ಪಳಕಳ ಸೀತಾರಾಮ ಭಟ್ಟ
From Wikipedia
ಪಳಕಳ ಸೀತಾರಾಮ ಭಟ್ಟರು ೧೯೩೧ ಅಗಸ್ಟ ೧೪ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಜನಿಸಿದರು. ಮೂಡುಬಿದಿರೆಯ ಜೈನ ಕಿರಿಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಪರಿವಿಡಿ |
[ಬದಲಾಯಿಸಿ] ಸಾಹಿತ್ಯ
ಪಳಕಳ ಸೀತಾರಾಮ ಭಟ್ಟರು ‘ಶಿಶು ಸಾಹಿತ್ಯಮಾಲೆ’ ಸ್ಥಾಪಿಸಿ, ತನ್ಮೂಲಕ ಹಲವಾರು ಮಕ್ಕಳ ಪುಸ್ತಕಗಳನ್ನು ಹೊರತಂದಿದ್ದಾರೆ. ಇವರ ಕೆಲವು ಮಕ್ಕಳ ಕೃತಿಗಳು ಇಂತಿವೆ:
[ಬದಲಾಯಿಸಿ] ಕವನ ಸಂಕಲನ
- ಎಳೆಯರ ಗೆಳೆಯ
- ಕಂದನ ಕೊಳಲು
- ಕಿರಿಯರ ಕಿನ್ನರಿ
- ಗಾಳಿಪಟ
- ತಮ್ಮನ ತಂಬೂರಿ
- ತಿಮ್ಮನ ತುತ್ತೂರಿ
- ಪುಟ್ಟನ ಪೀಪಿ
- ಬಾಲರ ಬಾವುಟ
- ಮಕ್ಕಳ ಮುದ್ದು
[ಬದಲಾಯಿಸಿ] ಕಥಾಸಂಕಲನ
- ಕಟಂ ಕಟಂ ಕಪ್ಪೆಯಣ್ಣ
- ಗಡಿಬಿಡಿ ಗುಂಡ
- ಚಿಕ್ಕಣಿ ಚೋಮ
- ಪುಟಾಣಿ ಕತೆಗಳು
- ಪುಟ್ಟ ಬಿಲ್ಲಿ
- ಬೆಕ್ಕಿನ ಮರಿ ಹಕ್ಕಿಯಾಯಿತೆ?
- ಮಿಠಾಯಿ ಗೊಂಬೆ
- ಹೂದೋಟದ ಹುಡುಗಿಯರು
[ಬದಲಾಯಿಸಿ] ನಾಟಕ
- ಏಕಲವ್ಯ
- ಕಿಟ್ಟಾಯಣ
- ನಚಿಕೇತ
- ಭಕ್ತ ಧ್ರುವ
- ಯಾರವರು?
[ಬದಲಾಯಿಸಿ] ಪ್ರಹಸನ
- ಬೆಳಕಿನ ಹಬ್ಬ
[ಬದಲಾಯಿಸಿ] ಜೀವನ ಚರಿತ್ರೆ
- ಈಶ್ವರಚಂದ್ರ ವಿದ್ಯಾಸಾಗರ
[ಬದಲಾಯಿಸಿ] ಪುರಸ್ಕಾರ
‘ಬೆಳಕಿನ ಹಬ್ಬ’ ಕೃತಿಗೆ ‘ಜಿ.ಪಿ.ರಾಜರತ್ನಂ ಸ್ಮಾರಕ ಪ್ರಶಸ್ತಿ’ ದೊರೆತಿದೆ.