ಗೌರೀಶ ಕಾಯ್ಕಿಣಿ

From Wikipedia

ಗೌರೀಶ ಕಾಯ್ಕಿಣಿಯವರು ೧೯೧೨ ಸಪ್ಟಂಬರ ೧೨ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು.

ಪರಿವಿಡಿ

[ಬದಲಾಯಿಸಿ] ಶಿಕ್ಷಣ

ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್ ಪರಿಕ್ಷೆಯನ್ನು ಕುಮಟಾದ ಗಿಬ್ ಹಾಯ್‍ಸ್ಕೂಲಿನಿಂದ ಉತ್ತೀರ್ಣರಾಗಿ , ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು ಹಿಂದಿಯಲ್ಲಿ ವಿಶಾರದರೂ ಆಗಿದ್ದಾರೆ.

[ಬದಲಾಯಿಸಿ] ವೃತ್ತಿ

ಗೌರೀಶ ಕಾಯ್ಕಿಣಿಯವರು ೧೯೩೭ರಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ ೧೯೭೬ರಲ್ಲಿ ನಿವೃತ್ತರಾದರು.

[ಬದಲಾಯಿಸಿ] ಕೌಟಂಬಿಕ ಜೀವನ

ಗೌರೀಶ ಕಾಯ್ಕಿಣಿಯವರ ವಿವಾಹ ೧೯೫೩ರಲ್ಲಿ ಶಾಂತಾ ಅವರ ಜೊತೆಗೆ ನೆರವೇರಿತು. ಇವರದು ಅಂತರ್ಜಾತೀಯ ವಿವಾಹ. ೧೯೫೪ರಲ್ಲಿ ಇವರ ಮಗ , ಈಗ ಪ್ರಸಿದ್ಧ ಸಾಹಿತಿಯಾಗಿರುವ ಜಯಂತ ಜನಿಸಿದರು.

[ಬದಲಾಯಿಸಿ] ಸಾಹಿತ್ಯ

ಗೌರೀಶ ಕಾಯ್ಕಿಣಿಯವರ ಲೇಖನ ವ್ಯವಸಾಯ ೧೯೩೦ರಿಂದಲೇ ಪ್ರಾರಂಭವಾಯಿತು. ಕನ್ನಡ ಹಾಗು ಮರಾಠಿ ಭಕ್ತಿಗೀತೆಗಳ ಸಂಕಲನವಾದ "ಶಾಂಡಿಲ್ಯ ಪ್ರೇಮಸುಧಾ" ಇವರ ಮೊದಲ ಕವನಸಂಕಲನ.

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾವ್ಯ

  • ಶಾಂಡಿಲ್ಯ ಪ್ರೇಮಸುಧಾ
  • ಗಂಡು ಹೆಣ್ಣು
  • ಪ್ರೀತಿ

[ಬದಲಾಯಿಸಿ] ನಾಟಕ

  • ಒಲವಿನ ಒಗಟು
  • ಕ್ರೌಂಚಧ್ವನಿ (ಗೀತರೂಪಕಗಳು)

[ಬದಲಾಯಿಸಿ] ರೇಡಿಯೊ ನಾಟಕ

  • ಕರ್ಣಾಮೃತ
  • ಆಕಾಶ ನಾಟಕಗಳು

[ಬದಲಾಯಿಸಿ] ಕಥಾಸಂಕಲನ

  • ವಿಶ್ವದ ಆಖ್ಯಾಯಿಕೆಗಳು

[ಬದಲಾಯಿಸಿ] ಪ್ರವಾಸ ಸಾಹಿತ್ಯ

  • ದೇವತಾತ್ಮ (ಹಿಮಾಲಯ ಪ್ರವಾಸವರ್ಣನೆ)

[ಬದಲಾಯಿಸಿ] ವ್ಯಕ್ತಿಚಿತ್ರಣ

  • ಪಶ್ಚಿಮದ ಪ್ರತಿಭೆ -ಭಾಗ-೧
  • ಪಶ್ಚಿಮದ ಪ್ರತಿಭೆ -ಭಾಗ-೨,
  • ಸತ್ಯಾರ್ಥಿ
  • ಭಾರತೀಯ ವಿಜ್ಞಾನಿಗಳು, ಭಾಗ-೧
  • ಭಾರತೀಯ ವಿಜ್ಞಾನಿಗಳು, ಭಾಗ-೨
  • ಕೇಶವಸುತ
  • ನಾನಾಲಾಲ
  • ಶ್ಯಾಮರಾವ ವಿಠ್ಠಲ ಕಾಯ್ಕಿಣಿ
  • ಥಾಮಸ್ ಎಡಿಸನ್
  • ಪಾಂಡೇಶ್ವರ ಗಣಪತಿರಾವ
  • ಗ್ರೀಕ ದಾರ್ಶನಿಕರು

