ಸೇವ ನಮಿರಾಜ ಮಲ್ಲ
From Wikipedia
ಸೇವ ನಮಿರಾಜ ಮಲ್ಲ ರು ೧೯೨೫ ಜನೆವರಿ ೨೬ ರಂದು ಜನಿಸಿದರು.
ಮದರಾಸು ವಿಶ್ವವಿದ್ಯಾಲಯ ದಿಂದ ಈಗಿನ ( ಚೆನ್ನೈ) ,ಬಿ.ಏ.ಎಮ್.ಏ ಮತ್ತು ಬಿ.ಎಲ್ ಪದವಿಗಳನ್ನು ಪಡೆದ ಮಲ್ಲರು ಕೆಲ ಕಾಲ ಮದ್ರಾಸಿನ ಅಮೆರಿಕನ್ ವಾರ್ತಾ ಸಂಸ್ಥೆಯಲ್ಲಿ (USIS) ಭಾಷಾಂತರ ಸಹಾಯಕರಾಗಿದ್ದರು.'ಲಿಬರೇಟರ್' ಎಂಬ ದೈನಿಕಕ್ಕೆ ಹಾಗು ' ಟೈಮ್ಸ್ ಆಫ್ ಇಂಡಿಯಾ 'ಕ್ಕೆ ಕೆಲ ಕಾಲ ಉಪಸಂಪಾದಕರಾಗಿ ದುಡಿದರು. ವಕೀಲರಾಗಿ ಕೆಲ ಕಾಲ ಕೆಲಸ ಮಾಡಿ, ನ್ಯಾಯಾಂಗಕ್ಕೆ ಸೇರಿ ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು.
ಸೇವ ನಮಿರಾಜ ಮಲ್ಲರ ಕೃತಿಗಳು
[ಬದಲಾಯಿಸಿ] ಕಾದಂಬರಿ
- ರಕ್ತದ ರೂಪಾಯಿ
- ದೇವರ ದಾರಿ
- ಬದುಕಿನ ಸುಳಿಯಲ್ಲಿ
- ಬಂಧನ ಬಾಂಧವ್ಯ
- ತೀರಿದ ಆಸೆ
- ಕುರುಡು ಚಕ್ರ
- ಭ್ರಮಾಧೀನ
- ನಿಜಸುತ
- ಕರಿಚರ್ಮ
- ಉಳಿವುದೇ ಕೀರ್ತಿ
[ಬದಲಾಯಿಸಿ] ಕಥಾ ಸಂಕಲನ
- ಲೋಹದ ಜೀವ
- ಮರದ ಮರೆಯಲ್ಲಿ
[ಬದಲಾಯಿಸಿ] ಅನುವಾದ
- ಎಮರ್ಸನ್ನನ ಮೂಲ ಬರಹಗಳು
- ಸ್ವಾತಂತ್ರ್ಯದ ಕಿಡಿಗಳು
ಸೇವ ನಮಿರಾಜ ಮಲ್ಲರು ೧೯೯೧ ಜನೆವರಿ ೧೮ ರಂದು ನಿಧನರಾದರು.