ನಾಗರತ್ನಮ್ಮ
From Wikipedia
ಸ್ತ್ರೀ ನಾಟಕ ಮಂಡಳಿಎಂಬ ಮಹಿಳೆಯರ ನಾಟಕ ಕಂಪನಿಯನ್ನು ವರ್ಷ ೧೯೫೮ರಲ್ಲಿ ಸ್ಥಾಪಿಸಿದ ಆರ್.ನಾಗರತ್ನಮ್ಮ, ಅನೇಕ ಕಷ್ಟನಷ್ಟಗಳನ್ನು ಎದುರಿಸಿ, ಇದನ್ನು ಯಶಸ್ವಿಯಾಗಿ ನೆಡೆಸಿದ್ದಾರೆ. ಒಮ್ಮೆ ಅವರು ನಾಟಕ ಕಂಪನಿಯೊಡನೆ ಪ್ರವಾಸದಲ್ಲಿರುವಾಗ ಅವರ ಪತಿ ನಿಧನರಾದರೂ, ನಾಗರತ್ನಮ್ಮನವರು ನಾಟಕ ಕಂಪನಿಯ ಪ್ರದರ್ಶನ ಅಥವಾ ಪ್ರವಾಸವನ್ನಾಗಲಿ ರದ್ದುಗೊಳಿಸದೆ ಮುಂದುವರೆಸಿದವರು.
ನಾಗರತ್ನಮ್ಮನವರು "ಶ್ರೀ ಕೃಷ್ಣ ಗಾರುಡಿ" ನಾಟಕದಲ್ಲಿ ಮಾಡುತ್ತಿದ್ದ ಭೀಷ್ಮ, " ಶ್ರೀ ಕೃಷ್ಣ ಲೀಲೆ" ನಾಟಕದಲ್ಲಿ ಮಾಡುತ್ತಿದ್ದ ಕಂಸ,"ರಾಮಾಯಣ" ನಾಟಕದಲ್ಲಿ ಮಾಡುತ್ತಿದ್ದ ದಶರಥ ಮತ್ತು ರಾವಣ, "ದಾನಶೂರ ಕರ್ಣ" ನಾಟಕದಲ್ಲಿ ಮಾಡುತ್ತಿದ್ದ ದುರ್ಯೋಧನನ ಪಾತ್ರ ಬಹಳ ಜನಪ್ರಿಯವಾಗಿದೆ.
ಪ್ರಶಸ್ತಿ:
- ಗುಬ್ಬಿ ವೀರಣ್ಣ ಪ್ರಶಸ್ತಿ
- ರಾಜ್ಯೋತ್ಸವ ಪ್ರಶಸ್ತಿ - ೧೯೮೫