[ಬದಲಾಯಿಸಿ] ಪರಿಚಯ ಲೇಖನ

  • ಗೋಕರ್ಣದ ಕಥೆ (ಪರಿಚಯ )
  • ಕರ್ನಾಟಕದ ಸಿಂಡ್ರೆಲ್ಲಾ (ಉತ್ತರ ಕನ್ನಡದ ಜನ ಜಾತಿ ಪರಿಚಯ)

[ಬದಲಾಯಿಸಿ] ಸಾಹಿತ್ಯ ಸಮೀಕ್ಷೆ

[ಬದಲಾಯಿಸಿ] ವೈಚಾರಿಕ

  • ಮನೋವಿಜ್ಞಾನದ ರೂಪರೇಖೆಗಳು
  • ಮಾರ್ಕ್ಸವಾದ
  • ಬಾಳಿನ ಗುಟ್ಟು
  • ವಿಚಾರವಾದ
  • ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ
  • ಸಂಪ್ರದಾಯ ಮತ್ತು ಸಣ್ಣ ಕುಟುಂಬ
  • ಕಟಾಕ್ಷ (ವೈಚಾರಿಕ ಲೇಖನಗಳ ಸಂಕಲನ)
  • ನವಮಾನವತಾವಾದ
  • ನಾಸ್ತಿಕನು ಮತ್ತು ದೇವರು
  • ಆರ್ಕೆಸ್ಟ್ರಾ ಮತ್ತು ತಂಬೂರಿ
  • ಲೋಕಾಯತ (ಚಾರ್ವಾಕ ದರ್ಶನ)

[ಬದಲಾಯಿಸಿ] ಅನುವಾದ

  • ಭಾರತೀಯ ತತ್ವಜ್ಞಾನದ ಇತಿಹಾಸ (ಮೂಲ:ಮರಾಠಿ)
  • ಪಂಜಾಬಿ ಕತೆಗಳು
  • ಬಿಳಿಯ ಕೊಕ್ಕರೆ
  • ಮಣ್ಣಿನ ಮನುಷ್ಯ
  • ಮಲೆನಾಡಿಗರು
  • ಬರ್ಲಿನ್ ಬಂದಿತು ಗಂಗೆಯ ತಡಿಗೆ
  • ವ್ಯಾಸಪರ್ವ (ಮೂಲ ಮರಾಠಿ:ದುರ್ಗಾ ಭಾಗವತ)

[ಬದಲಾಯಿಸಿ] ಇಂಗ್ಲಿಷ್ ಕೃತಿಗಳು

  • ಶ್ಯಾಮರಾವ ವಿಠ್ಠಲ ಕಾಯ್ಕಿಣಿ

[ಬದಲಾಯಿಸಿ] ಕೊಂಕಣಿ ಕೃತಿಗಳು

  • ಮೀನಾಕ್ಷಿ (ಕವನ ಸಂಕಲನ)

[ಬದಲಾಯಿಸಿ] ಮರಾಠಿ ಕೃತಿಗಳು

[ಬದಲಾಯಿಸಿ] ಸಮಗ್ರ

  • ಸಮಗ್ರ ಸಂಪುಟ ಭಾಗ-೧
  • ಸಮಗ್ರ ಸಂಪುಟ ಭಾಗ-೨
  • ಸಮಗ್ರ ಸಂಪುಟ ಭಾಗ-೩
  • ಸಮಗ್ರ ಸಂಪುಟ ಭಾಗ-೪
  • ಸಮಗ್ರ ಸಂಪುಟ ಭಾಗ-೫
  • ಸಮಗ್ರ ಸಂಪುಟ ಭಾಗ-೬
  • ಸಮಗ್ರ ಸಂಪುಟ ಭಾಗ-೭
  • ಸಮಗ್ರ ಸಂಪುಟ ಭಾಗ-೮

ಇವಲ್ಲದೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಾವಿರಾರು ಬಿಡಿ ಬರಹಗಳು ಹಾಗು ಅಂಕಣಗಳು ಪ್ರಕಟವಾಗಿವೆ.

[ಬದಲಾಯಿಸಿ] ಸಾಮಾಜಿಕ

ಗೌರೀಶ ಕಾಯ್ಕಿಣಿಯವರು ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿದ್ದರು:

[ಬದಲಾಯಿಸಿ] ಪತ್ರಿಕೋದ್ಯಮ

ಗೌರೀಶ ಕಾಯ್ಕಿಣಿಯವರು ನಾಗರಿಕ ಹಾಗು ಬೆಳಕು ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು

[ಬದಲಾಯಿಸಿ] ಗೌರವ , ಸನ್ಮಾನ

ಗೌರೀಶ ಕಾಯ್ಕಿಣಿಯವರಿಗೆ ಸಂದ ಪ್ರಶಸ್ತಿಗಳು ಅನೇಕ:


ಗೌರೀಶ ಕಾಯ್ಕಿಣಿಯವರು ೧೪ ನವೆಂಬರ ೨೦೦೨ರಂದು ನಿಧನರಾದರು.