ಬಿ.ಸಿ.ರಾಮಚಂದ್ರ ಶರ್ಮ

From Wikipedia

ಬಿ.ಸಿ.ರಾಮಚಂದ್ರ ಶರ್ಮ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ೧೯೨೫ ನವಂಬರ೨೮ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೋಗಾದಿ ಚಂದ್ರಶೇಖರಶರ್ಮ.

ಪರಿವಿಡಿ

[ಬದಲಾಯಿಸಿ] ಶಿಕ್ಷಣ ಮತ್ತು ವೃತ್ತಿ

ಬೆಂಗಳೂರು ಮತ್ತು ಮೈಸೂರು‍ಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಲಂಡನ್ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಏಳು ವರ್ಷಗಳ ಕಾಲ ಇಂಗ್ಲಂಡಿನಲ್ಲಿ, ಎಂಟು ವರ್ಷ ಝಾಂಬಿಯಾ ಹಾಗು ಯುನೆಸ್ಕೊದಲ್ಲಿ ಸೇವೆ ಸಲ್ಲಿಸಿದ್ದಾರೆ.

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನಗಳು

  • ಏಳು ಸುತ್ತಿನ ಕೋಟೆ
  • ಹೇಸರಗತ್ತೆ
  • ಬ್ರಾಹ್ಮಣ ಹುಡುಗ
  • ಸಪ್ತಪದಿ
  • ಹೃದಯಗೀತ
  • ಮಾತು ಮಾಟ

[ಬದಲಾಯಿಸಿ] ನಾಟಕಗಳು

  • ಬಾಳಸಂಜೆ
  • ನೀಲಿ ಕಾಗದ
  • ನೆರಳು
  • ವೈತರಣಿ
  • ಸೆರಗಿನ ಕೆಂಡ (ರೇಡಿಯೊ ನಾಟಕ)

[ಬದಲಾಯಿಸಿ] ಕಥಾ ಸಂಕಲನ

  • ಮಂದಾರ ಕುಸುಮ
  • ಏಳನೆಯ ಜೀವ
  • ಕತೆಗಾರನ ಕತೆ


[ಬದಲಾಯಿಸಿ] ಅನುವಾದ

  • ಈ ಶತಮಾನದ ನೂರು ಇಂಗ್ಲಿಷ್ ಕವನಗಳು

[ಬದಲಾಯಿಸಿ] ಮನಃಶಾಸ್ತ್ರ

  • ಮಕ್ಕಳ ಬುದ್ಧಿಶಕ್ತಿ ಮತ್ತು ಪರಿಸರ

[ಬದಲಾಯಿಸಿ] ಇತರ

  • ಪ್ರತಿಭಾ ಸಂದರ್ಶನ

[ಬದಲಾಯಿಸಿ] ಪುರಸ್ಕಾರ

  • ಇವರ "ಸಪ್ತಪದಿ" ಎಂಬ ಕೃತಿಗೆ ೧೯೯೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.


  • "ನೆರಳು" ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.


  • "ಸೆರಗಿನ ಕೆಂಡ" ರೇಡಿಯೊ ನಾಟಕಕ್ಕೆ ಅಖಿಲ ಭಾರತ ಬಹುಮಾನ ಬಂದಿದೆ.