ಸಿ ಎನ್ ಆರ್ ರಾವ್
From Wikipedia
ಇವರ ಪೂರ್ಣ ಹೆಸರು ಚಿಂತಾಮಣಿ ನಾಗೇಶ ರಾಮಚಂದ್ರ ರಾವ್. ಸಿ ಎನ್ ಆರ್ ರಾವ್ ರವರ ಕ್ಷೇತ್ರ ರಸಾಯನಶಾಸ್ತ್ರ. ಇವರು ಜೂನ್ ೩೦, ೧೯೩೪ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ವಿಜ್ಞಾನ ವಿಭಾಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ೧೯೫೧ರಲ್ಲಿ ಪದವಿ ಪಡೆದರು. ಸ್ನಾತಕೋತ್ತರ ಪದವಿಯನ್ನು ಹಿಂದೂ ಬನಾರಸ್ ವಿಶ್ವವಿದ್ಯಾನಿಲಯನಿಲಯದಲ್ಲಿ ೧೯೫೩ರಲ್ಲಿ ಪಡೆದರು.
ರಾವ್ ಪ್ರಸ್ತುತ ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ನಲ್ಲಿ ಪ್ರೊಫೆಸರ್ ಹಾಗೂ ಗೌರವಾಧ್ಯಕ್ಷರಾಗಿದ್ದಾರೆ. ಇವರು ರಸಾಯನ ಶಾಸ್ತ್ರದ ಸಾಲಿಡ್ ಸ್ಟೇಟ್ ಮತ್ತು ಮೇಟಿರಿಯಲ್ ವಿಭಾಗದ ಸಂಶೋಧನೆಗೆ ವಿಶ್ವದಾದ್ಯಂತ ಹೆಸರುಗಳಿಸಿದ್ದಾರೆ. ರಾವ್ ಪ್ರಧಾನಮಂತ್ರಿಯವರ ವೈಜಾ್ಞನಿಕ ಸಲಾಹ ಮಂಡಳಿಯ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ.
[ಬದಲಾಯಿಸಿ] ಪ್ರಶಸ್ತಿಗಳು ಹಾಗೂ ಗೌರವಗಳು
ಇವರು ಹಲವು ಪ್ರಶಸ್ತಿ ಹಾಗೂ ಗೌರವಕೆ್ಕ ಪಾತ್ರರಾಗಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನ ದ ನಾ್ಯಶನಲ್ ಆಕಾಡೆಮಿ ಆಪ್ ಸೈನ್ಸ್ ಹಾಗು ಅಮೆರಿಕನ್ ಆಕಾಡೆಮಿ ಆಪ್ ಆರ್ಟ್ ಆ್ಯಂಡ್ ಸೈನ್ಸ್ ನ ಸದಸ್ಯರಾಗಿದಾ್ದರೆ. ಲಂಡನ್ ನ ರಾಯಲ್ ಸೊಸೈಟಿಯ ಸದಸ್ಯರಾಗಿದಾ್ದರೆ. ಫಾ್ರನ್ಸ್ ಸರಕಾರದ ಅತು್ಯನ್ನತ ನಾಗರಿಕ ಪುರಸ್ಕಾರ ನೀಡಲಾಗಿದೆ. ಯುನೆಸೊ್ಕ , ಪಾ್ಯರಿಸ್ ನಿಂದ ಕೊಡಲಾಗುವ ಆಲ್ಬರ್ಟ್ ಐನ್ಸ್ಟನ್ ಚಿನ್ನದ ಪದಕ ಪಡೆದಿದ್ದಾರೆ. ಪದ್ಮಶೀ್ರ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳು ಇವರಿಗೆ ಸಂದಿದೆ. ಕರ್ನಾಟಕ ಸರಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನಿತ್ತು ಗೌರವಿಸಿದೆ[1]. ಇವರಿಗೆ ಈವರೆಗೆ ೩೭ ಗೌರವ ಡಾಕ್ಟರೇಟ್ ನೀಡಲಾಗಿದೆ[2].
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ಪುಟ