ಶ್ಯಾಮಾ ಶಾಸ್ತ್ರಿ

From Wikipedia

ಶ್ಯಾಮಾ ಶಾಸ್ತ್ರಿ (೧೭೬೨ - ೧೮೨೭) ಕರ್ನಾಟಕ ಸ೦ಗೀತ ಪದ್ಧತಿಯ ತ್ರಿಮೂರ್ತಿಗಳಲ್ಲಿ ಒಬ್ಬರು.

ಏಪ್ರಿಲ್ ೨೬, ೧೭೬೨ ರಲ್ಲಿ ಜನಿಸಿದ ಶ್ಯಾಮಾ ಶಾಸ್ತ್ರಿಯವರ ಮೂಲ ಹೆಸರು ವೆ೦ಕಟಕೃಷ್ಣ. ಕಾ೦ಚೀಪುರದ ಕಾಮಾಕ್ಷಿಯ ಭಕ್ತರಾದ ಶ್ಯಾಮಾಶಾಸ್ತ್ರಿಯವರ ಬಹುಪಾಲು ಕೃತಿಗಳು ಕಾಮಾಕ್ಷಿಯನ್ನು ಕುರಿತವು. ಕರ್ನಾಟಕ ಸಂಗೀತದ ಇನ್ನಿಬ್ಬರು ತ್ರಿಮೂರ್ತಿಗಳಂತೆ ಇವರು ಜನಿಸಿದ ಸ್ಥಳವೂ ತಿರುವಾರೂರು. ತಂಜಾವೂರಿನ ಬಂಗಾರು ಕಾಮಾಕ್ಷಿ ದೇವಾಲಯದಲ್ಲಿ ಅರ್ಚಕರಾಗಿದ್ದ ಇವರು ಪಚ್ಚಮಿರಿಯಮ್ ಆದಿ ಅಪ್ಪಯ್ಯ ಅವರ ಶಿಷ್ಯರು. ಇವರು ಒಟ್ಟು ೩೦೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರೆಂದು ಹೇಳಿಕೆಯಿದ್ದರೂ ಈಗ ಲಭ್ಯವಿರುವುದು ಸುಮಾರು ೬೦-೭೦. ಇವರ ಕೃತಿಗಳು ಹೆಚ್ಚಾಗಿ ತೆಲುಗು, ಮತ್ತು ಸ್ವಲ್ಪ ಮಟ್ಟಿಗೆ ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿವೆ. ಮದುರೆಯ ಮೀನಾಕ್ಷಿಯನ್ನು ಕುರಿತು "ನವರತ್ನಮಾಲಿಕೆ"ಯನ್ನು ಸಹ ಶ್ಯಾಮಾ ಶಾಸ್ತ್ರಿಯವರು ರಚಿಸಿದರು.

ಇವರ ಕೃತಿಗಳು ಶಾಮಕೃಷ್ಣ ಎಂಬ ಅಂಕಿತ ಹೊಂದಿವೆ.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.