ಬಿ.ಸಿ.ರಾಮಚಂದ್ರ ಶರ್ಮ
From Wikipedia
ಬಿ.ಸಿ.ರಾಮಚಂದ್ರ ಶರ್ಮ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ೧೯೨೫ ನವಂಬರ೨೮ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೋಗಾದಿ ಚಂದ್ರಶೇಖರಶರ್ಮ.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ ಮತ್ತು ವೃತ್ತಿ
ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಲಂಡನ್ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಏಳು ವರ್ಷಗಳ ಕಾಲ ಇಂಗ್ಲಂಡಿನಲ್ಲಿ, ಎಂಟು ವರ್ಷ ಝಾಂಬಿಯಾ ಹಾಗು ಯುನೆಸ್ಕೊದಲ್ಲಿ ಸೇವೆ ಸಲ್ಲಿಸಿದ್ದಾರೆ.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನಗಳು
- ಏಳು ಸುತ್ತಿನ ಕೋಟೆ
- ಹೇಸರಗತ್ತೆ
- ಬ್ರಾಹ್ಮಣ ಹುಡುಗ
- ಸಪ್ತಪದಿ
- ಹೃದಯಗೀತ
- ಮಾತು ಮಾಟ
[ಬದಲಾಯಿಸಿ] ನಾಟಕಗಳು
- ಬಾಳಸಂಜೆ
- ನೀಲಿ ಕಾಗದ
- ನೆರಳು
- ವೈತರಣಿ
- ಸೆರಗಿನ ಕೆಂಡ (ರೇಡಿಯೊ ನಾಟಕ)
[ಬದಲಾಯಿಸಿ] ಕಥಾ ಸಂಕಲನ
- ಮಂದಾರ ಕುಸುಮ
- ಏಳನೆಯ ಜೀವ
- ಕತೆಗಾರನ ಕತೆ
[ಬದಲಾಯಿಸಿ] ಅನುವಾದ
- ಈ ಶತಮಾನದ ನೂರು ಇಂಗ್ಲಿಷ್ ಕವನಗಳು
[ಬದಲಾಯಿಸಿ] ಮನಃಶಾಸ್ತ್ರ
- ಮಕ್ಕಳ ಬುದ್ಧಿಶಕ್ತಿ ಮತ್ತು ಪರಿಸರ
[ಬದಲಾಯಿಸಿ] ಇತರ
- ಪ್ರತಿಭಾ ಸಂದರ್ಶನ
[ಬದಲಾಯಿಸಿ] ಪುರಸ್ಕಾರ
- ಇವರ "ಸಪ್ತಪದಿ" ಎಂಬ ಕೃತಿಗೆ ೧೯೯೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
- "ನೆರಳು" ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.
- "ಸೆರಗಿನ ಕೆಂಡ" ರೇಡಿಯೊ ನಾಟಕಕ್ಕೆ ಅಖಿಲ ಭಾರತ ಬಹುಮಾನ ಬಂದಿದೆ.
- ಇದಲ್ಲದೆ ಹಿಂದುಸ್ತಾನ್ ಟೈಮ್ಸ್ ಪ್ರಶಸ್ತಿ ಹಾಗು ಪ್ರಜಾವಾಣಿ ಪ್ರಶಸ್ತಿ ಸಹ ಲಭಿಸಿವೆ.