನಡೆಯಿಸಿಕೊಂಡು ಬಂದರು.
೫ ವರ್ಷಗಳ ಕಾಲ ‘ಸ್ವತಂತ್ರ ಕರ್ನಾಟಕ’ ವಾರಪತ್ರಿಕೆಯನ್ನು ನಡೆಯಿಸಿಕೊಂಡು ಬಂದರು. ಇದಲ್ಲದೆ ಇವರು ‘ಕನ್ನಡ ನುಡಿ’ ಹಾಗು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯ ಸಂಪಾದಕರೂ ಆಗಿದ್ದರು.
[ಬದಲಾಯಿಸಿ] ಕೃತಿಗಳು
ಬಿ.ಶಿವಮೂರ್ತಿ ಶಾಸ್ತ್ರಿಗಳ ಕೆಲವು ಕೃತಿಗಳು ಇಂತಿವೆ:
- ಕೊಂಡಗುಳಿ ಕೇಶಿರಾಜನ ಷಡಕ್ಷರ ಮಂತ್ರ ಮಹಿಮೆ
- ಗುರುಸಿದ್ಧನ ಮಾದೇಶ್ವರ ಸಾಂಗತ್ಯ
- ನಿಜಗುಣದ ಪುರಾತನರ ತ್ರಿವಿಧಿ
- ರಾಘವಾಂಕನ ವೀರೇಶ ಚರಿತೆ
[ಬದಲಾಯಿಸಿ] ಸಾಹಿತ್ಯ ಸೇವೆ
ಬಿ.ಶಿವಮೂರ್ತಿ ಶಾಸ್ತ್ರಿಗಳು ೧೯೫೬ರಿಂದ ೧೯೬೪ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.
[ಬದಲಾಯಿಸಿ] ಪುರಸ್ಕಾರ
೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.
ಬಿ.ಶಿವಮೂರ್ತಿ ಶಾಸ್ತ್ರಿಗಳು ೧೯೭೬ರಲ್ಲಿ ನಿಧನರಾದರು.