ಆಪರೇಷನ್ ಡೈಮಂಡ್ ರ್ಯಾಕೆಟ್

From Wikipedia

ಅಪರೇಷನ್ ಡೈಮಂಡ್ ರ್ಯಾಕೆಟ್

ಬಿಡುಗಡೆ ವರ್ಷ ೧೯೭೮
ಚಿತ್ರ ನಿರ್ಮಾಣ ಸಂಸ್ಥೆ ಅನುಪಮ ಮೂವೀಸ್
ನಾಯಕ ಡಾ.ರಾಜ್‍ಕುಮಾರ್
ನಾಯಕಿ ಪದ್ಮಪ್ರಿಯ
ಪೋಷಕ ವರ್ಗ ರಾಜಿ, ಚಂದ್ರಲೇಖ, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್, ರಾಜಾನಂದ್, ಶನಿಮಹಾದೇವಪ್ಪ
ಸಂಗೀತ ನಿರ್ದೇಶನ ಜಿ.ಕೆ.ವೆಂಕಟೇಶ್
ಕಥೆ / ಕಾದಂಬರಿ ದೊರೆ-ಭಗವಾನ್
ಚಿತ್ರಕಥೆ ದೊರೆ-ಭಗವಾನ್
ಸಂಭಾಷಣೆ ಚಿ.ಉದಯಶಂಕರ್
ಸಾಹಿತ್ಯ ಚಿ.ಉದಯಶಂಕರ್
ಹಿನ್ನೆಲೆ ಗಾಯನ ಡಾ.ರಾಜ್‍ಕುಮಾರ್, ಎಸ್.ಜಾನಕಿ, ವಾಣಿ ಜಯರಾಂ
ಛಾಯಾಗ್ರಹಣ ಪಿ.ಎಸ್.ಪ್ರಕಾಶ್
ನೃತ್ಯ ಉಡುಪಿ ಜಯರಾಂ
ಸಾಹಸ
ಸಂಕಲನ
ನಿರ್ದೇಶನ ದೊರೆ-ಭಗವಾನ್
ನಿರ್ಮಾಪಕರು ದೊರೆ-ಭಗವಾನ್
ಪ್ರಶಸ್ತಿಗಳು
ಇತರೆ ಮಾಹಿತಿ ಸಹ ನಿರ್ದೇಶಕರು: ಎಂ.ಎಸ್.ರಾಜಶೇಖರ್, ರೇಣುಕಾಶರ್ಮ


ಆಪರೇಷನ್ ಡೈಮಂಡ್ ರ್ಯಾಕೆಟ್ - ಜೇಮ್ಸ್ ಬಾಂಡ್ ಮಾದರಿಯಲ್ಲಿನ ಕನ್ನಡ ಚಲನಚಿತ್ರಗಳಲ್ಲೊಂದು.


ಡಾ.ರಾಜ್‍ಕುಮಾರ್ ಸಿ.ಐ.ಡಿ ಏಜೆಂಟ್ ಪಾತ್ರದಲ್ಲಿರುವ ಈ ಚಿತ್ರದಲ್ಲಿ, ಪದ್ಮಪ್ರಿಯ ನಾಯಕಿಯಾಗಿ ನಟಿಸಿದ್ದು, ಚಿ.ಉದಯಶಂಕರ್ ರಚಿಸಿರುವ ಸಂಪೂರ್ಣ ಆಂಗ್ಲ ಸಾಹಿತ್ಯ ಇರುವ "If you come today" ಎಂಬ ಗೀತೆಯಿದೆ.

ಚಿತ್ರದ ಉತ್ತರಾರ್ಧದ ಬಹುಭಾಗ ನೇಪಾಳದಲ್ಲಿ ಚಿತ್ರೀಕರಿಸಲಾಗಿದೆ.

ಡಾ.ರಾಜ್ ಅಭಿನಯದ ಬಾಂಡ್ ಸರಣಿ ಚಿತ್ರಗಳಲ್ಲಿ ಈ ಚಿತ್ರವು ಕೊನೆಯದು.


[ಬದಲಾಯಿಸಿ] ಸ್ವಾರಸ್ಯ

  • ಬಾಂಡ್ ಸರಣಿಯ ನಾಲ್ಕು ಚಿತ್ರಗಳಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿರುವ ಪಾತ್ರದ ಹೆಸರು ಪ್ರಕಾಶ್ (ಸಿ.ಐ.ಡಿ. ೯೯೯)
  • ನಾಲ್ಕೂ ಚಿತ್ರಗಳ ನಿರ್ದೇಶಕರು ದೊರೆ-ಭಗವಾನ್ ಮತ್ತು ನಾಲ್ಕೂ ಚಿತ್ರಗಳಿಗೆ ಸಂಗೀತ ನೀಡಿದವರು ಜಿ.ಕೆ.ವೆಂಕಟೇಶ್
  • ಈ ಚಿತ್ರವು ಮಾತ್ರ ವರ್ಣಚಿತ್ರ; ಉಳಿದವು ಕಪ್ಪುಬಿಳುಪು ಚಿತ್ರ.
  • ಈ ಚಿತ್ರದಲ್ಲಿ ಮಾತ್ರ ಹಾಸ್ಯನಟ ನರಸಿಂಹರಾಜು ಅಭಿನಯಿಸಿಲ್ಲ; ಉಳಿದ ಮೂರು ಚಿತ್ರಗಳಲ್ಲಿ ಬೇಬಿ ಎಂಬ ಹೆಸರಿನ ಸಿ.ಐ.ಡಿ. ಸಹಾಯಕನ/ಕಾರ್ ಚಾಲಕನ ಪಾತ್ರ ನಿರ್ವಹಿಸಿದ್ದಾರೆ.


[ಬದಲಾಯಿಸಿ] ಇವನ್ನೂ ನೋಡಿ


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
If you come today ಚಿ.ಉದಯಶಂಕರ್ ಡಾ.ರಾಜ್‍ಕುಮಾರ್
ಚಳಿ ಚಳಿ ಚಿ.ಉದಯಶಂಕರ್ ಡಾ.ರಾಜ್‍ಕುಮಾರ್, ಎಸ್.ಜಾನಕಿ
ನೀ ನಡುಗುವೆ ಏಕೆ, ಬಾ ಭಯವನು ಬಿಡು ಚಿ.ಉದಯಶಂಕರ್ ಡಾ.ರಾಜ್‍ಕುಮಾರ್
ಅಲ್ಲಿ ಇಲ್ಲಿ ನೋಡುವೆ ಏಕೆ ಚಿ.ಉದಯಶಂಕರ್ ಡಾ.ರಾಜ್‍ಕುಮಾರ್, ವಾಣಿ ಜಯರಾಂ