ಮಂಗಳೂರು

From Wikipedia

ಮಂಗಳೂರು ನಗರ
ರಾಜ್ಯ: ಕರ್ನಾಟಕ
ಜಿಲ್ಲೆ: ದಕ್ಷಿಣ ಕನ್ನಡ
ಜನಸಂಖ್ಯೆ (೨೦೦೧ ಜ.ಗ.): ೬,೦೧,೦೭೯
ವಿಸ್ತೀರ್ಣ: ೧೧೧.ಅ೮ ಚ. ಕಿ.ಮೀ.
ಪ್ರಮುಖ ಭಾಷೆಗಳು: ಕನ್ನಡ, ತುಳು
ಸಮೀಪದ ರೈಲು ನಿಲ್ದಾಣ: ಮಂಗಳೂರು ನಗರ ಮತ್ತು ಕಂಕನಾಡಿ
ಸಮೀಪದ ವಿಮಾನನಿಲ್ದಾಣ: ಬಜ್ಪೆ ವಿಮಾನ ನಿಲ್ದಾಣ, ಮಂಗಳೂರು
ಸಮೀಪದ ಬಂದರು: ನವ ಮಂಗಳೂರು ಬಂದರು
ಅಕ್ಷಾಂಶ: ೧೨°೫೨' ಉ
ರೇಖಾಂಶ: ೭೪°೫೩' ಪೂ
ಮಂಗಳೂರು ಕಡಲ ತೀರ
Enlarge
ಮಂಗಳೂರು ಕಡಲ ತೀರ

ಮಂಗಳೂರು ಕರ್ನಾಟಕದ ನೈರುತ್ಯದಲ್ಲಿರುವ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಳ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ನಗರವು, ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾದ ನವ ಮಂಗಳೂರು ಬಂದರನ್ನು ಹೊಂದಿದೆ. ಮಂಗಳೂರು ನಗರವು ರಸ್ತೆ ಸಂಪರ್ಕ, ರೈಲು ಸಂಪರ್ಕ ಹಾಗೂ ವಿಮಾನ ಸಂಪರ್ಕ - ಈ ಮೂರನ್ನೂ ಹೊಂದಿದೆ.

ಶ್ರೀ ಮಂಗಳಾದೇವಿ
Enlarge
ಶ್ರೀ ಮಂಗಳಾದೇವಿ

[ಬದಲಾಯಿಸಿ] ಇತಿಹಾಸ

ಮಂಗಳೂರು ಎಂದು ಹೆಸರು ಬರಲು ಕಾರಣ ಇಲ್ಲಿರುವ ಶ್ರೀ ಮಂಗಳಾದೇವಿ ದೇವಾಲಯ. ಮೊದಲು ಈ ನಗರವನ್ನು ಮಂಗಳಾಪುರವೆಂದು ಕರೆಯುತ್ತಿದ್ದು ಕಾಲ ಕ್ರಮೇಣ ಇದು ಮಂಗಳೂರೆಂದು ಬದಲಾಯಿತು ಎಂದು ಇತಿಹಾಸ ಹೇಳುತ್ತದೆ.

ಪುರಭವನ, ಮಂಗಳೂರು
Enlarge
ಪುರಭವನ, ಮಂಗಳೂರು

[ಬದಲಾಯಿಸಿ] ನಗರದ ಸುತ್ತ ಮುತ್ತ

ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ.

  • ಮಂಗಳಾದೇವಿ ದೇವಾಲಯ: ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ.
  • ಕದ್ರಿ ದೇವಸ್ಥಾನ: ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದಿ ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯು ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಷೇಶವಾಗಿದೆ.
ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು
Enlarge
ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು
  • ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು: ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ.
  • ನವ ಮಂಗಳೂರು ಬಂದರು:ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ.
ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು
Enlarge
ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು
  • ಉಲ್ಲಾಳ ಸಮುದ್ರ ತೀರ:ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು.
  • ಗೋಕರ್ಣನಾಥೇಶ್ವರ ದೇವಾಲಯ: ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಶ್ರೀ ಗೋಕರ್ಣನಾಥೇಶರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ.
  • ಸುರತ್ಕಲ್ ದೀಪಸ್ಥಂಭ
  • ಶರವು ಮಹಾ ಗಣಪತಿ ದೇವಾಲಯ
ನವ ಮಂಗಳೂರು ಬಂದರು
Enlarge
ನವ ಮಂಗಳೂರು ಬಂದರು

[ಬದಲಾಯಿಸಿ] ಕೈಗಾರಿಕೋದ್ಯಮ

  • ಮಂಗಳೂರು ಕರ್ನಾಟಕದ ಒಂದು ಮುಖ್ಯ ವಾಣಿಜ್ಯ ಕೇಂದ್ರ. ಬಂದರು ಕೇಂದ್ರವಾಗಿರುವುದರಿಂದ ಹೊರ ರಾಷ್ಟ್ರಗಳೊಂದಿಗೆ ಸರಕುಗಳ ಆಮದು-ರಫ್ತು ವ್ಯವಹಾರ ನಡೆಯುತ್ತದೆ. ಅದಲ್ಲದೇ ಮಂಗಳೂರಿನಲ್ಲಿ ಅನೇಕ ಉದ್ಯಮಗಳು ನೆಲೆ ನಿಂತಿವೆ. ಅವುಗಳಲ್ಲಿ ಮುಖ್ಯವಾದವುಗಳು:
  • ರಸಗೊಬ್ಬರ ಕಾರ್ಖಾನೆ
  • ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಲಿ. (MRPL)
  • ಮಂಗಳೂರು ಹೆಂಚು ಕಾರ್ಖಾನೆ
  • ಇನ್ಫೋಸಿಸ್ ಸಂಸ್ಥೆ