ಡಿ.ಎಸ್.ಕರ್ಕಿ
From Wikipedia
"ಹಚ್ಚೇವು ಕನ್ನಡದ ದೀಪ" ಎಂದು ಹಾಡಿದ ದುಂಡಪ್ಪ ಸಿದ್ದಪ್ಪ ಕರ್ಕಿಯವರು ನವೋದಯ ಕಾಲದ ಕವಿಗಳು. ಇವರು ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಗ್ರಾಮದಲ್ಲಿ ೧೯೦೭ ನವೆಂಬರ್ ೧೫ರಂದು ಜನಿಸಿದರು. ಇವರ ತಾಯಿ ದುಂಡವ್ವ ; ತಂದೆ ಸಿದ್ದಪ್ಪ. ಇವರು ಸುಮಾರು ೧೫ ಕೃತಿಗಳನ್ನು ರಚಿಸಿದ್ದಾರೆ. ಇವರ “ಗೀತ ಗೌರವ” ಕೃತಿಗೆ ೧೯೭೨ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.
ಇವರ ಕೆಲವು ಕೃತಿಗಳು:
- ಗೀತ ಗೌರವ
- ನಕ್ಷತ್ರಗಾನ
- ಭಾವತೀರ್ಥ
- ಕರಿಕೆ-ಕಣಗಲು
- ನಾಲ್ದೆಸೆಯ ನೋಟ
- ಛಂದೋವಿಕಾಸ