ತಿರುಮಲಾಂಬ
From Wikipedia
ತಿರುಮಲಾಂಬ ಕನ್ನಡದ ಪ್ರಥಮ ಪತ್ರಕರ್ತೆ, ಪ್ರಕಾಶಕಿ, ಮುದ್ರಕಿ. ೨೫-೩-೧೮೮೭ರಲ್ಲಿ ನಂಜನಗೂಡಿನಲ್ಲಿ ಜನನ. ತಂದೆ ವಕೀಲರಾದ ವೆಂಕಟಕೃಷ್ಣ ಅಯ್ಯಂಗಾರ್, ತಾಯಿ ಗೃಹಿಣಿ ಅಲಮೇಲಮ್ಮ. ಪ್ರಾಥಮಿಕ ಶಾಲೆಯವರೆಗೆ ಓದು. ಹತ್ತನೇ ವಯಸ್ಸಿಗೆ ಮದುವೆ, ಪ್ಲೇಗಿಗೆ ತುತ್ತಾಗಿ ಪತಿಯ ಅಕಾಲಿಕ ಮರಣ, ವಿಧವೆಯ ಪಟ್ಟ ಹಲವಾರು ಸಾಮಾಜಿಕ ಕಟ್ಟುಪಾಡುಗಳು. ಜಪ ತಪ ದೇವರ ಧ್ಯಾನ ಹೀಗೆ ಸಾತ್ವಿಕ ಜೀವನ ನಡೆಸುತ್ತಿದ್ದ ತಿರುಮಲಾಂಬ, ತಮ್ಮ ಹದಿನಾರನೇ ವಯಸ್ಸಿನಲ್ಲಿ ಭಕ್ತಿಗೀತೆಗಳನ್ನು ಬರೆಯತೊಡಗಿದರು. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಮಧುರವಾಣಿ ಪತ್ರಿಕೆಯ ಪ್ರಬಂಧ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದರು. ನಂತರ ಸಮಾಜದ ಕ್ರೂರ ಅನಿಷ್ಟ ಪದ್ದತಿಗಳ ವಿರುದ್ಧ ಪ್ರತಿಭಟಿಸುವ ಹಲವಾರು ಲೇಖನಗಳನ್ನು ಬರೆದರು.
ಪರಿವಿಡಿ |
[ಬದಲಾಯಿಸಿ] ಪ್ರಕಾಶನ
೧೯೧೩ರಲ್ಲಿ 'ಹಿತೈಷಿಣಿ' ಗ್ರಂಥಮಾಲೆಯನ್ನು ಆರಂಭಿಸಿದರು. ತಮ್ಮ ಮೊದಲ ಕೃತಿಯಾದ ಸುಶೀಲವನ್ನು ಪ್ರಕಟಿಸುವ ಮೂಲಕ ಪ್ರಕಾಶಕಿಯಾದ ತಿರುಮಲಾಂಬ ಮುಂದೆ ಸುಮಾರು ೪೧ ಕೃತಿಗಳನ್ನು ಪ್ರಕಟಿಸಿದರು. ಅದರಲ್ಲಿ ಅವರದ್ದೇ ೨೧ಕೃತಿಗಳು.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿಗಳು
- ಸುಶೀಲ
- ನಭಾ
- ವಿದ್ಯುಲ್ಲತಾ
- ವಿರಾಗಿಣಿ
- ದಕ್ಷಕನ್ಯೆ (ಪತ್ತೇದಾರಿ)
- ಮಣಿಮಾಲ
[ಬದಲಾಯಿಸಿ] ನಾಟಕಗಳು
- ಸಾವಿತ್ರಿ ಚರಿತ್ರೆ
- ಜಾನಕೀ ಕಲ್ಯಾಣ
[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರಗಳು
೧೯೮೦ರ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ತಿರುಮಲಾಂಬ, ಬೀchi, ಗೌರೀಶ ಕಾಯ್ಕಿಣಿ ಹಾಗು ಎಚ್ಚೆಸ್ಕೆಯವರಿಗೆ ಪ್ರದಾನಮಾಡಲಾಯಿತು. ಚಿ.ನಾ. ಮಂಗಳಾ 'ಶಾಶ್ವತಿ' ಎಂಬ ಹೆಸರಿನ ಸಂಸ್ಥೆಯೊಂದನ್ನು ಸ್ಥಾಪಿಸಿದ್ದು, ಪ್ರತಿವರ್ಷ ಮಹಿಳಾ ಬರಹಗಾರ್ತಿಯೊಬ್ಬರಿಗೆ 'ತಿರುಮಲಾಂಬ ಪ್ರಶಸ್ತಿ'ಯನ್ನು ಕೊಡಲಾಗುತ್ತದೆ.